ಗೋಧಿಯು ಭಾರತದಲ್ಲಿ ಎರಡನೇ ಪ್ರಮುಖ ಆಹಾರ ಬೆಳೆಯಾಗಿದ್ದು , ಇದನ್ನು ದೇಶದಾದ್ಯಂತ ವ್ಯಾಪಕವಾಗಿ ಬೆಳೆಯಲಾಗುತ್ತದೆ. ಕಳೆಗಳು ಒಂದು ನಿರ್ದಿಷ್ಟ ಪ್ರದೇಶದಲ್ಲಿ ಅನಗತ್ಯ ಸಸ್ಯಗಳಾಗಿ ಬೆಳೆಯುತ್ತವೆ. ಪೋಷಕಾಂಶ, ಬೆಳಕು ಮತ್ತು ನೀರಿನ ಅವಶ್ಯಕತೆಗಾಗಿ ಬೆಳೆಯುತ್ತಿರುವ ಬೆಳೆಗೆ ಅಡ್ಡಿಪಡಿಸುವುದರಿಂದ ಕಳೆಗಳಿಂದ ಬೆಳೆ ಉತ್ಪಾದಕತೆಯನ್ನು ಹಾನಿಗೊಳಿಸಬಹುದು. ಗೋಧಿ ಹುಲ್ಲು ಮತ್ತು ಅಗಲ ಎಲೆಗಳ ಕಳೆಗಳಿಂದ ಕೂಡಿರುತ್ತವೆ. ಬೆಳೆಗಳ ಬೆಳವಣಿಗೆಯ ಆರಂಭಿಕ ಹಂತಗಳಿಂದ ಕಳೆಗಳನ್ನು ನಿಯಂತ್ರಿಸದಿದ್ದರೆ, ಕಳೆಗಳ ತೀವ್ರತೆ ಮತ್ತು ಕಳೆಗಳ ವಿಧಗಳ ಆಧಾರದ ಮೇಲೆ ಇವುಗಳು ಗೋಧಿ ಬೆಳೆಗಳ ಇಳುವರಿಯನ್ನು 40% ವರೆಗೆ ಕಡಿಮೆಗೊಳಿಸಬಹುದು ಎಂದು ಕೃಷಿ ವಿಜ್ನ್ಯಾನಿಗಳು ಹೇಳಿದ್ದಾರೆ. ಯಾವುದೇ ಬೆಳೆಯಲ್ಲಿ ಕಳೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಮಗ್ರ ಕಳೆ ನಿರ್ವಹಣಾ ಪದ್ಧತಿಗಳನ್ನು ಕೇಂದ್ರೀಕರಿಸಬೇಕು.
ಏಕದಳ ಮತ್ತು ದ್ವಿದಳ ಕಳೆಗಳೆರಡೂ ಗೋಧಿ ಗದ್ದೆಗಳಲ್ಲಿ ಪ್ರಚಲಿತವಾಗಿದೆ. ಏಕದಳ ಕಳೆಗಳು ಅಥವಾ ಹುಲ್ಲುಗಳು ಉದ್ದವಾದ, ಕಿರಿದಾದ ಎಲೆಗಳಿರುವ ಗುಣಲಕ್ಷಣಗಳನ್ನು ಹೊಂದಿವೆ, ಅವುಗಳು ಸಾಮಾನ್ಯವಾಗಿ ಸಮಾನಾಂತರ ನಾಳಗಳನ್ನು ಹೊಂದಿರುತ್ತವೆ. ದ್ವಿದಳ ಅಥವಾ ಅಗಲವಾದ ಎಲೆಗಳನ್ನು ಹೊಂದಿರುವ ಎಲೆಗಳು ಕವಲೊಡೆಯುವ ಸಿರೆಗಳನ್ನು ಹೊಂದಿರುತ್ತವೆ.
