ಸೇವಂತಿಗೆ (ಡೆಂಡ್ರಾಂಥೆಮಾ ಗ್ರ್ಯಾಂಡಿಫ್ಲೋರಾ) ಆಸ್ಟರೇಸಿ “ಕಾಂಪೊಸಿಟೇ” ಕುಟುಂಬಕ್ಕೆ ಸೇರಿರುವ ಹೂವಿನ ಬೆಳೆಯಾಗಿದೆ. ಇದು ಪ್ರಪಂಚದಾದ್ಯಂತ ಬೆಳೆಯುವ ಪ್ರಮುಖ ಹೂವಿನ ಬೆಳೆಯಾಗಿದ್ದು, ಹಸಿರುಮನೆಗಳಲ್ಲಿ ಬೆಳೆದಾಗ ಹೆಚ್ಚು ಇಳುವರಿ ನೀಡುತ್ತದೆ.
ಭಾರತದಲ್ಲಿ, ಸೇವಂತಿಗೆ ಹೂವಿಗೆ ಇರುವ ಉತ್ತಮ ಬೇಡಿಕೆಯಿಂದಾಗಿ, ಇದನ್ನು ವಾಣಿಜ್ಯ ಬೆಳೆಯಾಗಿ ಕೃಷಿ ಮಾಡಲಾಗುತ್ತದೆ. ಹೂವುಗಳನ್ನು ಕತ್ತರಿಸಿ ಮುಖ್ಯವಾಗಿ ಆಚರಣೆಗಳಿಗಾಗಿ, ಧಾರ್ಮಿಕ ಪೂಜಾ ವಿಧಿಗಳು ಮತ್ತು ಹೂಮಾಲೆ ತಯಾರಿಕೆಗಾಗಿ ಬಳಸಲಾಗುತ್ತದೆ. ಇದು 50-150 ಸೆಂ.ಮೀ ಎತ್ತರವನ್ನು ತಲುಪುವ ದೀರ್ಘಕಾಲಿಕ ಸಸ್ಯವಾಗಿದೆ. ಸೇವಂತಿಗೆಯನ್ನು ವಾಣಿಜ್ಯ ಬೆಳೆಯಾಗಿ ಕರ್ನಾಟಕ, ತಮಿಳುನಾಡು, ಪಂಜಾಬ್ ಮತ್ತು ಮಹಾರಾಷ್ಟ್ರದಲ್ಲಿ ಬೆಳೆಯಲಾಗುತ್ತದೆ.
ಉತ್ತಮ ಒಳಚರಂಡಿ ವ್ಯವಸ್ಥೆಯನ್ನು ಹೊಂದಿರುವ ಕೆಂಪು ಮಣ್ಣು ಸೇವಂತಿಗೆ ಕೃಷಿಗೆ ಸೂಕ್ತವಾದದ್ದು. 6-7 ರವರೆಗಿನ pH ಹೊಂದಿರುವ ಮಣ್ಣು ಈ ಬೆಳೆಗೆ ಒಳ್ಳೆಯದು.
ಕೀರ್ತಿ, ಅರ್ಕಾ ಸ್ವರ್ಣ, ಶಾಂತಿ, ವೈ2ಕೆ, ಅರ್ಕಾ ಗಂಗಾ, ಅಪ್ಪು, ಸದ್ಭಾವನಾ, ಬಿಂದಿಯಾ, ಎಂಡಿಯು 1 (ಹಳದಿ ಬಣ್ಣದ ಹೂವುಗಳು), ಕಾಂಬೈಟೋರ್ ತಳಿ CO 1 (ಹಳದಿ ಬಣ್ಣದ ಪ್ರಭೇದಗಳು) ಮತ್ತು CO 2 (ನೇರಳೆ ಬಣ್ಣದ ಹೂವುಗಳು), ಇಂದಿರಾ ಮತ್ತು ರೆಡ್ ಗೋಲ್ಡ್, ರವಿಕಿರಣ್, ಆಕಾಶ್, ಯೆಲ್ಲೋ ಸ್ಟಾರ್ಟ್, ಇಂದಿರಾ, ರಾಖೀ ಮತ್ತು ಚಂದ್ರಕಾಂದ್ ಹಾಗೂ ಇತ್ಯಾದಿ.
