Crop

ಸಜ್ಜೆ (ಬಾಜ್ರ ) ಸಿರಿಧಾನ್ಯದ ಸುಧಾರಿತ ಬೇಸಾಯ ಕ್ರಮಗಳು

 ವ್ಯಾಪಕವಾಗಿ ಬೆಳೆಯುವ ಒಂದು ಬೆಳೆಯಾಗಿದೆ.  ಸಜ್ಜೆ (ಬಾಜ್ರ) ಬರವನ್ನು  ಸಹಿಸಿಕೊಳ್ಳಬಲ್ಲದು, ಅದಕ್ಕಾಗಿಯೇ ಕಡಿಮೆ ಮಳೆ ಪ್ರದೇಶದಲ್ಲಿ  ಚೆನ್ನಾಗಿ ಬೆಳೆಯಲಾಗುತ್ತದೆ. ಭಾರತವು ಸಜ್ಜೆಯ ಅತಿದೊಡ್ಡ ಉತ್ಪಾದಕ. ಇದನ್ನು ಮೇವಿನ ಉದ್ದೇಶಕ್ಕಾಗಿ ಬಳಸಲಾಗುತ್ತದೆ ಹಾಗೂ ಇದನ್ನು ಆಹಾರವಾಗಿಯೂ ಉಪಯೋಗಿಸಲಾಗುತ್ತದೆ. ಇದರ ಕಾಂಡವನ್ನು ಪ್ರಾಣಿಗಳಿಗೆ ಆಹಾರಕ್ಕಾಗಿ ಹಿಂಡಿಯ ರೀತಿ  ಬಳಸಲಾಗುತ್ತದೆ. 

ಸಜ್ಜೆಗೆ ಸೂಕ್ತವಾದ  ಮಣ್ಣು:

ಇದನ್ನು ಎಲ್ಲ ರೀತಿಯ  ಮಣ್ಣಿನಲ್ಲಿ ಬೆಳೆಯಲಾಗುತ್ತದೆ, ನೀರು ಮತ್ತು ಮರಳು ಮಿಶ್ರಿತ ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ.

ಬಿತ್ತನೆ ಮಾಡಬೇಕಾದ ಸಮಯ

ಜುಲೈ ಆರಂಭದಲ್ಲಿ ಬಿತ್ತನೆ ಮಾಡಬೇಕು ಮತ್ತು ಮಳೆ ಹೆಚ್ಚಿರುವ  ಪ್ರದೇಶಗಳಲ್ಲಿ ಜುಲೈ ಕೊನೆಯ ವಾರದಲ್ಲಿ ಬಿತ್ತನೆ ಮಾಡಬೇಕು.

ಅನುಸರಿಸಬೇಕಾದ ಅಂತರ

ಸಾಲಿನಿಂದ ಸಾಲಿಗೆ 50 ಸೆಂ.ಮೀ ಅಂತರವನ್ನು  ಮತ್ತು ಗಿಡದಿಂದ ಗಿಡಕ್ಕೆ  15 ಸೆಂ.ಮೀ ಅಂತರದಲ್ಲಿ  ಬಿತ್ತಬೇಕು.

ಬೀಜಗಳ  ಪ್ರಮಾಣ :

ಸುಧಾರಿತ ತಳಿಗಳ, ಬಿತ್ತನೆಗಾಗಿ 1.5 ಕೆಜಿ/ಎಕರೆಗೆ  ಬಳಸಬೇಕು. 

ಬೀಜೋಪಚಾರ:

ಬೀಜದಿಂದ ಮತ್ತು ಮಣ್ಣಿನಿಂದ ಬರುವಂಥ ಕಾಯಿಲೆಗಳಿಂದ  ರಕ್ಷಿಸಲು, ಬೀಜಗಳನ್ನು 20% ಉಪ್ಪಿನ ದ್ರಾವಣದಲ್ಲಿ ಐದು ನಿಮಿಷಗಳ ಕಾಲ ಅದ್ದಿ.  ನೀರಿನ ಮೇಲೆ ತೇಲುತ್ತಿರುವ ಬೀಜಗಳನ್ನು ತೆಗೆದುಹಾಕಿ, ನಾಶಮಾಡಿ ಮತ್ತು ಉಳಿದ ಬೀಜಗಳನ್ನು ಶುದ್ಧ ನೀರಿನಿಂದ ತೊಳೆಯಿರಿ. ಸಜ್ಜೆ ಬೀಜಗಳನ್ನು ಥೈರಾಮ್  @ 3 ಗ್ರಾಂ / ಕೆಜಿ ಬೀಜಗಳೊಂದಿಗೆ ಅಥವಾ ಕ್ಲೋರ್‌ಪೈರಿಫಾಸ್ 20 ಇಸಿ @ 4 ಮಿಲಿ / ಕೆಜಿ ಬೀಜಗಳೊಂದಿಗೆ ಬೀಜೋಪಚಾರ ಮಾಡಬೇಕು. 

