ಗೋಧಿ (ಟ್ರೀಟಿಕಮ್ ಎಸ್ಟಿವಮ್) ಪ್ರಪಂಚದ ಎಲ್ಲೆಡೆ ಬಳಕೆಯಲ್ಲಿರುವ ಏಕದಳ ಧಾನ್ಯ. ಜೋಳ ಮತ್ತು ಅಕ್ಕಿ ಗಿಂತ ಹೆಚ್ಚು ಪ್ರೋಟೀನ್ ಮತ್ತು ಫೈಬರ್ ಅನ್ನು ಹೊಂದಿರುವ ಧಾನ್ಯವಾಗಿದೆ, ಹಾಗೂ ಸಸ್ಯ ಜನ್ಯ ಪ್ರೋಟೀನ್ ಒದಗಿಸುವ ಒಂದು ಮುಖ್ಯ ಬೆಳೆಯಾಗಿದೆ. ಇದರಲ್ಲಿ ಪ್ರೋಟೀನ್, ವಿಟಮಿನ್ ಮತ್ತು ಕಾರ್ಬೋಹೈಡ್ರೇಟ್ ಗಳು ಸಮೃದ್ಧವಾಗಿದೆ ಹಾಗೂ ಇದು ಸಮತೋಲನ ಆಹಾರವನ್ನು ನೀಡುತ್ತದೆ. ರಷ್ಯಾ, ಯುಎಸ್ಎ ಮತ್ತು ಚೀನಾದ ನಂತರ ಭಾರತವು ವಿಶ್ವದಲ್ಲಿ ನಾಲ್ಕನೇ ಅತಿದೊಡ್ಡ ಗೋಧಿ ಉತ್ಪಾದಕವಾಗಿದೆ.
ಗೋಧಿ ಬೆಳೆಗೆ ಮರಳು ಮಿಶ್ರಿತ ಗೋಡು ಮಣ್ಣು ಮತ್ತು ಕಪ್ಪು ಮಣ್ಣು ಉತ್ತಮ. ಮಣ್ಣಿನ ರಸಸಾರತೆ 6.5 ರಿಂದ 7.0 ಇದ್ದಲ್ಲಿ ಉತ್ತಮ.
ಗೋಧಿ ಮೂಲತಃ ಬೆಟ್ಟ ಪ್ರದೇಶಗಳ ಬೆಳೆಯಾದರೂ ಇದನ್ನು ಶುಷ್ಕ ಹವಾಮಾನದಲ್ಲಿಯೂ ಬೆಳೆಯಲಾಗುತ್ತದೆ. ಗೋಧಿ ಬೆಳೆಗೆ ತಂಪನೆಯ ಮತ್ತು ಒಣ ವಾತಾವರಣ ಬೇಕು. ಮೊಳಕೆಯೊಡೆಯಲು 20 °C ಅಥವಾ 16-22 °C ಉಷ್ಣಾಂಶವಿದ್ದಲ್ಲಿ ಉತ್ತಮ.
ಬೆಳಗಿನ ತಂಪು ವಾತಾವರಣ ಮತ್ತು ಇಬ್ಬನಿ ಇದ್ದಲ್ಲಿ ಗೋಧಿ ಪೈರು ಹೆಚ್ಚಿನ ತೆಂಡೆಗಳನ್ನು ಒಡೆದು ಹೆಚ್ಚು ಕಾಳುಕಟ್ಟಲು ಸಹಕಾರಿಯಾಗುತ್ತದೆ. ಬಿತ್ತನೆ ಕಾಲದಲ್ಲಿ ತುಂಬಾ ಬಿಸಿಲಿನ ಮತ್ತು ಆರ್ದ್ರ ವಾತಾವರಣವಿದ್ದಲ್ಲಿ ಕೀಟ ಮತ್ತು ರೋಗಗಳ ದಾಳಿ ಹೆಚ್ಚಿರುತ್ತದೆ. ಆದಾಗ್ಯೂ ಬೆಳೆ ಮಾಗುವ ಹಂತದಲ್ಲಿ ಕಡಿಮೆ ಆರ್ಧ್ರತೆ ಮತ್ತು ಬೆಚ್ಚನೆಯ ವಾತಾವರಣ ಇರಬೇಕು.
