Crop

ಕಳೆ-ಮುಕ್ತ ಗೋಧಿ ಕ್ಷೇತ್ರ: ಪರಿಣಾಮಕಾರಿ ಕಳೆ ನಿರ್ವಹಣೆ

ಗೋಧಿಯು ಭಾರತದಲ್ಲಿ ಎರಡನೇ ಪ್ರಮುಖ ಆಹಾರ ಬೆಳೆಯಾಗಿದ್ದು , ಇದನ್ನು ದೇಶದಾದ್ಯಂತ ವ್ಯಾಪಕವಾಗಿ ಬೆಳೆಯಲಾಗುತ್ತದೆ. ಕಳೆಗಳು ಒಂದು ನಿರ್ದಿಷ್ಟ ಪ್ರದೇಶದಲ್ಲಿ ಅನಗತ್ಯ ಸಸ್ಯಗಳಾಗಿ ಬೆಳೆಯುತ್ತವೆ. ಪೋಷಕಾಂಶ, ಬೆಳಕು ಮತ್ತು ನೀರಿನ ಅವಶ್ಯಕತೆಗಾಗಿ ಬೆಳೆಯುತ್ತಿರುವ ಬೆಳೆಗೆ ಅಡ್ಡಿಪಡಿಸುವುದರಿಂದ ಕಳೆಗಳಿಂದ ಬೆಳೆ ಉತ್ಪಾದಕತೆಯನ್ನು ಹಾನಿಗೊಳಿಸಬಹುದು.  ಗೋಧಿ ಹುಲ್ಲು ಮತ್ತು ಅಗಲ ಎಲೆಗಳ ಕಳೆಗಳಿಂದ ಕೂಡಿರುತ್ತವೆ. ಬೆಳೆಗಳ ಬೆಳವಣಿಗೆಯ ಆರಂಭಿಕ ಹಂತಗಳಿಂದ ಕಳೆಗಳನ್ನು ನಿಯಂತ್ರಿಸದಿದ್ದರೆ, ಕಳೆಗಳ ತೀವ್ರತೆ ಮತ್ತು ಕಳೆಗಳ ವಿಧಗಳ ಆಧಾರದ ಮೇಲೆ  ಇವುಗಳು ಗೋಧಿ ಬೆಳೆಗಳ ಇಳುವರಿಯನ್ನು 40% ವರೆಗೆ ಕಡಿಮೆಗೊಳಿಸಬಹುದು ಎಂದು ಕೃಷಿ ವಿಜ್ನ್ಯಾನಿಗಳು ಹೇಳಿದ್ದಾರೆ. ಯಾವುದೇ ಬೆಳೆಯಲ್ಲಿ ಕಳೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಮಗ್ರ ಕಳೆ ನಿರ್ವಹಣಾ ಪದ್ಧತಿಗಳನ್ನು ಕೇಂದ್ರೀಕರಿಸಬೇಕು.

ಗೋಧಿ ಕ್ಷೇತ್ರದಲ್ಲಿನ ಪ್ರಮುಖ ಕಳೆಗಳು:

ಏಕದಳ ಮತ್ತು ದ್ವಿದಳ  ಕಳೆಗಳೆರಡೂ ಗೋಧಿ ಗದ್ದೆಗಳಲ್ಲಿ ಪ್ರಚಲಿತವಾಗಿದೆ. ಏಕದಳ ಕಳೆಗಳು  ಅಥವಾ ಹುಲ್ಲುಗಳು ಉದ್ದವಾದ, ಕಿರಿದಾದ ಎಲೆಗಳಿರುವ ಗುಣಲಕ್ಷಣಗಳನ್ನು ಹೊಂದಿವೆ, ಅವುಗಳು ಸಾಮಾನ್ಯವಾಗಿ ಸಮಾನಾಂತರ ನಾಳಗಳನ್ನು ಹೊಂದಿರುತ್ತವೆ. ದ್ವಿದಳ ಅಥವಾ ಅಗಲವಾದ ಎಲೆಗಳನ್ನು ಹೊಂದಿರುವ ಎಲೆಗಳು ಕವಲೊಡೆಯುವ ಸಿರೆಗಳನ್ನು ಹೊಂದಿರುತ್ತವೆ.

