Crop

ಪೇರಲೆ ಹಣ್ಣನ್ನು ಬೆಳೆಯುವ ಬೇಸಾಯ ಕ್ರಮಗಳು

ಪೇರಲೆ – ಭಾರತದ ಪ್ರಮುಖ ವಾಣಿಜ್ಯ ಹಣ್ಣುಗಳಲ್ಲಿ ಒಂದಾಗಿದೆ. ಮಾವು, ಬಾಳೆಹಣ್ಣು ಮತ್ತು ಸಿಟ್ರಸ್ ಹಣ್ಣುಗಳ ನಂತರ,  ಇದು ನಾಲ್ಕನೇ ಪ್ರಮುಖ ಹಣ್ಣು. ಇದು ಉಷ್ಣವಲಯದ ಮತ್ತು ಉಪೋಷ್ಣ  ಪ್ರದೇಶಗಳಲ್ಲಿ ಬೆಳೆಯಬಹುದು. ಈ ಹಣ್ಣು  ವಿಟಮಿನ್ ಸಿ,  ಪೆಕ್ಟಿನ್, ಕ್ಯಾಲ್ಸಿಯಂ ಮತ್ತು ರಂಜಕದ ಸಮೃದ್ಧ ಮೂಲವಾಗಿದೆ. ಮಾವು, ಬಾಳೆ ಮತ್ತು ಸಿಟ್ರಸ್ ನಂತರ ಇದು ನಾಲ್ಕನೇ ಪ್ರಮುಖ ಬೆಳೆಯಾಗಿದೆ. ಇದನ್ನು ಭಾರತದಾದ್ಯಂತ ಬೆಳೆಯಬಹುದು. ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ಒರಿಸ್ಸಾ, ಪಶ್ಚಿಮ ಬಂಗಾಳ, ಮತ್ತು ತಮಿಳುನಾಡು ಪೇರಲೆ ಬೆಳೆಯುವ ಪ್ರಮುಖ ರಾಜ್ಯಗಳಾಗಿವೆ. 

ಪೇರಲೆ ಹಣ್ಣಿಗಾಗಿ ಅನುಸರಿಸಬೇಕಾದ ಕಾರ್ಯಗಳು :

ಸೂಕ್ತವಾದ ಮಣ್ಣು:

ಇದು ಕ್ಷಾರೀಯ ಮಣ್ಣು ಹಾಗೂ ಎಲ್ಲಾ ರೀತಿಯ ಮಣ್ಣಿನಲ್ಲಿ ಬೆಳೆಯುತ್ತದೆ. ಇದು 6.5 ರಿಂದ 7.5 ರವರೆಗಿನ pH ಹೊಂದಿರುವ ಮಣ್ಣಿನಲ್ಲಿ ಬೆಳೆಯಬಹುದು. 

ಆಳವಾದ,  ಮರಳು ಮಿಶ್ರಿತ ಗೋಡು ಮಣ್ಣು ಮತ್ತು  ಜೇಡಿಮಣ್ಣಿನಲ್ಲಿ ಬೆಳೆದಾಗ ಇದು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.

ಅಧಿಕ ಇಳುವರಿಯ ಜನಪ್ರಿಯ ತಳಿಗಳು :

ಪಂಜಾಬ್ ಪಿಂಕ್: ಹಣ್ಣುಗಳು ಮಧ್ಯಮ ಗಾತ್ರದಿಂದ ದೊಡ್ಡ ಗಾತ್ರವನ್ನು ಹೊಂದಿರುತ್ತದೆ  ಹಾಗೂ  ಆಕರ್ಷಕ ಬಣ್ಣದಿಂದ ಕೂಡಿದ್ದು, ಬೇಸಿಗೆ ಕಾಲದಲ್ಲಿ ಹಳದಿ ಬಣ್ಣದಲ್ಲಿರುತ್ತವೆ . ಪ್ರತಿ ಮರಕ್ಕೆ ಸರಾಸರಿ 155 ಕೆಜಿ ಇಳುವರಿ ನೀಡುತ್ತದೆ.

ಅಲಹಾಬಾದ್ ಸಫೇದಾ: ಪ್ರತಿ ಮರಕ್ಕೆ ಸರಾಸರಿ 145 ಕೆಜಿ ಇಳುವರಿ ಪಡೆಯಬಹುದು. .