ಭೂಮಿಯನ್ನು ಚನ್ನಾಗಿ ಉಳುಮೆ ಮಾಡಿ ಹಿಂದಿನ ಬೆಳೆಯ ಉಳಿಕೆಗಳನ್ನು ಮತ್ತು ಕಳೆಗಳನ್ನು ಸಂಪೂರ್ಣವಾಗಿ ತೆಗೆದುಹಾಕಿ.
ಗೋಧಿ ಬೆಳೆಯಾ ನಂತರ ಇತರೆ ಧಾನ್ಯ ಅಥವಾ ಬೇಳೆ ಕಾಳುಗಳ ಬೆಳೆ ಪರಿವರ್ತನೆಯನ್ನು ಮಾಡಬೇಕು.
ಉಳುಮೆಯ ಹಂತದಲ್ಲಿ ಯಾವುದೇ ಜೈವಿಕ ಗೊಬ್ಬರದಿಂದ ಪುಷ್ಟೀಕರಿಸಿದಂತಹ ಕೊಟ್ಟಿಗೆ ಗೊಬ್ಬರವನ್ನು ಪ್ರತೀ ಎಕರೆಗೆ (ಬಿಳಿ ಇರುವೆಗಳ ಹಾವಳಿ ತಪ್ಪಿಸುತ್ತದೆ) ಹಾಕಬಹುದು, ಚನ್ನಾಗಿ ಮಣ್ಣಿನಲ್ಲಿ ಬೆರೆಸಬೇಕು. ಬಿತ್ತನೆಗಾಗಿ ಸಸಿ ಮಡಿಗಳನ್ನು ಸಮತಟ್ಟು ಮಾಡಿಕೊಳ್ಳಬೇಕು.
ಪ್ರತಿ ಎಕರೆಗೆ 45-60 ಕೆ.ಜಿ ಬೀಜಗಳು ಬೇಕಾಗುತ್ತದೆ.
ಗಿಡದಿಂಡ ಗಿಡಕ್ಕೆ 10 ಸೆಂ.ಮೀ ಮತ್ತು ಸಾಲಿನಿಂದ ಸಾಲಿಗೆ 20-25 ಸೆಂ.ಮೀ ಅಂತರ ಕೊಟ್ಟಲ್ಲಿ ಇಷ್ಟು ಪ್ರಮಾಣದ ಬೀಜಗಳು ಅವಶ್ಯವಿರುತ್ತದೆ.
ಶಿಲೀಂದ್ರನಾಶಕ (ಸಿಸ್ಟಮಿಕ್ ಫಂಗಿಸೈಡ್) ದಿಂದ ಬೀಜೋಪಚಾರ ಮಾಡಬಹುದು ಅಥವಾ ಕೀಟನಾಶಕ ಬ್ಯಾವಿಸ್ಟಿನ್ 2 ಗ್ರಾಂ/ಕೆ.ಜಿ ಅಥವಾ ಮೆಟಾಲ್ಯಾಕ್ಸಿಲ್ 35% 1 ಗ್ರಾಂ/ಕೆ.ಜಿ, ಅಥವಾ ಟ್ರೈಕೋಡರ್ಮಾ ವಿರಿಡೆ 20-25 ಗ್ರಾಂ/ಕೆ.ಜಿ ಯೊಂದಿಗೆ ಬೀಜೋಪಚಾರ ಮಾಡುವುದರಿಂದ ಬೀಜ ಮತ್ತು ಮಣ್ಣಿನಿಂದ ಬರುವಂತಹ ರೋಗಗಳನ್ನು ನಿಯಂತ್ರಿಸಬಹುದು.