ಸೇವಂತಿಗೆ ಕೃಷಿಗೆ ಚೆನ್ನಾಗಿ ಹದ ಮಾಡಿದ ಭೂಮಿ ಅಗತ್ಯವಿದೆ. ಮಣ್ಣನ್ನು ಉತ್ತಮವಾದ ಇಳಿಜಾರಿಗೆ ತರಲು, 2-3 ಉಳುಮೆಗಳ ಅಗತ್ಯವಿದೆ. ಕೊನೆಯ ಉಳುಮೆಯ ಸಮಯದಲ್ಲಿ, ಎಕರೆಗೆ 8-10 ಟನ್ಗಳಷ್ಟು ಕೊಟ್ಟಿಗೆ ಗೊಬ್ಬರವನ್ನು ಹಾಕಬೇಕು.
ಸಾಮಾನ್ಯವಾಗಿ ಫೆಬ್ರವರಿ-ಮಾರ್ಚ್ನಲ್ಲಿ ನಾಟಿ ಮಾಡಲಾಗುತ್ತದೆ ಮತ್ತು ಟರ್ಮಿನಲ್ ಕಟಿಂಗ್ಗಳನ್ನು ಜೂನ್-ಜುಲೈ ತಿಂಗಳಲ್ಲಿ ನಾಟಿ ಮಾಡಲಾಗುತ್ತದೆ.
ಸಾಲಿನಿಂದ ಸಾಲಿಗೆ ಮತ್ತು ಗಿಡದಿಂದ ಗಿಡಕ್ಕೆ 30cm X 30cm ಅಂತರವನ್ನು ನೀಡಬೇಕು.
ಸಾಲು ಪ್ರಸರಣ ವಿಧಾನವನ್ನು ಬಳಸಲಾಗುತ್ತದೆ.
ಸೇವಂತಿಗೆಯ ಪ್ರಸರಣವನ್ನು ಮುಖ್ಯವಾಗಿ ಬೇರಿನ ಮೊಳಕೆಗಳು ಮತ್ತು ಟರ್ಮಿನಲ್ ಕಾಂಡ ಕತ್ತರಿಸುವ ವಿಧಾನದ ಮೂಲಕ ಮಾಡಲಾಗುತ್ತದೆ. ಟರ್ಮಿನಲ್ ಕಾಂಡ ಕತ್ತರಿಸುವ ವಿಧಾನದಲ್ಲಿ, ಏಪ್ರಿಲ್ ಮಧ್ಯ ಹಾಗೂ -ಜೂನ್ ಅಂತ್ಯದ ತಿಂಗಳುಗಳಲ್ಲಿ ಆರೋಗ್ಯಕರ ಸಸ್ಯದ ಕಾಂಡವನ್ನು 4-5 ಸೆಂ.ಮೀ.ವರೆಗೆ ಕತ್ತರಿಸಿ ಪ್ರಸರಣ ಮಾಡಲಾಗುತ್ತದೆ.
ಬೇರಿನ ಮೊಳಕೆಗಳನ್ನು ಕತ್ತರಿಸಿದ ನಂತರ ಸೆರೆಸನ್ @ 0.2% ಅಥವಾ ಕ್ಯಾಪ್ಟನ್ @ 0.2% ನೊಂದಿಗೆ ಸಂಸ್ಕರಿಸಲಾಗುತ್ತದೆ, ನಂತರ ನಾಟಿ ಮಾಡಲು ಬಳಸಲಾಗುತ್ತದೆ. ಮಣ್ಣಿನ ಮೇಲ್ಬಾಗದ ಮೊಳಕೆಗಳನ್ನು ಕತ್ತರಿಸಿದರೆ, ಮೊಳಕೆಗಳ ಹೆಚ್ಚಿನ ಅಭಿವೃದ್ಧಿಗೆ ಕಾರಣವಾಗುತ್ತದೆ. ಮೊಳಕೆಗಳನ್ನು ನಂತರ ತಾಯಿ ಸಸ್ಯದಿಂದ ಬೇರ್ಪಡಿಸಲಾಗುತ್ತದೆ ಮತ್ತು ಸಿದ್ಧಪಡಿಸಿದ ಸಸಿ ಮಡಿಗಳಲ್ಲಿ ನಾಟಿ ಮಾಡಲಾಗುತ್ತದೆ.
