ಬೂಜು ತುಪ್ಪಟ ರೋಗವು ಬಳ್ಳಿ ಜಾತಿ ತರಕಾರಿ ಬೆಳೆಗಳಾದಂತಹ, ಸೌತೆಕಾಯಿ, ಕಲ್ಲಂಗಡಿ, ಸೋರೆಕಾಯಿ ಹಾಗೂ ಕುಂಬಳಕಾಯಿಯಂತಹ ಸಸ್ಯಗಳ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುವ ಸಾಮಾನ್ಯ ಶಿಲೀಂಧ್ರ ರೋಗವಾಗಿದೆ. ಇದು ಸ್ಯೂಡೋಪೆರೋನೋಸ್ಪೊರಾ ಕ್ಯೂಬೆನ್ಸಿಸ್ ಎಂಬ ರೋಗಕಾರಕದಿಂದ ಉಂಟಾಗುತ್ತದೆ. ಈ ರೋಗವು ಹೆಚ್ಚು ವಿನಾಶಕಾರಿಯಾಗಿದ್ದು ಮತ್ತು ಸರಿಯಾಗಿ ನಿರ್ವಹಿಸದಿದ್ದಲ್ಲಿ ಇಳುವರಿಯಲ್ಲಿ ಗಮನಾರ್ಹ ನಷ್ಟವನ್ನು ಉಂಟುಮಾಡಬಹುದು.
ಅಗತ್ಯ ನಿರ್ವಹಣಾ ಕ್ರಮಗಳನ್ನು ತೆಗೆದುಕೊಳ್ಳಲು, ರೋಗವನ್ನು ಗುರುತಿಸಿ, ಅದನ್ನು ತಡೆಯಲು ಮತ್ತು ರೋಗಲಕ್ಷಣಗಳು ಕಂಡುಬಂದರೆ ತ್ವರಿತವಾಗಿ ರೋಗವನ್ನು ನಿರ್ವಹಿಸುವ ಬಗೆಯನ್ನು ತಿಳಿಸಲು ನಾವು ಇಲ್ಲಿದ್ದೇವೆ.
ಬೂಜು ತುಪ್ಪಟ ರೋಗವು ತಂಪಾದ (15-20 ° C) ಮತ್ತು ಆರ್ದ್ರ ಪರಿಸ್ಥಿತಿಗಳಲ್ಲಿ ಬೆಳೆಯುತ್ತದೆ. ಮಳೆಯ ವಾತಾವರಣ ಅಥವಾ ಭಾರೀ ಇಬ್ಬನಿಯಂತಹ ಹೆಚ್ಚಿನ ಆರ್ದ್ರತೆಯ ಅವಧಿಯಲ್ಲಿ ಇದು ವೇಗವಾಗಿ ಹರಡುತ್ತದೆ. ರೋಗಕಾರಕಕ್ಕೆ ಸೋಂಕು ಮತ್ತು ಬೆಳವಣಿಗೆಗೆ ಎಲೆಯ ಮೇಲ್ಮೈಯಲ್ಲಿ ಉತ್ತಮ ತೇವಾಂಶದ ಅಗತ್ಯವಿರುತ್ತದೆ.
ಈ ರೋಗವು ಸೋಂಕಿತ ಸಸ್ಯದ ಅವಶೇಷಗಳು, ಬೀಜಗಳು ಮತ್ತು ಮಣ್ಣಿನಲ್ಲಿ ಇದು ಬದುಕಬಲ್ಲದು, ಆದರೆ ಇದು ಪ್ರಾಥಮಿಕವಾಗಿ ಗಾಳಿಯಿಂದ ಬೀಜಕಗಳ ಮೂಲಕ ಹರಡುತ್ತದೆ. ಈ ಬೀಜಕಗಳು ಗಾಳಿಯಲ್ಲಿ ಬಹು ದೂರದವರೆಗೆ ಪ್ರಯಾಣಿಸಬಹುದು ಮತ್ತು ಆರೋಗ್ಯಕರ ಸಸ್ಯಗಳಿಗೆ ಸೋಂಕನ್ನು ಉಂಟುಮಾಡಬಹುದು. ಸೋಂಕಿತ ಸಸ್ಯಗಳು ಮೊಳಕೆ ಅಥವಾ ಸಸಿಗಳ ಮೂಲಕ ಸಹ ರೋಗವನ್ನು ಹರಡಬಹುದು.
