Crop

ಗೋಧಿ ಬೆಳೆಗೆ ಭೂಮಿ ಸಿದ್ಧತೆ

ಭಾರತದ ಉತ್ತರ ಭಾಗಗಳಾದ ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ಮಧ್ಯಪ್ರದೇಶ, ರಾಜಸ್ಥಾನ, ಬಿಹಾರ ಮತ್ತು ಗುಜರಾತ್‌ಗಳಲ್ಲಿ ಗೋಧಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. 

2021 – 22 ರ ಸಾಲಿನಲ್ಲಿ ಭಾರತವು INR.15,840.31 ಕೋಟಿ ಮೌಲ್ಯದ 7,239,366.80 MT ಗೋಧಿಯನ್ನು ವಿವಿಧ ರಾಷ್ಟ್ರಗಳಿಗೆ ರಫ್ತು  ಮಾಡಿದೆ. ಗೋಧಿಯು ರಬಿ  ಬೆಳೆಯಾಗಿದ್ದು( ಮುಂಗಾರು ಬೆಳೆ )  ಇದನ್ನು ಮುಖ್ಯವಾಗಿ ಜೇಡಿಮಣ್ಣಿನ ಮಣ್ಣಿನಲ್ಲಿ ಬೆಳೆಯಲಾಗುತ್ತದೆ. ಗೋಧಿ ಒಣ ಬೆಳೆಯಾಗಿರುವುದರಿಂದ , ಮಣ್ಣಿನ ಕಣಗಳ ಮಧ್ಯೆ ಉತ್ತಮ ಗಾಳಿಯಾಡುವಿಕೆಯ ಅಗತ್ಯವಿರುತ್ತದೆ. 

ಕಷ್ಟದ ಮಟ್ಟ :

ಕಠಿಣ

ಬೀಜಗಳ ಆಯ್ಕೆ ಮತ್ತು ಬೀಜೋಪಚಾರ

ಬಿತ್ತನೆ ಮಾಡಲು ಗೋಧಿಯ ಬೆಳೆಯಲ್ಲಿ  ಹಲವು ವಿಧದ ತಳಿಗಳಿವೆ.  ಸ್ಥಳೀಯ ತಳಿಗಳು,  ಹೈಬ್ರಿಡ್ ಮತ್ತು ಆಮದು ಮಾಡಿದ ತಳಿಗಳಿವೆ.  ಇವುಗಳಲ್ಲಿ ಅತಿ ಪ್ರಮುಖ ತಳಿಗಳು ಯಾವುವೆಂದರೆ DBW 222, DBW 252, DDW47, DBW 187, DBW 173, HD 2851, HD 2932, PBW 1 Zn, Unnat PBW 343, PDW 233, WHD 943, TL 2908. 

DBW 222 ತಳಿಯು ದೆಹಲಿ, ಪಂಜಾಬ್‌, ಹರಿಯಾಣ, ಉತ್ತರ ಪ್ರದೇಶ, ಉತ್ತರಾಖಂಡ,  ಹಿಮಾಚಲ ಪ್ರದೇಶ ಹಾಗು ರಾಜಸ್ಥಾನ್ ರಾಜ್ಯದ ಕೆಲವು ಭಾಗಗಳಿಗೆ ಅತ್ಯಂತ  ಸೂಕ್ತವಾಗಿದೆ.

DBW 222 ತಳಿಯು ತುಕ್ಕು ರೋಗಕ್ಕೆ ನಿರೋಧಕತೆಯನ್ನು ಹೊಂದಿದೆ . DBW 252 ತಳಿಯು ಬಿಹಾರ,  ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಜಾರ್ಖಂಡ್, ಒಡಿಶಾ, ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳ ಬಯಲು ಪ್ರದೇಶಗಳಿಗೆ ಹೆಚ್ಚು ಸೂಕ್ತವಾಗಿದೆ.

ಬೀಜಗಳನ್ನು ಮೊದಲೇ ನೆನೆಸುವುದು

ಗೋಧಿ ಬೀಜಗಳನ್ನು ಹೆಚ್ಚು ನೆನೆಸುವ ಅಗತ್ಯವಿರುವುದಿಲ್ಲ  .8-12 ಗಂಟೆಗಳ ಕಾಲ ನೆನೆಸಿದರೆ ಸಾಕಾಗುತ್ತದೆ . ಹೆಚ್ಚು ಕಾಲ ನೆನೆಸುವುದರಿಂದ ಶಿಲೀಂಧ್ರಗಳ ಬೆಳವಣಿಗೆಗೆ ಕಾರಣವಾಗುತ್ತದೆ ಮತ್ತು ಬೀಜಗಳು ಕೊಳೆಯುತ್ತವೆ ಹಾಗಾಗಿ ದೀರ್ಘಕಾಲದ ನೆನೆಸುವೆಕೆ ಗೋದಿ  ಕೃಷಿಗೆ ಸೂಕ್ತವಲ್ಲ.