5-6 ಸೆಂ.ಮೀ ಆಳದಲ್ಲಿ ಹೊಲವನ್ನು ಉಳುಮೆ ಮಾಡಬೇಕು. ಬಿತ್ತನೆಗೂ ಮುನ್ನ ಭೂಮಿಗೆ ತಳ ಗೊಬ್ಬರದಂತೆ ರಸಾಯನಿಕಗಳನ್ನು ಕೊಡಬೇಕು.
ಕಳೆ ಹುಟ್ಟುವುದಕ್ಕೂ ಮುನ್ನ ಪ್ರೀ ಎಮೆರ್ಜೆಂಟ್ ಕಳೆನಾಶಕವಾಗಿ ಪೆಂಡಿಮೆಥಲಿನ್ಅನ್ನು (8- 8.5 ಮಿ.ಲೀ/ಲೀ ನೀರಿನಲ್ಲಿ ಬೆರೆಸಿ ಪ್ರತೀ ಎಕರೆಗೆ ಸಿಂಪಡಿಸಬೇಕು. ಇದು ಹುಲ್ಲಿನ ಜಾತಿ ಮತ್ತು ಅಗಲ ಎಲೆಗಳುಳ್ಳ ಕಳೆಗಳನ್ನೂ ನಿಯಂತ್ರಿಸುತ್ತದೆ.
ಲಕ್ಷಣಗಳು
ನಿಯಂತ್ರಣ ಕ್ರಮಗಳು:
ನಿಯಂತ್ರಣ ಕ್ರಮ:
ಗೋಧಿ ಕಾಡಿಗೆ ರೋಗ:
ರೋಗಲಕ್ಷಣಗಳು:
ನಿಯಂತ್ರಣ ಕ್ರಮಗಳು:
ಎಲೆಗಳು ಮತ್ತು ಕಾಂಡಗಳು ಹಳದಿ ಬಣ್ಣಕ್ಕೆ ತಿರುಗಿದಾಗ ಮತ್ತು ಸಾಕಷ್ಟು ಒಣಗಿದಾಗ ಕೊಯ್ಲು ಮಾಡಬಹುದು.
ನಷ್ಟವನ್ನು ತಪ್ಪಿಸಲು, ಸಸಿ ಒಣಗುವ ಮೊದಲು ಕೊಯ್ಲು ಮಾಡಬೇಕು. ಅತ್ಯುತ್ತಮ ಗುಣಮಟ್ಟಕ್ಕಾಗಿ ಸರಿಯಾದ ಸಮಯಕ್ಕೆ ಕೊಯ್ಲು ಮಾಡಬೇಕು, ಕಾಳಿನ ತೇವಾಂಶವು 25-30% ಕ್ಕೆ ತಲುಪಿದಾಗ ಕೊಯ್ಲು ಮಾಡಲು ಸರಿಯಾದ ಹಂತವಾಗಿದೆ.
ಕೈಯಿಂದ ಮಾಡುವ ಕೊಯ್ಲುಗಾಗಿ ಚೂಪಾದ ಕುಡಗೋಲುಗಳನ್ನು ಬಳಸಬೇಕು, ಕಂಬೈನ್ ಹಾರ್ವೆಸ್ಟರ್ನಲ್ಲಿ ಕೂಡ ಮಾಡಬಹುದು, ಇದು ಒಂದೇ ಬಾರಿಗೆ ಗೋಧಿ ಬೆಳೆಯನ್ನು ಕೊಯ್ಲು ಮತ್ತು ಒಕ್ಕಣೆ ಮಾಡುತ್ತದೆ.