ಕಳೆಗಳ ವಿಧ

ಕಳೆಗಳ ಜಾತಿ

ಏಕದಳ ಕಳೆಗಳು ಫಲಾರಿಸ್ ಮೈನರ್, ಅವೆನಾ ಫಟುವಾ, ಪಾಲಿಪೊಗನ್ ಮಾನ್ಸ್‌ಪ್ಲೆನ್ಸಿಸ್, ಸೈಪರಸ್ ರೋಟಂಡಸ್, ಸೈನೊಡಾನ್ ಡ್ಯಾಕ್ಟಿಲಾನ್
ದ್ವಿದಳ ಕಳೆಗಳು ಚೆನೊಪೊಡಿಯಮ್ ಆಲ್ಬಮ್, ಫ್ಯೂಮಾರಿಯಾ ಪುರ್ವಿಫ್ಲೋರಾ, ಸಿರ್ಸಿಯಮ್ ಅರ್ವೆನ್ಸ್, ಅನಾಗಾಲಿಸ್ ಅರ್ವೆನ್ಸಿಸ್, ಮೆಲಿಲೋಟಸ್ ಆಲ್ಬಾ, ಮೆಲಿಲೋಟಸ್ ಇಂಡಿಕಾ, ವಿಸಿಯಾ ಸಟಿವಾ, ಲ್ಯಾಥಿರಸ್ ಎಸ್ಪಿಪಿ

 

ಕಳೆ ನಿರ್ವಹಣೆಯ ವಿಧಾನಗಳು:

ಸಾಂಸ್ಕೃತಿಕ ನಿರ್ವಹಣೆ:

  • ದ್ವಿದಳ ಧಾನ್ಯಗಳು, ಬಾರ್ಲಿ ಮತ್ತು ಜೋಳದಂತಹ ಆತಿಥೇಯವಲ್ಲದ ಬೆಳೆಗಳೊಂದಿಗೆ ಬೇರೆ ಬೆಳೆಗಳನ್ನೂ ಬೆಳೆಯುವುದರಿಂದ  ಕಳೆಗಳ ಜೀವನ ಚಕ್ರವನ್ನು ನಾಶಪಡಿಸಲು  ಸಹಾಯ ಮಾಡುತ್ತದೆ.
  • ಗೋಧಿ ಬೆಳೆಗೆ ಸಾಕಷ್ಟು ಪೋಷಕಾಂಶಗಳನ್ನು ಒದಗಿಸುವುದರಿಂದ ಅದು ಹೆಚ್ಚು ಶಕ್ತಿಯುತವಾಗಿ ಬೆಳೆಯಲು ಸಹಾಯ ಮಾಡುತ್ತದೆ, ಇದು ಕಳೆಗಳ ಬೆಳೆವಣಿಗೆಯನ್ನು ಕುಂಠಿತಗೊಳಿಸಬಹುದು.
  • ಬೆಳೆಗಳ ಬಿತ್ತನೆ ಸಮಯವು ಕಳೆಗಳ ಬೆಳೆವಣಿಗೆಯನ್ನು ಪರಿಗಣಿಸುವುದು.  ಉದಾಹರಣೆಗೆ, ಗೋಧಿಯ ಆರಂಭಿಕ ನಾಟಿ ಫಲಾರಿಸ್ ಮೈನರ್  ಕಳೆಯ ತೀವ್ರತೆಯನ್ನು ಕಡಿಮೆ ಮಾಡಬಹುದು.
  • ಬಿತ್ತನೆಗಾಗಿ ಹೆಚ್ಚಿನ ಬೀಜ ದರಗಳನ್ನು ಬಳಸುವುದು ಮತ್ತು ಸಾಲುಗಳ ಅಂತರವನ್ನು ಕಡಿಮೆಮಾಡಿ  ಸಸ್ಯದ ಸಾಂದ್ರತೆಯನ್ನು ಹೆಚ್ಚಿಸಬಹುದು ಇದರಿಂದ ಕಳೆ ಬೆಳವಣಿಗೆಯನ್ನು ನಿರ್ವಹಿಸಬಹುದು.
  • ಒಣಹುಲ್ಲಿನ ಅಥವಾ ಇತರ ಸಾವಯವ ವಸ್ತುಗಳೊಂದಿಗೆ ಗೋಧಿ ಬೆಳೆಗೆ ಬೆಳೆಹೊದಿಕೆಗಳನ್ನು ಅಳವಡಿಸುವುದು.
  • ಬೇಸಾಯ ಮಾಡುವ ಮೊದಲು ಮಣ್ಣನ್ನು ಉಳುಮೆ ಮಾಡುವುದರಿಂದ ಕಳೆಗಳು ಮತ್ತು ಅವುಗಳ ಬೀಜಗಳನ್ನು ನಾಶ ಪಡಿಸಲು  ಸಹಾಯ ಮಾಡುತ್ತದೆ.
  • ಹೊಲದಲ್ಲಿ ಕಳೆ ಬೀಜಗಳು ಹರಡುವುದನ್ನು ತಪ್ಪಿಸಲು ಶುದ್ಧ ಮತ್ತು ಸೋಂಕುರಹಿತ ಉಪಕರಣಗಳನ್ನು ಬಳಸುವುದನ್ನು ಖಚಿತಪಡಿಸಿಕೊಳ್ಳಿ.

