Crop

ಬೆಳೆಯಲ್ಲಿ ಬಿಳಿ ಹಿಟ್ಟು ತಿಗಣೆಗಳನ್ನು ಮನೆಯಲ್ಲಿಯೇ ನಿಯಂತ್ರಿಸಿ

ಹಿಟ್ಟು ತಿಗಣೆಗಳು ಬೆಚ್ಚನೆ ವಾತಾವರಣದಲ್ಲಿ ಕಂಡುಬರುವ, ಮೃದು-ದೇಹದ, ರೆಕ್ಕೆಗಳಿಲ್ಲದ ಕೀಟಗಳಾಗಿದ್ದು, ಅವು ಸಾಮಾನ್ಯವಾಗಿ ಎಲೆ, ಕಾಂಡ ಮತ್ತು ಸಸ್ಯಗಳ ಹಣ್ಣುಗಳ ಮೇಲೆ ಬಿಳಿ ಹತ್ತಿಯ ರಾಶಿಯಂತೆ ಕಂಡುಬರುತ್ತವೆ. ಕಡಿಮೆ ದಾಳಿಯ  ಮಟ್ಟದಲ್ಲಿ ಹಾನಿಯು ಸಾಮಾನ್ಯವಾಗಿ ಗಮನಾರ್ಹವಲ್ಲ. ಆದಾಗ್ಯೂ, ಹೆಚ್ಚಿನ ಸಂಖ್ಯೆಯಲ್ಲಿ ಅವು ಎಲೆಗಳ ಹಳದಿ ಬಣ್ಣಕ್ಕೆ ಕಾರಣವಾಗಬಹುದು, ಹಾಗಾಗಿ ಸಸ್ಯವು ದುರ್ಬಲಗೊಳ್ಳುತ್ತದೆ. ಹಿಟ್ಟು ತಿಗಣೆಗಳು  ಸಾಮಾನ್ಯ ಹಸಿರುಮನೆ ಕೀಟವಾಗಿದ್ದು ಅದು ಅಲಂಕಾರಿಕ ಸಸ್ಯಗಳು, ಮನೆ ಗಿಡಗಳು ಮತ್ತು ಹಣ್ಣುಗಳ ಮೇಲೆ ಪರಿಣಾಮ ಬೀರುತ್ತದೆ.

ಬೇಕಿರುವ ಸಾಮಾಗ್ರಿಗಳು : 

  • ನೀರು
  • ಬೇವಿನ ಎಣ್ಣೆ ಅಥವಾ ಎಲೆ
  • ಹಲ್ಲುಜ್ಜುವ ಬ್ರಷ್
  • ಸೀಮೆಎಣ್ಣೆ
  • ಸೋಪಿನ ದ್ರಾವಣ

ಮೊದಲನೆಯದಾಗಿ ಬೆಳೆಗಳ ಮೇಲೆ ಕೀಟಗಳನ್ನು ಪತ್ತೆಹಚ್ಚುವುದು: 

  • ನಿಯಮಿತವಾಗಿ ನಿಮ್ಮ ಬೆಳೆಯನ್ನು ಪರೀಕ್ಷಿಸುತ್ತಿರಬೇಕು.ಮೊದಲನೆಯದಾಗಿ, ನಿಮ್ಮ ಬೆಳೆಯಲ್ಲಿ ಬಿಳಿ ಹಿಟ್ಟು ತಿಗಣೆಗಳು  ಕಂಡುಬಂದರೆ, ಅವುಗಳು ಮೊದಲಿಗೆ ಎಲೆಯ ಕೆಳಭಾಗದಲ್ಲಿ ಗುಂಪುಗಳಲ್ಲಿ  ಕಂಡುಬರುತ್ತವೆ, ಇದನ್ನು ನಿವಾರಿಸಲು ಮನೆಯಲ್ಲಿ ತಯಾರಿಸಿದ ಔಷಧಿಗಳನ್ನು ಬಳಸಿ ಹಿಟ್ಟುತಿಗಣಗಳನ್ನು ನಿಯಂತ್ರಿಸಬಹದು.

