ಸಾಸಿವೆ -ಭಾರತೀಯ ಸಾಸಿವೆ, ಕಂದು ಮತ್ತು ಹಳದಿ ಸಾರ್ಸನ್, ರಾಯ ಮತ್ತು ಟೋರಿಯಾ ಬೆಳೆ ಸೇರಿವೆ.
ಸಾಸಿವೆ (ಬ್ರಾಸಿಕಾ ನೇಪಸ್) – ಭಾರತದಲ್ಲಿ ಸಾಸಿವೆ ಎಣ್ಣೆಯು ನಾಲ್ಕನೇ ಅತಿದೊಡ್ಡ ಕೊಡುಗೆಯಾಗಿದೆ, ರೇಪ್ಸೀಡ್ ಮತ್ತು ಸಾಸಿವೆಯು ಒಟ್ಟು ಎಣ್ಣೆಕಾಳುಗಳ ಉತ್ಪಾದನೆಯಲ್ಲಿ ಸುಮಾರು ಶೇಕಡಾ 28.6 ರಷ್ಟು ಕೊಡುಗೆ ನೀಡುತ್ತಿವೆ. ಸೋಯಾಬೀನ್ ಮತ್ತು ತಾಳೆ ಎಣ್ಣೆಯ ನಂತರ, ಇದು ವಿಶ್ವದ ಮೂರನೇ ಪ್ರಮುಖ ಎಣ್ಣೆಬೀಜವಾಗಿದೆ. ಸಾಸಿವೆ ಬೀಜಗಳು ಮತ್ತು ಅದರ ಎಣ್ಣೆಯನ್ನು ಅಡುಗೆ ಉದ್ದೇಶಕ್ಕಾಗಿ ಬಳಸಲಾಗುತ್ತದೆ. ಎಳೆಯ ಎಲೆಗಳನ್ನು ತರಕಾರಿ ಉದ್ದೇಶಕ್ಕಾಗಿ ಬಳಸಲಾಗುತ್ತದೆ. ಇದರ ಹಿಂಡಿಯನ್ನು ದನಕರುಗಳ ಮೇವಿಗಾಗಿಯೂ ಬಳಸಲಾಗುತ್ತದೆ. ಸಾಸಿವೆಯನ್ನು ರಾಜಸ್ಥಾನ, ಮಧ್ಯಪ್ರದೇಶ, ಉತ್ತರಪ್ರದೇಶ, ಹರಿಯಾಣ, ಗುಜರಾತ್, ಆಂಧ್ರ ಪ್ರದೇಶ, ಕರ್ನಾಟಕ ಮತ್ತು ತಮಿಳುನಾಡಿನಂತಹ ದಕ್ಷಿಣಭಾರತದ ಕೆಲವು ರಾಜ್ಯಗಳಲ್ಲಿ ಬೆಳೆಯಲಾಗುತ್ತದೆ.
ಸಾಸಿವೆ ಬೆಳೆಯು ಎಲ್ಲಾ ರೀತಿಯ ಮಣ್ಣಿನಲ್ಲಿ ಬೆಳೆಯಬಹುದು ಆದರೆ ಗೋಡು ಮಣ್ಣಿನಿಂದ ಹಿಡಿದು ಭಾರೀ ಮಣ್ಣಿನ ವರೆಗೆ ಸಾಸಿವೆಯನ್ನು ಬೆಳೆಯಲು ಸೂಕ್ತವಾಗಿದೆ.
ಎರಡರಿಂದ ಮೂರು ಬಾರಿ ಮಣ್ಣನ್ನು ಉಳುಮೆ ಮಾಡಿ ನಂತರ ಎರಡು ಬಾರಿ ಆಳವಾದ ಬೇಸಿಗೆ ಉಳುಮೆ ಮಾಡಬೇಕು. ಪ್ರತಿ ಉಳುಮೆಯ ನಂತರ ಹಲಗೆ ಹೊಡೆಯುವುದರಿಂದ, ಬೀಜ ಮೊಳಕೆಯೊಡೆಯಲು ಸಹಾಯ ಮಾಡುತ್ತದೆ.
