Crop

ಬೀಟ್ ರೂಟ್ ಬೆಳೆಗಾಗಿ ಅನುಸರಿಸಬೇಕಾದ ಉತ್ತಮ ಸುಧಾರಿತ ಬೇಸಾಯ ಕ್ರಮಗಳು

ಬೀಟ್ ರೂಟ್ ಅನ್ನು “ಗಾರ್ಡನ್ ಬೀಟ್” ಎಂದೂ ಕರೆಯುತ್ತಾರೆ. ಇದು ರುಚಿಯಲ್ಲಿ ಸಿಹಿಯಾಗಿರುತ್ತದೆ ಮತ್ತು ಉತ್ತಮ  ನಿರೋಧಕ ಗುಣಗಳನ್ನು ಹೊಂದಿರುವ ಆರೋಗ್ಯವಾದ ತರಕಾರಿಯಾಗಿದೆ. . ಪ್ರಪಂಚದಲ್ಲಿ ಕಬ್ಬಿನ ನಂತರ ಬೀಟ್ರೂಟ್ ಎರಡನೇ ಅತಿದೊಡ್ಡ ಸಕ್ಕರೆ ಬೆಳೆಯಾಗಿದೆ. ಇದು ಅಲ್ಪಾವಧಿ ಬೆಳೆಯಾಗಿದ್ದು, 6-7 ತಿಂಗಳಲ್ಲಿ ಕೊಯ್ಲು ಮಾಡಬಹುದು. ಇದರಲ್ಲಿ ಔಷಧೀಯ ಮೌಲ್ಯಗಳಿದೆ ಅಂದರೆ  ಕ್ಯಾನ್ಸರ್ ಮತ್ತು ಹೃದಯ ಕಾಯಿಲೆಗಳನ್ನು  ಗುಣಪಡಿಸುವ ಔಷಧೀಯ ಮೌಲ್ಯಗಳನ್ನು ಹೊಂದಿದೆ. ಇದನ್ನು ಸುಲಭವಾಗಿ ಬೆಳೆಯಬಹುದು ಮತ್ತು ಭಾರತದಲ್ಲಿ ಬೆಳೆಯುವ ಹೆಚ್ಚಿನ  ತರಕಾರಿಗಳಲ್ಲಿಇದೂ ಒಂದಾಗಿದೆ.

ಬೀಟ್ರೂಟ್ ಗಾಗಿ ಮಣ್ಣಿನ ಗುಣಗಳು

ಬೀಟ್ ರೂಟ್ ಅನ್ನು ಬಹುತೇಕ ಎಲ್ಲಾ ರೀತಿಯ ಸಡಿಲವಾದ ಮಣ್ಣಿನಲ್ಲಿ ಬೆಳೆಯಬಹುದು, ಆದರೆ ಆಳವಾದ, ಚೆನ್ನಾಗಿ ಬರಿದಾದ  ಗೋಡು ಅಥವಾ ಮರಳು ಮಿಶ್ರಿತ ಗೋಡು  ಮಣ್ಣು, ಬೀಟ್ ರೂಟ್ ಬೆಳವಣಿಗೆಗೆ ಉತ್ತಮವಾಗಿದೆ. ಇದಕ್ಕೆ 6.-7 pH ಸೂಕ್ತವಾಗಿದೆ. 

ಹವಾಮಾನ ಪರಿಸ್ಥಿತಿಗಳು

ಬೀಟ್ ರೂಟ್ ಮೂಲತಃ ಚಳಿಗಾಲದ/ತಂಪಾದ ಋತುವಿನ ಬೆಳೆಯಾಗಿದೆ, ಆದರೂ ಸಾಧಾರಣ ಬೆಚ್ಚಗಿನ ವಾತಾವರಣದಲ್ಲೂ ಬೆಳೆಯಬಹುದು. ಬೇರುಗಳು, ಬಣ್ಣ, ರಚನೆ, ಸಕ್ಕರೆ ಅಂಶ ಇತ್ಯಾದಿ ಬೆಳವಣಿಗೆಯು, ತಂಪಾದ ವಾತಾವರಣ ಉತ್ತಮವಾಗಿರುತ್ತದೆ.

18-21°C ವ್ಯಾಪ್ತಿಯ ತಾಪಮಾನವು, ಕೆಂಪು ಬಣ್ಣ ಮತ್ತು ಹೆಚ್ಚಿನ ಸಕ್ಕರೆ ಅಂಶದೊಂದಿಗೆ, ಉತ್ತಮ ಗುಣಮಟ್ಟದ ಬೇರುಗಳನ್ನು ಪಡೆಯಲು ಸೂಕ್ತವಾಗಿದೆ. 

