Crop

ಹತ್ತಿ ಬೆಳೆಗೆ ಭೂಮಿ ಸಿದ್ಧತೆ

ಭಾರತವು ವಿಶ್ವದ ಅತಿ ಹೆಚ್ಚು ಹತ್ತಿ ಉತ್ಪಾದಿಸುವ ದೇಶವಾಗಿದೆ. ಭಾರತದಲ್ಲಿ  1.7 ಮಿಲಿಯನ್ ಹೆಕ್ಟೇರ್‌ಗಿಂತಲೂ ಹೆಚ್ಚು ಹತ್ತಿಯನ್ನು  ಬೆಳೆಯಲಾಗುತ್ತಿದೆ . ಭಾರತವು 159 ದೇಶಗಳಿಗೆ ಹತ್ತಿಯನ್ನು ರಫ್ತು ಮಾಡುತ್ತದೆ . ಭಾರತವು ಪ್ರತಿ ವರ್ಷ 5.5 ಮಿಲಿಯನ್ ಚೀಲಗಳಷ್ಟು  ಹತ್ತಿಯನ್ನು ವಿದೇಶಗಳಿಗೆ ರಫ್ತು ಮಾಡುತ್ತಿದೆ.. 2022-23 ರಲ್ಲಿ ಅಂದಾಜಿಸಿದಂತೆ ಭಾರತದಲ್ಲಿ ವಾರ್ಷಿಕ ಸರಾಸರಿ 351 ಲಕ್ಷ ಚೀಲಗಳಷ್ಟು ಹತ್ತಿಯ ಬೇಡಿಕೆ ಇದೆ. ಹತ್ತಿಯನ್ನು ಮುಖ್ಯವಾಗಿ ಗುಜರಾತ್, ಪಂಜಾಬ್, ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ತಮಿಳುನಾಡು, ಒರಿಸ್ಸಾ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ತ್ರಿಪುರಾದಲ್ಲಿ ಬೆಳೆಯಲಾಗುತ್ತದೆ. ಭಾರತದಲ್ಲಿ ಅತಿ ಹೆಚ್ಚು ಹತ್ತಿಯನ್ನು ಉತ್ಪಾದಿಸುವ ರಾಜ್ಯವೆಂದರೆ ಗುಜರಾತ್.

ಕಷ್ಟದ ಮಟ್ಟ :

( ಸುಲಭ/ಮಧ್ಯಮ/ಕಠಿಣ)

ಬೀಜಗಳ ಆಯ್ಕೆ

ಭಾರತದಲ್ಲಿ ಸರಿಸುಮಾರು 150ಕ್ಕೂ ಹೆಚ್ಚು ವಿಧದ ಹತ್ತಿ ಬೆಳೆಯ(ಬೀಜ) ತಳಿಗಳನ್ನು ಕಾಣಬಹುದಾಗಿದೆ. ಅವುಗಳಲ್ಲಿ ಹೆಚ್ಚು ಪ್ರಸಿದ್ಧವಾದ ತಳಿಗಳೆಂದರೆ RASI 773, RASI 776, ಅಂಕುರ್ 555, ಬಾಯೆರ್  7172, ಬಾಯೆರ್ 7272, US 51, ನೂಜಿ ವೀಡು 9013, ನುಜಿ ವೀಡು ಬಲ್ವಾನ, ಶ್ರೀರಾಮ್ 6588, ಕಾವೇರಿ ಬುಲೆಟ್, ಗೋಲ್ಡಿ  333, ಬುರಿ 1007, A. K. H. 081 ಮತ್ತು D. H. Y. 286. ಅತಿ ಹೆಚ್ಚು ಪ್ರದೇಶದಲ್ಲಿ ಬೆಳೆಯಲಾಗುತ್ತಿರುವ ತಳಿ  ರಾಸಿ 773 ಆಗಿದ್ದು, ಅತಿ ದಪ್ಪನೆಯ ಬೀಜವನ್ನು ಉತ್ಪಾದಿಸುವ ತಳಿಯಾಗಿದೆ ಹಾಗೂ ಇದು ಕೀಟಗಳ ಸಹಿಷ್ಣುತಾ  ಗುಣವನ್ನು ಹೊಂದಿರುವುದು ವಿಶೇಷವಾಗಿದೆ.

ಬೀಜಗಳನ್ನು ಮೊದಲೇ ನೆನೆಸುವುದು:

ಸ್ಥಳೀಯ ಹತ್ತಿ ಬೀಜದ ತಳಿಗಳನ್ನು ಬಿತ್ತನೆಗೂ ಮೊದಲು ಕನಿಷ್ಠ ಎರಡರಿಂದ ಮೂರು ಗಂಟೆಗಳ ಕಾಲ ನೆನೆಸಿಡಬೇಕು ಮತ್ತು US ತಳಿಗಳಂತಹ ಆಮದು ಮಾಡಿದ ತಳಿಗಳನ್ನು ನಾಲ್ಕರಿಂದ ಆರು ಗಂಟೆಗಳ ಕಾಲ ನೆನೆಸಿಡಬೇಕು.

ಹತ್ತಿ ಬೀಜೋಪಚಾರ:

ಹತ್ತಿ ಬೀಜಗಳ ಸಂಸ್ಕರಣೆಗಾಗಿ,  ಮೊದಲು ಬೀಜಗಳನ್ನು ನೀರು, ಮಣ್ಣು ಮತ್ತು ಹಸುವಿನ ಸಗಣಿ ಮಿಶ್ರಣದಲ್ಲಿ ನೆನಸಿಡುವದರಿಂದ ಸಸ್ಯಗಳ ಏಕರೂಪದ  ನಿಲುವು ಮಾಡಲು ಸಹಾಯವಾಗುತ್ತದೆ. 

