ಹಿಟ್ಟು ತಿಗಣೆಗಳು ಬೆಚ್ಚನೆ ವಾತಾವರಣದಲ್ಲಿ ಕಂಡುಬರುವ, ಮೃದು-ದೇಹದ, ರೆಕ್ಕೆಗಳಿಲ್ಲದ ಕೀಟಗಳಾಗಿದ್ದು, ಅವು ಸಾಮಾನ್ಯವಾಗಿ ಎಲೆ, ಕಾಂಡ ಮತ್ತು ಸಸ್ಯಗಳ ಹಣ್ಣುಗಳ ಮೇಲೆ ಬಿಳಿ ಹತ್ತಿಯ ರಾಶಿಯಂತೆ ಕಂಡುಬರುತ್ತವೆ. ಕಡಿಮೆ ದಾಳಿಯ ಮಟ್ಟದಲ್ಲಿ ಹಾನಿಯು ಸಾಮಾನ್ಯವಾಗಿ ಗಮನಾರ್ಹವಲ್ಲ. ಆದಾಗ್ಯೂ, ಹೆಚ್ಚಿನ ಸಂಖ್ಯೆಯಲ್ಲಿ ಅವು ಎಲೆಗಳ ಹಳದಿ ಬಣ್ಣಕ್ಕೆ ಕಾರಣವಾಗಬಹುದು, ಹಾಗಾಗಿ ಸಸ್ಯವು ದುರ್ಬಲಗೊಳ್ಳುತ್ತದೆ. ಹಿಟ್ಟು ತಿಗಣೆಗಳು ಸಾಮಾನ್ಯ ಹಸಿರುಮನೆ ಕೀಟವಾಗಿದ್ದು ಅದು ಅಲಂಕಾರಿಕ ಸಸ್ಯಗಳು, ಮನೆ ಗಿಡಗಳು ಮತ್ತು ಹಣ್ಣುಗಳ ಮೇಲೆ ಪರಿಣಾಮ ಬೀರುತ್ತದೆ.
ಬೇಕಿರುವ ಸಾಮಾಗ್ರಿಗಳು :
ಮೊದಲನೆಯದಾಗಿ ಬೆಳೆಗಳ ಮೇಲೆ ಕೀಟಗಳನ್ನು ಪತ್ತೆಹಚ್ಚುವುದು:
ಹಾಗಿದ್ದಲ್ಲಿ ಮನೆಯಲ್ಲಿಯೇ ತಯಾರಿಸಬಹುದಾದ ಔಷಧಿಗಳ ಬಗ್ಗೆ ತಿಳಿಯೋಣವೇ?
ಬೇವಿನ ಎಣ್ಣೆಯನ್ನು ಸಿಂಪಡಿಸುವುದು
ಬೆಳೆಯಲ್ಲಿ ಕಂಡುಬರುವ ಕೀಟದ ಪರಿಣಾಮವು ಹೆಚ್ಚಾಗಿದ್ದರೆ, ಬೇವಿನ ಎಣ್ಣೆ ಮತ್ತು ಬೇವಿನ ಎಲೆಯನ್ನು ನೀರಿನಲ್ಲಿ ನಲವತ್ತೆಂಟು ಗಂಟೆಗಳು ನೆನೆಸಿ ಹಾಗೂ ಸಿಂಪಡಿಸುವ ಅರ್ಧ ಗಂಟೆ ಮುಂಚಿತವಾಗಿ ಎಲೆಗಳನ್ನು ನೀರಿನಿಂದ ತೆಗೆದು ನೀರನ್ನು ಬಸಿದು ನೀರಿನ ದ್ರಾವಣವನ್ನು ತಯಾರಿಸಿ ಸಿಂಪಡಿಸಬಹುದು, ಇದನ್ನು ಸಿಂಪಡಿಸುವುದರಿಂದ ಬಿಳಿ ಹಿಟ್ಟು ತಿಗಣೆಯನ್ನು ತಡೆಯಬಹುದು ಬೇವಿನಲ್ಲಿರುವ ಆಂಟಿ-ಆಕ್ಸಿಡೆಂಟ್ ಗುಣಗಳು ಕೀಟಗಳನ್ನು ಕೊಲ್ಲಲು ಮತ್ತು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿದೆ.