ಅರ್ಕಾ ಅಮೂಲ್ಯ: ಪ್ರತಿ ಮರಕ್ಕೆ ಸರಾಸರಿ 144 ಕೆಜಿ ಇಳುವರಿ ಪಡೆಯಬಹುದು. .

ಭೂಮಿ ತಯಾರಿ

ಉಳುಮೆ ಮಾಡಿ, ಅಡ್ಡ ಉಳುಮೆ ಮಾಡಿ ನಂತರ ಭೂಮಿಯನ್ನು ಹದಗೊಳಿಸಬೇಕು. ಹೊಲದಲ್ಲಿ ನೀರು ನಿಲ್ಲದಂತೆ ಭೂಮಿಯನ್ನು ಸಿದ್ಧಪಡಿಸಿ.

ಬಿತ್ತನೆಯ ವಿಧಾನ :

ಬಿತ್ತನೆ ಸಮಯ

ಫೆಬ್ರವರಿ -ಮಾರ್ಚ್ ಅಥವಾ ಆಗಸ್ಟ್-ಸೆಪ್ಟೆಂಬರ್ ತಿಂಗಳುಗಳು ಪೇರಲವನ್ನು ನೆಡಲು ಸೂಕ್ತ ಸಮಯ.

ಅಂತರ

ನಾಟಿ ಮಾಡಲು 6 –  5 ಮೀ ಅಂತರವನ್ನು ಸಾಲಿಂದ ಸಾಲಿಗೆ,  7ಮೀ ಗಿಡದಿಂದ ಗಿಡಕ್ಕೆ ಅಂತರವನ್ನು ಬಳಸಿ, ಹೀಗೆ ನಾಟಿ ಮಾಡುವುದರಿಂದ ಒಂದು ಎಕರೆಯಲ್ಲಿ 132 ಗಿಡಗಳನ್ನು ಅಳವಡಿಸಬಹುದು.

ಬಿತ್ತನೆ ಆಳ

ಬೇರುಗಳನ್ನು 25 ಸೆಂ.ಮೀ ಆಳದಲ್ಲಿ ಬಿತ್ತಬೇಕು.

ಅಂತರ ಬೆಳೆಗಳು

ಆರಂಭಿಕ 3-4 ವರ್ಷಗಳಲ್ಲಿ, ಕ್ಯಾರೆಟ್, ಬೆಂಡೆಕಾಯಿ, ಬದನೆ ಮತ್ತು ಮೂಲಂಗಿಯಂತಹ ತರಕಾರಿಗಳನ್ನು ಅಂತರ ಬೆಳೆಯಾಗಿ ತೆಗೆದುಕೊಳ್ಳಬಹುದು. ಅಲ್ಲದೆ ದ್ವಿದಳ ಧಾನ್ಯಗಳಾದ ಅವರೆ, ಬೀನ್ಸ್ ಅನ್ನು ಅಂತರ ಬೆಳೆಯಾಗಿ ಬಿತ್ತಬಹುದು.

ಗೊಬ್ಬರದ ಅವಶ್ಯಕತೆ (ಕೆಜಿ/ಎಕರೆ)

ಗೊಬ್ಬರ:

ಬೆಳೆಯ ಹಂತ

(ವರ್ಷ)      

ಚೆನ್ನಾಗಿ ಕೊಳೆತ

                                       ಹಸುವಿನಸಗಣಿ(ಕೆಜಿ) 

ಯೂರಿಯಾ     ಎಸ್ಎಸ್ಪಿ         MOP
ಒಂದರಿಂದ ಮೂರು 10-20 150-200 500-1500   100-400
ನಾಲ್ಕರಿಂದ ಆರು ವರ್ಷ 25-40 300-600 600-1000 1500-2000
    ಏಳರಿಂದ ಹತ್ತು ವರ್ಷ 40-50 750-1000     2000-2500 1100-1500
ಹತ್ತು ವರ್ಷದ ಮೇಲೆ         50 1000 2500 1500