ಬೀಜೋಪಚಾರ

ಸ್ಥಳ, ಹವಾಮಾನ ಪರಿಸ್ಥಿತಿ, ಮಣ್ಣಿನ ಸ್ಥಿತಿ ಇತ್ಯಾದಿಗಳನ್ನು ಅವಲಂಬಿಸಿ ಹಲವು ವಿಧಗಳಲ್ಲಿ  ಗೋಧಿ ಬೀಜೋಪಚಾರವನ್ನು  ಮಾಡಲಾಗುತ್ತದೆ . 

ಸಾಮಾನ್ಯವಾಗಿ ಶಿಲಿಂಧ್ರನಾಶಕ ಹಾಗು ಕೀಟನಾಶಕವನ್ನು ಉಪಯೋಗಿಸಿ ಬೀಜೋಪಚಾರವನ್ನು ಮಾಡಲಾಗುತ್ತದೆ . ತೇವಯಿರುವ ಜಾಗದಲ್ಲಿ ಕಾಡಿಗೆ ರೋಗ, ಕೊಳೆತ  ಮತ್ತು ಅಂಗಮಾರಿಯಂತಹ  ಹಲವಾರು ರೋಗಗಳು ಬೀಜದ ಮೇಲೆ ಪರಿಣಾಮ ಬೀರುತ್ತದೆ 

ಟೆಬುಕೊನಜೋಲ್ 1 ಗ್ರಾಂ/ಕೆಜಿ ಬೀಜಗಳಿಗೆ ಅಥವಾ ಬೇವಿಸ್ಟಿನ್ 2.5 ಗ್ರಾಂ/ಕೆಜಿ ಅನ್ನು ಸಾಮಾನ್ಯ ಕಾಡಿಗೆ ರೋಗ ಮತ್ತು ತೆನೆಯಲ್ಲಿ ಕಾಳುಗಳ ಬದಲಿಗೆ ಕಾಡಿಗೆ ರೋಗಕ್ಕೆ ಬೀಜೋಪಚಾರವಾಗಿ ಉಪಯೋಗಿಸಲಾಗುತ್ತದೆ. ಡ್ರಮ್‌ನ ಬಳಕೆಯಿಂದ ಬೀಜೋಪಚಾರವನ್ನು ಮಾಡಲಾಗುತ್ತದೆ . ಹಾಗೆಯೇ ಗೋದಿಯ ಟ್ರೈಕೋಡರ್ಮಾ ವಿರಿಡೆ 4 ಗ್ರಾಂ / ಕೆಜಿ ಬೀಜಗಳೊಂದಿಗೆ ಬೀಜೋಪಚಾರವನ್ನು ಮಾಡುವುದರಿಂದ ತುಂಬಾ ಉಪಯುಕ್ತ . ಏಕೆಂದರೆ ಇದು ತುಕ್ಕು ರೋಗದ ತೀವ್ರತೆಯನ್ನು ಕಡಿಮೆ ಮಾಡುತ್ತದೆ .

ಗೋಧಿ ಬೆಳೆಗೆ ಸಸಿಮಡಿ ತಯಾರಿಕೆ

ಗೋಧಿ ಬೆಳೆಯ ಕೃಷಿಗೆ  ಭತ್ತದ ಕೃಷಿಗೆ ಬೇಕಾಗಿರುವ ಹಾಗೆ ನರ್ಸರಿಯ ಅಗತ್ಯವಿರುವುದಿಲ್ಲ. ನೇರ ಬಿತ್ತನೆಯನ್ನು ಹೆಚ್ಚಾಗಿ ಮಾಡಲಾಗುತ್ತದೆ.ಗೋಧಿಗಾಗಿ ಹೊಲವನ್ನು ತಯಾರಿಸಲಾಗುತ್ತದೆ ಮತ್ತು ಬೀಜಗಳನ್ನು ಸಾಮಾನ್ಯವಾಗಿ ಪ್ರಸಾರ (ಕೈಯಿಂದ ಎರೆಚುವುದು)ಮಾಡಲಾಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಸಾಲು ಬಿತ್ತನೆಯಲ್ಲಿ  ಅಸಾಂಪ್ರದಾಯಿಕ ಪದ್ಧತಿ ರೂಡಿಯಲ್ಲಿದೆ .