ಒಂದು ಎಕರೆಗೆ 45,000 ಸಸಿಗಳನ್ನು ಬಳಸಬಹುದು.
ಮಣ್ಣಿನಿಂದ ಹರಡುವ ಕೀಟ ಅಥವಾ ರೋಗಗಳನ್ನು ನಿಯಂತ್ರಿಸಲು ಹಾಗೂ ಬೆಳೆಯ ಮೊಳಕೆಗಳನ್ನು ರಕ್ಷಿಸಲು, ಕತ್ತರಿಸಿದ ಸಸಿ ಭಾಗವನ್ನು ಸೆರೆಸನ್@0.2% ಅಥವಾ ಕ್ಯಾಪ್ಟನ್ @ 0.2% ನೊಂದಿಗೆ ಸಂಸ್ಕರಿಸಲಾಗುತ್ತದೆ.
ಗೊಬ್ಬರದ ಅವಶ್ಯಕತೆ (ಕೆಜಿ/ಎಕರೆ): ಯೂರಿಯಾ SSP MOP
160 500 133
ಪೌಷ್ಟಿಕಾಂಶದ ಅವಶ್ಯಕತೆ (ಕೆಜಿ/ಎಕರೆ): ಸಾರಜನಕ ರಂಜಕ ಪೊಟ್ಯಾಶ್
73 80 80
ಕೊನೆಯ ಉಳುಮೆಯ ಸಮಯದಲ್ಲಿ ಯೂರಿಯಾ @160kg/ಎಕರೆ, SSP@500kg/ಎಕರೆ ಮತ್ತು MOP@133kg/ಎಕರೆಗೆ ಗೊಬ್ಬರವನ್ನು ಹಾಕಬೇಕು.
ಹೆಚ್ಚು ಪಾರ್ಶ್ವಕಾಂಡಗಳನ್ನು ಪ್ರೇರೇಪಿಸಲು ನೆಟ್ಟ 4 ವಾರಗಳ ನಂತರ ಗಿಡದ ತುದಿಯನ್ನು ಚಿವುಟಬೇಕು.
ನಿಯತಕಾಲಿಕವಾಗಿ ತುದಿ ಬೇರಿನ ಮೊಳಕೆಗಳನ್ನು ತೆಗೆದುಹಾಕಿ.
ಸತುವಿನ ಸಲ್ಫೇಟ್ @ 0.25% + ಮೆಗ್ನೀಷಿಯಂ ಸಲ್ಫೇಟ್ @ 0.5% ಅನ್ನು ಎಲೆಗಳ ಮೇಲೆ ಸಿಂಪಡಣೆ ಮಾಡಬೇಕು.
ಸಸಿ ನೆಡುವ ಸಮಯದಲ್ಲಿ ಪ್ರತಿ ಹೆಕ್ಟೇರ್ಗೆ ಅಜೋಸ್ಪಿರಿಲಮ್ ಮತ್ತು ಫಾಸ್ಫೋಬ್ಯಾಕ್ಟೀರಿಯಾವನ್ನು ತಲಾ 2 ಕೆ.ಜಿ. ಯಂತೆ 100kg ಕೊಟ್ಟಿಗೆ ಗೊಬ್ಬರದೊಂದಿಗೆ ಬೆರೆಸಿ ಹಾಕಬೇಕು.