ಯಾಂತ್ರಿಕ ನಿರ್ವಹಣೆ:

  • ಗುದ್ದಲಿ ಅಥವಾ ಕುಡಗೋಲು ಮುಂತಾದ ಕೈ ಉಪಕರಣಗಳನ್ನು ಬಳಸಿ ಕೈಯಿಂದ ಕಳೆ ಕೀಳುವುದು.
  • ಗೋಧಿಯಲ್ಲಿನ ಕಳೆ ಬೆಳವಣಿಗೆಯ ನಿರ್ಣಾಯಕ ಅವಧಿಯು ಬಿತ್ತನೆ ಮಾಡಿದ 15 – 30 ದಿನಗಳ ನಂತರ ಕಾಣಬಹುದು.
  • ಕಳೆನಾಶಕವನ್ನು ಮೊದಲು ಸಿಂಪಡಿಸುವ  ಸಂದರ್ಭದಲ್ಲಿ, ಅದನ್ನು ಸಿಂಪಡಿಸಿದ ನಂತರ 35 ದಿನಗಳ ನಂತರದಲ್ಲಿ ಒಂದು ಕೈಯಿಂದ ಕಳೆ ತೆಗೆಯಬಹುದು.
  • ಕಳೆನಾಶಕ ಸಿಂಪಡಿಸದಿದ್ದರೆ 20 ಮತ್ತು 35ನೇ ದಿನಗಳ ನಂತರದಲ್ಲಿ ಎರಡು ಕೈಗಳಿಂದ ಕಳೆ ತೆಗೆಯಬಹುದು.

ಸಸ್ಯನಾಶಕಗಳನ್ನು ಬಳಸಿ ರಾಸಾಯನಿಕ ಕಳೆ ನಿರ್ವಹಣೆ:

ಕಳೆ ಏಕದಳ ಅಥವಾ ದ್ವಿದಳ ಎಂಬುದನ್ನು ತಿಳಿದುಕೊಳ್ಳುವುದು ಹಾಗೂ ಕಳೆಗಳನ್ನು  ಗುರುತಿಸಲು ಮತ್ತು ನಿಯಂತ್ರಿಸಲು  ಅತ್ಯಂತ ಪರಿಣಾಮಕಾರಿ ವಿಧಾನವನ್ನು ಆಯ್ಕೆ ಮಾಡಲು ಸಹಾಯ ಮಾಡುತ್ತದೆ. ಆಯ್ದ ಸಸ್ಯನಾಶಕಗಳನ್ನು ನಿರ್ದಿಷ್ಟ ಕಳೆಗಳನ್ನು ಗುರಿಯಾಗಿಸಲು ಬಳಸಬಹುದು ಹಾಗೂ ಸುತ್ತಮುತ್ತಲಿನ ಪರಿಸರ ಮತ್ತು ಗುರಿಯಲ್ಲದ ಕಳೆ ಜಾತಿಗಳ ಹಾನಿಯನ್ನು ಕಡಿಮೆ ಮಾಡುತ್ತದೆ.