ಗೋಧಿ ಬೆಳೆಗೆ ಭೂಮಿ ಸಿದ್ಧತೆ

ಭೂಮಿಯನ್ನು  ಚೆನ್ನಾಗಿ ಉಳುಮೆ  ಮಾಡಬೇಕು. ಎರಡು ಬಾರಿ ಕಬ್ಬಿಣದ ನೇಗಿಲಿನಿಂದ ಮತ್ತು ಮೂರು ಬಾರಿ ಸಾಗುವಳಿ ಯಂತ್ರದಿಂದ ಉಳುಮೆ ಮಾಡಬೇಕು. .ಕೊನೆಯ ಉಳುಮೆಯಲ್ಲಿ ಪ್ರತಿ  ಹೆಕ್ಟೇರಿಗೆ 12 ಟನ್ ಕೊಟ್ಟಿಗೆ  ಗೊಬ್ಬರ, 5 ಕೆಜಿ ಜೈವಿಕ ಗೊಬ್ಬರ,  5 ಕೆಜಿ ಟ್ರೈಕೋಡರ್ಮಾ ಮತ್ತು 5 ಕೆಜಿ ಸ್ಯೂಡೋಮೊನಾಸ್ ಮಿಶ್ರಣ ಮಾಡಿ ಭೂಮಿಗೆ ಸೇರಿಸಬೇಕು.

ಗೋಧಿ ಬೆಳೆಗೆ ಮಣ್ಣಿನ ಅವಶ್ಯಕತೆಗಳು

ಗೋಧಿ ಬೆಳೆಗೆ ಸೂಕ್ತವಾದ ಮಣ್ಣುಯೆಂದರೆ  ಹಗುರ ಜೇಡಿ/ಭಾರಿ ಕಡುಮಣ್ಣು . ಮಣ್ಣಿನಲ್ಲಿ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯದ ಅಗತ್ಯವಿರುತ್ತದೆ  .ಅತಿಯಾಗಿ ಸವಕಳಿ ಹೊಂದಿದ ಮಣ್ಣು ಗೋಧಿ ಬೆಳೆಗೆ ಸೂಕ್ತವಲ್ಲ 

ಮಣ್ಣಿನ pH

ಗೋಧಿ ಬೆಳೆಗೆ ತಟಸ್ಥ pH 6.0 – 7.0 ಮಣ್ಣಿನ ಅಗತ್ಯವಿರುತ್ತದೆ, ಹೆಚ್ಚಿನ ಮತ್ತು ಕಡಿಮೆ pH ಹೊಂದಿರುವ ಮಣ್ಣು ಗೋದಿ  ಬೆಳೆಯ  ಬೆಳವಣಿಗೆ ಮತ್ತು ಇಳುವರಿ ಮೇಲೆ ಪರಿಣಾಮ ಬೀರುತ್ತದೆ.

ಹಿನ್ನುಡಿ

ಗೋಧಿಯು ದೇಶದಾದ್ಯಂತ ಬೆಳೆಯುವ ಮತ್ತು  ಸ್ಥಿರವಾದ  ಬೆಳೆಯಾಗಿದೆ. ಗೋಧಿ ಬೆಳೆಯು ಒಂದು  ಪ್ರಧಾನ ಬೆಳೆಯಾಗಿದ್ದು, ರೈತರಿಗೆ ಹೆಚ್ಚಿನ ಲಾಭವನ್ನು ನೀಡುತ್ತದೆ.

Recent Posts

ಕಬ್ಬಿನ ಆರಂಭಿಕ ಚಿಗುರು ಕೊರೆಯುವವರ ವಿರುದ್ಧ ಹೋರಾಟ: ಪರಿಣಾಮಕಾರಿ ನಿರ್ವಹಣೆ ತಂತ್ರಗಳು

ಕಬ್ಬಿನ ಆರಂಭಿಕ ಚಿಗುರು ಕೊರೆಯುವ ಕೀಟ, ಚಿಲೋ ಇನ್ಫ್ಯೂಸ್ಕಾಟೆಲಸ್ ಒಂದು ಕೀಟ ಕೀಟವಾಗಿದ್ದು, ಇದು ಸಸ್ಯದ ಎಳೆಯ ಚಿಗುರುಗಳಿಗೆ ಕೊರೆಯುವ ಮೂಲಕ ಕಬ್ಬಿನ ಬೆಳೆಗಳಿಗೆ ಗಮನಾರ್ಹ ಹಾನಿಯನ್ನುಂಟುಮಾಡುತ್ತದೆ.…

