ಪೇರಲೆ – ಭಾರತದ ಪ್ರಮುಖ ವಾಣಿಜ್ಯ ಹಣ್ಣುಗಳಲ್ಲಿ ಒಂದಾಗಿದೆ. ಮಾವು, ಬಾಳೆಹಣ್ಣು ಮತ್ತು ಸಿಟ್ರಸ್ ಹಣ್ಣುಗಳ ನಂತರ, ಇದು ನಾಲ್ಕನೇ ಪ್ರಮುಖ ಹಣ್ಣು. ಇದು ಉಷ್ಣವಲಯದ ಮತ್ತು ಉಪೋಷ್ಣ ಪ್ರದೇಶಗಳಲ್ಲಿ ಬೆಳೆಯಬಹುದು. ಈ ಹಣ್ಣು ವಿಟಮಿನ್ ಸಿ, ಪೆಕ್ಟಿನ್, ಕ್ಯಾಲ್ಸಿಯಂ ಮತ್ತು ರಂಜಕದ ಸಮೃದ್ಧ ಮೂಲವಾಗಿದೆ. ಮಾವು, ಬಾಳೆ ಮತ್ತು ಸಿಟ್ರಸ್ ನಂತರ ಇದು ನಾಲ್ಕನೇ ಪ್ರಮುಖ ಬೆಳೆಯಾಗಿದೆ. ಇದನ್ನು ಭಾರತದಾದ್ಯಂತ ಬೆಳೆಯಬಹುದು. ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ಒರಿಸ್ಸಾ, ಪಶ್ಚಿಮ ಬಂಗಾಳ, ಮತ್ತು ತಮಿಳುನಾಡು ಪೇರಲೆ ಬೆಳೆಯುವ ಪ್ರಮುಖ ರಾಜ್ಯಗಳಾಗಿವೆ.
ಇದು ಕ್ಷಾರೀಯ ಮಣ್ಣು ಹಾಗೂ ಎಲ್ಲಾ ರೀತಿಯ ಮಣ್ಣಿನಲ್ಲಿ ಬೆಳೆಯುತ್ತದೆ. ಇದು 6.5 ರಿಂದ 7.5 ರವರೆಗಿನ pH ಹೊಂದಿರುವ ಮಣ್ಣಿನಲ್ಲಿ ಬೆಳೆಯಬಹುದು.
ಆಳವಾದ, ಮರಳು ಮಿಶ್ರಿತ ಗೋಡು ಮಣ್ಣು ಮತ್ತು ಜೇಡಿಮಣ್ಣಿನಲ್ಲಿ ಬೆಳೆದಾಗ ಇದು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.
ಪಂಜಾಬ್ ಪಿಂಕ್: ಹಣ್ಣುಗಳು ಮಧ್ಯಮ ಗಾತ್ರದಿಂದ ದೊಡ್ಡ ಗಾತ್ರವನ್ನು ಹೊಂದಿರುತ್ತದೆ ಹಾಗೂ ಆಕರ್ಷಕ ಬಣ್ಣದಿಂದ ಕೂಡಿದ್ದು, ಬೇಸಿಗೆ ಕಾಲದಲ್ಲಿ ಹಳದಿ ಬಣ್ಣದಲ್ಲಿರುತ್ತವೆ . ಪ್ರತಿ ಮರಕ್ಕೆ ಸರಾಸರಿ 155 ಕೆಜಿ ಇಳುವರಿ ನೀಡುತ್ತದೆ.
ಅಲಹಾಬಾದ್ ಸಫೇದಾ: ಪ್ರತಿ ಮರಕ್ಕೆ ಸರಾಸರಿ 145 ಕೆಜಿ ಇಳುವರಿ ಪಡೆಯಬಹುದು. .
ಅರ್ಕಾ ಅಮೂಲ್ಯ: ಪ್ರತಿ ಮರಕ್ಕೆ ಸರಾಸರಿ 144 ಕೆಜಿ ಇಳುವರಿ ಪಡೆಯಬಹುದು. .
ಉಳುಮೆ ಮಾಡಿ, ಅಡ್ಡ ಉಳುಮೆ ಮಾಡಿ ನಂತರ ಭೂಮಿಯನ್ನು ಹದಗೊಳಿಸಬೇಕು. ಹೊಲದಲ್ಲಿ ನೀರು ನಿಲ್ಲದಂತೆ ಭೂಮಿಯನ್ನು ಸಿದ್ಧಪಡಿಸಿ.