ಸಾಸಿವೆ ಬೆಳೆ ಬಿತ್ತನೆಗೆ ಸೂಕ್ತ ಸಮಯ ಸೆಪ್ಟೆಂಬರ್ನಿಂದ ಅಕ್ಟೋಬರ್ ತಿಂಗಳವರೆಗೆ. ಸಾಸಿವೆ – ರೇಪ್ಸೀಡ್ ಅನ್ನು ಅಂತರ ಬೆಳೆಯಾಗಿ ಬೆಳೆದಾಗ, ಬಿತ್ತನೆಯ ಸಮಯವು ಮುಖ್ಯ ಬೆಳೆಯ ಕೃಷಿ ಮೇಲೆ ಅವಲಂಬಿತವಾಗಿರುತ್ತದೆ.
ಸಾಲಿನಿಂದ ಸಾಲಿಗೆ 30 ಸೆಂಟಿಮೀಟರ್ಗಳ ಅಂತರವನ್ನು, ಸಸ್ಯದಿಂದ ಸಸ್ಯದ ಅಂತರವು 10-15 ಸೆಂ.ಮೀ. ಇಡಬೇಕಾಗುತ್ತದೆ.
ಬೀಜಗಳನ್ನ ಬಿತ್ತಲು – ಸೀಡ್ ಡ್ರಿಲ್ ಅನ್ನು ಬಳಸಬಹುದು.
ಸಾಸಿವೆಗಳನ್ನು ಪ್ರತ್ಯೇಕವಾಗಿ ಬೆಳೆಯುವಾಗ, ಪ್ರತಿ ಎಕರೆಗೆ 1.5 ಕೆಜಿ ಬೀಜಗಳು ಬೇಕಾಗುತ್ತವೆ. ಬಿತ್ತನೆ ಮಾಡಿದ ಮೂರು ವಾರಗಳ ನಂತರ ತೆಳು ಮಾಡಿ ಮತ್ತು ಆರೋಗ್ಯಕರ ಮೊಳಕೆಗಳನ್ನು ಅಥವಾ ಸಸಿಗಳನ್ನು ಮಾತ್ರ ಕ್ಷೇತ್ರದಲ್ಲಿ ಹಾಗೆಯೇ ಬಿಡಬೇಕು.
ಮಣ್ಣಿನಿಂದ ಹಾಗೂ ಬೀಜದಿಂದ ಹರಡುವ ಕೀಟ ಮತ್ತು ರೋಗದಿಂದ ರಕ್ಷಿಸಲು, ಬಿತ್ತನೆ ಮಾಡುವ ಮೊದಲು ಪ್ರತಿ ಕೆಜಿ ಬೀಜಕ್ಕೆ ಥೈರಮ್ @ 3 ಗ್ರಾಂ ನೊಂದಿಗೆ ಬೀಜೋಪಚಾರ ಮಾಡಬೇಕು.
ಬೆಳೆ | ನೈಟ್ರೋಜನ್ | ಫಾಸ್ಫರಸ್ | ಪೊಟ್ಯಾಷ್ |
ಸಾಸಿವೆ | 25 | 8 | ಮಣ್ಣಿನ ಪರೀಕ್ಷೆಯ ಫಲಿತಾಂಶಗಳ ಆಧಾರದ ಮೇಲೆ |
ರಾಯಾ ಮತ್ತು ಗೋಭಿ ಸರ್ಸನ್ | 40 | 12 | 6 |
ಹೊಲವನ್ನು ಸಿದ್ಧಪಡಿಸುವಾಗ, 70 ರಿಂದ 120 ಕ್ವಿಂಟಲ್ ಕೊಟ್ಟಿಗೆ ಗೊಬ್ಬರವನ್ನು ಅಥವಾ ಚೆನ್ನಾಗಿ ಕೊಳೆತ ಹಸುವಿನ ಸಗಣಿಯನ್ನು ಮಣ್ಣಿಗೆ ಹಾಕಬೇಕು. ನೀರಾವರಿಯ ಬೆಳೆಯಾಗಿದ್ದಲ್ಲಿ, ಯೂರಿಯಾ @55kg/ಎಕರೆ ಮತ್ತು ಸೂಪರ್ ಫಾಸ್ಫೇಟ್ @ 50kg/ಎಕರೆಗೆ ಹಾಕಬೇಕು. ಮಣ್ಣಿನಲ್ಲಿ ಪೊಟ್ಯಾಷ್ ನ ಕೊರತೆ ಕಂಡುಬಂದಾಗ ಮಾತ್ರ ಪೊಟ್ಯಾಷ್ ಕೊಡಬೇಕು.
