ಭಾರತದ ಉತ್ತರ ಭಾಗಗಳಾದ ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ಮಧ್ಯಪ್ರದೇಶ, ರಾಜಸ್ಥಾನ, ಬಿಹಾರ ಮತ್ತು ಗುಜರಾತ್ಗಳಲ್ಲಿ ಗೋಧಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ.
2021 – 22 ರ ಸಾಲಿನಲ್ಲಿ ಭಾರತವು INR.15,840.31 ಕೋಟಿ ಮೌಲ್ಯದ 7,239,366.80 MT ಗೋಧಿಯನ್ನು ವಿವಿಧ ರಾಷ್ಟ್ರಗಳಿಗೆ ರಫ್ತು ಮಾಡಿದೆ. ಗೋಧಿಯು ರಬಿ ಬೆಳೆಯಾಗಿದ್ದು( ಮುಂಗಾರು ಬೆಳೆ ) ಇದನ್ನು ಮುಖ್ಯವಾಗಿ ಜೇಡಿಮಣ್ಣಿನ ಮಣ್ಣಿನಲ್ಲಿ ಬೆಳೆಯಲಾಗುತ್ತದೆ. ಗೋಧಿ ಒಣ ಬೆಳೆಯಾಗಿರುವುದರಿಂದ , ಮಣ್ಣಿನ ಕಣಗಳ ಮಧ್ಯೆ ಉತ್ತಮ ಗಾಳಿಯಾಡುವಿಕೆಯ ಅಗತ್ಯವಿರುತ್ತದೆ.
ಕಠಿಣ
ಬಿತ್ತನೆ ಮಾಡಲು ಗೋಧಿಯ ಬೆಳೆಯಲ್ಲಿ ಹಲವು ವಿಧದ ತಳಿಗಳಿವೆ. ಸ್ಥಳೀಯ ತಳಿಗಳು, ಹೈಬ್ರಿಡ್ ಮತ್ತು ಆಮದು ಮಾಡಿದ ತಳಿಗಳಿವೆ. ಇವುಗಳಲ್ಲಿ ಅತಿ ಪ್ರಮುಖ ತಳಿಗಳು ಯಾವುವೆಂದರೆ DBW 222, DBW 252, DDW47, DBW 187, DBW 173, HD 2851, HD 2932, PBW 1 Zn, Unnat PBW 343, PDW 233, WHD 943, TL 2908.
DBW 222 ತಳಿಯು ದೆಹಲಿ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ ಹಾಗು ರಾಜಸ್ಥಾನ್ ರಾಜ್ಯದ ಕೆಲವು ಭಾಗಗಳಿಗೆ ಅತ್ಯಂತ ಸೂಕ್ತವಾಗಿದೆ.
DBW 222 ತಳಿಯು ತುಕ್ಕು ರೋಗಕ್ಕೆ ನಿರೋಧಕತೆಯನ್ನು ಹೊಂದಿದೆ . DBW 252 ತಳಿಯು ಬಿಹಾರ, ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಜಾರ್ಖಂಡ್, ಒಡಿಶಾ, ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳ ಬಯಲು ಪ್ರದೇಶಗಳಿಗೆ ಹೆಚ್ಚು ಸೂಕ್ತವಾಗಿದೆ.
ಗೋಧಿ ಬೀಜಗಳನ್ನು ಹೆಚ್ಚು ನೆನೆಸುವ ಅಗತ್ಯವಿರುವುದಿಲ್ಲ .8-12 ಗಂಟೆಗಳ ಕಾಲ ನೆನೆಸಿದರೆ ಸಾಕಾಗುತ್ತದೆ . ಹೆಚ್ಚು ಕಾಲ ನೆನೆಸುವುದರಿಂದ ಶಿಲೀಂಧ್ರಗಳ ಬೆಳವಣಿಗೆಗೆ ಕಾರಣವಾಗುತ್ತದೆ ಮತ್ತು ಬೀಜಗಳು ಕೊಳೆಯುತ್ತವೆ ಹಾಗಾಗಿ ದೀರ್ಘಕಾಲದ ನೆನೆಸುವೆಕೆ ಗೋದಿ ಕೃಷಿಗೆ ಸೂಕ್ತವಲ್ಲ.
ಸ್ಥಳ, ಹವಾಮಾನ ಪರಿಸ್ಥಿತಿ, ಮಣ್ಣಿನ ಸ್ಥಿತಿ ಇತ್ಯಾದಿಗಳನ್ನು ಅವಲಂಬಿಸಿ ಹಲವು ವಿಧಗಳಲ್ಲಿ ಗೋಧಿ ಬೀಜೋಪಚಾರವನ್ನು ಮಾಡಲಾಗುತ್ತದೆ .