                                                                                                                                                                        ಬೆಳೆಯ ಹಂತ  10 ವರ್ಷಕ್ಕಿಂತ ಹೆಚ್ಚಿರುವಾಗ ಪ್ರತಿ ಮರಕ್ಕೆ 50 ಕೆ.ಜಿ., ಯೂರಿಯಾ @ 1000 ಗ್ರಾಂ, ಎಸ್‌ಎಸ್‌ಪಿ @ 2500 ಗ್ರಾಂ ಮತ್ತು ಎಂಒಪಿ @ 1500 ಗ್ರಾಂ.ಯೂರಿಯಾ, ಎಸ್‌ಎಸ್‌ಪಿ ಮತ್ತು ಎಂಒಪಿಯ ಅರ್ಧ ಡೋಸ್ ಮತ್ತು ಪೂರ್ಣ ಪ್ರಮಾಣದ ಗೋಮಯವನ್ನು ಮೇ-ಜೂನ್ ತಿಂಗಳಲ್ಲಿ ಮತ್ತು ಉಳಿದ ಅರ್ಧ ಡೋಸ್ ಅನ್ನು ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಹಾಕಬಹುದು. 

ಕಳೆ ನಿಯಂತ್ರಣ

ಉತ್ತಮ ಬೆಳೆ ಬೆಳವಣಿಗೆ ಮತ್ತು ಇಳುವರಿಗಾಗಿ ಕಳೆ ನಿಯಂತ್ರಣ ಅಗತ್ಯ. ಕಳೆ ಬೆಳವಣಿಗೆಯನ್ನು ತಡೆಗಟ್ಟಲು,   ಮಾರ್ಚ್, ಜುಲೈ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಗ್ರಾಮೋಕ್ಸೋನ್ 6 ಮಿಲಿ/ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.   

ಕಳೆಗಳ ಬೆಳವಣಿಗೆಯು ಸಕ್ರಿಯವಾಗಿದ್ದಾಗ (ಕಳೆಗಳು, ಹೂವುಬಿಡುವ ಹಂತ  ಮತ್ತು 15-20 ಸೆಂ.ಮೀ ಎತ್ತರವನ್ನು ತಲುಪುವ ಮೊದಲು) ಕಳೆಗಳು ಕಂಡ ನಂತರ ಗ್ಲೈಫೋಸೇಟ್ @1.6ಲೀಟರ್/ಎಕರೆಗೆ ಸಿಂಪಡಿಸಬೇಕು. 200 ಲೀಟರ್ ನೀರಿನಲ್ಲಿ ಬೆರೆಸಿ ಪ್ರತಿ ಎಕರೆಗೆ ಸಿಂಪಡಿಸಬೇಕು.

ನೀರಾವರಿ

ನೆಟ್ಟ ನಂತರ, ಬೆಳೆಗೆ ತಕ್ಷಣವೇ ನೀರುಹಾಕಬೇಕು, ನಂತರ ಮಣ್ಣಿನ ಪ್ರಕಾರ ಮತ್ತು ಹವಾಮಾನವನ್ನು ಅವಲಂಬಿಸಿ ನೀರುಹಾಕಬೇಕಾಗುತ್ತದೆ.  ಎಳೆಯ ನೆಡುತೋಪುಗಳಿಗೆ ಬೇಸಿಗೆಯ  ವಾರದ ಮಧ್ಯಂತರದಲ್ಲಿ ಮತ್ತು ಚಳಿಗಾಲದಲ್ಲಿ 2-3 ಬಾರಿ ನೀರಾವರಿ ಅಗತ್ಯವಿದೆ. ಹೂಬಿಡುವ ಹಂತದಲ್ಲಿ ನೀರು ಹಾಯಿಸುವುದನ್ನು ತಪ್ಪಿಸಿ ಏಕೆಂದರೆ ಇದು ಅತಿಯಾದ ಹೂವಿನ ಹಾನಿಗೆ  ಕಾರಣವಾಗುತ್ತದೆ.

ಕೀಟಗಳ  ಮತ್ತು ಅವುಗಳ ನಿಯಂತ್ರಣ:

ಹಣ್ಣಿನ ನೊಣ: ಇದು ಪೇರಲ ಬೆಳೆಯನ್ನು ದಾಳಿ ಮಾಡುವ ಗಂಭೀರ ಕೀಟವಾಗಿದ್ದು, ಹೆಣ್ಣು ಹುಳುಗಳು ಎಳೆಯ ಹಣ್ಣುಗಳ ತೊಟ್ಟಿನ ಕೆಳಗೆ ಮೊಟ್ಟೆಗಳನ್ನು ಇಡುತ್ತವೆ. ನಂತರ ಹುಳುಗಳು ತಿರುಳನ್ನು ತಿನ್ನುತ್ತವೆ ಹಾಗೂ  ಹಣ್ಣುಗಳು ಕೊಳೆಯಲು ಪ್ರಾರಂಭಿಸುತ್ತವೆ ಮತ್ತುಉದುರುತ್ತವೆ.