ಹಲ್ಲುಜ್ಜುವ ಬ್ರಷ್ನೊಂದಿಗೆ ಹುಳುಗಳನ್ನು ಸ್ವಚ್ಛಗೊಳಿಸುವುದು
ಬೆಳೆಗಳ ಮೇಲೆ ಕೀಟಗಳು ಕಾಣಿಸಿಕೊಂಡಾಗ, ಯಾವುದೇ ಕೀಟನಾಶಕವನ್ನು ಸಿಂಪಡಿಸುವ ಮೊದಲು ಬಿಳಿ ಹಿಟ್ಟು ತಿಗಣೆಗಳ ಗುಂಪುಗಳನ್ನು ಹಲ್ಲುಜ್ಜುವ ಬ್ರಷ್ನಿಂದ ಕೀಟಗಳ ಸಮೂಹವನ್ನು ಸ್ವಚ್ಛಗೊಳಿಸಬೇಕು. ಹೀಗೆ ಮಾಡುವುದರಿಂದ ಸುಮಾರು 70 ರಿಂದ 80 ಪ್ರತಿಶತದಷ್ಟು ಬಿಳಿ ಹಿಟ್ಟು ತಿಗಣೆಗಳನ್ನು ನಿಯಂತ್ರಿಸಬಹುದು.
ಸೀಮೆಎಣ್ಣೆ ಸಿಂಪಡಿಸಿ
ಸೀಮೆ ಎಣ್ಣೆಯಲ್ಲಿಯೂ ಕೂಡ ವಿವಿಧ ಆಂಟಿ-ಆಕ್ಸಿಡೆಂಟ್ಗಳು ಇರುವುದರಿಂದ, ಇದನ್ನು2 ಮಿಲಿ ಪ್ರತೀ 1 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುವುದರಿಂದ ಬಿಳಿ ಹಿಟ್ಟು ತಿಗಣೆಗಳಿಂದ ಬೆಳೆಯನ್ನು ರಕ್ಷಿಸುತ್ತದೆ.
ಸೋಪ್ ದ್ರಾವಣವನ್ನು ಸಿಂಪಡಿಸಿ
10 ಹನಿ ಸೋಪ್ ದ್ರಾವಣವನ್ನು1 ಲೀಟರ್ ನೀರಿನಲ್ಲಿ ಬೆರೆಸಿ ಸೋಂಕಿತ ಗಿದಗಳಿಗೆ ಬೆರೆಸಿ ಸಿಂಪಡಿಸಿದರೆ ಬಿಳಿ ಹಿಟ್ಟು ತಿಗಣೆಗಳನ್ನು ನಿಯಂತ್ರಿಸಬಹುದು.
ಕಾಕ್ಟೇಲ್ ವಿಧಾನ :
1/2 ಲೀಟರ್ ನೀರಿಗೆ + 1 ಚಮಚ ಬೇವಿನ ಎಣ್ಣೆ + 250 ಮಿಲಿ ಐಸೊಪ್ರೊಪೈಲ್ ಎಥನಾಲ್ + 10 ಹನಿ ಸೋಪಿನ ದ್ರಾವಣವನ್ನು ಬೆರೆಸಿ ಸಿಂಪಡಿಸಿದರೆ ಹೆಚ್ಚು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು.
ಈ ಎಲ್ಲಾ ವಿಧಾನಗಳನ್ನು ಅನುಸರಿಸಿ ಹಿಟ್ಟು ತಿಗಣೆಗಳಿಂದ ಸೋಂಕಿತ ಗೊಂಡಿರುವ ಬೆಳೆಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿರಿ. ಯಾವುದೇ ವಿಧಾನವನ್ನು ಮೊದಲು ಒಂದು ಗಿಡದ ಮೇಲೆ ಪ್ರಯೋಗಿಸಿದ ನಂತರ ಎಲ್ಲ ಸೋಂಕಿತ ಗಿಡಗಳ ಮೇಲೆ ಸಿಂಪಡಿಸುವುದನ್ನು ಅನುಸರಿಸಿ.