ಸಾಮಾನ್ಯವಾಗಿ ಶಿಲಿಂಧ್ರನಾಶಕ ಹಾಗು ಕೀಟನಾಶಕವನ್ನು ಉಪಯೋಗಿಸಿ ಬೀಜೋಪಚಾರವನ್ನು ಮಾಡಲಾಗುತ್ತದೆ . ತೇವಯಿರುವ ಜಾಗದಲ್ಲಿ ಕಾಡಿಗೆ ರೋಗ, ಕೊಳೆತ ಮತ್ತು ಅಂಗಮಾರಿಯಂತಹ ಹಲವಾರು ರೋಗಗಳು ಬೀಜದ ಮೇಲೆ ಪರಿಣಾಮ ಬೀರುತ್ತದೆ
ಟೆಬುಕೊನಜೋಲ್ 1 ಗ್ರಾಂ/ಕೆಜಿ ಬೀಜಗಳಿಗೆ ಅಥವಾ ಬೇವಿಸ್ಟಿನ್ 2.5 ಗ್ರಾಂ/ಕೆಜಿ ಅನ್ನು ಸಾಮಾನ್ಯ ಕಾಡಿಗೆ ರೋಗ ಮತ್ತು ತೆನೆಯಲ್ಲಿ ಕಾಳುಗಳ ಬದಲಿಗೆ ಕಾಡಿಗೆ ರೋಗಕ್ಕೆ ಬೀಜೋಪಚಾರವಾಗಿ ಉಪಯೋಗಿಸಲಾಗುತ್ತದೆ. ಡ್ರಮ್ನ ಬಳಕೆಯಿಂದ ಬೀಜೋಪಚಾರವನ್ನು ಮಾಡಲಾಗುತ್ತದೆ . ಹಾಗೆಯೇ ಗೋದಿಯ ಟ್ರೈಕೋಡರ್ಮಾ ವಿರಿಡೆ 4 ಗ್ರಾಂ / ಕೆಜಿ ಬೀಜಗಳೊಂದಿಗೆ ಬೀಜೋಪಚಾರವನ್ನು ಮಾಡುವುದರಿಂದ ತುಂಬಾ ಉಪಯುಕ್ತ . ಏಕೆಂದರೆ ಇದು ತುಕ್ಕು ರೋಗದ ತೀವ್ರತೆಯನ್ನು ಕಡಿಮೆ ಮಾಡುತ್ತದೆ .
ಗೋಧಿ ಬೆಳೆಯ ಕೃಷಿಗೆ ಭತ್ತದ ಕೃಷಿಗೆ ಬೇಕಾಗಿರುವ ಹಾಗೆ ನರ್ಸರಿಯ ಅಗತ್ಯವಿರುವುದಿಲ್ಲ. ನೇರ ಬಿತ್ತನೆಯನ್ನು ಹೆಚ್ಚಾಗಿ ಮಾಡಲಾಗುತ್ತದೆ.ಗೋಧಿಗಾಗಿ ಹೊಲವನ್ನು ತಯಾರಿಸಲಾಗುತ್ತದೆ ಮತ್ತು ಬೀಜಗಳನ್ನು ಸಾಮಾನ್ಯವಾಗಿ ಪ್ರಸಾರ (ಕೈಯಿಂದ ಎರೆಚುವುದು)ಮಾಡಲಾಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಸಾಲು ಬಿತ್ತನೆಯಲ್ಲಿ ಅಸಾಂಪ್ರದಾಯಿಕ ಪದ್ಧತಿ ರೂಡಿಯಲ್ಲಿದೆ .
ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಬೇಕು. ಎರಡು ಬಾರಿ ಕಬ್ಬಿಣದ ನೇಗಿಲಿನಿಂದ ಮತ್ತು ಮೂರು ಬಾರಿ ಸಾಗುವಳಿ ಯಂತ್ರದಿಂದ ಉಳುಮೆ ಮಾಡಬೇಕು. .ಕೊನೆಯ ಉಳುಮೆಯಲ್ಲಿ ಪ್ರತಿ ಹೆಕ್ಟೇರಿಗೆ 12 ಟನ್ ಕೊಟ್ಟಿಗೆ ಗೊಬ್ಬರ, 5 ಕೆಜಿ ಜೈವಿಕ ಗೊಬ್ಬರ, 5 ಕೆಜಿ ಟ್ರೈಕೋಡರ್ಮಾ ಮತ್ತು 5 ಕೆಜಿ ಸ್ಯೂಡೋಮೊನಾಸ್ ಮಿಶ್ರಣ ಮಾಡಿ ಭೂಮಿಗೆ ಸೇರಿಸಬೇಕು.
ಗೋಧಿ ಬೆಳೆಗೆ ಸೂಕ್ತವಾದ ಮಣ್ಣುಯೆಂದರೆ ಹಗುರ ಜೇಡಿ/ಭಾರಿ ಕಡುಮಣ್ಣು . ಮಣ್ಣಿನಲ್ಲಿ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯದ ಅಗತ್ಯವಿರುತ್ತದೆ .ಅತಿಯಾಗಿ ಸವಕಳಿ ಹೊಂದಿದ ಮಣ್ಣು ಗೋಧಿ ಬೆಳೆಗೆ ಸೂಕ್ತವಲ್ಲ
ಗೋಧಿ ಬೆಳೆಗೆ ತಟಸ್ಥ pH 6.0 – 7.0 ಮಣ್ಣಿನ ಅಗತ್ಯವಿರುತ್ತದೆ, ಹೆಚ್ಚಿನ ಮತ್ತು ಕಡಿಮೆ pH ಹೊಂದಿರುವ ಮಣ್ಣು ಗೋದಿ ಬೆಳೆಯ ಬೆಳವಣಿಗೆ ಮತ್ತು ಇಳುವರಿ ಮೇಲೆ ಪರಿಣಾಮ ಬೀರುತ್ತದೆ.