ಭೂಮಿಯನ್ನು ಸಿದ್ಧಪಡಿಸುವುದು:

ಬೀಜಗಳನ್ನು ನೇರವಾಗಿ ಮುಖ್ಯ ಜಮೀನಿನಲ್ಲಿ ಬಿತ್ತಲಾಗುತ್ತದೆ, ಆದ್ದರಿಂದ ಮಣ್ಣನ್ನು ಕನಿಷ್ಠ 20 ಸೆಂ.ಮೀ ಆಳದವರೆಗೆ ಉಳುಮೆ ಮಾಡುವ ಮೂಲಕ, ಅದನ್ನು ಚೆನ್ನಾಗಿ ಸಿದ್ಧಪಡಿಸಬೇಕು ಮತ್ತು ಪುನರಾವರ್ತಿತ ಉಳುಮೆ, ಮಣ್ಣನ್ನು ತಿರುವಿ ಹಾಕುವುದು ಮತ್ತು ಹಿಂದಿನ ಎಲ್ಲಾ ಬೆಳೆಶೇಷಗಳನ್ನು  ಕಲ್ಲುಗಳು ಮತ್ತು ಉಂಡೆಗಳನ್ನು ತೆಗೆಯುವ ಮೂಲಕ, ಉತ್ತಮವಾದ ಮಣ್ಣನ್ನು ಸಿದ್ಧಪಡಿಸಬೇಕು.

ಅಂತಿಮ ಉಳುಮೆಯ ಸಮಯದಲ್ಲಿ ಮಣ್ಣನ್ನು ಸಮಗೊಳಿಸಿ ಮತ್ತು ಉಬ್ಬುಗಳನ್ನು 20 ಸೆಂ.ಮೀ ಎತ್ತರ ಮತ್ತು 30 ಸೆಂ.ಮೀ ಅಂತರದಲ್ಲಿ ತಗ್ಗುಗಳನ್ನು ಸಿದ್ಧಪಡಿಸಿ.

ಬೀಜಗಳ  ಪ್ರಮಾಣ ಮತ್ತು ಅನುಸರಿಸಲಾಗುವ ಸಾಮಾನ್ಯ ಅಂತರ:

ಬೀಜಗಳು, ತಳಿ ಅಥವಾ ಹೈಬ್ರಿಡ್ ಮತ್ತು ಬೆಳವಣಿಗೆಯ ಋತುವಿನ ಅವಧಿಯನ್ನು ಅವಲಂಬಿಸಿರುತ್ತದೆ. ಎಕರೆಗೆ ಸರಾಸರಿ 2.5 – 3 ಕೆ.ಜಿ. ಬೀಜಗಳು ಗಿಡಗಳ ನಡುವೆ 10 ಸೆಂ.ಮೀ ಅಂತರ ಮತ್ತು ದಿಣ್ಣೆಗಳು/ಮಡಿಗಳ ನಡುವೆ 30-40 ಸೆಂ.ಮೀ. ಅಂತರ 

ಪ್ರತಿ ಎಕರೆ ಪ್ರದೇಶಕ್ಕೆ ಅಗತ್ಯವಿರುವ ರಸಗೊಬ್ಬರಗಳ ಖರೀದಿ.

ಕೊಟ್ಟಿಗೆ ಗೊಬ್ಬರ [ಎಫ್‌ವೈಎಂ] @ 8-10 ಟನ್/ಎಕರೆ ಯಷ್ಟು ಖರೀದಿಸುವುದು ಮತ್ತು ಕೊಟ್ಟಿಗೆ ಗೊಬ್ಬರ  ಜೊತೆ ಮಿಶ್ರಣ ಮಾಡಲು, 5 ಕೆಜಿ ಜೈವಿಕ ಗೊಬ್ಬರಗಳು + 2 ಕೆಜಿ ಟ್ರೈಕೋಡರ್ಮಾ + 2 ಕೆಜಿ ಸ್ಯೂಡೋಮೊನಾಸ್.

 ಜೈವಿಕ ಗೊಬ್ಬರಗಳನ್ನು ಕೊಟ್ಟಿಗೆ ಗೊಬ್ಬರದೊಂದಿಗೆ  ಮಿಶ್ರಣ ಮಾಡಿ ಮತ್ತು ಅದನ್ನು 5 ದಿನಗಳವರೆಗೆ ನೆರಳಿನಲ್ಲಿ ಇಟ್ಟು, ಅನಂತರ ಮುಖ್ಯ  ಜಮೀನಿಗೆ  ಹಾಕಿ.