ರಸಗೊಬ್ಬರದ ಅವಶ್ಯಕತೆ (ಕೆಜಿ/ಎಕರೆ)

 ಯೂರಿಯಾ                                ಡಿಎಪಿ ಅಥವಾ ಎಸ್ಎಸ್ಪಿ                       ಎಂಒಪಿ

ಗೋಡು  ಮಣ್ಣಿಗೆ

           90                                       55 ಅಥವಾ 150                                  –

ಮರಳು ಮಣ್ಣಿಗೆ

           55                                         27 ಅಥವಾ 75                                 –

 ಪೌಷ್ಟಿಕಾಂಶದ ಅವಶ್ಯಕತೆ (ಕೆಜಿ/ಎಕರೆ)

                              ಸಾರಜನಕ             ರಂಜಕ                     ಪೊಟ್ಯಾಸಿಯಮ್

ಗೋಡು  ಮಣ್ಣಿಗೆ           40                      24                                   –

ಮರಳು ಮಣ್ಣಿಗೆ            25                       12                                   –

ಕೀಟಗಳು ಮತ್ತು ಅವುಗಳ ನಿಯಂತ್ರಣ:

ಬೇರು ಗಂಟು  ಹುಳು: ತೀವ್ರತೆ ಕಂಡುಬಂದಲ್ಲಿ, ಮಿಥೈಲ್ ಪ್ಯಾರಾಥಿಯಾನ್ 2% @10kg/ಎಕರೆಗೆ ಧೂಳೀಕರಣವನ್ನು ಮಾಡಿ ನಿಯಂತ್ರಿಸಬಹುದು. 

ನೀಲಿ ಜೀರುಂಡೆಗಳು: ನೀಲಿ ಜೀರುಂಡೆಗಳನ್ನು ನಿಯಂತ್ರಿಸಲು ಪ್ರತಿ ಎಕರೆಗೆ 1.5% ಕ್ವಿನಾಲ್ಫಾಸ್ @ 250 ಮಿಲಿ ಪ್ರತೀ ಎಕರೆಗೆ  ಸಿಂಪಡಿಸಿ.

ರೋಗಗಳು ಮತ್ತು ಅವುಗಳ ನಿಯಂತ್ರಣ:

ಬೂಜು ತುಪ್ಪಟ ರೋಗ :

ತೀವ್ರತೆ ಕಂಡುಬಂದಲ್ಲಿ, ಎಲೆಗಳ ಮೇಲಿನ ಮತ್ತು ಕೆಳಗಿನ ಎರಡೂ ಭಾಗಗಳಲ್ಲಿ ಬಿಳಿ ಬೆಳವಣಿಗೆ ಕಾಣಿಸಿಕೊಳ್ಳುತ್ತದೆ. ತೆನೆ ಎಲೆಗಳಾಗಿ ರೂಪಾಂತರಗೊಳ್ಳುತ್ತದೆ. ಮೋಡ ಕವಿದ ವಾತಾವರಣದಲ್ಲಿ ಇದು ವೇಗವಾಗಿ ಹರಡುತ್ತದೆ.

ತೀವ್ರತೆ  ಕಂಡುಬಂದಲ್ಲಿ, ನಿಯಂತ್ರಿಸಲು ಮೆಟಾಲಾಕ್ಸಿಲ್ MZ@30gm/15Ltr ನೀರಿಗೆ ಬೆರೆಸಿ ಸಿಂಪಡಿಸಿ. ಅಗತ್ಯವಿದ್ದರೆ, 15 ದಿನಗಳ ಮಧ್ಯಂತರದೊಂದಿಗೆ ಸಿಂಪಡಿಸುವಿಕೆಯನ್ನು ಪುನರಾವರ್ತಿಸಿ.