ಹಾಗಿದ್ದಲ್ಲಿ ಮನೆಯಲ್ಲಿಯೇ ತಯಾರಿಸಬಹುದಾದ ಔಷಧಿಗಳ ಬಗ್ಗೆ ತಿಳಿಯೋಣವೇ? 

ಬೇವಿನ ಎಣ್ಣೆಯನ್ನು ಸಿಂಪಡಿಸುವುದು

ಬೆಳೆಯಲ್ಲಿ ಕಂಡುಬರುವ ಕೀಟದ ಪರಿಣಾಮವು ಹೆಚ್ಚಾಗಿದ್ದರೆ, ಬೇವಿನ ಎಣ್ಣೆ ಮತ್ತು ಬೇವಿನ ಎಲೆಯನ್ನು ನೀರಿನಲ್ಲಿ ನಲವತ್ತೆಂಟು ಗಂಟೆಗಳು ನೆನೆಸಿ ಹಾಗೂ ಸಿಂಪಡಿಸುವ ಅರ್ಧ ಗಂಟೆ ಮುಂಚಿತವಾಗಿ ಎಲೆಗಳನ್ನು ನೀರಿನಿಂದ ತೆಗೆದು ನೀರನ್ನು ಬಸಿದು ನೀರಿನ   ದ್ರಾವಣವನ್ನು ತಯಾರಿಸಿ ಸಿಂಪಡಿಸಬಹುದು, ಇದನ್ನು ಸಿಂಪಡಿಸುವುದರಿಂದ ಬಿಳಿ ಹಿಟ್ಟು ತಿಗಣೆಯನ್ನು ತಡೆಯಬಹುದು ಬೇವಿನಲ್ಲಿರುವ ಆಂಟಿ-ಆಕ್ಸಿಡೆಂಟ್ ಗುಣಗಳು ಕೀಟಗಳನ್ನು ಕೊಲ್ಲಲು ಮತ್ತು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿದೆ.

ಹಲ್ಲುಜ್ಜುವ ಬ್ರಷ್ನೊಂದಿಗೆ  ಹುಳುಗಳನ್ನು ಸ್ವಚ್ಛಗೊಳಿಸುವುದು

ಬೆಳೆಗಳ ಮೇಲೆ ಕೀಟಗಳು  ಕಾಣಿಸಿಕೊಂಡಾಗ, ಯಾವುದೇ ಕೀಟನಾಶಕವನ್ನು ಸಿಂಪಡಿಸುವ ಮೊದಲು ಬಿಳಿ ಹಿಟ್ಟು ತಿಗಣೆಗಳ ಗುಂಪುಗಳನ್ನು ಹಲ್ಲುಜ್ಜುವ ಬ್ರಷ್‌ನಿಂದ ಕೀಟಗಳ ಸಮೂಹವನ್ನು ಸ್ವಚ್ಛಗೊಳಿಸಬೇಕು. ಹೀಗೆ ಮಾಡುವುದರಿಂದ ಸುಮಾರು 70 ರಿಂದ 80 ಪ್ರತಿಶತದಷ್ಟು ಬಿಳಿ ಹಿಟ್ಟು ತಿಗಣೆಗಳನ್ನು ನಿಯಂತ್ರಿಸಬಹುದು.

ಸೀಮೆಎಣ್ಣೆ ಸಿಂಪಡಿಸಿ

ಸೀಮೆ ಎಣ್ಣೆಯಲ್ಲಿಯೂ ಕೂಡ ವಿವಿಧ ಆಂಟಿ-ಆಕ್ಸಿಡೆಂಟ್ಗಳು  ಇರುವುದರಿಂದ, ಇದನ್ನು2 ಮಿಲಿ ಪ್ರತೀ 1  ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುವುದರಿಂದ ಬಿಳಿ ಹಿಟ್ಟು ತಿಗಣೆಗಳಿಂದ  ಬೆಳೆಯನ್ನು ರಕ್ಷಿಸುತ್ತದೆ.