ಕೊಟ್ಟಿಗೆ ಗೊಬ್ಬರವನ್ನು  ಹಾಕಿದ ನಂತರ, ಅದನ್ನು ಮಣ್ಣಿನೊಂದಿಗೆ ಸರಿಯಾಗಿ ಮಿಶ್ರಣ ಮಾಡಲು ತಿರುಗಿಸಿ ಅಥವಾ ಉಳುಮೆ ಮಾಡಿ.

ಬೀಟ್ ರೂಟ್ ನಲ್ಲಿ, ರಸಗೊಬ್ಬರಗಳ ಶಿಫಾರಸ್ಸು  ಮಾಡಲಾದ ಪ್ರಮಾಣವು, 50:50: 60   ಕೆಜಿ ಎನ್ : ಪಿ:  ಕೆ.

ಬಿತ್ತನೆ:

ಬಿತ್ತನೆ ಮಾಡುವ ಮುನ್ನ, ಬೀಜಗಳನ್ನು 12 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿದರೆ, ಅದು ಉತ್ತಮವಾಗಿ ಮೊಳಕೆಯೊಡೆಯಲು ಸಹಕಾರಿಯಾಗುತ್ತದೆ. ಮೊದಲೇ ಹೊರಹೊಮ್ಮುವ ತೇವಾಂಶ ಮತ್ತು ಇತರ ಮಣ್ಣಿನಿಂದ ಹರಡುವ ರೋಗಗಳನ್ನು ತಪ್ಪಿಸಲು, ಬಿತ್ತನೆ ಮಾಡುವ ಮೊದಲು, ನೆನೆಸಿದ ಬೀಜಗಳನ್ನು, ರಾಸಾಯನಿಕ (ಮೆಟಾಲಾಕ್ಸಿಲ್ ಅಥವಾ  ಕ್ಯಾಪ್ಟನ್ ಅಥವಾ ಥಿರಮ್) ಅಥವಾ ಜೈವಿಕ ಗೊಬ್ಬರಗಳೊಂದಿಗೆ (ಡಾ. ಸಾಯಿಲ್ ಬಿಜೋಪಾಚಾರ್ {ಅಜೋಟೋಬ್ಯಾಕ್ಟರ್} ಅಥವಾ  ಟ್ರೈಕೋಡರ್ಮಾ ಎಸ್ ಪಿಎಸ್)  ಜೊತೆಗೆ ಸಂಸ್ಕರಿಸಬೇಕಾಗುತ್ತದೆ. 

ಬೀಟ್ ರೂಟ್ ಬೀಜವನ್ನು (2-6 ಬೀಜಗಳನ್ನು ಹೊಂದಿರುವ ಗುಂಪು) ಬಹು-ಜೀವಿ ಬೀಜಗಳು ಎಂದು ಕರೆಯಲಾಗುತ್ತದೆ, ಏಕೆಂದರೆ ಒಂದು ಬೀಜವು ಒಂದಕ್ಕಿಂತ ಹೆಚ್ಚು ಮೊಳಕೆಗಳನ್ನು ಉಂಟುಮಾಡಬಹುದು. ಆದ್ದರಿಂದ ಬೀಜಗಳು ಮೊಳಕೆಯೊಡೆದ ನಂತರ ಮೊಳಕೆಗಳನ್ನು ಬೇರ್ಪಡಿಸಬೇಕು.    

ಸಾಮಾನ್ಯವಾಗಿ, ಬೀಜಗಳನ್ನು ಸಸ್ಯಗಳ ನಡುವೆ 10 ಸೆಂ.ಮೀ ಅಂತರದಲ್ಲಿ, ಉತ್ತಮ ಬೇರಿನ ಬೆಳವಣಿಗೆಗಾಗಿ ದಿನ್ನೆಗಳ ಮೇಲೆ ಬಿತ್ತಲಾಗುತ್ತದೆ ಮತ್ತು ಬೀಜಗಳನ್ನು ಗಟ್ಟಿಯಾಗಿಸಲು ಮಣ್ಣಿನಿಂದ ಮುಚ್ಚಲಾಗುತ್ತದೆ. ಬಿತ್ತನೆ ಮಾಡಿದ 10-20 ದಿನಗಳಲ್ಲಿ, ಬೀಜಗಳು ಮೊಳಕೆಯೊಡೆಯುತ್ತವೆ. 