ಕಳೆಗಳ ವಿಧ | ಕಳೆಗಳ ಜಾತಿ |
ಏಕದಳ ಕಳೆಗಳು | ಫಲಾರಿಸ್ ಮೈನರ್, ಅವೆನಾ ಫಟುವಾ, ಪಾಲಿಪೊಗನ್ ಮಾನ್ಸ್ಪ್ಲೆನ್ಸಿಸ್, ಸೈಪರಸ್ ರೋಟಂಡಸ್, ಸೈನೊಡಾನ್ ಡ್ಯಾಕ್ಟಿಲಾನ್ |
ದ್ವಿದಳ ಕಳೆಗಳು | ಚೆನೊಪೊಡಿಯಮ್ ಆಲ್ಬಮ್, ಫ್ಯೂಮಾರಿಯಾ ಪುರ್ವಿಫ್ಲೋರಾ, ಸಿರ್ಸಿಯಮ್ ಅರ್ವೆನ್ಸ್, ಅನಾಗಾಲಿಸ್ ಅರ್ವೆನ್ಸಿಸ್, ಮೆಲಿಲೋಟಸ್ ಆಲ್ಬಾ, ಮೆಲಿಲೋಟಸ್ ಇಂಡಿಕಾ, ವಿಸಿಯಾ ಸಟಿವಾ, ಲ್ಯಾಥಿರಸ್ ಎಸ್ಪಿಪಿ |
ಕಳೆ ಏಕದಳ ಅಥವಾ ದ್ವಿದಳ ಎಂಬುದನ್ನು ತಿಳಿದುಕೊಳ್ಳುವುದು ಹಾಗೂ ಕಳೆಗಳನ್ನು ಗುರುತಿಸಲು ಮತ್ತು ನಿಯಂತ್ರಿಸಲು ಅತ್ಯಂತ ಪರಿಣಾಮಕಾರಿ ವಿಧಾನವನ್ನು ಆಯ್ಕೆ ಮಾಡಲು ಸಹಾಯ ಮಾಡುತ್ತದೆ. ಆಯ್ದ ಸಸ್ಯನಾಶಕಗಳನ್ನು ನಿರ್ದಿಷ್ಟ ಕಳೆಗಳನ್ನು ಗುರಿಯಾಗಿಸಲು ಬಳಸಬಹುದು ಹಾಗೂ ಸುತ್ತಮುತ್ತಲಿನ ಪರಿಸರ ಮತ್ತು ಗುರಿಯಲ್ಲದ ಕಳೆ ಜಾತಿಗಳ ಹಾನಿಯನ್ನು ಕಡಿಮೆ ಮಾಡುತ್ತದೆ.
ಬಿತ್ತಿದ 0 – 3 ದಿನಗಳಲ್ಲಿ ಗೋಧಿ ಗದ್ದೆಯಲ್ಲಿ ಪ್ರತಿ ಲೀಟರ್ ನೀರಿಗೆ 6.5 ಮಿಲಿ ಯಂತೆ ಪೆಂಡಿಮೆಥಾಲಿನ್ 30% ಇಸಿ ಸಸ್ಯನಾಶಕವನ್ನು ಸಿಂಪಡಿಸಿ. ಪೆಂಡಿಮೆಥಾಲಿನ್ ಗೋಧಿ ಪರಿಸರ ವ್ಯವಸ್ಥೆಯಲ್ಲಿ ಹುಲ್ಲು ಮತ್ತು ಅಗಲವಾದ ಕಳೆ ಎರಡನ್ನೂ ನಿಯಂತ್ರಿಸುತ್ತದೆ. ಬೂಟಾಕ್ಲೋರ್ 50% ಇಸಿಯನ್ನು 5 ಮಿಲಿ/ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬಹುದು.
ಸಿಂಪಡಿಸುವ ಸಮಯ – ಮೊದಲ ನೀರಾವರಿ ನಂತರ 30 -35 ದಿನಗಳ ನಂತರ ಅಥವಾ 2 – 4 ಕಳೆ ಎಲೆಗಳ ಹಂತದಲ್ಲಿ.
ಕಳೆನಾಶಕ | ತಾಂತ್ರಿಕ ಅಂಶ | ಬಳಕೆಯ ಪ್ರಮಾಣ | ನಿರ್ವಹಿಸುವ ಕಳೆ ವಿಧ |
ವೀಡ್ಮಾರ್ ಸೂಪರ್ | 2,4-ಡಿ ಅಮೈನ್ ಸಾಲ್ಟ್ 58% ಎಸ್ಎಲ್ | 1.5 – 2.5 ಗ್ರಾಂ/ನೀರಿಗೆ | ಅಗಲವಾದ ಎಲೆಗಳು ಮತ್ತು ಹುಲ್ಲಿನ ಕಳೆಗಳು |
ಟಾಟಾಮೆಟ್ರಿ ಕಳೆನಾಶಕ | ಮೆಟ್ರಿಬುಜಿನ್-70% ಡಬ್ಲ್ಯೂ ಪಿ | 1.5 ಗ್ರಾಂ/ನೀರಿಗೆ | ಅಗಲವಾದ ಎಲೆಗಳು ಮತ್ತು ಹುಲ್ಲಿನ ಕಳೆಗಳು |
ಸೆಂಪ್ರಾ ಕಳೆನಾಶಕ | ಹ್ಯಾಲೊಸಲ್ಫುರಾನ್ ಮೀಥೈಲ್-75% ಡಬ್ಲ್ಯೂ ಜಿ | 0.2 ಗ್ರಾಂ/ನೀರಿಗೆ | ಹುಲ್ಲಿನ ಕಳೆಗಳು |