  1. ಹೊರಹೊಮ್ಮುವ ಮುನ್ನ ಕಳೆನಾಶಕಗಳು:

ಬಿತ್ತಿದ 0 – 3 ದಿನಗಳಲ್ಲಿ ಗೋಧಿ ಗದ್ದೆಯಲ್ಲಿ ಪ್ರತಿ ಲೀಟರ್ ನೀರಿಗೆ 6.5 ಮಿಲಿ ಯಂತೆ ಪೆಂಡಿಮೆಥಾಲಿನ್ 30% ಇಸಿ  ಸಸ್ಯನಾಶಕವನ್ನು ಸಿಂಪಡಿಸಿ. ಪೆಂಡಿಮೆಥಾಲಿನ್ ಗೋಧಿ ಪರಿಸರ ವ್ಯವಸ್ಥೆಯಲ್ಲಿ ಹುಲ್ಲು ಮತ್ತು ಅಗಲವಾದ ಕಳೆ ಎರಡನ್ನೂ ನಿಯಂತ್ರಿಸುತ್ತದೆ. ಬೂಟಾಕ್ಲೋರ್ 50% ಇಸಿಯನ್ನು 5 ಮಿಲಿ/ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬಹುದು.

  1. ಹೊರಹೊಮ್ಮಿದ ನಂತರದ ಕಳೆನಾಶಕಗಳು:

ಸಿಂಪಡಿಸುವ ಸಮಯ – ಮೊದಲ ನೀರಾವರಿ ನಂತರ 30 -35 ದಿನಗಳ ನಂತರ  ಅಥವಾ 2 – 4 ಕಳೆ ಎಲೆಗಳ ಹಂತದಲ್ಲಿ.

ಕಳೆನಾಶಕ

ತಾಂತ್ರಿಕ ಅಂಶ

ಬಳಕೆಯ ಪ್ರಮಾಣ

ನಿರ್ವಹಿಸುವ ಕಳೆ ವಿಧ

ವೀಡ್ಮಾರ್ ಸೂಪರ್ 2,4-ಡಿ ಅಮೈನ್ ಸಾಲ್ಟ್ 58% ಎಸ್ಎಲ್ 1.5 – 2.5 ಗ್ರಾಂ/ನೀರಿಗೆ ಅಗಲವಾದ ಎಲೆಗಳು ಮತ್ತು ಹುಲ್ಲಿನ ಕಳೆಗಳು
ಟಾಟಾಮೆಟ್ರಿ ಕಳೆನಾಶಕ ಮೆಟ್ರಿಬುಜಿನ್-70% ಡಬ್ಲ್ಯೂ ಪಿ 1.5 ಗ್ರಾಂ/ನೀರಿಗೆ ಅಗಲವಾದ ಎಲೆಗಳು ಮತ್ತು ಹುಲ್ಲಿನ ಕಳೆಗಳು
ಸೆಂಪ್ರಾ ಕಳೆನಾಶಕ ಹ್ಯಾಲೊಸಲ್ಫುರಾನ್ ಮೀಥೈಲ್-75% ಡಬ್ಲ್ಯೂ ಜಿ 0.2 ಗ್ರಾಂ/ನೀರಿಗೆ ಹುಲ್ಲಿನ ಕಳೆಗಳು
ಕಾತ್ಯಾಯನಿ ವಿಕ್ರಮ್ ಕ್ಲೋಡಿನಾಫೊಪ್ ಪ್ರೊಪರ್ಗಿಲ್-15% ಡಬ್ಲ್ಯೂ ಪಿ 0.8 – 1 ಗ್ರಾಂ/ನೀರಿಗೆ ಹುಲ್ಲಿನ ಕಳೆಗಳು
ಕಾತ್ಯಾಯನಿಎಂ ಯಸ್ ಎಂ ಮೆಟ್ಸಲ್ಫುರಾನ್ ಮೀಥೈಲ್-20% ಡಬ್ಲ್ಯೂ ಪಿ 0.04ಗ್ರಾಂ/ನೀರಿಗೆ ಅಗಲವಾದ ಎಲೆಗಳು ಮತ್ತು ಹುಲ್ಲಿನ ಕಳೆಗಳು
ಲೂಸಿಫರ್ ಸಸ್ಯನಾಶಕ ಪಿರೋಕ್ಸೋಫೋಪ್ ಪ್ರೋಪ್ಯಾನಿಲ್-15% ಡಬ್ಲ್ಯೂ ಪಿ 1 – 2 ಗ್ರಾಂ/ನೀರಿಗೆ ಹುಲ್ಲಿನ ಕಳೆಗಳು