ಸೋಪ್ ದ್ರಾವಣವನ್ನು ಸಿಂಪಡಿಸಿ

10  ಹನಿ ಸೋಪ್ ದ್ರಾವಣವನ್ನು1 ಲೀಟರ್ ನೀರಿನಲ್ಲಿ ಬೆರೆಸಿ ಸೋಂಕಿತ ಗಿದಗಳಿಗೆ ಬೆರೆಸಿ ಸಿಂಪಡಿಸಿದರೆ ಬಿಳಿ ಹಿಟ್ಟು ತಿಗಣೆಗಳನ್ನು ನಿಯಂತ್ರಿಸಬಹುದು. 

ಕಾಕ್ಟೇಲ್ ವಿಧಾನ : 

1/2 ಲೀಟರ್ ನೀರಿಗೆ + 1 ಚಮಚ ಬೇವಿನ ಎಣ್ಣೆ + 250 ಮಿಲಿ ಐಸೊಪ್ರೊಪೈಲ್ ಎಥನಾಲ್ + 10 ಹನಿ ಸೋಪಿನ ದ್ರಾವಣವನ್ನು ಬೆರೆಸಿ  ಸಿಂಪಡಿಸಿದರೆ ಹೆಚ್ಚು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು. 

ಈ ಎಲ್ಲಾ ವಿಧಾನಗಳನ್ನು ಅನುಸರಿಸಿ ಹಿಟ್ಟು ತಿಗಣೆಗಳಿಂದ ಸೋಂಕಿತ ಗೊಂಡಿರುವ ಬೆಳೆಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿರಿ. ಯಾವುದೇ ವಿಧಾನವನ್ನು ಮೊದಲು ಒಂದು ಗಿಡದ ಮೇಲೆ ಪ್ರಯೋಗಿಸಿದ ನಂತರ ಎಲ್ಲ ಸೋಂಕಿತ ಗಿಡಗಳ ಮೇಲೆ ಸಿಂಪಡಿಸುವುದನ್ನು ಅನುಸರಿಸಿ. 

Recent Posts

ಪ್ರಧಾನ ಮಂತ್ರಿಗಳ ಕೇಂದ್ರ ಪ್ರಾಯೋಜಿತ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ

ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯು (PMFME) 2020 ರಲ್ಲಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ (MoFPI) ಪ್ರಾರಂಭಿಸಿದ ಒಂದು ಉಪಕ್ರಮವಾಗಿದೆ. ಈ ದೂರದೃಷ್ಟಿಯ ಯೋಜನೆಯನ್ನು…

July 17, 2024

ಸೈನಿಕ ಹುಳು: ಜೋಳದ ಬೆಳೆಯಲ್ಲಿ ವಿನಾಶಕಾರಿ ಕೀಟ

ಸಾಮಾನ್ಯವಾಗಿ ಸೈನಿಕ ಹುಳು ಎಂದು ಕರೆಯಲ್ಪಡುವ ಸ್ಪೋಡೋಪ್ಟೆರಾ ಫ್ರುಗಿಪರ್ಡಾ ಪ್ರಪಂಚದಾದ್ಯಂತದ ಬೆಳೆಗಳ ಮೇಲೆ ಹೆಚ್ಚು ಆಕ್ರಮಣಕಾರಿ ಕೀಟಗಳಲ್ಲಿ ಪ್ರಮುಖವಾಗಿದ್ದು, ಮುಖ್ಯ ಬೆಳೆಗಳಿಗೆ ತೀವ್ರ  ನಷ್ಟವನ್ನು ಉಂಟುಮಾಡುತ್ತದೆ. ಇದು…