ನೀರಿನ ನಿರ್ವಹಣೆ

ಬೀಟ್ ರೂಟ್ ಬೀಜವು ಮೊಳಕೆಯೊಡೆಯಲು, 10-20 ದಿನಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಆರಂಭಿಕ ಬೆಳವಣಿಗೆ ಸಾಮಾನ್ಯವಾಗಿ ನಿಧಾನವಾಗಿರುತ್ತದೆ. ಬಿತ್ತನೆ ಮಾಡಿದ ತಕ್ಷಣ ಕ್ಷೇತ್ರಕ್ಕೆ ನೀರು ಹಾಕಬೇಕು ಅನಂತರ, ಮಣ್ಣಿನ ತೇವಾಂಶ ಮತ್ತು ಹವಾಮಾನ ಪರಿಸ್ಥಿತಿಗಳ ಆಧಾರದ ಮೇಲೆ, ನಿಯಮಿತ ಮಧ್ಯಂತರಗಳಲ್ಲಿ ಮಣ್ಣಿನ ತೇವವನ್ನು ಕಾಪಾಡಬೇಕು. ಪ್ರತಿ ಮಡಿಯ ಮಧ್ಯದಲ್ಲಿ ಕೋಲುಗಳನ್ನು ಇಡುವ ಮೂಲಕ, ಮಡಿಗಳ ಮೇಲೆ  ಹನಿ ನೀರಾವರಿ ವ್ಯವಸ್ಥೆಯನ್ನು ಸಹ ಅಳವಡಿಸಬಹುದು.    

ಕಳೆ ನಿರ್ವಹಣೆ:

ಕಳೆಗಳನ್ನು ನಿಯಂತ್ರಣದಲ್ಲಿಡಲು, ನಿಯಮಿತವಾಗಿ ಕಳೆ ಕೀಳಬೇಕು. ಕೈಯಿಂದ ಕಳೆ ಕೀಳುವುದನ್ನು ಸಾಮಾನ್ಯವಾಗಿ ಬೆಳೆಗಳ ಮೊದಲ  ಹಂತದಲ್ಲಿ ಮಾಡಲಾಗುತ್ತದೆ, ಆದರೂ ಆಳವಾದ ಉಳುಮೆಯನ್ನು ತಪ್ಪಿಸಿ, ಏಕೆಂದರೆ ಅದು ಬೇರುಗಳಿಗೆ ಹಾನಿ ಉಂಟು ಮಾಡಬಹುದು.

ತೆಳು ಮಾಡುವುದು:

ಬೀಜಗಳ ಬಹು ಚಿಕ್ಕ ಅಥವಾ ಸೂಕ್ಷ್ಮ  ಸ್ವಭಾವದಿಂದಾಗಿ ತೆಳುಮಾಡುವಿಕೆಯು ಬಹಳ ಮುಖ್ಯವಾಗಿರುತ್ತದೆ. ಮೊಳಕೆಯೊಡೆದ ನಂತರ (ಬಿತ್ತನೆ ಮಾಡಿದ 20 ದಿನಗಳ ನಂತರ) ಅಂತಿಮವಾಗಿ ಒಂದು ದಿಣ್ಣೆಯಲ್ಲಿ  ಒಂದು ಬೀಜವನ್ನು ಮಾತ್ರ ಉಳಿಸಿಕೊಳ್ಳಲು, ತೆಳು ಮಾಡಲಾಗುತ್ತದೆ.

ಬೇರುಗಳ ಏಕರೂಪತೆ ಮತ್ತು ಸರಿಯಾದ ಬೆಳವಣಿಗೆಗೆ, ಸೂಕ್ತವಾದ ಜಾಗವನ್ನು ಒದಗಿಸಬೇಕಾಗುತ್ತದೆ.  ಬೇರುಗಳ ಏಕರೂಪದ ಗಾತ್ರ ಮತ್ತು ಆಕಾರವನ್ನು ಹೊಂದಲು ತೆಳುಮಾಡುವುದು ಅವಶ್ಯಕವಾಗಿದೆ.

ಸಸ್ಯ ಸಂರಕ್ಷಣೆ:

ಗಿಡಹೇನುಗಳು:

ಇವು ಸಾಮಾನ್ಯವಾಗಿ ಎಲೆಯು ಬೆಳೆಯುವ ಮತ್ತು ರಸವತ್ತಾದ ಸಸ್ಯ ಭಾಗಗಳ ಮೇಲೆ ರಸವನ್ನು ಹೀರುತ್ತವೆ.