ಸೂಚನೆ:

  • ಕಳೆನಾಶಕಗಳ ಬಳಕೆಯು ಗೋಧಿಯಲ್ಲಿ ಕಳೆ ನಿರ್ವಹಣೆಗೆ ಪರಿಣಾಮಕಾರಿ ವಿಧಾನಗಳಲ್ಲಿ ಒಂದಾಗಿದೆ. ಆದರೆ, ಕಳೆ ನಿರ್ವಹಣೆಯ ರಾಸಾಯನಿಕ ವಿಧಾನಗಳನ್ನು ಮಾತ್ರ ಅವಲಂಬಿಸುವುದು ಕಳೆಗಳ ಪರಿಣಾಮಕಾರಿ ನಿಯಂತ್ರಣಕ್ಕೆ ಸಾಕಾಗುವುದಿಲ್ಲ. ಸಾಂಸ್ಕೃತಿಕ ಅಭ್ಯಾಸಗಳನ್ನು ಅನುಸರಿಸಿ, ಸಸ್ಯನಾಶಕಗಳ ಬಳಕೆಯೊಂದಿಗೆ ನಿಯಮಿತವಾಗಿ ಕೈಯಿಂದ ಕಳೆ ಕಿತ್ತಲು ಪರಿಣಾಮಕಾರಿ ಫಲಿತಾಂಶಗಳನ್ನು ನೀಡುತ್ತದೆ.
  • ಹೊರಹೊಮ್ಮುವ ಮೊದಲು ಮತ್ತು ನಂತರದ ಸಸ್ಯನಾಶಕಗಳನ್ನು ಸಿಂಪಡಿಸುವ ಸಮಯದಲ್ಲಿ ಸಾಕಷ್ಟು ಮಣ್ಣಿನ ತೇವಾಂಶವನ್ನು ಕಾಪಾಡಿಕೊಳ್ಳಿ.
  • ನಿರೋಧಕ ಕಳೆಗಳ ಬೆಳವಣಿಗೆಯನ್ನು ತಪ್ಪಿಸಲು ಸಸ್ಯನಾಶಕ ಉತ್ಪನ್ನಗಳನ್ನು ಬದಲಾಯಿಸುವುದು ಯಾವಾಗಲೂ ಅವಶ್ಯಕ.
  • ಅನುಕೂಲಕರ ಫಲಿತಾಂಶಗಳನ್ನು ಪಡೆಯಲು ಕಳೆಗಳ 2-3 ಎಲೆಗಳ ಹಂತದಲ್ಲಿ ಹೊರಹೊಮ್ಮಿದ ನಂತರ ಕಳೆನಾಶಕವನ್ನು ಸಿಂಪಡಿಸಿ.
  • ಎಲೆಗಳು ಒಣಗಿದಾಗ ಮಾತ್ರ ಸ್ಪಷ್ಟ ಮತ್ತು ಬಿಸಿಲಿನ ದಿನಗಳಲ್ಲಿ ಕಳೆನಾಶಕ ಸಿಂಪಡಿಸುವಿಕೆಯನ್ನು ಯೋಜಿಸಬೇಕು. ಹೆಚ್ಚಿನ ಗಾಳಿಯ ಸಮಯದಲ್ಲಿ ಅಥವಾ ಮಳೆಯ ಮುನ್ಸೂಚನೆ ಇರುವಾಗ ಸಿಂಪಡಿಸುವುದನ್ನು ತಪ್ಪಿಸಿ.
  • ಕಳೆನಾಶಕಗಳ ಹೆಚ್ಚಿನ ದಕ್ಷತೆಗಾಗಿ ಕಳೆನಾಶಕ ಮಿಶ್ರಣಕ್ಕಾಗಿ ಮಲ್ಟಿಪ್ಲೆಕ್ಸ್ ನಾಗಸ್ಥ – 180 (0.4 – 0.5 ಮಿಲಿ/ಲೀಟರ್ ಸ್ಪ್ರೇ ದ್ರಾವಣ) ನಂತಹ ಅಂಟಿಕೊಳ್ಳುವ ಮತ್ತು ಹರಡುವ ಉತ್ಪನ್ನಗಳನ್ನು  ಬಳಸಿ.
  • ಕಳೆನಾಶಕಗಳನ್ನು ಕೀಟನಾಶಕಗಳೊಂದಿಗೆ ಬೆರೆಸಬೇಡಿ.
  • ಶಿಫಾರಸು ಮಾಡಿದ ದರಗಳು, ಅಪ್ಲಿಕೇಶನ್ ಸಮಯ ಮತ್ತು ಸುರಕ್ಷತಾ ಮುನ್ನೆಚ್ಚರಿಕೆಗಳು ಸೇರಿದಂತೆ ಸಸ್ಯನಾಶಕ ಲೇಬಲ್ ಮೇಲಿರುವ ಸೂಚನೆಗಳನ್ನು ಎಚ್ಚರಿಕೆಯಿಂದ ಅನುಸರಿಸಿ.