ತೋಟದಲ್ಲಿ ಹಣ್ಣಿನ ನೊಣ ದಾಳಿಯ  ಇತಿಹಾಸವನ್ನು ಹೊಂದಿದ್ದರೆ, ಮಳೆಗಾಲದಲ್ಲಿ ಬೆಳೆಯುವುದನ್ನು ತಪ್ಪಿಸಿ. ಸರಿಯಾದ ಸಮಯಕ್ಕೆ ಕಟಾವು ಮಾಡಿ. ಕೊಯ್ಲು ವಿಳಂಬವನ್ನು ತಪ್ಪಿಸಿ. ಸೋಂಕಿತ ಗಿಡಗಳನ್ನು  ತೆಗೆದುಹಾಕಿ ಮತ್ತು ನಾಶಪಡಿಸಿ. 

ಹಣ್ಣಾದ ಮೇಲೆ ವಾರದ ಅಂತರದಲ್ಲಿ 150 ಲೀಟರ್ ನೀರಿನಲ್ಲಿ ಫೆನ್ವಾಲರೇಟ್ @ 80 ಮಿಲಿ ಸಿಂಪಡಿಸಿ. ಸಿಂಪರಣೆ ಮಾಡಿದ ಮೂರನೇ ದಿನದ ನಂತರ ಕೊಯ್ಲು ಮಾಡಬೇಕು.

ಬಿಳಿ ಹಿಟ್ಟು ತಿಗಣೆ : ಅವು ಸಸ್ಯದ ವಿವಿಧ ಭಾಗಗಳಿಂದ ರಸವನ್ನು ಹೀರುತ್ತವೆ ಮತ್ತು ಸಸ್ಯವನ್ನು ದುರ್ಬಲಗೊಳಿಸುತ್ತವೆ. ರಸ  ಹೀರುವ ಕೀಟಗಳ ಬಾಧೆ ಕಂಡುಬಂದಲ್ಲಿ ಕ್ಲೋರ್‌ಪೈರಿಫಾಸ್ 50ಇಸಿ @300ಮಿಲಿ/100ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. 

ರೋಗಗಳು   ಮತ್ತು ಅವುಗಳ ನಿಯಂತ್ರಣ:

ಎಲೆ ಮಚ್ಚೆ ರೋಗ : ಚಿಗುರುಗಳ ಮೇಲೆ ಗಾಢವಾದ  ಕಂದು ಅಥವಾ ಕಪ್ಪು ಕಲೆಗಳು ಕಂಡುಬರುತ್ತವೆ. ಹಣ್ಣುಗಳ ಮೇಲೆ ಚಿಕ್ಕದಾದ, ಕಪ್ಪು ಕಲೆಗಳು ಕಂಡುಬರುತ್ತವೆ. ಸೋಂಕು ಉಂಟಾದ  2 ರಿಂದ 3 ದಿನಗಳಲ್ಲಿ ಹಣ್ಣುಗಳು ಸಂಪೂರ್ಣವಾಗಿ ಕೊಳೆಯುತ್ತವೆ.

ತೋಟವನ್ನು ಸ್ವಚ್ಛಗೊಳಿಸಿ, ನಂತರ ಕ್ಯಾಪ್ಟನ್ @ 300 ಗ್ರಾಂ  ಅನ್ನು 100 ಲೀಟರ್ ನೀರಿನಲ್ಲಿ ಸಿಂಪಡಿಸಿ. 

ಹಣ್ಣು ಕಚ್ಚುವ ಸಮಯದಲ್ಲಿ ಕ್ಯಾಪ್ಟನ್ ಸಿಂಪಡಣೆಯನ್ನು ಪುನರಾವರ್ತಿಸಿ ಮತ್ತು 10-15 ದಿನಗಳ ಮಧ್ಯಂತರದೊಂದಿಗೆ ಹಣ್ಣುಗಳು ಪ್ರಬುದ್ಧವಾಗುವವರೆಗೆ ಮುಂದುವರಿಸಿ. 