  • ಎಳೆಯ ಎಲೆಗಳು, ಕಾಂಡಗಳು, ಮೊಗ್ಗುಗಳು, ಹೂವುಗಳು, ಹಣ್ಣುಗಳ ಮೇಲೆ ಪರಿಣಾಮ ಬೀರುತ್ತವೆ. ಗಿಡಹೇನುಗಳಿಂದ ದಾಳಿಗೊಳಗಾದ ಸಸ್ಯಗಳು ತಿರುಚಿದ, ಸುರುಳಿಯಾಕಾರದ ಅಥವಾ ಊದಿಕೊಂಡ ಲಕ್ಷಣಗಳನ್ನು ತೋರಿಸುತ್ತವೆ.

ನಿಯಂತ್ರಣ  ಕ್ರಮಗಳು:

ಸಾಸಿವೆ ಬೆಳೆಯನ್ನು  ಮುಖ್ಯ ಬೆಳೆ ಜೊತೆಗೆ ಬಲೆ ಬೆಳೆಯಾಗಿ ಬೆಳೆಯಬಹುದು.ಬೆಳ್ಳುಳ್ಳಿ ಗಿಡಗಳು ಗಿಡಹೇನುಗಳನ್ನು ಹಿಮ್ಮೆಟ್ಟಿಸಲು ಸಮರ್ಥವಾಗಿವೆ ಮತ್ತು ಎರಡು ಪ್ರಯೋಜನಗಳಿಗಾಗಿ ಮಿಶ್ರ ಬೆಳೆಯಾಗಿ ಬೆಳೆಯಬಹುದು. 

ಚಿಗಟ ಜೀರುಂಡೆಗಳು:

ವಯಸ್ಕ ಜೀರುಂಡೆ, ದುಂಡಗಿನ ರಂಧ್ರಗಳನ್ನು ಮಾಡುವ ಮೂಲಕ ಎಲೆಗಳನ್ನು ತಿನ್ನುತ್ತದೆ. ಕಾಂಡ, ಹೂವು ಮತ್ತು ಕಾಯಿಗಳು ಸಹ ದಾಳಿಗೊಳಗಾಗಬಹುದು. ಕೊಳೆಯುವ ವಾಸನೆಯನ್ನು ಸಸ್ಯಗಳು ಹೊರಸೂಸುತ್ತವೆ.

ನಿರೋಧಕ ಕ್ರಮಗಳು:

ನಾಟಿ ಮಾಡಲು ಕೀಟ ಮುಕ್ತ ಬೀಜಗಳನ್ನು ಬಳಸಿ, ಕೀಟಗಳನ್ನು ಆಕರ್ಷಿಸಲು ಸಾಸಿವೆಯನ್ನು ಬಲೆ ಬೆಳೆಯಾಗಿ ಬಳಸಿ.ಕೊಯ್ಲಿನ ನಂತರ ಬೆಳೆ ಉಳಿಕೆಗಳನ್ನು ನಾಶಮಾಡಿ. ಕ್ಲೋರೋಪೈರಿಫೊಸ್ ಉತ್ಪನ್ನಗಳು ಜೀರುಂಡೆ ತೀವ್ರತೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ

ರೋಗ ಮತ್ತು ರೋಗ ಲಕ್ಷಣ

ಮೊಳಕೆಹಂತದ  ರೋಗ:

ಬೀಜಗಳು ಮೊಳಕೆಯೊಡೆಯಬಹುದು ಆದರೆ ಗಿಡವು   ಮಣ್ಣಿನಿಂದ ಹೊರಬರುವುದಿಲ್ಲ ಮತ್ತು ಇದನ್ನು ಸಾಮಾನ್ಯವಾಗಿ ಪ್ರೀ-ಎಮರ್ಜೆನ್ಸ್ ಮೊಳಕೆ ರೋಗ  ಎಂದು ಕರೆಯಲಾಗುತ್ತದೆ. ಅಸಹಜ ಗಾತ್ರದ ಎಲೆಗಳೊಂದಿಗೆ ಮೊಳಕೆಗಳ ಕಳಪೆ ಬೆಳವಣಿಗೆಯನ್ನು ನಾವು ಗಮನಿಸಬಹುದು.ಎಲೆಗಳ ಮೇಲೆ ನೀರಿನಲ್ಲಿ ನೆನೆಸಿದ ಕಲೆಗಳು ಕಾಣಿಸಿಕೊಳ್ಳುತ್ತವೆ.

  ನಿಯಂತ್ರಣ ಕ್ರಮಗಳು:

ಮಣ್ಣಿನ ನಿರ್ಮಲೀಕರಣ, ಬಹು ಮತ್ತು ಆಳವಾದ ಉಳುಮೆಯ ನಂತರ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು. ನೈರ್ಮಲ್ಯೀಕರಣವು ಬಿತ್ತನೆ ಅಥವಾ ನಾಟಿ ಮಾಡುವ ಮೊದಲು ಮಣ್ಣಿನಲ್ಲಿರುವ ಯಾವುದೇ ರೀತಿಯ ಶಿಲೀಂಧ್ರಗಳನ್ನು ಕೊಲ್ಲಲು ಸಹಾಯ ಮಾಡುತ್ತದೆ. 