 

Recent Posts

ಸೆಲ್ ಜೆಲ್: ಆಧುನಿಕ ಕೃಷಿಗಾಗಿ ನೀರಿನ ಉತ್ತಮ ಸ್ಥಿತಿಯನ್ನು ರೂಪಿಸುವ ಕ್ರಾಂತಿಕಾರಿ ಉತ್ಪನ್ನ

ಕೃಷಿಯಲ್ಲಿ, ದಕ್ಷತೆ ಮತ್ತು ಉತ್ಪಾದಕತೆ ಯಾವಾಗಲೂ ಮುಖ್ಯವಾಗಿರುತ್ತದೆ. ಈಗ ನಾವು ನಿಮಗೆ ನಿಮ್ಮ ನೀರಿನ ಸ್ಥಿತಿ, ನಿಮ್ಮ ಸಸ್ಯ ಸಂರಕ್ಷಣಾ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸುವ…

January 28, 2025

ಎಕ್ಸ್‌ಸ್ಕೇಲೆಂಟ್ : ಡ್ರಿಪ್ ಕ್ಲೀನಿಂಗ್ ಕಾರ್ಯವಿಧಾನದ ಮೂಲಕ ಬೆಳೆಗಳಿಗೆ ಸುರಕ್ಷಿತ ಪರಿಹಾರಗಳು

ಇತ್ತೀಚಿನ ಆಧುನಿಕ ಕೃಷಿಯಲ್ಲಿ ಸಮರ್ಥ ನೀರಿನ ನಿರ್ವಹಣೆ ಮಾಡುವುದು ನಿರ್ಣಾಯಕವಾಗಿದೆ ಮತ್ತು ಹನಿ ನೀರಾವರಿ ಪದ್ದತಿಯು  ನೇರವಾಗಿ ಬೇರುಗಳ ವಲಯವನ್ನು ಗುರಿಯಾಗಿಸಿಕೊಂಡು ಸಸ್ಯಗಳಿಗೆ ನೀರನ್ನು ತಲುಪಿಸುವ ವಿಧಾನವನ್ನು…