ಕೃಷಿಯಲ್ಲಿ, ದಕ್ಷತೆ ಮತ್ತು ಉತ್ಪಾದಕತೆ ಯಾವಾಗಲೂ ಮುಖ್ಯವಾಗಿರುತ್ತದೆ. ಈಗ ನಾವು ನಿಮಗೆ ನಿಮ್ಮ ನೀರಿನ ಸ್ಥಿತಿ, ನಿಮ್ಮ ಸಸ್ಯ ಸಂರಕ್ಷಣಾ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸುವ…
ಇತ್ತೀಚಿನ ಆಧುನಿಕ ಕೃಷಿಯಲ್ಲಿ ಸಮರ್ಥ ನೀರಿನ ನಿರ್ವಹಣೆ ಮಾಡುವುದು ನಿರ್ಣಾಯಕವಾಗಿದೆ ಮತ್ತು ಹನಿ ನೀರಾವರಿ ಪದ್ದತಿಯು ನೇರವಾಗಿ ಬೇರುಗಳ ವಲಯವನ್ನು ಗುರಿಯಾಗಿಸಿಕೊಂಡು ಸಸ್ಯಗಳಿಗೆ ನೀರನ್ನು ತಲುಪಿಸುವ ವಿಧಾನವನ್ನು…
ಸುಸ್ಥಿರ ಕೃಷಿ ಪದ್ದತಿಯಲ್ಲಿ ಸರಳವಾದ ಆದರೆ ಆಳವಾದ ವಿಷಯವೇನೆಂದರೆ ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವುದು. ಸಾವಯವ ಕೃಷಿ ತ್ಯಾಜ್ಯವು ನಮಗೆ ಹೊರೆಯಾಗಿರದೆ ಮಣ್ಣನ್ನು ಸಮೃದ್ಧಗೊಳಿಸುವ, ಸಸ್ಯಗಳನ್ನು ಪೋಷಿಸುವ ಮತ್ತು…
ಇತ್ತೀಚೆಗೆ ಬದಲಾಗುತ್ತಿರುವ ಕೃಷಿ ಭೂದೃಶ್ಯದ ಕಾರಣವಾಗಿ, ಸಮರ್ಥನೀಯ ಮತ್ತು ಸಮರ್ಥ ಕೃಷಿ ವಿಧಾನಗಳನ್ನು ಕಂಡುಹಿಡಿಯುವುದು ನಿರ್ಣಾಯಕವಾಗಿದೆ. ಅದಕ್ಕಾಗಿಯೇ ಪರಿಚಯಿಸುತ್ತಿದ್ದೇವೆ, ಎಪಿಸೆಲ್! ಎಕ್ಸೆಲ್ ಇಂಡಸ್ಟ್ರೀಸ್ ರವರ ಈ ನವೀನ…
ನೀರು ಕೃಷಿಯಲ್ಲಿ ಮೂಲಭೂತ ಸಂಪನ್ಮೂಲವಾಗಿದ್ದು, ಬೆಳೆಗಳ ವೃದ್ಧಿಗಾಗಿ ಅಗತ್ಯ ಪೋಷಕಾಂಶಗಳ ಮತ್ತು ಬೆಳೆ ರಕ್ಷಣೆಗೆ ಅಗತ್ಯವಾದ ರಾಸಾಯನಿಕಗಳನ್ನು ಸಾಗಿಸುವಲ್ಲಿ ವಾಹಕವಾಗಿ ಕಾರ್ಯನಿರ್ವಹಿಸುತ್ತದೆ . ಆದಾಗ್ಯೂ, ಕಳೆನಾಶಕಗಳು, ಕೀಟನಾಶಕಗಳು,…
ಹನಿ ನೀರಾವರಿ ವ್ಯವಸ್ಥೆ ಆಧುನಿಕ ಕೃಷಿಯ ಅತ್ಯಗತ್ಯ ಅಂಶವಾಗಿದೆ. ಇದು ಸಸ್ಯಗಳ ಬೇರುಗಳಿಗೆ ನೇರವಾಗಿ ನೀರನ್ನು ತಲುಪಿಸುವ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಈ ವಿಧಾನವು ನೀರನ್ನು ಸಂರಕ್ಷಿಸುವುದು…