ಪರಾವಲಂಬಿ ಜೀವಿಗಳಾದ ಟ್ರೈಕೋಡರ್ಮವಿರಿಡೆ,   ಟ್ರೈಕೋಡರ್ಮ್ ಹಾರ್ಜಿಯಾನಮ್, ಸ್ಯೂಡೋಮೊನಾಸ್ ಫ್ಲೋರೊಸೆನ್ಸ್, ಬ್ಯಾಸಿಲಸ್ ಸಬ್ಟಿಲಿಸ್, ಇತ್ಯಾದಿಗಳನ್ನು ಚೆನ್ನಾಗಿ ಕೊಳೆತ ಜಮೀನಿನ ಗೊಬ್ಬರದೊಂದಿಗೆ ಮಣ್ಣಿಗೆ ಹಾಕುವುದರಿಂದ ಇದನ್ನು ತಡೆಯಬಹುದು.  • ಸರಿಯಾದ ಒಳಚರಂಡಿಯೊಂದಿಗೆ ಬೀಜ ಹಾಸಿಗೆಗಳನ್ನು ತಯಾರಿಸಿ, ಅಲ್ಲಿ ಬೀಜಗಳನ್ನು ಬಿತ್ತಲಾಗುತ್ತದೆ. ಎಳೆಯ ಕಸಿಗಳಲ್ಲಿ ರೋಗವನ್ನು ತಪ್ಪಿಸಲು ಮೊಳಕೆಗಳನ್ನು ಕಸಿ ಮಾಡುವ ಜಮೀನಿನಲ್ಲಿ ಸರಿಯಾದ ಒಳಚರಂಡಿಯನ್ನು ಒದಗಿಸಬೇಕು. 

ಎಲೆ ಚುಕ್ಕೆ ರೋಗ :

ಆರಂಭಿಕ ರೋಗಲಕ್ಷಣಗಳು ಕೆಳಗಿನ ಎಲೆಗಳ ಮೇಲೆ ಕಾಣಿಸಿಕೊಳ್ಳುತ್ತವೆ ಮತ್ತು ಸಣ್ಣ ಕೆಂಪು-ಕಂದು ಬಣ್ಣದ ಚುಕ್ಕೆಗಳು ಎಲೆಯ  ತುದಿ ಅಥವಾ ಅಂಚಿನ ಬಳಿ ಮತ್ತು ಎಲೆಗಳ ಮಧ್ಯನಾಳದ ಮೇಲೆ ಬೆಳೆಯುತ್ತವೆ. ಮಚ್ಚೆಗಳು ಒಗ್ಗೂಡುತ್ತವೆ ಮತ್ತು ಎಲೆಗಳು ಒಣಗಲು ಪ್ರಾರಂಭಿಸುತ್ತವೆ. ಕ್ರಮೇಣ ಸೋಂಕು ಮೇಲಿನ ಎಲೆಗಳಿಗೆ ಹರಡುತ್ತದೆ. ಅನುಕೂಲಕರ ಪರಿಸ್ಥಿತಿಗಳಲ್ಲಿ ರೋಗವು ಸಂಪೂರ್ಣ ಎಲೆಗಳಿಗೆ ಹರಡುತ್ತದೆ ಮತ್ತು ಇದು ಅಂತಿಮವಾಗಿ ಇಳುವರಿಯನ್ನು ಕಡಿಮೆ ಮಾಡುತ್ತದೆ.

ನಿರೋಧಕ ಕ್ರಮಗಳು:

ಚೆನ್ನಾಗಿ ಬರಿದಾದ ಮಣ್ಣಿನಲ್ಲಿ ನಾಟಿಯನ್ನು ಮಾಡಬೇಕು ಮತ್ತು ನಂತರ ಸರಿಯಾದ ಒಳಚರಂಡಿಯನ್ನು ನಿರ್ವಹಿಸಬೇಕು.  ನಿರೋಧಕ ತಳಿಗಳನ್ನು  ಬೆಳೆಯಬೇಕು. ಶಿಫಾರಸ್ಸು ಮಾಡಿದ ಅಂತರದಲ್ಲಿ ನೆಡುವುದು ಮತ್ತಷ್ಟು ಹರಡುವುದನ್ನು ತಪ್ಪಿಸಲು ಬಾಧಿತ ಎಲೆಗಳನ್ನು ಕಾಲಕಾಲಕ್ಕೆ ತೆಗೆದುಹಾಕಿ ಮತ್ತು ಸುಟ್ಟುಹಾಕಿ, ಹೊಲಗಳನ್ನು ಕಳೆಗಳಿಂದ ಮುಕ್ತವಾಗಿಡಬೇಕು. 

