Crop

ದ್ರಾಕ್ಷಿ ಬೆಳೆಗೆ ಭೂಮಿ ಸಿದ್ಧತೆ

ಭಾರತ ದೇಶವು 2021 ವರ್ಷ ಒಂದರಲ್ಲೇ   2,302.16 ಕೋಟಿ ಮೌಲ್ಯದ 263,075.67 ಮೆಟ್ರಿಕ್ ಟನ್ ದ್ರಾಕ್ಷಿಯನ್ನು ಜಗತ್ತಿನ ವಿವಿಧ ದೇಶಗಳಿಗೆ  ರಫ್ತು ಮಾಡಿದೆ.ಭಾರತವು  ಪ್ರಮುಖವಾಗಿ ನೆದರ್ಲ್ಯಾಂಡ್ಸ್, ಬಾಂಗ್ಲಾದೇಶ, ರಷ್ಯಾ, ಯುಕೆ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಜರ್ಮನಿ ರಾಷ್ಟ್ರಗಳಿಗೆ ದ್ರಾಕ್ಷಿಯನ್ನು ರಫ್ತುಮಾಡುತ್ತಿದೆ. ಭಾರತವು ವಿಶ್ವದಲ್ಲಿ ಏಳನೇ ಅತಿ ದೊಡ್ಡ ದ್ರಾಕ್ಷಿ ಬೆಳೆಯುವ ರಾಷ್ಟ್ರವಾಗಿದೆ. ಭಾರತವು  ದ್ರಾಕ್ಷಿಯನ್ನು ಮುಖ್ಯವಾಗಿ ನಿತ್ಯದ  ಬಳಕೆಗಾಗಿ ಬೆಳೆಯಲಾಗುತ್ತದೆ ಹಾಗು ಈ  ದ್ರಾಕ್ಷಿಗಳನ್ನು ವೈನ್ ಉತ್ಪಾದನೆಗೆ ಬಳಸಲಾಗುವುದಿಲ್ಲ. ಭಾರತದಲ್ಲಿ ದ್ರಾಕ್ಷಿಯನ್ನು ಬೆಳೆಯುವ ಪ್ರಮುಖ ರಾಜ್ಯಗಳು ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು ಮತ್ತು ಮಿಜೋರಾಂ. ದ್ರಾಕ್ಷಿಯನ್ನು  ಸಾಮಾನ್ಯವಾಗಿ ಉಷ್ಣಾಂಶ  ಮತ್ತು ಶುಷ್ಕ ವಾತಾವರಣದಲ್ಲಿ  ಬೆಳೆಯಲಾಗುತ್ತದೆ. 

ಕಷ್ಟದ  ಮಟ್ಟ: ಕಠಿಣ

ಬೀಜಗಳ ಆಯ್ಕೆ:

ದ್ರಾಕ್ಷಿಯಲ್ಲಿ ನಾಲ್ಕು ವಿಧಗಳಿವೆ. ಬಿಳಿದ್ರಾಕ್ಷಿ, ಕೆಂಪುದ್ರಾಕ್ಷಿ, ಬೀಜಸಹಿತ ಮತ್ತು ಬೀಜರಹಿತ ವಿಧಗಳು . ಕೆಲವು ಜನಪ್ರಿಯ ತಳಿಗಳು ಯಾವುವೆಂದರೆ ಬೆಂಗಳೂರು ಬ್ಲೂ , ಗುಲಾಬಿ, ಬ್ಯೂಟಿ ಸೀಡ್‌ಲೆಸ್ ಮತ್ತು ಶರದ್ ಸೀಡ್‌ಲೆಸ್, ಅನಾಬ್-ಎ-ಶಾಹಿ, ದಿಲ್ಖುಷ್, ಪರ್ಲೆಟ್, ಪುಸಾ ಸೀಡ್‌ಲೆಸ್, ಥಾಂಪ್ಸನ್ ಸೀಡ್‌ಲೆಸ್, ಟಾಸ್-ಎ-ಗಣೇಶ್, ಸೋನಕಾ, ಮಸ್ಕತ್, ಪಚ್ಚದ್ರಕ್ಷ, ಅರ್ಕಾ ಶ್ಯಾಮ್, ಅರ್ಕಾ ಕಾಂಚನ್. , ಅರ್ಕಾ ಹನ್ಸ್, ಮಾಣಿಕ್ ಚಮನ್, ಸೋನಕಾ, ಫ್ಲೇಮ್ ಸೀಡ್‌ಲೆಸ್ ಮತ್ತು ಮಾಣಿಕ್ ಚಮನ್.