July 11, 2024

ಮೆಕ್ಕೆಜೋಳ: ನಾಟಿ ಮತ್ತು ಸುಧಾರಿತ ಬೇಸಾಯ ಕ್ರಮಗಳು

ಮೆಕ್ಕೆ ಜೋಳ (ಜಿಯಾ ಮೇಸ್ ಎಲ್.) ಹೆಚ್ಚು ಹೊಂದಿಕೊಳ್ಳಬಲ್ಲ ಬೆಳೆಗಳಲ್ಲಿ ಒಂದಾಗಿದೆ, ಇದು ವ್ಯಾಪಕ ಶ್ರೇಣಿಯ ಕೃಷಿ-ಹವಾಮಾನ ಪರಿಸ್ಥಿತಿಗಳಲ್ಲಿ ಬೆಳೆಯಲು ಸಾಧ್ಯವಾಗುತ್ತದೆ. ಇದು ಎಲ್ಲಾ ಧಾನ್ಯಗಳಿಗಿಂತ ದೊಡ್ಡ…

June 28, 2024

ಸಮೃದ್ಧ ಕೊಯ್ಲಿಗೆ ಪಪ್ಪಾಯಿ ಕೃಷಿ ಪದ್ಧತಿಗಳು

ಪಪ್ಪಾಯಿ (ಕಾರಿಕಾ ಪಪ್ಪಾಯಿ) ಒಂದು ಉಷ್ಣವಲಯದ ಹಣ್ಣಾಗಿದ್ದು, ಅಡುಗೆಮನೆಯ ತೋಟಗಳಲ್ಲಿ ಬೆಳೆಯಲು ಸೂಕ್ತವಾಗಿದೆ. ಪಪ್ಪಾಯಿಯು ವಿಟಮಿನ್ ಸಿ, ವಿಟಮಿನ್ ಎ, ಖನಿಜಗಳು ಮತ್ತು ಪೊಟ್ಯಾಸಿಯಮ್ನಂತಹ ಪೋಷಕಾಂಶಗಳ ಸಮೃದ್ಧ…

June 24, 2024

ಸಾಫ್ಟ್ ರೊಟ್ ರೋಗ ಭೀತಿ: ಶುಂಠಿಯನ್ನು ವಿನಾಶದಿಂದ ರಕ್ಷಿಸುವುದು

ಶುಂಠಿಯು ಹೆಚ್ಚು ಬೇಡಿಕೆಯಿರುವ ಮಸಾಲೆ ಬೆಳೆಯಾಗಿದ್ದು, 2022 ರಲ್ಲಿ ಭಾರತವು ಸುಮಾರು 2.12 ಮಿಲಿಯನ್ ಮೆಟ್ರಿಕ್ ಟನ್‌ಗಳನ್ನು ಉತ್ಪಾದಿಸುತ್ತದೆ ಎಂದು ನಿಮಗೆ ತಿಳಿದಿದೆಯೇ?  ಆದಾಗ್ಯೂ, ಸಾಫ್ಟ್ ರೊಟ್…

June 19, 2024

ಸೋಯಾಬೀನ್: ನಾಟಿ ಮತ್ತು ಕೃಷಿ ಅಭ್ಯಾಸಗಳು

ಹೆಚ್ಚಿನ ಪ್ರೊಟೀನ್ ಮತ್ತು ಎಣ್ಣೆಯ ಅಂಶದಿಂದಾಗಿ ಸೋಯಾಬೀನ್ ಅನ್ನು ಗೋಲ್ಡನ್ ಬೀನ್ ಅಥವಾ ಮಿರಾಕಲ್ ಕ್ರಾಪ್ ಎಂದೂ ಕರೆಯಲಾಗುತ್ತದೆ. ಸೋಯಾಬೀನ್ ಚೀನಾದಲ್ಲಿ ಹುಟ್ಟಿಕೊಂಡ ದ್ವಿದಳ ಧಾನ್ಯದ ವಿಧ.…

June 17, 2024