ಕೊಯ್ಲು:

ಬೀಟ್ ರೂಟ್ ಬೆಳೆಗಳು ಸಾಮಾನ್ಯವಾಗಿ ಬೇಸಿಗೆಯಲ್ಲಿ 70 – 80 ದಿನಗಳಲ್ಲಿ ಮತ್ತು ಚಳಿಗಾಲದಲ್ಲಿ 85- 100 ದಿನಗಳಲ್ಲಿ ಬರುತ್ತವೆ.  ಬಹು-ಸೂಕ್ಷ್ಮಾಣು ಬೀಜದ ಸ್ವಭಾವದ ಅಸಮ ಅಂತರದಿಂದಾಗಿ ಮತ್ತು ಅದರ ಬೆಳವಣಿಗೆಯ ಏರುಪೇರಿನ ಸ್ವಭಾವದಿಂದಾಗಿ, ವಿವಿಧ ಹಂತಗಳಲ್ಲಿ ಕೊಯ್ಲು ಸಂಭವಿಸಬಹುದು.

ಬೇರುಗಳು 3 – 5 ಸೆಂ.ಮೀ ವ್ಯಾಸಕ್ಕೆ ಬಂದಾಗ, ಬೀಟ್ ರೂಟ್ ಬೆಳೆಗಳನ್ನು ಕೊಯ್ಲು ಮಾಡಬೇಕು ಮತ್ತು ಬೇರುಗಳೊಳಗೆ ಸ್ಪಂಜಿನಂತಹ ಅಂಗಾಂಶವು ಅಭಿವೃದ್ಧಿಗೊಳ್ಳುವ ಮೊದಲೇ ಕೊಯ್ಲು ಮಾಡಬೇಕು. ಕೊಯ್ಲು ಮಾಡುವಲ್ಲಿ ತಡಮಾಡಿದರೆ, ಹೆಚ್ಚು ಪಕ್ವತೆಗೆ ಕಾರಣವಾಗುತ್ತದೆ ಮತ್ತು ಈ ಅತಿ ದಪ್ಪವಾದ ಬೇರುಗಳು ಮರದಂತಿರುತ್ತವೆ ಮತ್ತು ಬಿರುಕು ಬಿಡುತ್ತವೆ.

ಮಾರ್ಪಡಿಸಿದ ಬೀಟ್ ರೂಟ್ ಅನ್ನು, ಕೈಯಿಂದ ಅಥವಾ ಯಾಂತ್ರಿಕವಾಗಿ, ಕೊಯ್ಲು ಯಂತ್ರಗಳನ್ನು ಬಳಸಿ ಕೊಯ್ಲು ಮಾಡಬಹುದು, ಆದರೆ ಸಾಮಾನ್ಯವಾಗಿ, ಬೇರುಗಳಿಗೆ ಗಾಯವಾಗುವುದನ್ನು ತಪ್ಪಿಸಲು, ಸಸ್ಯಗಳನ್ನು ತಿರುಚಿ, ಕೈಯಿಂದ ಎಳೆಯುವ ಮೂಲಕ, ಕೊಯ್ಲು ಮಾಡಲಾಗುತ್ತದೆ, ಅನಂತರ ಮೇಲ್ಭಾಗಗಳನ್ನು ತೆಗೆದುಹಾಕಲಾಗುತ್ತದೆ.     

 

Recent Posts

ಪ್ರಧಾನ ಮಂತ್ರಿಗಳ ಕೇಂದ್ರ ಪ್ರಾಯೋಜಿತ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ

ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯು (PMFME) 2020 ರಲ್ಲಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ (MoFPI) ಪ್ರಾರಂಭಿಸಿದ ಒಂದು ಉಪಕ್ರಮವಾಗಿದೆ. ಈ ದೂರದೃಷ್ಟಿಯ ಯೋಜನೆಯನ್ನು…