ದ್ರಾಕ್ಷಿ ಗಿಡಗಳ ಸಸ್ಯಾಭಿವೃದ್ಧಿ :

ದ್ರಾಕ್ಷಿಯನ್ನು ಸಾಮಾನ್ಯವಾಗಿ ಕ್ಲಿಪಿಂಗ್/ಕಡ್ಡಿಗಳಿಂದ  (ಇದು  ಕಾಂಡಗಳು, ರೆಂಬೆಗಳು  ಅಥವಾ ತಾಯಿ ಗಿಡದ  ಒಂದು ಕಾಂಡದ ತುಂಡು) ಮತ್ತು ಬೇರು ಬಿಟ್ಟ ಕಾಂಡದ ತುಂಡುಗಳ  ಮೂಲಕ ಬೆಳೆಸಲಾಗುತ್ತದೆ. ಬಲಿತ ಕಾಂಡದ ತುಂಡುಗಳನ್ನು ಥೈರಾಮ್ @3 ಗ್ರಾಂ/ಲೀಟರ್ ನೀರಿನಿಂದ ಸಂಸ್ಕರಿಸಿ  ನಂತರ ಅದನ್ನು ಪಾಲಿಥಿನ್ ಚೀಲದಲ್ಲಿ ಹಾಕಬೇಕು .   ನಂತರ ಸಂಸ್ಕರಿಸಿದ ಕಾಂಡದ  ತುಂಡುಗಳನ್ನು  ನೆರಳು ಇರುವ  ನರ್ಸರಿಯಲ್ಲಿ ಸಂಗ್ರಹಿಸಿಡಬೇಕು .

ದ್ರಾಕ್ಷಿ ಬೆಳೆಗೆ  ಭೂಮಿ ಸಿದ್ಧತೆ

ದ್ರಾಕ್ಷಿ ಬೆಳೆಯನ್ನು ಬೆಳೆಯುವಾಗ, ಸಾಮಾನ್ಯವಾಗಿ  ಉತ್ತಮವಾಗಿ ಬೇರು ಬಿಟ್ಟ ಕಡ್ಡಿಗಳನ್ನು ಉಪಯೋಗಿಸಿ  ನಾಟಿಮಾಡಬೇಕು. ನಾಟಿ ಮಾಡುವ ಮೊದಲು ಭೂಮಿಯನ್ನು ಮೂರರಿಂದ ನಾಲ್ಕು ಬಾರಿ ಉಳುಮೆ ಮಾಡಬೇಕು .  ನಂತರ  ಟ್ರ್ಯಾಕ್ಟರ್ ಮೂಲಕ, ನಾಟಿ ಮಾಡುವ  ಭೂಮಿಯನ್ನು ಸಮತಟ್ಟು ಮಾಡಬೇಕು. ಅದರ ನಂತರ ವ್ಯಾಪಕ ತಳಿಗಳಾದ  ಅನಾಬ್-ಎ-ಶಾಹಿ ಮತ್ತು ಬೆಂಗಳೂರು ಬ್ಲೂ ನಂತಹ ತಳಿಗಳಿಗೆ 1.2 ಮೀ . X 1.2ಮೀ  ಅಂತರದಲ್ಲಿ ದೊಡ್ಡ ಗುಣಿಗಳನ್ನು ಮಾಡಬೇಕು. ಹಾಗೆಯೇ ಸ್ವಲ್ಪ ಜಾಗ ಬೇಕಿರುವ ಸಣ್ಣ ತಳಿಗಳಿಗಳಾದ ಥಾಂಪ್ಸನ್ ಸೀಡ್‌ಲೆಸ್, ಪರ್ಲೆಟ್ ಮತ್ತು ಬ್ಯೂಟಿ ಸೀಡ್‌ಲೆಸ್‌ ತಳಿಗಳಿಗೆ   90 X 90 ಸೆಂ.ಮೀ.ಅಳತೆಯ ಗುಣಿಗಳನ್ನು ತಯಾರಿಸಬೇಕು. ಗುಣಿಗಳ ತಳದಲಿ 5 ರಿಂದ 10 ಟನ್‌ಗಳಷ್ಟು ಕೊಟ್ಟಿಗೆ ಗೊಬ್ಬರವನ್ನು ಅಥವಾ ಪ್ರತಿ ಬಳ್ಳಿ/ಗಿಡಕ್ಕೆ  5 ರಿಂದ 10 ಕೆಜಿಯಷ್ಟು  ಕೊಟ್ಟಿಗೆ ಗೊಬ್ಬರ, 100 ಗ್ರಾಂ ಯೂರಿಯಾ, 80 ಗ್ರಾಂ ರಂಜಕ ಮತ್ತು 300 ಗ್ರಾಂ ಪೊಟ್ಯಾಸಿಯಮ್ ಯನ್ನು ಬಳಸಬೇಕು.