ಕಳೆಗಳನ್ನು ನಿಯಂತ್ರಿಸಲು ಬಿತ್ತನೆ ಮಾಡಿದ ಮೂವತ್ತು ದಿನಗಳೊಳಗೆ ಎರಡರಿಂದ ಮೂರು ಬಾರಿ ಕೈಕಳೆ ಮಾಡಬೇಕು ಮತ್ತು ಕಳೆಗಳ ತೀವ್ರತೆ ಕಡಿಮೆ ಇರುವಾಗ ಎರಡು ವಾರಗಳ ಮಧ್ಯಂತರದಲ್ಲಿ ಎರಡು ಬಾರಿ ಗುದ್ದಲಿಯಿಂದ ಕಳೆ ತೆಗೆಯಬೇಕು.
ಸಾಸಿವೆ ಬೆಳೆಯಲ್ಲಿ, ಕಳೆಗಳನ್ನು ನಿಯಂತ್ರಿಸಲು, ಪ್ರತಿ ಎಕರೆಗೆ ಟ್ರೈಫ್ಲುರಾಲಿನ್ @ 400ml/200 ಲೀಟರ್ ನೀರಿನಲ್ಲಿ ಬೆರೆಸಿ ಬಿತ್ತುವ ಮುಂಚೆ ಭೂಮಿಗೆ ಸಿಂಪಡಣೆ ಮಾಡಬೇಕು.
ಬೀಜಗಳನ್ನು ಬಿತ್ತುವ ಮೊದಲು – ಹೊಲಕ್ಕೆ ನೀರನ್ನು ಕೊಡಬೇಕು. ಸಾಮಾನ್ಯವಾಗಿ, ಬೆಳೆ ಬಿತ್ತನೆಯ ನಂತರ ಮೂರು ವಾರಗಳ ಮಧ್ಯಂತರದಲ್ಲಿ ನೀರನ್ನು ಕೊಡಬೇಕಾಗುತ್ತದೆ. ಮಣ್ಣಿನಲ್ಲಿ ಉತ್ತಮ ಪ್ರಮಾಣದ ಸಾವಯವ ಗೊಬ್ಬರಗಳನ್ನು ಹಾಕುವುದರಿಂದ, ಮಣ್ಣಿನ ತೇವಾಂಶವನ್ನು ಸಂರಕ್ಷಿಸಲು ಸಹಾಯವಾಗುತ್ತದೆ.
ಇವುಗಳು ರಸ ಹೀರುವ ಕೀಟಗಳಾಗಿದ್ದು, ಹಾವಳಿ ಕಂಡುಬಂದಲ್ಲಿ ಸಸ್ಯ ಬೆಳೆವಣಿಗೆಯು ಕುಂಠಿತವಾಗುತ್ತದೆ ಮತ್ತು ನಂತರದ ಹಂತದಲ್ಲಿ ಕಾಯಿಗಳು ಕಚ್ಚುವುದಿಲ್ಲ.
ಹೆಚ್ಚು ಯೂರಿಯ ಬಳಕೆಯನ್ನು ತಪ್ಪಿಸಬೇಕು. ಕೀಟಬಾಧೆ ಕಂಡುಬಂದಲ್ಲಿ, ಥೈಯಾಮಿಥಾಕ್ನೋಸ್ @ 80ಗ್ರಾಂ ಅಥವಾ ಕ್ವಿನಾಲ್ಫಾಸ್ ನಂತಹ ಯಾವುದಾದರೂ ಒಂದು ಕೀಟನಾಶಕವನ್ನು ಎಕರೆಗೆ 100-125 ಮಿಲಿ ಪ್ರತೀ 15 ಲೀಟರ್ ಸ್ಪ್ರೇ ಟ್ಯಾಂಕಿನಲ್ಲಿ ಬೆರೆಸಿ ಸಿಂಪಡಿಸಬೇಕು .