ಗೋಧಿಯು ದೇಶದಾದ್ಯಂತ ಬೆಳೆಯುವ ಮತ್ತು ಸ್ಥಿರವಾದ ಬೆಳೆಯಾಗಿದೆ. ಗೋಧಿ ಬೆಳೆಯು ಒಂದು ಪ್ರಧಾನ ಬೆಳೆಯಾಗಿದ್ದು, ರೈತರಿಗೆ ಹೆಚ್ಚಿನ ಲಾಭವನ್ನು ನೀಡುತ್ತದೆ.
ಕೃಷಿಯಲ್ಲಿ, ದಕ್ಷತೆ ಮತ್ತು ಉತ್ಪಾದಕತೆ ಯಾವಾಗಲೂ ಮುಖ್ಯವಾಗಿರುತ್ತದೆ. ಈಗ ನಾವು ನಿಮಗೆ ನಿಮ್ಮ ನೀರಿನ ಸ್ಥಿತಿ, ನಿಮ್ಮ ಸಸ್ಯ ಸಂರಕ್ಷಣಾ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸುವ…
ಇತ್ತೀಚಿನ ಆಧುನಿಕ ಕೃಷಿಯಲ್ಲಿ ಸಮರ್ಥ ನೀರಿನ ನಿರ್ವಹಣೆ ಮಾಡುವುದು ನಿರ್ಣಾಯಕವಾಗಿದೆ ಮತ್ತು ಹನಿ ನೀರಾವರಿ ಪದ್ದತಿಯು ನೇರವಾಗಿ ಬೇರುಗಳ ವಲಯವನ್ನು ಗುರಿಯಾಗಿಸಿಕೊಂಡು ಸಸ್ಯಗಳಿಗೆ ನೀರನ್ನು ತಲುಪಿಸುವ ವಿಧಾನವನ್ನು…
ಸುಸ್ಥಿರ ಕೃಷಿ ಪದ್ದತಿಯಲ್ಲಿ ಸರಳವಾದ ಆದರೆ ಆಳವಾದ ವಿಷಯವೇನೆಂದರೆ ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವುದು. ಸಾವಯವ ಕೃಷಿ ತ್ಯಾಜ್ಯವು ನಮಗೆ ಹೊರೆಯಾಗಿರದೆ ಮಣ್ಣನ್ನು ಸಮೃದ್ಧಗೊಳಿಸುವ, ಸಸ್ಯಗಳನ್ನು ಪೋಷಿಸುವ ಮತ್ತು…
ಇತ್ತೀಚೆಗೆ ಬದಲಾಗುತ್ತಿರುವ ಕೃಷಿ ಭೂದೃಶ್ಯದ ಕಾರಣವಾಗಿ, ಸಮರ್ಥನೀಯ ಮತ್ತು ಸಮರ್ಥ ಕೃಷಿ ವಿಧಾನಗಳನ್ನು ಕಂಡುಹಿಡಿಯುವುದು ನಿರ್ಣಾಯಕವಾಗಿದೆ. ಅದಕ್ಕಾಗಿಯೇ ಪರಿಚಯಿಸುತ್ತಿದ್ದೇವೆ, ಎಪಿಸೆಲ್! ಎಕ್ಸೆಲ್ ಇಂಡಸ್ಟ್ರೀಸ್ ರವರ ಈ ನವೀನ…
ನೀರು ಕೃಷಿಯಲ್ಲಿ ಮೂಲಭೂತ ಸಂಪನ್ಮೂಲವಾಗಿದ್ದು, ಬೆಳೆಗಳ ವೃದ್ಧಿಗಾಗಿ ಅಗತ್ಯ ಪೋಷಕಾಂಶಗಳ ಮತ್ತು ಬೆಳೆ ರಕ್ಷಣೆಗೆ ಅಗತ್ಯವಾದ ರಾಸಾಯನಿಕಗಳನ್ನು ಸಾಗಿಸುವಲ್ಲಿ ವಾಹಕವಾಗಿ ಕಾರ್ಯನಿರ್ವಹಿಸುತ್ತದೆ . ಆದಾಗ್ಯೂ, ಕಳೆನಾಶಕಗಳು, ಕೀಟನಾಶಕಗಳು,…
ಹನಿ ನೀರಾವರಿ ವ್ಯವಸ್ಥೆ ಆಧುನಿಕ ಕೃಷಿಯ ಅತ್ಯಗತ್ಯ ಅಂಶವಾಗಿದೆ. ಇದು ಸಸ್ಯಗಳ ಬೇರುಗಳಿಗೆ ನೇರವಾಗಿ ನೀರನ್ನು ತಲುಪಿಸುವ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಈ ವಿಧಾನವು ನೀರನ್ನು ಸಂರಕ್ಷಿಸುವುದು…