ಫೆಬ್ರವರಿ -ಮಾರ್ಚ್ ಅಥವಾ ಆಗಸ್ಟ್-ಸೆಪ್ಟೆಂಬರ್ ತಿಂಗಳುಗಳು ಪೇರಲವನ್ನು ನೆಡಲು ಸೂಕ್ತ ಸಮಯ.
ನಾಟಿ ಮಾಡಲು 6 – 5 ಮೀ ಅಂತರವನ್ನು ಸಾಲಿಂದ ಸಾಲಿಗೆ, 7ಮೀ ಗಿಡದಿಂದ ಗಿಡಕ್ಕೆ ಅಂತರವನ್ನು ಬಳಸಿ, ಹೀಗೆ ನಾಟಿ ಮಾಡುವುದರಿಂದ ಒಂದು ಎಕರೆಯಲ್ಲಿ 132 ಗಿಡಗಳನ್ನು ಅಳವಡಿಸಬಹುದು.
ಬೇರುಗಳನ್ನು 25 ಸೆಂ.ಮೀ ಆಳದಲ್ಲಿ ಬಿತ್ತಬೇಕು.
ಆರಂಭಿಕ 3-4 ವರ್ಷಗಳಲ್ಲಿ, ಕ್ಯಾರೆಟ್, ಬೆಂಡೆಕಾಯಿ, ಬದನೆ ಮತ್ತು ಮೂಲಂಗಿಯಂತಹ ತರಕಾರಿಗಳನ್ನು ಅಂತರ ಬೆಳೆಯಾಗಿ ತೆಗೆದುಕೊಳ್ಳಬಹುದು. ಅಲ್ಲದೆ ದ್ವಿದಳ ಧಾನ್ಯಗಳಾದ ಅವರೆ, ಬೀನ್ಸ್ ಅನ್ನು ಅಂತರ ಬೆಳೆಯಾಗಿ ಬಿತ್ತಬಹುದು.
ಬೆಳೆಯ ಹಂತ (ವರ್ಷ) | ಚೆನ್ನಾಗಿ ಕೊಳೆತ ಹಸುವಿನಸಗಣಿ(ಕೆಜಿ) | ಯೂರಿಯಾ | ಎಸ್ಎಸ್ಪಿ | MOP |
ಒಂದರಿಂದ ಮೂರು | 10-20 | 150-200 | 500-1500 | 100-400 |
ನಾಲ್ಕರಿಂದ ಆರು ವರ್ಷ | 25-40 | 300-600 | 600-1000 | 1500-2000 |
ಏಳರಿಂದ ಹತ್ತು ವರ್ಷ | 40-50 | 750-1000 | 2000-2500 | 1100-1500 |
ಹತ್ತು ವರ್ಷದ ಮೇಲೆ | 50 | 1000 | 2500 | 1500 |
ಬೆಳೆಯ ಹಂತ 10 ವರ್ಷಕ್ಕಿಂತ ಹೆಚ್ಚಿರುವಾಗ ಪ್ರತಿ ಮರಕ್ಕೆ 50 ಕೆ.ಜಿ., ಯೂರಿಯಾ @ 1000 ಗ್ರಾಂ, ಎಸ್ಎಸ್ಪಿ @ 2500 ಗ್ರಾಂ ಮತ್ತು ಎಂಒಪಿ @ 1500 ಗ್ರಾಂ.ಯೂರಿಯಾ, ಎಸ್ಎಸ್ಪಿ ಮತ್ತು ಎಂಒಪಿಯ ಅರ್ಧ ಡೋಸ್ ಮತ್ತು ಪೂರ್ಣ ಪ್ರಮಾಣದ ಗೋಮಯವನ್ನು ಮೇ-ಜೂನ್ ತಿಂಗಳಲ್ಲಿ ಮತ್ತು ಉಳಿದ ಅರ್ಧ ಡೋಸ್ ಅನ್ನು ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ಹಾಕಬಹುದು.
ಉತ್ತಮ ಬೆಳೆ ಬೆಳವಣಿಗೆ ಮತ್ತು ಇಳುವರಿಗಾಗಿ ಕಳೆ ನಿಯಂತ್ರಣ ಅಗತ್ಯ. ಕಳೆ ಬೆಳವಣಿಗೆಯನ್ನು ತಡೆಗಟ್ಟಲು, ಮಾರ್ಚ್, ಜುಲೈ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಗ್ರಾಮೋಕ್ಸೋನ್ 6 ಮಿಲಿ/ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
ಕಳೆಗಳ ಬೆಳವಣಿಗೆಯು ಸಕ್ರಿಯವಾಗಿದ್ದಾಗ (ಕಳೆಗಳು, ಹೂವುಬಿಡುವ ಹಂತ ಮತ್ತು 15-20 ಸೆಂ.ಮೀ ಎತ್ತರವನ್ನು ತಲುಪುವ ಮೊದಲು) ಕಳೆಗಳು ಕಂಡ ನಂತರ ಗ್ಲೈಫೋಸೇಟ್ @1.6ಲೀಟರ್/ಎಕರೆಗೆ ಸಿಂಪಡಿಸಬೇಕು. 200 ಲೀಟರ್ ನೀರಿನಲ್ಲಿ ಬೆರೆಸಿ ಪ್ರತಿ ಎಕರೆಗೆ ಸಿಂಪಡಿಸಬೇಕು.