ಈ ಹುಳದ ಮರಿಹುಳುಗಳು ಎಳೆಯ ಎಲೆಗಳನ್ನು ತಿನ್ನುತ್ತವೆ ಮತ್ತು ಅವುಗಳನ್ನು ಸಂಪೂರ್ಣವಾಗಿ ನಾಶಪಡಿಸುತ್ತವೆ. ಜಮೀನಿನಲ್ಲಿ ಎಲೆ ತಿನ್ನುವ ಹುಳು ಕಂಡುಬಂದಲ್ಲಿ, ಮಲಾಥಿಯಾನ್ 5% @ 15 ಕೆಜಿ / ಎಕರೆ ಅಥವಾ ಡೈಕ್ಲೋರ್ವೋಸ್ @ 200 ಮಿಲಿ / ಎಕರೆಗೆ ಸಿಂಪಡಿಸಬೇಕು.
ಎಲೆಗಳ ಕೆಳಭಾಗದಲ್ಲಿ ಮಚ್ಚೆಗಳು ಮತ್ತು ಬೂದು ನೀಲಿ ಬಣ್ಣ ಹಾಗೂ ಎಲೆಗಳ ಮೇಲೆ ಹಳದಿ ಚುಕ್ಕೆಗಳನ್ನು ಕಾಣಬಹುದು.
ನಿರ್ವಹಣೆ : ಬೆಳೆ ಬಿತ್ತನೆಗೆ ಮುಂಚೆ ಹಿಂದಿನ ಬೆಳೆಗಳ ಅವಶೇಷಗಳನ್ನು ತೆಗೆದುಹಾಕಬೇಕು. ಮೆಲೋಡಿ ಡುಯೊ – ೩-೪ ಗ್ರಾಂ ಅಥವಾ ಆಕ್ರೊಬ್ಯಾಟ್ ಕಂಪ್ಲೀಟ್ – ೪ ಗ್ರಾಂ ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಿ ತೀವ್ರತೆ ಹೆಚ್ಚಿದಲ್ಲಿ ಸಿಂಪಡಣೆಯನ್ನು ಎರಡು ವಾರಗಳಿಗೆ ಒಮ್ಮೆ ಕೈಗೊಳ್ಳಬಹುದು.
ಸಾಸಿವೆಯು ಕೊಯ್ಲಿಗೆ ಬರಲು 110 ರಿಂದ 140 ದಿನಗಳನ್ನು ತೆಗೆದುಕೊಳ್ಳುತ್ತದೆ. ಬೀಜಗಳು ಹಳದಿ ಬಣ್ಣಕ್ಕೆ ತಿರುಗಿದಾಗ ಮತ್ತು ಬೀಜಗಳು ಗಟ್ಟಿಯಾದಾಗ ಕೊಯ್ಲು ಮಾಡಬೇಕು.
ಕೊಯ್ಲು ಮಾಡುವಾಗ ಕಾಳುಗಳು ಸಿಡಿಯುವುದನ್ನು ತಪ್ಪಿಸಲು ಬೆಳಿಗಿನ ಸಮಯದಲ್ಲಿ ಕೊಯ್ಲು ಮಾಡಬೇಕಾಗುತ್ತದೆ.
ಕುಡಗೋಲಿನ ಸಹಾಯದಿಂದ, ನೆಲದ ಹತ್ತಿರ ಬೆಳೆಗಳನ್ನು ಕತ್ತರಿಸಬೇಕು, ನಂತರ ಕೊಯ್ಲು ಮಾಡಿದ ಬೆಳೆಗಳನ್ನು 7-10 ದಿನಗಳವರೆಗೆ ಒಣಗಿಸಿ ಒಕ್ಕಣೆ ಮಾಡಬೇಕು.
ಶುಚಿಗೊಳಿಸಿದ ಬೀಜವನ್ನು 4-5 ದಿನಗಳವರೆಗೆ ಬಿಸಿಲಿನಲ್ಲಿ ಒಣಗಿಸಬೇಕು ಮತ್ತು ತೇವಾಂಶವು 8 ಪ್ರತಿಶತಕ್ಕೆ ಬಂದ ನಂತರ ಬೀಜಗಳನ್ನು ಗೋಣಿ ಚೀಲಗಳಲ್ಲಿ ಸಂಗ್ರಹಿಸಿಡಬೇಕು.