ನೆಟ್ಟ ನಂತರ 30, 45 ಮತ್ತು 60 ದಿನಗಳಲ್ಲಿ GA3 @ 50 ppm ಅನ್ನು ಸಿಂಪಡಿಸಿ.
ಜಮೀನನ್ನು ಕಳೆ ಮುಕ್ತವಾಗಿಡುವುದು, ಸಸ್ಯದ ಸರಿಯಾದ ಬೆಳವಣಿಗೆಗೆ ಅತೀ ಮುಖ್ಯವಾಗಿರುತ್ತದೆ, ನೆಟ್ಟ 4 ವಾರಗಳ ನಂತರ ಮೊದಲ ಕೈ ಕಳೆ ಮಾಡಲಾಗುತ್ತದೆ.
ನೀರಾವರಿಯ ಆವರ್ತನವು ಬೆಳವಣಿಗೆಯ ಹಂತ, ಹವಾಮಾನ ಮತ್ತು ಮಣ್ಣಿನ ಪರಿಸ್ಥಿತಿಗಳನ್ನು ಅವಲಂಬಿಸಿರುತ್ತದೆ. ಸೇವಂತಿಗೆಗೆ ಮಣ್ಣಿನಲ್ಲಿ ಸರಿಯಾದ ಒಳಚರಂಡಿ ವ್ಯವಸ್ಥೆ ಅಗತ್ಯವಿರುತ್ತದೆ. ಮುಖ್ಯವಾಗಿ ಮೊದಲ ತಿಂಗಳಲ್ಲಿ ವಾರಕ್ಕೆ ಎರಡು ಬಾರಿ ನೀರನ್ನು ಕೊಡಲಾಗುತ್ತದೆ ಮತ್ತು ನಂತರದ ನೀರಾವರಿಗಳನ್ನು ವಾರದ ಮಧ್ಯಂತರದಲ್ಲಿ ನೀಡಲಾಗುತ್ತದೆ.
ಮುಖ್ಯವಾಗಿ ಇವು ಹೂಬಿಡುವ ಸಮಯದಲ್ಲಿ ಕಾಣಿಸಿಕೊಳ್ಳುತ್ತದೆ. ಕಾಂಡ, ಹೂವುಗಳು, ಮೊಗ್ಗುಗಳ ರಸವನ್ನು ಹೀರುತ್ತವೆ.
ಇವುಗಳ ಹಾವಳಿ ಕಂಡುಬಂದಲ್ಲಿ, ರೋಗರ್ 30 ಇಸಿ ಅಥವಾ ಮೆಟಾಸಿಸ್ಟಾಕ್ಸ್ 25 ಇಸಿ @2 ಮಿಲಿ/ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
ಇವುಗಳ ತೀವ್ರ ಮುತ್ತಿಕೊಳ್ಳುವಿಕೆ ಕಂಡುಬಂದಲ್ಲಿ, ರೋಗರ್ 30 ಇಸಿ @2 ಮಿಲಿ ಅಥವಾ ಪ್ರೊಫೆನೋಫಾಸ್ 25ಇಸಿ @ 2ಮಿಲಿ/ಲೀಟರ್ ಅನ್ನು ನೀರಿನಲ್ಲಿ ಬೆರೆಸಿ ಸಿಂಪಡಿಸಿ.
ಬಿಹಾರ್ ಹೇರಿ ಕ್ಯಾಟರ್ಪಿಲ್ಲರ್ ಮುಖ್ಯವಾಗಿ ಸಸ್ಯದ ಎಲೆಗಳನ್ನು ತಿನ್ನುತ್ತದೆ ಆದರೆ ಅಮೇರಿಕನ್ ಹೇರಿ ಕ್ಯಾಟರ್ಪಿಲ್ಲರ್ ಸಸ್ಯದ ಮೊಗ್ಗುಗಳು ಮತ್ತು ಹೂವುಗಳನ್ನು ತಿನ್ನುತ್ತದೆ.