ನೆಟ್ಟ ನಂತರ, ಬೆಳೆಗೆ ತಕ್ಷಣವೇ ನೀರುಹಾಕಬೇಕು, ನಂತರ ಮಣ್ಣಿನ ಪ್ರಕಾರ ಮತ್ತು ಹವಾಮಾನವನ್ನು ಅವಲಂಬಿಸಿ ನೀರುಹಾಕಬೇಕಾಗುತ್ತದೆ. ಎಳೆಯ ನೆಡುತೋಪುಗಳಿಗೆ ಬೇಸಿಗೆಯ ವಾರದ ಮಧ್ಯಂತರದಲ್ಲಿ ಮತ್ತು ಚಳಿಗಾಲದಲ್ಲಿ 2-3 ಬಾರಿ ನೀರಾವರಿ ಅಗತ್ಯವಿದೆ. ಹೂಬಿಡುವ ಹಂತದಲ್ಲಿ ನೀರು ಹಾಯಿಸುವುದನ್ನು ತಪ್ಪಿಸಿ ಏಕೆಂದರೆ ಇದು ಅತಿಯಾದ ಹೂವಿನ ಹಾನಿಗೆ ಕಾರಣವಾಗುತ್ತದೆ.
ಹಣ್ಣಿನ ನೊಣ: ಇದು ಪೇರಲ ಬೆಳೆಯನ್ನು ದಾಳಿ ಮಾಡುವ ಗಂಭೀರ ಕೀಟವಾಗಿದ್ದು, ಹೆಣ್ಣು ಹುಳುಗಳು ಎಳೆಯ ಹಣ್ಣುಗಳ ತೊಟ್ಟಿನ ಕೆಳಗೆ ಮೊಟ್ಟೆಗಳನ್ನು ಇಡುತ್ತವೆ. ನಂತರ ಹುಳುಗಳು ತಿರುಳನ್ನು ತಿನ್ನುತ್ತವೆ ಹಾಗೂ ಹಣ್ಣುಗಳು ಕೊಳೆಯಲು ಪ್ರಾರಂಭಿಸುತ್ತವೆ ಮತ್ತುಉದುರುತ್ತವೆ.
ತೋಟದಲ್ಲಿ ಹಣ್ಣಿನ ನೊಣ ದಾಳಿಯ ಇತಿಹಾಸವನ್ನು ಹೊಂದಿದ್ದರೆ, ಮಳೆಗಾಲದಲ್ಲಿ ಬೆಳೆಯುವುದನ್ನು ತಪ್ಪಿಸಿ. ಸರಿಯಾದ ಸಮಯಕ್ಕೆ ಕಟಾವು ಮಾಡಿ. ಕೊಯ್ಲು ವಿಳಂಬವನ್ನು ತಪ್ಪಿಸಿ. ಸೋಂಕಿತ ಗಿಡಗಳನ್ನು ತೆಗೆದುಹಾಕಿ ಮತ್ತು ನಾಶಪಡಿಸಿ.
ಹಣ್ಣಾದ ಮೇಲೆ ವಾರದ ಅಂತರದಲ್ಲಿ 150 ಲೀಟರ್ ನೀರಿನಲ್ಲಿ ಫೆನ್ವಾಲರೇಟ್ @ 80 ಮಿಲಿ ಸಿಂಪಡಿಸಿ. ಸಿಂಪರಣೆ ಮಾಡಿದ ಮೂರನೇ ದಿನದ ನಂತರ ಕೊಯ್ಲು ಮಾಡಬೇಕು.