April 15, 2024

ಮಣ್ಣಿನ pH – ಬೆಳೆ ಉತ್ಪಾದನೆಯಲ್ಲಿ ಪ್ರಮುಖ ಅಂಶ

ಮಣ್ಣಿನ pH ಎಂಬುದು ಮಣ್ಣಿನ ಆಮ್ಲೀಯತೆ ಅಥವಾ ಕ್ಷಾರೀಯತೆಯ ಅಳತೆಯಾಗಿದೆ, ಇದು ಮಣ್ಣಿನಲ್ಲಿರುವ ಹೈಡ್ರೋಜನ್ ಅಯಾನುಗಳ (H+) ಸಾಂದ್ರತೆಯಿಂದ ನಿರ್ಧರಿಸಲ್ಪಡುತ್ತದೆ. pH ಪ್ರಮಾಣವು 0 ರಿಂದ 14…

April 8, 2024

ಆಹಾರ ಸಂಸ್ಕರಣಾ ವಲಯಕ್ಕೆ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (PLI) ಯೋಜನೆ

ಉತ್ಪಾದನೆ ಆಧಾರಿತ ವಲಯಗಳು ಭಾರತದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆಹಾರ ಸಂಸ್ಕರಣಾ ವಲಯಕ್ಕೆ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್‌ಐ) ಯೋಜನೆಯು ಮಾರ್ಚ್ 2021 ರಲ್ಲಿ ಪ್ರಾರಂಭವಾದ…

April 6, 2024

ಮಾವಿನ ಹಣ್ಣಿನ ನೊಣದ ಪರಿಣಾಮಕಾರಿ ನಿರ್ವಹಣೆ

ಬೇಸಿಗೆ ಕಾಲ ಈಗಾಗಲೇ ಬಂದಿದೆ. ನಿಮ್ಮ ಬಹು ನಿರೀಕ್ಷಿತ ಮಾವಿನ ಕೊಯ್ಲಿಗೆ ನೀವು ಕಾಯುತ್ತಿದ್ದೀರಾ? ರೈತರೇ ಎಚ್ಚರ! ಹಣ್ಣಿನ ನೊಣಗಳು ನಿಮ್ಮ ಮಾವಿನ ಇಳುವರಿಯನ್ನು ತಡೆಯಲು ಮತ್ತು…

March 30, 2024

ಬೇಸಿಗೆ ಅಥವಾ ಝೈದ್ ಬೆಳೆಗಳನ್ನು ಮಾರ್ಚ್ ನಿಂದ ಜೂನ್ ನಡುವೆ ಬೆಳೆಯಲಾಗುತ್ತದೆ

ಭಾರತವು ವೈವಿಧ್ಯಮಯ ಹವಾಮಾನ ಪರಿಸ್ಥಿತಿಗಳನ್ನು ಹೊಂದಿರುವ ದೇಶವಾಗಿದ್ದು, ಕೃಷಿಯ ಹಲವಾರು ಋತುಗಳನ್ನು ಹೊಂದಿದೆ. ಬೆಳೆಗಳ ನಾಟಿ ಸಮಯವು ಬೆಳೆ ಪ್ರಕಾರ, ಋತುಗಳು, ಪ್ರದೇಶ ಮತ್ತು ಹವಾಮಾನವನ್ನು ಅವಲಂಬಿಸಿ…

March 26, 2024

ನರ್ಸರಿ ಬೆಳೆಸುವುದು: ಬಲವಾದ ಮತ್ತು ಆರೋಗ್ಯಕರ ಸಸಿಗಳಿಗಾಗಿ ಈ ಲೇಖನವನ್ನು ಓದಿರಿ

ಆರೋಗ್ಯಕರ ಬೀಜಗಳನ್ನು ಬಿತ್ತುವುದು ಅಥವಾ ಆರೋಗ್ಯಕರ ಸಸಿಗಳನ್ನು ನೆಡುವುದು ಆರೋಗ್ಯಕರ ಮತ್ತು ಉತ್ಪಾದಕ ಬೆಳೆಯನ್ನು ಸಾಧಿಸುವಲ್ಲಿ ಪ್ರಮುಖ ಅಂಶವಾಗಿದೆ. ತರಕಾರಿಗಳು, ಹಣ್ಣುಗಳು ಮತ್ತು ಅಲಂಕಾರಿಕ ಸಸ್ಯಗಳು ಸೇರಿದಂತೆ…

March 23, 2024