ಕಾತ್ಯಾಯನಿ ವಿಕ್ರಮ್ | ಕ್ಲೋಡಿನಾಫೊಪ್ ಪ್ರೊಪರ್ಗಿಲ್-15% ಡಬ್ಲ್ಯೂ ಪಿ | 0.8 – 1 ಗ್ರಾಂ/ನೀರಿಗೆ | ಹುಲ್ಲಿನ ಕಳೆಗಳು |
ಕಾತ್ಯಾಯನಿಎಂ ಯಸ್ ಎಂ | ಮೆಟ್ಸಲ್ಫುರಾನ್ ಮೀಥೈಲ್-20% ಡಬ್ಲ್ಯೂ ಪಿ | 0.04ಗ್ರಾಂ/ನೀರಿಗೆ | ಅಗಲವಾದ ಎಲೆಗಳು ಮತ್ತು ಹುಲ್ಲಿನ ಕಳೆಗಳು |
ಲೂಸಿಫರ್ ಸಸ್ಯನಾಶಕ | ಪಿರೋಕ್ಸೋಫೋಪ್ ಪ್ರೋಪ್ಯಾನಿಲ್-15% ಡಬ್ಲ್ಯೂ ಪಿ | 1 – 2 ಗ್ರಾಂ/ನೀರಿಗೆ | ಹುಲ್ಲಿನ ಕಳೆಗಳು |
ಕೃಷಿಯಲ್ಲಿ, ದಕ್ಷತೆ ಮತ್ತು ಉತ್ಪಾದಕತೆ ಯಾವಾಗಲೂ ಮುಖ್ಯವಾಗಿರುತ್ತದೆ. ಈಗ ನಾವು ನಿಮಗೆ ನಿಮ್ಮ ನೀರಿನ ಸ್ಥಿತಿ, ನಿಮ್ಮ ಸಸ್ಯ ಸಂರಕ್ಷಣಾ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸುವ…
ಇತ್ತೀಚಿನ ಆಧುನಿಕ ಕೃಷಿಯಲ್ಲಿ ಸಮರ್ಥ ನೀರಿನ ನಿರ್ವಹಣೆ ಮಾಡುವುದು ನಿರ್ಣಾಯಕವಾಗಿದೆ ಮತ್ತು ಹನಿ ನೀರಾವರಿ ಪದ್ದತಿಯು ನೇರವಾಗಿ ಬೇರುಗಳ ವಲಯವನ್ನು ಗುರಿಯಾಗಿಸಿಕೊಂಡು ಸಸ್ಯಗಳಿಗೆ ನೀರನ್ನು ತಲುಪಿಸುವ ವಿಧಾನವನ್ನು…
ಸುಸ್ಥಿರ ಕೃಷಿ ಪದ್ದತಿಯಲ್ಲಿ ಸರಳವಾದ ಆದರೆ ಆಳವಾದ ವಿಷಯವೇನೆಂದರೆ ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವುದು. ಸಾವಯವ ಕೃಷಿ ತ್ಯಾಜ್ಯವು ನಮಗೆ ಹೊರೆಯಾಗಿರದೆ ಮಣ್ಣನ್ನು ಸಮೃದ್ಧಗೊಳಿಸುವ, ಸಸ್ಯಗಳನ್ನು ಪೋಷಿಸುವ ಮತ್ತು…
ಇತ್ತೀಚೆಗೆ ಬದಲಾಗುತ್ತಿರುವ ಕೃಷಿ ಭೂದೃಶ್ಯದ ಕಾರಣವಾಗಿ, ಸಮರ್ಥನೀಯ ಮತ್ತು ಸಮರ್ಥ ಕೃಷಿ ವಿಧಾನಗಳನ್ನು ಕಂಡುಹಿಡಿಯುವುದು ನಿರ್ಣಾಯಕವಾಗಿದೆ. ಅದಕ್ಕಾಗಿಯೇ ಪರಿಚಯಿಸುತ್ತಿದ್ದೇವೆ, ಎಪಿಸೆಲ್! ಎಕ್ಸೆಲ್ ಇಂಡಸ್ಟ್ರೀಸ್ ರವರ ಈ ನವೀನ…
ನೀರು ಕೃಷಿಯಲ್ಲಿ ಮೂಲಭೂತ ಸಂಪನ್ಮೂಲವಾಗಿದ್ದು, ಬೆಳೆಗಳ ವೃದ್ಧಿಗಾಗಿ ಅಗತ್ಯ ಪೋಷಕಾಂಶಗಳ ಮತ್ತು ಬೆಳೆ ರಕ್ಷಣೆಗೆ ಅಗತ್ಯವಾದ ರಾಸಾಯನಿಕಗಳನ್ನು ಸಾಗಿಸುವಲ್ಲಿ ವಾಹಕವಾಗಿ ಕಾರ್ಯನಿರ್ವಹಿಸುತ್ತದೆ . ಆದಾಗ್ಯೂ, ಕಳೆನಾಶಕಗಳು, ಕೀಟನಾಶಕಗಳು,…
ಹನಿ ನೀರಾವರಿ ವ್ಯವಸ್ಥೆ ಆಧುನಿಕ ಕೃಷಿಯ ಅತ್ಯಗತ್ಯ ಅಂಶವಾಗಿದೆ. ಇದು ಸಸ್ಯಗಳ ಬೇರುಗಳಿಗೆ ನೇರವಾಗಿ ನೀರನ್ನು ತಲುಪಿಸುವ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಈ ವಿಧಾನವು ನೀರನ್ನು ಸಂರಕ್ಷಿಸುವುದು…