ಬಿಳಿ ಹಿಟ್ಟು ತಿಗಣೆ : ಅವು ಸಸ್ಯದ ವಿವಿಧ ಭಾಗಗಳಿಂದ ರಸವನ್ನು ಹೀರುತ್ತವೆ ಮತ್ತು ಸಸ್ಯವನ್ನು ದುರ್ಬಲಗೊಳಿಸುತ್ತವೆ. ರಸ ಹೀರುವ ಕೀಟಗಳ ಬಾಧೆ ಕಂಡುಬಂದಲ್ಲಿ ಕ್ಲೋರ್ಪೈರಿಫಾಸ್ 50ಇಸಿ @300ಮಿಲಿ/100ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
ಎಲೆ ಮಚ್ಚೆ ರೋಗ : ಚಿಗುರುಗಳ ಮೇಲೆ ಗಾಢವಾದ ಕಂದು ಅಥವಾ ಕಪ್ಪು ಕಲೆಗಳು ಕಂಡುಬರುತ್ತವೆ. ಹಣ್ಣುಗಳ ಮೇಲೆ ಚಿಕ್ಕದಾದ, ಕಪ್ಪು ಕಲೆಗಳು ಕಂಡುಬರುತ್ತವೆ. ಸೋಂಕು ಉಂಟಾದ 2 ರಿಂದ 3 ದಿನಗಳಲ್ಲಿ ಹಣ್ಣುಗಳು ಸಂಪೂರ್ಣವಾಗಿ ಕೊಳೆಯುತ್ತವೆ.
ತೋಟವನ್ನು ಸ್ವಚ್ಛಗೊಳಿಸಿ, ನಂತರ ಕ್ಯಾಪ್ಟನ್ @ 300 ಗ್ರಾಂ ಅನ್ನು 100 ಲೀಟರ್ ನೀರಿನಲ್ಲಿ ಸಿಂಪಡಿಸಿ.
ಹಣ್ಣು ಕಚ್ಚುವ ಸಮಯದಲ್ಲಿ ಕ್ಯಾಪ್ಟನ್ ಸಿಂಪಡಣೆಯನ್ನು ಪುನರಾವರ್ತಿಸಿ ಮತ್ತು 10-15 ದಿನಗಳ ಮಧ್ಯಂತರದೊಂದಿಗೆ ಹಣ್ಣುಗಳು ಪ್ರಬುದ್ಧವಾಗುವವರೆಗೆ ಮುಂದುವರಿಸಿ.
ಹೊಲದಲ್ಲಿ ಕೀಟಬಾಧೆ ಕಂಡುಬಂದಲ್ಲಿ ಸೋಂಕಿತ ಮರಗಳ ಮೇಲೆ ಕಾಪರ್ ಆಕ್ಸಿಕ್ಲೋರೈಡ್ @ 30 ಗ್ರಾಂ/10 ಲೀ ನೀರಿನಲ್ಲಿ ಬೆರೆಸಿ ಸಿಂಪಡಣೆ ಮಾಡಿ.
ನೆಟ್ಟ ನಂತರ 2-3 ವರ್ಷಗಳಲ್ಲಿ ಹಣ್ಣುಗಳು ಬರುತ್ತವೆ. ಹಣ್ಣುಗಳು ಮಾಗಿದಾಗ ಕೊಯ್ಲು ಮಾಡಬೇಕು. ಪಕ್ವವಾದಾಗ, ಹಣ್ಣುಗಳು ಕಡು ಹಸಿರು ಬಣ್ಣದಿಂದ ಹಸಿರು ಹಳದಿ ಬಣ್ಣಕ್ಕೆ ಬದಲಾಗುತ್ತವೆ. ಸರಿಯಾದ ಸಮಯದಲ್ಲಿ ಕೊಯ್ಲು ಮಾಡಿ.
ಹಣ್ಣುಗಳ ಗುಣಮಟ್ಟ ಹದಗೆಡುವುದರಿಂದ ಹೆಚ್ಚು-ಹಣ್ಣಾಗುವುದನ್ನು ತಪ್ಪಿಸಿ.
ಕೊಯ್ಲು ಮಾಡಿದ ನಂತರ, ಶುಚಿಗೊಳಿಸುವಿಕೆ, ಶ್ರೇಣೀಕರಣ ಮತ್ತು ಪ್ಯಾಕಿಂಗ್ ಕಾರ್ಯಾಚರಣೆಗಳನ್ನು ಕೈಗೊಳ್ಳಿ. ಪೇರಲೆ ಕೊಳೆಯುವ ಹಣ್ಣಾಗಿರುವುದರಿಂದ ಅದನ್ನು ಕೊಯ್ಲು ಮಾಡಿದ ತಕ್ಷಣ ಮಾರುಕಟ್ಟೆಗೆ ತರಬೇಕು. ಪ್ಯಾಕಿಂಗ್ಗಾಗಿ CFB, ಸುಕ್ಕುಗಟ್ಟಿದ ಫೈಬರ್ ಬಾಕ್ಸ್ಗಳು ಅಥವಾ ವಿವಿಧ ಗಾತ್ರದ ಬಿದಿರಿನ ಬುಟ್ಟಿಗಳನ್ನು ಬಳಸಿ.