ಬಿಹಾರ್ ಹೇರಿ ಕ್ಯಾಟರ್ಪಿಲ್ಲರ್ ಅನ್ನು ನಿಯಂತ್ರಿಸಲು, ಎಕಲಕ್ಸ್ (ಕ್ವಿನಾಲ್ಫಾಸ್) @ 2 ಮಿಲಿ / ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಲಾಗುತ್ತದೆ. ಅಮೇರಿಕನ್ ಹೇರಿ ಕ್ಯಾಟರ್ಪಿಲ್ಲರ್ ಅನ್ನು ನಿಯಂತ್ರಿಸಲು, ನುವಾಕ್ರಾನ್ (ಡೈಕ್ಲೋರೋಫೋಸ್) @ 2-3 ಮಿಲಿ / ಲೀಟರ್ ಸಿಂಪರಣೆ ಮಾಡಲಾಗುತ್ತದೆ.
ಇದು ಎಲೆಗಳ ಮೇಲೆ ಬೂದು ಅಥವಾ ಕಂದು ಬಣ್ಣದ ವೃತ್ತಾಕಾರದ ಕಲೆಗಳನ್ನು ಉಂಟುಮಾಡುತ್ತದೆ. ಎಲೆಗಳು ಕ್ರಮೇಣವಾಗಿ ಹಳದಿ ಬಣ್ಣಕ್ಕೆ ತಿರುಗುತ್ತವೆ ನಂತರ ಸಾಯುತ್ತವೆ.
ಇದನ್ನು ನಿಯಂತ್ರಿಸಲು ಝಿನೆಬ್ ಅಥವಾ ಡೈಥೇನ್ ಎಂ-45 @400gm/ ಎಕರೆಗೆ ಸಿಂಪರಣೆ ಮಾಡಲಾಗುತ್ತದೆ.
ಎಲೆಗಳು ಮತ್ತು ಕಾಂಡಗಳ ಮೇಲೆ ಬಿಳಿ ಬಣ್ಣದ ಶಿಲೀಂದ್ರದ ಪುಡಿ ಕಂಡುಬರುತ್ತದೆ.
ಈ ರೋಗವನ್ನು ನಿಯಂತ್ರಿಸಲು ಕೆರಥೇನ್ 40 ಇಸಿ @ 0.5% ಸಿಂಪಡಣೆಯನ್ನು ಮಾಡಬೇಕು.
ಸೇವಂತಿಗೆ ನೆಟ್ಟ 5-6 ತಿಂಗಳ ನಂತರ ಹೂಬಿಡಲು ಪ್ರಾರಂಭವಾಗುತ್ತದೆ. ಮುಖ್ಯವಾಗಿ ಹೂವುಗಳ ಕೊಯ್ಲು, ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಮಾಡಲಾಗುತ್ತದೆ, ಸಾಮಾನ್ಯವಾಗಿ ಬೆಳಿಗ್ಗೆ ಸಮಯದಲ್ಲಿ ಸಂಪೂರ್ಣವಾಗಿ ತೆರೆದ ಹೂವುಗಳನ್ನು ಕೊಯ್ಲು ಮಾಡಲಾಗುತ್ತದೆ.
ಕೊಯ್ಲು ಮಾಡಿದ ಹೂವುಗಳನ್ನು ನಂತರ ಸಾಗಣೆಗೆ ಮತ್ತು ಮಾರಾಟ ಉದ್ದೇಶಕ್ಕಾಗಿ ಬಿದಿರಿನ ಬುಟ್ಟಿಗಳಲ್ಲಿ ಪ್ಯಾಕ್ ಮಾಡಲಾಗುತ್ತದೆ. ಎಕರೆಗೆ ಸರಾಸರಿ 15-50 ಕ್ವಿಂಟಲ್ ಹೂಗಳನ್ನು ಪಡೆಯಬಹುದು.