ಹೊಲದಲ್ಲಿ ಕೀಟಬಾಧೆ ಕಂಡುಬಂದಲ್ಲಿ ಸೋಂಕಿತ ಮರಗಳ ಮೇಲೆ ಕಾಪರ್ ಆಕ್ಸಿಕ್ಲೋರೈಡ್ @ 30 ಗ್ರಾಂ/10 ಲೀ ನೀರಿನಲ್ಲಿ ಬೆರೆಸಿ  ಸಿಂಪಡಣೆ ಮಾಡಿ.

ಕೊಯ್ಲು:

ನೆಟ್ಟ ನಂತರ 2-3 ವರ್ಷಗಳಲ್ಲಿ ಹಣ್ಣುಗಳು  ಬರುತ್ತವೆ. ಹಣ್ಣುಗಳು ಮಾಗಿದಾಗ  ಕೊಯ್ಲು ಮಾಡಬೇಕು. ಪಕ್ವವಾದಾಗ, ಹಣ್ಣುಗಳು ಕಡು ಹಸಿರು ಬಣ್ಣದಿಂದ ಹಸಿರು ಹಳದಿ ಬಣ್ಣಕ್ಕೆ ಬದಲಾಗುತ್ತವೆ. ಸರಿಯಾದ ಸಮಯದಲ್ಲಿ ಕೊಯ್ಲು ಮಾಡಿ.  

ಹಣ್ಣುಗಳ ಗುಣಮಟ್ಟ ಹದಗೆಡುವುದರಿಂದ ಹೆಚ್ಚು-ಹಣ್ಣಾಗುವುದನ್ನು ತಪ್ಪಿಸಿ.

ಕೊಯ್ಲು ನಂತರ:

ಕೊಯ್ಲು ಮಾಡಿದ ನಂತರ, ಶುಚಿಗೊಳಿಸುವಿಕೆ, ಶ್ರೇಣೀಕರಣ ಮತ್ತು ಪ್ಯಾಕಿಂಗ್ ಕಾರ್ಯಾಚರಣೆಗಳನ್ನು ಕೈಗೊಳ್ಳಿ. ಪೇರಲೆ  ಕೊಳೆಯುವ ಹಣ್ಣಾಗಿರುವುದರಿಂದ ಅದನ್ನು ಕೊಯ್ಲು ಮಾಡಿದ ತಕ್ಷಣ ಮಾರುಕಟ್ಟೆಗೆ ತರಬೇಕು. ಪ್ಯಾಕಿಂಗ್‌ಗಾಗಿ CFB, ಸುಕ್ಕುಗಟ್ಟಿದ ಫೈಬರ್ ಬಾಕ್ಸ್‌ಗಳು ಅಥವಾ ವಿವಿಧ ಗಾತ್ರದ ಬಿದಿರಿನ ಬುಟ್ಟಿಗಳನ್ನು ಬಳಸಿ.

 

Recent Posts

ಪ್ರಧಾನ ಮಂತ್ರಿಗಳ ಕೇಂದ್ರ ಪ್ರಾಯೋಜಿತ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ

ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯು (PMFME) 2020 ರಲ್ಲಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ (MoFPI) ಪ್ರಾರಂಭಿಸಿದ ಒಂದು ಉಪಕ್ರಮವಾಗಿದೆ. ಈ ದೂರದೃಷ್ಟಿಯ ಯೋಜನೆಯನ್ನು…

July 17, 2024

ಸೈನಿಕ ಹುಳು: ಜೋಳದ ಬೆಳೆಯಲ್ಲಿ ವಿನಾಶಕಾರಿ ಕೀಟ

ಸಾಮಾನ್ಯವಾಗಿ ಸೈನಿಕ ಹುಳು ಎಂದು ಕರೆಯಲ್ಪಡುವ ಸ್ಪೋಡೋಪ್ಟೆರಾ ಫ್ರುಗಿಪರ್ಡಾ ಪ್ರಪಂಚದಾದ್ಯಂತದ ಬೆಳೆಗಳ ಮೇಲೆ ಹೆಚ್ಚು ಆಕ್ರಮಣಕಾರಿ ಕೀಟಗಳಲ್ಲಿ ಪ್ರಮುಖವಾಗಿದ್ದು, ಮುಖ್ಯ ಬೆಳೆಗಳಿಗೆ ತೀವ್ರ  ನಷ್ಟವನ್ನು ಉಂಟುಮಾಡುತ್ತದೆ. ಇದು…