ಕೃಷಿಯಲ್ಲಿ, ದಕ್ಷತೆ ಮತ್ತು ಉತ್ಪಾದಕತೆ ಯಾವಾಗಲೂ ಮುಖ್ಯವಾಗಿರುತ್ತದೆ. ಈಗ ನಾವು ನಿಮಗೆ ನಿಮ್ಮ ನೀರಿನ ಸ್ಥಿತಿ, ನಿಮ್ಮ ಸಸ್ಯ ಸಂರಕ್ಷಣಾ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸುವ…
ಇತ್ತೀಚಿನ ಆಧುನಿಕ ಕೃಷಿಯಲ್ಲಿ ಸಮರ್ಥ ನೀರಿನ ನಿರ್ವಹಣೆ ಮಾಡುವುದು ನಿರ್ಣಾಯಕವಾಗಿದೆ ಮತ್ತು ಹನಿ ನೀರಾವರಿ ಪದ್ದತಿಯು ನೇರವಾಗಿ ಬೇರುಗಳ ವಲಯವನ್ನು ಗುರಿಯಾಗಿಸಿಕೊಂಡು ಸಸ್ಯಗಳಿಗೆ ನೀರನ್ನು ತಲುಪಿಸುವ ವಿಧಾನವನ್ನು…
ಸುಸ್ಥಿರ ಕೃಷಿ ಪದ್ದತಿಯಲ್ಲಿ ಸರಳವಾದ ಆದರೆ ಆಳವಾದ ವಿಷಯವೇನೆಂದರೆ ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವುದು. ಸಾವಯವ ಕೃಷಿ ತ್ಯಾಜ್ಯವು ನಮಗೆ ಹೊರೆಯಾಗಿರದೆ ಮಣ್ಣನ್ನು ಸಮೃದ್ಧಗೊಳಿಸುವ, ಸಸ್ಯಗಳನ್ನು ಪೋಷಿಸುವ ಮತ್ತು…
ಇತ್ತೀಚೆಗೆ ಬದಲಾಗುತ್ತಿರುವ ಕೃಷಿ ಭೂದೃಶ್ಯದ ಕಾರಣವಾಗಿ, ಸಮರ್ಥನೀಯ ಮತ್ತು ಸಮರ್ಥ ಕೃಷಿ ವಿಧಾನಗಳನ್ನು ಕಂಡುಹಿಡಿಯುವುದು ನಿರ್ಣಾಯಕವಾಗಿದೆ. ಅದಕ್ಕಾಗಿಯೇ ಪರಿಚಯಿಸುತ್ತಿದ್ದೇವೆ, ಎಪಿಸೆಲ್! ಎಕ್ಸೆಲ್ ಇಂಡಸ್ಟ್ರೀಸ್ ರವರ ಈ ನವೀನ…
ನೀರು ಕೃಷಿಯಲ್ಲಿ ಮೂಲಭೂತ ಸಂಪನ್ಮೂಲವಾಗಿದ್ದು, ಬೆಳೆಗಳ ವೃದ್ಧಿಗಾಗಿ ಅಗತ್ಯ ಪೋಷಕಾಂಶಗಳ ಮತ್ತು ಬೆಳೆ ರಕ್ಷಣೆಗೆ ಅಗತ್ಯವಾದ ರಾಸಾಯನಿಕಗಳನ್ನು ಸಾಗಿಸುವಲ್ಲಿ ವಾಹಕವಾಗಿ ಕಾರ್ಯನಿರ್ವಹಿಸುತ್ತದೆ . ಆದಾಗ್ಯೂ, ಕಳೆನಾಶಕಗಳು, ಕೀಟನಾಶಕಗಳು,…
ಹನಿ ನೀರಾವರಿ ವ್ಯವಸ್ಥೆ ಆಧುನಿಕ ಕೃಷಿಯ ಅತ್ಯಗತ್ಯ ಅಂಶವಾಗಿದೆ. ಇದು ಸಸ್ಯಗಳ ಬೇರುಗಳಿಗೆ ನೇರವಾಗಿ ನೀರನ್ನು ತಲುಪಿಸುವ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಈ ವಿಧಾನವು ನೀರನ್ನು ಸಂರಕ್ಷಿಸುವುದು…