January 28, 2025

ಬಯೋಕ್ಯುಲಮ್ AW: ಬೆಳೆ ಸುಸ್ಥಿರತೆಗಾಗಿ ಬಳಸಲು ಸಿದ್ಧವಾಗಿರುವ ಡಿಕಂಪೋಸರ್

ಸುಸ್ಥಿರ ಕೃಷಿ ಪದ್ದತಿಯಲ್ಲಿ ಸರಳವಾದ ಆದರೆ ಆಳವಾದ ವಿಷಯವೇನೆಂದರೆ ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವುದು. ಸಾವಯವ ಕೃಷಿ ತ್ಯಾಜ್ಯವು ನಮಗೆ ಹೊರೆಯಾಗಿರದೆ ಮಣ್ಣನ್ನು ಸಮೃದ್ಧಗೊಳಿಸುವ, ಸಸ್ಯಗಳನ್ನು ಪೋಷಿಸುವ ಮತ್ತು…

January 28, 2025

ಎಪಿಸೆಲ್: ಸುಸ್ಥಿರ ಕೃಷಿಗಾಗಿ ನಿಮ್ಮ ಬೆಳೆಗಳ ಸಂಪೂರ್ಣ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ

ಇತ್ತೀಚೆಗೆ ಬದಲಾಗುತ್ತಿರುವ ಕೃಷಿ ಭೂದೃಶ್ಯದ ಕಾರಣವಾಗಿ, ಸಮರ್ಥನೀಯ ಮತ್ತು ಸಮರ್ಥ ಕೃಷಿ ವಿಧಾನಗಳನ್ನು ಕಂಡುಹಿಡಿಯುವುದು ನಿರ್ಣಾಯಕವಾಗಿದೆ. ಅದಕ್ಕಾಗಿಯೇ ಪರಿಚಯಿಸುತ್ತಿದ್ದೇವೆ, ಎಪಿಸೆಲ್! ಎಕ್ಸೆಲ್ ಇಂಡಸ್ಟ್ರೀಸ್‌ ರವರ ಈ ನವೀನ…

January 28, 2025

ಸೆಲ್ ಜೆಲ್‌ನೊಂದಿಗೆ ಕೃಷಿ ದಕ್ಷತೆಯನ್ನು ಹೆಚ್ಚಿಸುವುದು: ನೀರಿನ ಕಂಡೀಷನಿಂಗ್ ಮತ್ತು pH ಸಮತೋಲನ ಮಾಡಲು ಸಲಹೆಗಳು

ನೀರು ಕೃಷಿಯಲ್ಲಿ ಮೂಲಭೂತ ಸಂಪನ್ಮೂಲವಾಗಿದ್ದು, ಬೆಳೆಗಳ ವೃದ್ಧಿಗಾಗಿ ಅಗತ್ಯ ಪೋಷಕಾಂಶಗಳ ಮತ್ತು ಬೆಳೆ ರಕ್ಷಣೆಗೆ ಅಗತ್ಯವಾದ ರಾಸಾಯನಿಕಗಳನ್ನು ಸಾಗಿಸುವಲ್ಲಿ ವಾಹಕವಾಗಿ ಕಾರ್ಯನಿರ್ವಹಿಸುತ್ತದೆ . ಆದಾಗ್ಯೂ, ಕಳೆನಾಶಕಗಳು, ಕೀಟನಾಶಕಗಳು,…

January 28, 2025

ಎಕ್ಸ್‌ಸ್ಕೇಲೆಂಟ್: ಹನಿ ನೀರಾವರಿ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಸುರಕ್ಷಿತ ಮತ್ತು ಪರಿಣಾಮಕಾರಿ ಪರಿಹಾರ

ಹನಿ ನೀರಾವರಿ ವ್ಯವಸ್ಥೆ ಆಧುನಿಕ ಕೃಷಿಯ ಅತ್ಯಗತ್ಯ ಅಂಶವಾಗಿದೆ. ಇದು ಸಸ್ಯಗಳ ಬೇರುಗಳಿಗೆ ನೇರವಾಗಿ ನೀರನ್ನು ತಲುಪಿಸುವ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಈ ವಿಧಾನವು ನೀರನ್ನು ಸಂರಕ್ಷಿಸುವುದು…

January 28, 2025