ದ್ರಾಕ್ಷಿ ಬೆಳೆಗೆ  ಮಣ್ಣಿನ ಅವಶ್ಯಕತೆ:

ದ್ರಾಕ್ಷಿ ಉಷ್ಣವಲಯದ ಬೆಳೆ, ಸಮಶೀತೋಷ್ಣ ವಲಯದ ಪ್ರದೇಶಗಳಲ್ಲಿ ದ್ರಾಕ್ಷಿ ಬೆಳೆಯನ್ನು ಚೆನ್ನಾಗಿ ಬೆಳೆಯಬಹುದು. ಚೆನ್ನಾಗಿ ನೀರು ಬಸಿದು ಹೋಗುವಂತಹ  ಗೋಡು ಮಣ್ಣು , ಆಳವಾದ ಮರಳು ಮಿಶ್ರಿತ ಗೋಡು ಮಣ್ಣು ಹಾಗು  pH  6.5  ರಿಂದ 7.0 ಮೌಲ್ಯ  ಹೊಂದಿರುವ ಮಣ್ಣು ದ್ರಾಕ್ಷಿ ಬೆಳೆಗೆ ಸೂಕ್ತ. 

ಹಿನ್ನುಡಿ

ಪ್ರಸರಣದ ನಂತರ ದ್ರಾಕ್ಷಿ ಬೆಳೆಯನ್ನು ಸರಿಯಾಗಿ ಚಾಟನಿ(ಬಳ್ಳಿ ಕತ್ತರಿಸುವುದು)  ಮಾಡಬೇಕು. ದ್ರಾಕ್ಷಿ ಬೆಳೆಯು, ನಿರ್ವಹಣಾ ದೃಷ್ಟಿಯಿಂದ ಒಂದು ಕಠಿಣ ಬೆಳೆಯಾಗಿದೆ.ಆದ್ಯಾಗೂ  ವಿವಿಧ ದೇಶಗಳಲ್ಲಿ,ನಮ್ಮ ದೇಶದ ದ್ರಾಕ್ಷಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಭಾರತವು ದ್ರಾಕ್ಷಿಉತ್ಪಾದನೆಯನ್ನು ಹೆಚ್ಚಿಸುತ್ತಲಿದೆ . ಆದ್ದರಿಂದ ದ್ರಾಕ್ಷಿ ಬೆಳೆಯು/ಕೃಷಿಯು ಭವಿಷ್ಯದ ಹೆಚ್ಚಿನ ಆದಾಯದ ಭರವಸೆಯಾಗಿದೆ.

Recent Posts

ಸೆಲ್ ಜೆಲ್: ಆಧುನಿಕ ಕೃಷಿಗಾಗಿ ನೀರಿನ ಉತ್ತಮ ಸ್ಥಿತಿಯನ್ನು ರೂಪಿಸುವ ಕ್ರಾಂತಿಕಾರಿ ಉತ್ಪನ್ನ

ಕೃಷಿಯಲ್ಲಿ, ದಕ್ಷತೆ ಮತ್ತು ಉತ್ಪಾದಕತೆ ಯಾವಾಗಲೂ ಮುಖ್ಯವಾಗಿರುತ್ತದೆ. ಈಗ ನಾವು ನಿಮಗೆ ನಿಮ್ಮ ನೀರಿನ ಸ್ಥಿತಿ, ನಿಮ್ಮ ಸಸ್ಯ ಸಂರಕ್ಷಣಾ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸುವ…

January 28, 2025

ಎಕ್ಸ್‌ಸ್ಕೇಲೆಂಟ್ : ಡ್ರಿಪ್ ಕ್ಲೀನಿಂಗ್ ಕಾರ್ಯವಿಧಾನದ ಮೂಲಕ ಬೆಳೆಗಳಿಗೆ ಸುರಕ್ಷಿತ ಪರಿಹಾರಗಳು

ಇತ್ತೀಚಿನ ಆಧುನಿಕ ಕೃಷಿಯಲ್ಲಿ ಸಮರ್ಥ ನೀರಿನ ನಿರ್ವಹಣೆ ಮಾಡುವುದು ನಿರ್ಣಾಯಕವಾಗಿದೆ ಮತ್ತು ಹನಿ ನೀರಾವರಿ ಪದ್ದತಿಯು  ನೇರವಾಗಿ ಬೇರುಗಳ ವಲಯವನ್ನು ಗುರಿಯಾಗಿಸಿಕೊಂಡು ಸಸ್ಯಗಳಿಗೆ ನೀರನ್ನು ತಲುಪಿಸುವ ವಿಧಾನವನ್ನು…