ಸ್ಮಟ್:

ತಡೆಗಟ್ಟುವ ಕ್ರಮವಾಗಿ ಸ್ಮಟ್ ನಿರೋಧಕ ತಳಿಗಳನ್ನು ಬೆಳೆಯಿರಿ. ಸೋಂಕಿತ ಸಸ್ಯಗಳನ್ನು ತೆಗೆದುಹಾಕಿ ಮತ್ತು ಅವುಗಳನ್ನು ಹೊಲದಿಂದ ದೂರದಲ್ಲಿ ಸುಟ್ಟುಹಾಕಿ ಹಾಗೂ  ಮ್ಯಾಂಕೋಜೆಬ್ @2gm/Ltr ನೀರಿಗೆ ಬೆರೆಸಿ ಸಿಂಪಡಿಸಬೇಕು.

ತುಕ್ಕು ರೋಗ:

ಎಲೆಗಳ ಮೇಲೆ ಕೆಂಪು ಕಂದು ಬಣ್ಣದಿಂದ ಕೆಂಪು ಕಿತ್ತಳೆ ಬಣ್ಣದ ಕಲೆಗಳು ಕಾಣುತ್ತವೆ, ಸೋಂಕು ಕಂಡುಬಂದಲ್ಲಿ, ನಿಯಂತ್ರಿಸಲು ಮ್ಯಾಂಕೋಜೆಬ್ 75WP@2gm/Ltr ನೀರಿನಲ್ಲಿ ಬೆರೆಸಿ ಸಿಂಪಡಿಸಿ. ಅಗತ್ಯವಿದ್ದರೆ, 8 ದಿನಗಳ ಅಂತರದಲ್ಲಿ ಸಿಂಪಡಿಸುವಿಕೆಯನ್ನು ಪುನರಾವರ್ತಿಸಬಹುದು.

ಕೊಯ್ಲು

ಸಜ್ಜೆ (ಬಾಜ್ರ)ಯಲ್ಲಿ  ಸಾಕಷ್ಟು ತೇವಾಂಶವನ್ನು ಹೊಂದಿರುವ, ಬೆಳೆ ಕೊಯ್ಲಿಗೆ ಸಿದ್ಧವಾಗಿರುತ್ತದೆ. ಕುಡಗೋಲಿನ ಸಹಾಯದಿಂದ  ತೆನೆಗಳನ್ನು  ಕೊಯ್ಯಬೇಕು. ಕೆಲವು ರೈತರು ಕುಡುಗೋಲಿನಿಂದ ಸಂಪೂರ್ಣ ಗಿಡವನ್ನು ಕತ್ತರಿಸುತ್ತಾರೆ. ಕೊಯ್ಲು ಮಾಡಿದ ನಂತರ ಒಕ್ಕಣೆ ಮಾಡುವ  ಜಾಗದಲ್ಲಿ ತೆನೆಗಳನ್ನು  ಅಥವಾ  ಕಾಂಡಗಳನ್ನು  ಸಂಗ್ರಹಿಸಿ ನಾಲ್ಕರಿಂದ ಐದು  ದಿನಗಳವರೆಗೆ ಒಣಗಿಸಬೇಕು.

 

Recent Posts

ಸೆಲ್ ಜೆಲ್: ಆಧುನಿಕ ಕೃಷಿಗಾಗಿ ನೀರಿನ ಉತ್ತಮ ಸ್ಥಿತಿಯನ್ನು ರೂಪಿಸುವ ಕ್ರಾಂತಿಕಾರಿ ಉತ್ಪನ್ನ

ಕೃಷಿಯಲ್ಲಿ, ದಕ್ಷತೆ ಮತ್ತು ಉತ್ಪಾದಕತೆ ಯಾವಾಗಲೂ ಮುಖ್ಯವಾಗಿರುತ್ತದೆ. ಈಗ ನಾವು ನಿಮಗೆ ನಿಮ್ಮ ನೀರಿನ ಸ್ಥಿತಿ, ನಿಮ್ಮ ಸಸ್ಯ ಸಂರಕ್ಷಣಾ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸುವ…

January 28, 2025

ಎಕ್ಸ್‌ಸ್ಕೇಲೆಂಟ್ : ಡ್ರಿಪ್ ಕ್ಲೀನಿಂಗ್ ಕಾರ್ಯವಿಧಾನದ ಮೂಲಕ ಬೆಳೆಗಳಿಗೆ ಸುರಕ್ಷಿತ ಪರಿಹಾರಗಳು

ಇತ್ತೀಚಿನ ಆಧುನಿಕ ಕೃಷಿಯಲ್ಲಿ ಸಮರ್ಥ ನೀರಿನ ನಿರ್ವಹಣೆ ಮಾಡುವುದು ನಿರ್ಣಾಯಕವಾಗಿದೆ ಮತ್ತು ಹನಿ ನೀರಾವರಿ ಪದ್ದತಿಯು  ನೇರವಾಗಿ ಬೇರುಗಳ ವಲಯವನ್ನು ಗುರಿಯಾಗಿಸಿಕೊಂಡು ಸಸ್ಯಗಳಿಗೆ ನೀರನ್ನು ತಲುಪಿಸುವ ವಿಧಾನವನ್ನು…