July 17, 2024

ಸೈನಿಕ ಹುಳು: ಜೋಳದ ಬೆಳೆಯಲ್ಲಿ ವಿನಾಶಕಾರಿ ಕೀಟ

ಸಾಮಾನ್ಯವಾಗಿ ಸೈನಿಕ ಹುಳು ಎಂದು ಕರೆಯಲ್ಪಡುವ ಸ್ಪೋಡೋಪ್ಟೆರಾ ಫ್ರುಗಿಪರ್ಡಾ ಪ್ರಪಂಚದಾದ್ಯಂತದ ಬೆಳೆಗಳ ಮೇಲೆ ಹೆಚ್ಚು ಆಕ್ರಮಣಕಾರಿ ಕೀಟಗಳಲ್ಲಿ ಪ್ರಮುಖವಾಗಿದ್ದು, ಮುಖ್ಯ ಬೆಳೆಗಳಿಗೆ ತೀವ್ರ  ನಷ್ಟವನ್ನು ಉಂಟುಮಾಡುತ್ತದೆ. ಇದು…

July 11, 2024

ಮೆಕ್ಕೆಜೋಳ: ನಾಟಿ ಮತ್ತು ಸುಧಾರಿತ ಬೇಸಾಯ ಕ್ರಮಗಳು

ಮೆಕ್ಕೆ ಜೋಳ (ಜಿಯಾ ಮೇಸ್ ಎಲ್.) ಹೆಚ್ಚು ಹೊಂದಿಕೊಳ್ಳಬಲ್ಲ ಬೆಳೆಗಳಲ್ಲಿ ಒಂದಾಗಿದೆ, ಇದು ವ್ಯಾಪಕ ಶ್ರೇಣಿಯ ಕೃಷಿ-ಹವಾಮಾನ ಪರಿಸ್ಥಿತಿಗಳಲ್ಲಿ ಬೆಳೆಯಲು ಸಾಧ್ಯವಾಗುತ್ತದೆ. ಇದು ಎಲ್ಲಾ ಧಾನ್ಯಗಳಿಗಿಂತ ದೊಡ್ಡ…

June 28, 2024

ಸಮೃದ್ಧ ಕೊಯ್ಲಿಗೆ ಪಪ್ಪಾಯಿ ಕೃಷಿ ಪದ್ಧತಿಗಳು

ಪಪ್ಪಾಯಿ (ಕಾರಿಕಾ ಪಪ್ಪಾಯಿ) ಒಂದು ಉಷ್ಣವಲಯದ ಹಣ್ಣಾಗಿದ್ದು, ಅಡುಗೆಮನೆಯ ತೋಟಗಳಲ್ಲಿ ಬೆಳೆಯಲು ಸೂಕ್ತವಾಗಿದೆ. ಪಪ್ಪಾಯಿಯು ವಿಟಮಿನ್ ಸಿ, ವಿಟಮಿನ್ ಎ, ಖನಿಜಗಳು ಮತ್ತು ಪೊಟ್ಯಾಸಿಯಮ್ನಂತಹ ಪೋಷಕಾಂಶಗಳ ಸಮೃದ್ಧ…

June 24, 2024

ಸಾಫ್ಟ್ ರೊಟ್ ರೋಗ ಭೀತಿ: ಶುಂಠಿಯನ್ನು ವಿನಾಶದಿಂದ ರಕ್ಷಿಸುವುದು

ಶುಂಠಿಯು ಹೆಚ್ಚು ಬೇಡಿಕೆಯಿರುವ ಮಸಾಲೆ ಬೆಳೆಯಾಗಿದ್ದು, 2022 ರಲ್ಲಿ ಭಾರತವು ಸುಮಾರು 2.12 ಮಿಲಿಯನ್ ಮೆಟ್ರಿಕ್ ಟನ್‌ಗಳನ್ನು ಉತ್ಪಾದಿಸುತ್ತದೆ ಎಂದು ನಿಮಗೆ ತಿಳಿದಿದೆಯೇ?  ಆದಾಗ್ಯೂ, ಸಾಫ್ಟ್ ರೊಟ್…

June 19, 2024

ಸೋಯಾಬೀನ್: ನಾಟಿ ಮತ್ತು ಕೃಷಿ ಅಭ್ಯಾಸಗಳು

ಹೆಚ್ಚಿನ ಪ್ರೊಟೀನ್ ಮತ್ತು ಎಣ್ಣೆಯ ಅಂಶದಿಂದಾಗಿ ಸೋಯಾಬೀನ್ ಅನ್ನು ಗೋಲ್ಡನ್ ಬೀನ್ ಅಥವಾ ಮಿರಾಕಲ್ ಕ್ರಾಪ್ ಎಂದೂ ಕರೆಯಲಾಗುತ್ತದೆ. ಸೋಯಾಬೀನ್ ಚೀನಾದಲ್ಲಿ ಹುಟ್ಟಿಕೊಂಡ ದ್ವಿದಳ ಧಾನ್ಯದ ವಿಧ.…

June 17, 2024