ಕೃಷಿಯಲ್ಲಿ, ದಕ್ಷತೆ ಮತ್ತು ಉತ್ಪಾದಕತೆ ಯಾವಾಗಲೂ ಮುಖ್ಯವಾಗಿರುತ್ತದೆ. ಈಗ ನಾವು ನಿಮಗೆ ನಿಮ್ಮ ನೀರಿನ ಸ್ಥಿತಿ, ನಿಮ್ಮ ಸಸ್ಯ ಸಂರಕ್ಷಣಾ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸುವ…
ಇತ್ತೀಚಿನ ಆಧುನಿಕ ಕೃಷಿಯಲ್ಲಿ ಸಮರ್ಥ ನೀರಿನ ನಿರ್ವಹಣೆ ಮಾಡುವುದು ನಿರ್ಣಾಯಕವಾಗಿದೆ ಮತ್ತು ಹನಿ ನೀರಾವರಿ ಪದ್ದತಿಯು ನೇರವಾಗಿ ಬೇರುಗಳ ವಲಯವನ್ನು ಗುರಿಯಾಗಿಸಿಕೊಂಡು ಸಸ್ಯಗಳಿಗೆ ನೀರನ್ನು ತಲುಪಿಸುವ ವಿಧಾನವನ್ನು…
ಸುಸ್ಥಿರ ಕೃಷಿ ಪದ್ದತಿಯಲ್ಲಿ ಸರಳವಾದ ಆದರೆ ಆಳವಾದ ವಿಷಯವೇನೆಂದರೆ ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವುದು. ಸಾವಯವ ಕೃಷಿ ತ್ಯಾಜ್ಯವು ನಮಗೆ ಹೊರೆಯಾಗಿರದೆ ಮಣ್ಣನ್ನು ಸಮೃದ್ಧಗೊಳಿಸುವ, ಸಸ್ಯಗಳನ್ನು ಪೋಷಿಸುವ ಮತ್ತು…
ಇತ್ತೀಚೆಗೆ ಬದಲಾಗುತ್ತಿರುವ ಕೃಷಿ ಭೂದೃಶ್ಯದ ಕಾರಣವಾಗಿ, ಸಮರ್ಥನೀಯ ಮತ್ತು ಸಮರ್ಥ ಕೃಷಿ ವಿಧಾನಗಳನ್ನು ಕಂಡುಹಿಡಿಯುವುದು ನಿರ್ಣಾಯಕವಾಗಿದೆ. ಅದಕ್ಕಾಗಿಯೇ ಪರಿಚಯಿಸುತ್ತಿದ್ದೇವೆ, ಎಪಿಸೆಲ್! ಎಕ್ಸೆಲ್ ಇಂಡಸ್ಟ್ರೀಸ್ ರವರ ಈ ನವೀನ…
ನೀರು ಕೃಷಿಯಲ್ಲಿ ಮೂಲಭೂತ ಸಂಪನ್ಮೂಲವಾಗಿದ್ದು, ಬೆಳೆಗಳ ವೃದ್ಧಿಗಾಗಿ ಅಗತ್ಯ ಪೋಷಕಾಂಶಗಳ ಮತ್ತು ಬೆಳೆ ರಕ್ಷಣೆಗೆ ಅಗತ್ಯವಾದ ರಾಸಾಯನಿಕಗಳನ್ನು ಸಾಗಿಸುವಲ್ಲಿ ವಾಹಕವಾಗಿ ಕಾರ್ಯನಿರ್ವಹಿಸುತ್ತದೆ . ಆದಾಗ್ಯೂ, ಕಳೆನಾಶಕಗಳು, ಕೀಟನಾಶಕಗಳು,…
ಹನಿ ನೀರಾವರಿ ವ್ಯವಸ್ಥೆ ಆಧುನಿಕ ಕೃಷಿಯ ಅತ್ಯಗತ್ಯ ಅಂಶವಾಗಿದೆ. ಇದು ಸಸ್ಯಗಳ ಬೇರುಗಳಿಗೆ ನೇರವಾಗಿ ನೀರನ್ನು ತಲುಪಿಸುವ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಈ ವಿಧಾನವು ನೀರನ್ನು ಸಂರಕ್ಷಿಸುವುದು…