ಕೃಷಿಯಲ್ಲಿ, ದಕ್ಷತೆ ಮತ್ತು ಉತ್ಪಾದಕತೆ ಯಾವಾಗಲೂ ಮುಖ್ಯವಾಗಿರುತ್ತದೆ. ಈಗ ನಾವು ನಿಮಗೆ ನಿಮ್ಮ ನೀರಿನ ಸ್ಥಿತಿ, ನಿಮ್ಮ ಸಸ್ಯ ಸಂರಕ್ಷಣಾ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸುವ…
ಇತ್ತೀಚಿನ ಆಧುನಿಕ ಕೃಷಿಯಲ್ಲಿ ಸಮರ್ಥ ನೀರಿನ ನಿರ್ವಹಣೆ ಮಾಡುವುದು ನಿರ್ಣಾಯಕವಾಗಿದೆ ಮತ್ತು ಹನಿ ನೀರಾವರಿ ಪದ್ದತಿಯು ನೇರವಾಗಿ ಬೇರುಗಳ ವಲಯವನ್ನು ಗುರಿಯಾಗಿಸಿಕೊಂಡು ಸಸ್ಯಗಳಿಗೆ ನೀರನ್ನು ತಲುಪಿಸುವ ವಿಧಾನವನ್ನು…
ಸುಸ್ಥಿರ ಕೃಷಿ ಪದ್ದತಿಯಲ್ಲಿ ಸರಳವಾದ ಆದರೆ ಆಳವಾದ ವಿಷಯವೇನೆಂದರೆ ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವುದು. ಸಾವಯವ ಕೃಷಿ ತ್ಯಾಜ್ಯವು ನಮಗೆ ಹೊರೆಯಾಗಿರದೆ ಮಣ್ಣನ್ನು ಸಮೃದ್ಧಗೊಳಿಸುವ, ಸಸ್ಯಗಳನ್ನು ಪೋಷಿಸುವ ಮತ್ತು…
ಇತ್ತೀಚೆಗೆ ಬದಲಾಗುತ್ತಿರುವ ಕೃಷಿ ಭೂದೃಶ್ಯದ ಕಾರಣವಾಗಿ, ಸಮರ್ಥನೀಯ ಮತ್ತು ಸಮರ್ಥ ಕೃಷಿ ವಿಧಾನಗಳನ್ನು ಕಂಡುಹಿಡಿಯುವುದು ನಿರ್ಣಾಯಕವಾಗಿದೆ. ಅದಕ್ಕಾಗಿಯೇ ಪರಿಚಯಿಸುತ್ತಿದ್ದೇವೆ, ಎಪಿಸೆಲ್! ಎಕ್ಸೆಲ್ ಇಂಡಸ್ಟ್ರೀಸ್ ರವರ ಈ ನವೀನ…
ನೀರು ಕೃಷಿಯಲ್ಲಿ ಮೂಲಭೂತ ಸಂಪನ್ಮೂಲವಾಗಿದ್ದು, ಬೆಳೆಗಳ ವೃದ್ಧಿಗಾಗಿ ಅಗತ್ಯ ಪೋಷಕಾಂಶಗಳ ಮತ್ತು ಬೆಳೆ ರಕ್ಷಣೆಗೆ ಅಗತ್ಯವಾದ ರಾಸಾಯನಿಕಗಳನ್ನು ಸಾಗಿಸುವಲ್ಲಿ ವಾಹಕವಾಗಿ ಕಾರ್ಯನಿರ್ವಹಿಸುತ್ತದೆ . ಆದಾಗ್ಯೂ, ಕಳೆನಾಶಕಗಳು, ಕೀಟನಾಶಕಗಳು,…
ಹನಿ ನೀರಾವರಿ ವ್ಯವಸ್ಥೆ ಆಧುನಿಕ ಕೃಷಿಯ ಅತ್ಯಗತ್ಯ ಅಂಶವಾಗಿದೆ. ಇದು ಸಸ್ಯಗಳ ಬೇರುಗಳಿಗೆ ನೇರವಾಗಿ ನೀರನ್ನು ತಲುಪಿಸುವ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಈ ವಿಧಾನವು ನೀರನ್ನು ಸಂರಕ್ಷಿಸುವುದು…