ಕೃಷಿಯಲ್ಲಿ, ದಕ್ಷತೆ ಮತ್ತು ಉತ್ಪಾದಕತೆ ಯಾವಾಗಲೂ ಮುಖ್ಯವಾಗಿರುತ್ತದೆ. ಈಗ ನಾವು ನಿಮಗೆ ನಿಮ್ಮ ನೀರಿನ ಸ್ಥಿತಿ, ನಿಮ್ಮ ಸಸ್ಯ ಸಂರಕ್ಷಣಾ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸುವ…
ಇತ್ತೀಚಿನ ಆಧುನಿಕ ಕೃಷಿಯಲ್ಲಿ ಸಮರ್ಥ ನೀರಿನ ನಿರ್ವಹಣೆ ಮಾಡುವುದು ನಿರ್ಣಾಯಕವಾಗಿದೆ ಮತ್ತು ಹನಿ ನೀರಾವರಿ ಪದ್ದತಿಯು ನೇರವಾಗಿ ಬೇರುಗಳ ವಲಯವನ್ನು ಗುರಿಯಾಗಿಸಿಕೊಂಡು ಸಸ್ಯಗಳಿಗೆ ನೀರನ್ನು ತಲುಪಿಸುವ ವಿಧಾನವನ್ನು…
ಸುಸ್ಥಿರ ಕೃಷಿ ಪದ್ದತಿಯಲ್ಲಿ ಸರಳವಾದ ಆದರೆ ಆಳವಾದ ವಿಷಯವೇನೆಂದರೆ ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವುದು. ಸಾವಯವ ಕೃಷಿ ತ್ಯಾಜ್ಯವು ನಮಗೆ ಹೊರೆಯಾಗಿರದೆ ಮಣ್ಣನ್ನು ಸಮೃದ್ಧಗೊಳಿಸುವ, ಸಸ್ಯಗಳನ್ನು ಪೋಷಿಸುವ ಮತ್ತು…
ಇತ್ತೀಚೆಗೆ ಬದಲಾಗುತ್ತಿರುವ ಕೃಷಿ ಭೂದೃಶ್ಯದ ಕಾರಣವಾಗಿ, ಸಮರ್ಥನೀಯ ಮತ್ತು ಸಮರ್ಥ ಕೃಷಿ ವಿಧಾನಗಳನ್ನು ಕಂಡುಹಿಡಿಯುವುದು ನಿರ್ಣಾಯಕವಾಗಿದೆ. ಅದಕ್ಕಾಗಿಯೇ ಪರಿಚಯಿಸುತ್ತಿದ್ದೇವೆ, ಎಪಿಸೆಲ್! ಎಕ್ಸೆಲ್ ಇಂಡಸ್ಟ್ರೀಸ್ ರವರ ಈ ನವೀನ…
ನೀರು ಕೃಷಿಯಲ್ಲಿ ಮೂಲಭೂತ ಸಂಪನ್ಮೂಲವಾಗಿದ್ದು, ಬೆಳೆಗಳ ವೃದ್ಧಿಗಾಗಿ ಅಗತ್ಯ ಪೋಷಕಾಂಶಗಳ ಮತ್ತು ಬೆಳೆ ರಕ್ಷಣೆಗೆ ಅಗತ್ಯವಾದ ರಾಸಾಯನಿಕಗಳನ್ನು ಸಾಗಿಸುವಲ್ಲಿ ವಾಹಕವಾಗಿ ಕಾರ್ಯನಿರ್ವಹಿಸುತ್ತದೆ . ಆದಾಗ್ಯೂ, ಕಳೆನಾಶಕಗಳು, ಕೀಟನಾಶಕಗಳು,…
ಹನಿ ನೀರಾವರಿ ವ್ಯವಸ್ಥೆ ಆಧುನಿಕ ಕೃಷಿಯ ಅತ್ಯಗತ್ಯ ಅಂಶವಾಗಿದೆ. ಇದು ಸಸ್ಯಗಳ ಬೇರುಗಳಿಗೆ ನೇರವಾಗಿ ನೀರನ್ನು ತಲುಪಿಸುವ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಈ ವಿಧಾನವು ನೀರನ್ನು ಸಂರಕ್ಷಿಸುವುದು…