July 11, 2024

ಮೆಕ್ಕೆಜೋಳ: ನಾಟಿ ಮತ್ತು ಸುಧಾರಿತ ಬೇಸಾಯ ಕ್ರಮಗಳು

ಮೆಕ್ಕೆ ಜೋಳ (ಜಿಯಾ ಮೇಸ್ ಎಲ್.) ಹೆಚ್ಚು ಹೊಂದಿಕೊಳ್ಳಬಲ್ಲ ಬೆಳೆಗಳಲ್ಲಿ ಒಂದಾಗಿದೆ, ಇದು ವ್ಯಾಪಕ ಶ್ರೇಣಿಯ ಕೃಷಿ-ಹವಾಮಾನ ಪರಿಸ್ಥಿತಿಗಳಲ್ಲಿ ಬೆಳೆಯಲು ಸಾಧ್ಯವಾಗುತ್ತದೆ. ಇದು ಎಲ್ಲಾ ಧಾನ್ಯಗಳಿಗಿಂತ ದೊಡ್ಡ…

June 28, 2024

ಸಮೃದ್ಧ ಕೊಯ್ಲಿಗೆ ಪಪ್ಪಾಯಿ ಕೃಷಿ ಪದ್ಧತಿಗಳು

ಪಪ್ಪಾಯಿ (ಕಾರಿಕಾ ಪಪ್ಪಾಯಿ) ಒಂದು ಉಷ್ಣವಲಯದ ಹಣ್ಣಾಗಿದ್ದು, ಅಡುಗೆಮನೆಯ ತೋಟಗಳಲ್ಲಿ ಬೆಳೆಯಲು ಸೂಕ್ತವಾಗಿದೆ. ಪಪ್ಪಾಯಿಯು ವಿಟಮಿನ್ ಸಿ, ವಿಟಮಿನ್ ಎ, ಖನಿಜಗಳು ಮತ್ತು ಪೊಟ್ಯಾಸಿಯಮ್ನಂತಹ ಪೋಷಕಾಂಶಗಳ ಸಮೃದ್ಧ…

June 24, 2024

ಸಾಫ್ಟ್ ರೊಟ್ ರೋಗ ಭೀತಿ: ಶುಂಠಿಯನ್ನು ವಿನಾಶದಿಂದ ರಕ್ಷಿಸುವುದು

ಶುಂಠಿಯು ಹೆಚ್ಚು ಬೇಡಿಕೆಯಿರುವ ಮಸಾಲೆ ಬೆಳೆಯಾಗಿದ್ದು, 2022 ರಲ್ಲಿ ಭಾರತವು ಸುಮಾರು 2.12 ಮಿಲಿಯನ್ ಮೆಟ್ರಿಕ್ ಟನ್‌ಗಳನ್ನು ಉತ್ಪಾದಿಸುತ್ತದೆ ಎಂದು ನಿಮಗೆ ತಿಳಿದಿದೆಯೇ?  ಆದಾಗ್ಯೂ, ಸಾಫ್ಟ್ ರೊಟ್…

June 19, 2024

ಸೋಯಾಬೀನ್: ನಾಟಿ ಮತ್ತು ಕೃಷಿ ಅಭ್ಯಾಸಗಳು

ಹೆಚ್ಚಿನ ಪ್ರೊಟೀನ್ ಮತ್ತು ಎಣ್ಣೆಯ ಅಂಶದಿಂದಾಗಿ ಸೋಯಾಬೀನ್ ಅನ್ನು ಗೋಲ್ಡನ್ ಬೀನ್ ಅಥವಾ ಮಿರಾಕಲ್ ಕ್ರಾಪ್ ಎಂದೂ ಕರೆಯಲಾಗುತ್ತದೆ. ಸೋಯಾಬೀನ್ ಚೀನಾದಲ್ಲಿ ಹುಟ್ಟಿಕೊಂಡ ದ್ವಿದಳ ಧಾನ್ಯದ ವಿಧ.…

June 17, 2024