ರೋಗದ ತೀವ್ರತೆ ಮತ್ತು ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ 7-14 ದಿನಗಳ ಮಧ್ಯಂತರದಲ್ಲಿ ರಾಸಾಯನಿಕಗಳನ್ನು ಸಿಂಪಡಿಸಿ. ಜೈವಿಕ-ಶಿಲೀಂಧ್ರನಾಶಕಗಳು ಮತ್ತು ಕೆಲವು ರಾಸಾಯನಿಕ ಶಿಲೀಂಧ್ರನಾಶಕಗಳಾದ ಮ್ಯಾಂಕೋಜೆಬ್ ಮತ್ತು ಕಾಪರ್ ಆಕ್ಸಿಕ್ಲೋರೈಡ್ ಅನ್ನು ಸಹ ರೋಗ ಸಂಭವಿಸುವ ಮೊದಲು ತಡೆಗಟ್ಟುವ ಕ್ರಮವಾಗಿ ಸಿಂಪಡಿಸಬಹುದು.
ಉತ್ಪನ್ನದ ಹೆಸರು | ತಾಂತ್ರಿಕ ಅಂಶ | ಬಳಸುವ ಪ್ರಮಾಣ |
ಜೈವಿಕ ನಿರ್ವಹಣೆ | ||
ಡೌನಿ ರೇಜ್ | ಜೈವಿಕ ಸಾರಗಳು | 2.5 ಮಿಲಿ/ಲೀಟರ್ ನೀರಿಗೆ |
ಆನಂದ್ ಡಾ ಬ್ಯಾಕ್ಟೋ ಅವರ ಫ್ಲೂರೋ ಬಯೋ ಶಿಲೀಂಧ್ರನಾಶಕ | ಸ್ಯೂಡೋಮೊನಾಸ್ ಫ್ಲೋರೊಸೆನ್ಸ್ | 2.5 ಮಿಲಿ/ಲೀಟರ್ ನೀರಿಗೆ |
ರಾಸಾಯನಿಕ ನಿರ್ವಹಣೆ | ||
ಕ್ಯಾಂಬ್ರಿಯೋ ಟಾಪ್ ಶಿಲೀಂಧ್ರನಾಶಕ | ಮೆಟಿರಾಮ್ 55% + ಪೈರಾಕ್ಲೋಸ್ಟ್ರೋಬಿನ್ 5% WG | 3 ಗ್ರಾಂ/ಲೀಟರ್ ನೀರಿಗೆ |
ಬ್ಲಾಯ್ಟೊಕ್ಸ್ | ಕಾಪರ್ ಆಕ್ಸಿ ಕ್ಲೋರೈಡ್ | 2 ಗ್ರಾಂ/ಲೀಟರ್ ನೀರಿಗೆ |
ಜಂಪ್ರೋ ಶಿಲೀಂಧ್ರನಾಶಕ | ಅಮೆಟೊಕ್ಟ್ರಾಡಿನ್ 27% + ಡೈಮೆಥೊಮಾರ್ಫ್ 20.27% ಎಸ್ಸಿ | 1.5 ಮಿಲಿ/ಲೀಟರ್ ನೀರಿಗೆ |
ತಾಕತ್ ಶಿಲೀಂಧ್ರನಾಶಕ | ಹೆಕ್ಸಾಕೊನಜೋಲ್ 5% + ಕ್ಯಾಪ್ಟನ್ 70% WP | 2 ಗ್ರಾಂ/ಲೀಟರ್ ನೀರಿಗೆ |
ರಿಡೋಮಿಲ್ ಗೋಲ್ಡ್ | ಮೆಟಾಲಾಕ್ಸಿಲ್ 4% + ಮ್ಯಾಂಕೋಜೆಬ್ 64% WP | 2 ಗ್ರಾಂ/ಲೀಟರ್ ನೀರಿಗೆ |
ಪ್ರೋಪಿ ಶಿಲೀಂಧ್ರನಾಶಕ | ಪ್ರೊಪಿನೆಬ್ 70% WP | 3 ಗ್ರಾಂ/ಲೀಟರ್ ನೀರಿಗೆ |
ಮಾಕ್ಸಿಮೇಟ್ ಶಿಲೀಂಧ್ರನಾಶಕ | ಸೈಮೋಕ್ಸಾನಿಲ್ 8% + ಮ್ಯಾಂಕೋಜೆಬ್ 64% WP | 2 ಗ್ರಾಂ/ಲೀಟರ್ ನೀರಿಗೆ |
ಪ್ರಮುಖ ಸೂಚನೆ:
ಕೃಷಿಯಲ್ಲಿ, ದಕ್ಷತೆ ಮತ್ತು ಉತ್ಪಾದಕತೆ ಯಾವಾಗಲೂ ಮುಖ್ಯವಾಗಿರುತ್ತದೆ. ಈಗ ನಾವು ನಿಮಗೆ ನಿಮ್ಮ ನೀರಿನ ಸ್ಥಿತಿ, ನಿಮ್ಮ ಸಸ್ಯ ಸಂರಕ್ಷಣಾ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸುವ…
ಇತ್ತೀಚಿನ ಆಧುನಿಕ ಕೃಷಿಯಲ್ಲಿ ಸಮರ್ಥ ನೀರಿನ ನಿರ್ವಹಣೆ ಮಾಡುವುದು ನಿರ್ಣಾಯಕವಾಗಿದೆ ಮತ್ತು ಹನಿ ನೀರಾವರಿ ಪದ್ದತಿಯು ನೇರವಾಗಿ ಬೇರುಗಳ ವಲಯವನ್ನು ಗುರಿಯಾಗಿಸಿಕೊಂಡು ಸಸ್ಯಗಳಿಗೆ ನೀರನ್ನು ತಲುಪಿಸುವ ವಿಧಾನವನ್ನು…
ಸುಸ್ಥಿರ ಕೃಷಿ ಪದ್ದತಿಯಲ್ಲಿ ಸರಳವಾದ ಆದರೆ ಆಳವಾದ ವಿಷಯವೇನೆಂದರೆ ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವುದು. ಸಾವಯವ ಕೃಷಿ ತ್ಯಾಜ್ಯವು ನಮಗೆ ಹೊರೆಯಾಗಿರದೆ ಮಣ್ಣನ್ನು ಸಮೃದ್ಧಗೊಳಿಸುವ, ಸಸ್ಯಗಳನ್ನು ಪೋಷಿಸುವ ಮತ್ತು…
ಇತ್ತೀಚೆಗೆ ಬದಲಾಗುತ್ತಿರುವ ಕೃಷಿ ಭೂದೃಶ್ಯದ ಕಾರಣವಾಗಿ, ಸಮರ್ಥನೀಯ ಮತ್ತು ಸಮರ್ಥ ಕೃಷಿ ವಿಧಾನಗಳನ್ನು ಕಂಡುಹಿಡಿಯುವುದು ನಿರ್ಣಾಯಕವಾಗಿದೆ. ಅದಕ್ಕಾಗಿಯೇ ಪರಿಚಯಿಸುತ್ತಿದ್ದೇವೆ, ಎಪಿಸೆಲ್! ಎಕ್ಸೆಲ್ ಇಂಡಸ್ಟ್ರೀಸ್ ರವರ ಈ ನವೀನ…
ನೀರು ಕೃಷಿಯಲ್ಲಿ ಮೂಲಭೂತ ಸಂಪನ್ಮೂಲವಾಗಿದ್ದು, ಬೆಳೆಗಳ ವೃದ್ಧಿಗಾಗಿ ಅಗತ್ಯ ಪೋಷಕಾಂಶಗಳ ಮತ್ತು ಬೆಳೆ ರಕ್ಷಣೆಗೆ ಅಗತ್ಯವಾದ ರಾಸಾಯನಿಕಗಳನ್ನು ಸಾಗಿಸುವಲ್ಲಿ ವಾಹಕವಾಗಿ ಕಾರ್ಯನಿರ್ವಹಿಸುತ್ತದೆ . ಆದಾಗ್ಯೂ, ಕಳೆನಾಶಕಗಳು, ಕೀಟನಾಶಕಗಳು,…
ಹನಿ ನೀರಾವರಿ ವ್ಯವಸ್ಥೆ ಆಧುನಿಕ ಕೃಷಿಯ ಅತ್ಯಗತ್ಯ ಅಂಶವಾಗಿದೆ. ಇದು ಸಸ್ಯಗಳ ಬೇರುಗಳಿಗೆ ನೇರವಾಗಿ ನೀರನ್ನು ತಲುಪಿಸುವ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಈ ವಿಧಾನವು ನೀರನ್ನು ಸಂರಕ್ಷಿಸುವುದು…