January 28, 2025

ಬಯೋಕ್ಯುಲಮ್ AW: ಬೆಳೆ ಸುಸ್ಥಿರತೆಗಾಗಿ ಬಳಸಲು ಸಿದ್ಧವಾಗಿರುವ ಡಿಕಂಪೋಸರ್

ಸುಸ್ಥಿರ ಕೃಷಿ ಪದ್ದತಿಯಲ್ಲಿ ಸರಳವಾದ ಆದರೆ ಆಳವಾದ ವಿಷಯವೇನೆಂದರೆ ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವುದು. ಸಾವಯವ ಕೃಷಿ ತ್ಯಾಜ್ಯವು ನಮಗೆ ಹೊರೆಯಾಗಿರದೆ ಮಣ್ಣನ್ನು ಸಮೃದ್ಧಗೊಳಿಸುವ, ಸಸ್ಯಗಳನ್ನು ಪೋಷಿಸುವ ಮತ್ತು…

January 28, 2025

ಎಪಿಸೆಲ್: ಸುಸ್ಥಿರ ಕೃಷಿಗಾಗಿ ನಿಮ್ಮ ಬೆಳೆಗಳ ಸಂಪೂರ್ಣ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ

ಇತ್ತೀಚೆಗೆ ಬದಲಾಗುತ್ತಿರುವ ಕೃಷಿ ಭೂದೃಶ್ಯದ ಕಾರಣವಾಗಿ, ಸಮರ್ಥನೀಯ ಮತ್ತು ಸಮರ್ಥ ಕೃಷಿ ವಿಧಾನಗಳನ್ನು ಕಂಡುಹಿಡಿಯುವುದು ನಿರ್ಣಾಯಕವಾಗಿದೆ. ಅದಕ್ಕಾಗಿಯೇ ಪರಿಚಯಿಸುತ್ತಿದ್ದೇವೆ, ಎಪಿಸೆಲ್! ಎಕ್ಸೆಲ್ ಇಂಡಸ್ಟ್ರೀಸ್‌ ರವರ ಈ ನವೀನ…

January 28, 2025

ಸೆಲ್ ಜೆಲ್‌ನೊಂದಿಗೆ ಕೃಷಿ ದಕ್ಷತೆಯನ್ನು ಹೆಚ್ಚಿಸುವುದು: ನೀರಿನ ಕಂಡೀಷನಿಂಗ್ ಮತ್ತು pH ಸಮತೋಲನ ಮಾಡಲು ಸಲಹೆಗಳು

ನೀರು ಕೃಷಿಯಲ್ಲಿ ಮೂಲಭೂತ ಸಂಪನ್ಮೂಲವಾಗಿದ್ದು, ಬೆಳೆಗಳ ವೃದ್ಧಿಗಾಗಿ ಅಗತ್ಯ ಪೋಷಕಾಂಶಗಳ ಮತ್ತು ಬೆಳೆ ರಕ್ಷಣೆಗೆ ಅಗತ್ಯವಾದ ರಾಸಾಯನಿಕಗಳನ್ನು ಸಾಗಿಸುವಲ್ಲಿ ವಾಹಕವಾಗಿ ಕಾರ್ಯನಿರ್ವಹಿಸುತ್ತದೆ . ಆದಾಗ್ಯೂ, ಕಳೆನಾಶಕಗಳು, ಕೀಟನಾಶಕಗಳು,…

January 28, 2025

ಎಕ್ಸ್‌ಸ್ಕೇಲೆಂಟ್: ಹನಿ ನೀರಾವರಿ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಸುರಕ್ಷಿತ ಮತ್ತು ಪರಿಣಾಮಕಾರಿ ಪರಿಹಾರ

ಹನಿ ನೀರಾವರಿ ವ್ಯವಸ್ಥೆ ಆಧುನಿಕ ಕೃಷಿಯ ಅತ್ಯಗತ್ಯ ಅಂಶವಾಗಿದೆ. ಇದು ಸಸ್ಯಗಳ ಬೇರುಗಳಿಗೆ ನೇರವಾಗಿ ನೀರನ್ನು ತಲುಪಿಸುವ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಈ ವಿಧಾನವು ನೀರನ್ನು ಸಂರಕ್ಷಿಸುವುದು…

January 28, 2025