January 28, 2025

ಬಯೋಕ್ಯುಲಮ್ AW: ಬೆಳೆ ಸುಸ್ಥಿರತೆಗಾಗಿ ಬಳಸಲು ಸಿದ್ಧವಾಗಿರುವ ಡಿಕಂಪೋಸರ್

ಸುಸ್ಥಿರ ಕೃಷಿ ಪದ್ದತಿಯಲ್ಲಿ ಸರಳವಾದ ಆದರೆ ಆಳವಾದ ವಿಷಯವೇನೆಂದರೆ ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವುದು. ಸಾವಯವ ಕೃಷಿ ತ್ಯಾಜ್ಯವು ನಮಗೆ ಹೊರೆಯಾಗಿರದೆ ಮಣ್ಣನ್ನು ಸಮೃದ್ಧಗೊಳಿಸುವ, ಸಸ್ಯಗಳನ್ನು ಪೋಷಿಸುವ ಮತ್ತು…

January 28, 2025

ಎಪಿಸೆಲ್: ಸುಸ್ಥಿರ ಕೃಷಿಗಾಗಿ ನಿಮ್ಮ ಬೆಳೆಗಳ ಸಂಪೂರ್ಣ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ

ಇತ್ತೀಚೆಗೆ ಬದಲಾಗುತ್ತಿರುವ ಕೃಷಿ ಭೂದೃಶ್ಯದ ಕಾರಣವಾಗಿ, ಸಮರ್ಥನೀಯ ಮತ್ತು ಸಮರ್ಥ ಕೃಷಿ ವಿಧಾನಗಳನ್ನು ಕಂಡುಹಿಡಿಯುವುದು ನಿರ್ಣಾಯಕವಾಗಿದೆ. ಅದಕ್ಕಾಗಿಯೇ ಪರಿಚಯಿಸುತ್ತಿದ್ದೇವೆ, ಎಪಿಸೆಲ್! ಎಕ್ಸೆಲ್ ಇಂಡಸ್ಟ್ರೀಸ್‌ ರವರ ಈ ನವೀನ…

January 28, 2025

ಸೆಲ್ ಜೆಲ್‌ನೊಂದಿಗೆ ಕೃಷಿ ದಕ್ಷತೆಯನ್ನು ಹೆಚ್ಚಿಸುವುದು: ನೀರಿನ ಕಂಡೀಷನಿಂಗ್ ಮತ್ತು pH ಸಮತೋಲನ ಮಾಡಲು ಸಲಹೆಗಳು

ನೀರು ಕೃಷಿಯಲ್ಲಿ ಮೂಲಭೂತ ಸಂಪನ್ಮೂಲವಾಗಿದ್ದು, ಬೆಳೆಗಳ ವೃದ್ಧಿಗಾಗಿ ಅಗತ್ಯ ಪೋಷಕಾಂಶಗಳ ಮತ್ತು ಬೆಳೆ ರಕ್ಷಣೆಗೆ ಅಗತ್ಯವಾದ ರಾಸಾಯನಿಕಗಳನ್ನು ಸಾಗಿಸುವಲ್ಲಿ ವಾಹಕವಾಗಿ ಕಾರ್ಯನಿರ್ವಹಿಸುತ್ತದೆ . ಆದಾಗ್ಯೂ, ಕಳೆನಾಶಕಗಳು, ಕೀಟನಾಶಕಗಳು,…

January 28, 2025

ಎಕ್ಸ್‌ಸ್ಕೇಲೆಂಟ್: ಹನಿ ನೀರಾವರಿ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಸುರಕ್ಷಿತ ಮತ್ತು ಪರಿಣಾಮಕಾರಿ ಪರಿಹಾರ

ಹನಿ ನೀರಾವರಿ ವ್ಯವಸ್ಥೆ ಆಧುನಿಕ ಕೃಷಿಯ ಅತ್ಯಗತ್ಯ ಅಂಶವಾಗಿದೆ. ಇದು ಸಸ್ಯಗಳ ಬೇರುಗಳಿಗೆ ನೇರವಾಗಿ ನೀರನ್ನು ತಲುಪಿಸುವ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಈ ವಿಧಾನವು ನೀರನ್ನು ಸಂರಕ್ಷಿಸುವುದು…

January 28, 2025