ಹತ್ತಿ ಬೀಜಗಳ ರಾಸಾಯನಿಕ  ಸಂಸ್ಕರಣೆ:

ಹತ್ತಿ ಬೀಜಗಳ ಸಂಸ್ಕರಣೆಗೆ ವಿಲೋಪಿಸುವುದು(ಡಿ ಲಿಂಟಿಂಗ್ )ಅತಿ ಅಗತ್ಯವಾಗಿದೆ.ಡಿಲಿಂಟ್ ಮಾಡಲು ಒಂದು ಪ್ಲಾಸ್ಟಿಕ್ ಬಕೆಟ್ ನಲ್ಲಿ 1Kg ಅಸ್ಪಷ್ಟ  ಬೀಜಗಳನ್ನು ಹಾಕಬೇಕು. ಅದಕ್ಕೆ 100ml ಸಾರರಿಕ್ತ ಸೆಲ್ಫ್ಯೂರಿಕ್ ದ್ರಾವಣವನ್ನು ಹಾಕಬೇಕು. ಈ ಮಿಶ್ರಣವನ್ನು ಎರಡರಿಂದ ಮೂರು ನಿಮಿಷಗಳ ಕಾಲ, ಕಟ್ಟಿಗೆಯ ಚಮಚದಿಂದ ಒಂದೇ ರೀತಿಯಾಗಿ ಕಲಕಬೇಕು. ಆಗ ಬೀಜಗಳು ಮೂರು ನಿಮಿಷದ ಒಳಗೆ ಕಂದು ಬಣ್ಣಕ್ಕೆ ತಿರುಗುವುದು. ನಂತರ ಆ ಬೀಜಗಳು  ನಾಲ್ಕರಿಂದ ಐದು ಬಾರಿ ತಂಪಾದ ನೀರಿನಲ್ಲಿ ತೊಳೆಯಬೇಕು. ನಂತರ ಸಿಪ್ಪೆ ಮತ್ತು ಉಳಿಕೆ ಪದಾರ್ಥವನ್ನು ಹೊರ ತೆಗೆಯಲು ಸ್ವಲ್ಪಕಾಲ ನೀರಿನಲ್ಲಿ ನೆನೆಸಿಡಬೇಕು.ಬೀಜದಲ್ಲಿರುವ ಸಂಪೂರ್ಣ ಆಮ್ಲವನ್ನು ಹೊರಹಾಕಲು ಹತ್ತರಿಂದ ಹದಿನೈದು ನಿಮಿಷಗಳ ಕಾಲ 0.5% ಕ್ಯಾಲ್ಸಿಯಂ ಕ್ಲೋರೈಡ್ ನಿಂದ ತೊಳೆಯಬೇಕು. ಈ ಮೇಲ್ಕಂಡ ಸೂಚಿಸಿದ ಪ್ರಕ್ರಿಯೆಯ  ನಂತರ ದ್ರಾವಣದ ಕೆಳ ಭಾಗದಲ್ಲಿ ಉಳಿದುಕೊಂಡ ಬೀಜಗಳನ್ನು ಬಿತ್ತನೆಗೆ ಬಳಸಬಹುದಾಗಿದೆ. ರಾಸಾಯನಿಕವಾಗಿ ಸಂಸ್ಕರಿಸಿದ ಬೀಜಗಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು 2 ಗ್ರಾಮ್ ಕಾರ್ಬೊನೈಸ್ಡ್ ದ್ರಾವಣ ಅಥವಾ 3 ಗ್ರಾಮ್ ಮ್ಯಾಂಕೋಜೆಬ್ ನಲ್ಲಿ ನೆನೆಸಿಡಬೇಕು.ಸ್ಲರಿ ಸಂಸ್ಕರಣೆಗೆ, 1 ಕೆಜಿ ಬೀಜಗಳನ್ನು 2 ಗ್ರಾಂ  ಕ್ಯಾಪ್ಟನ್  + 5 ml ನೀರಿನ ಮಿಶ್ರಣದಲ್ಲಿ ನೆನಸಿಡಬೇಕು.

ಹತ್ತಿ ಬೀಜಗಳಿಗೆ ಬ್ಯಾಕ್ಟೀರಿಯಾದಿಂದ ಸಂಸ್ಕರಣೆ

 ಹತ್ತಿ ಬೀಜ ಸಂಸ್ಕರಣೆಗೆ ವಿವಿಧ ರೀತಿಯ ವಿಧಾನಗಳಿವೆ. ಅಜಟೋಬ್ಯಾಕ್ಟರ್, 34-247 Kg N/ha ಅನ್ನು ಬಳಸುವುದರಿಂದ ಸಸಿಗೆ ಸಾರಜನಕವನ್ನು ಪೂರೈಸಲು ಮತ್ತು ಬೀಜಗಳೊಂದಿಗೆ ಇತರ ಅಗತ್ಯ ಬ್ಯಾಕ್ಟೀರಿಯಾ ತಳಿಗಳು /ಸ್ಟ್ರೈನ್ ಗಳು ಮಿಶ್ರಣವಾಗಲು ಸಹಾಯ ಮಾಡುತ್ತದೆ.ಅಜಟೋಬ್ಯಾಕ್ಟರ್ ನಂತೆ ಅಝೋಸ್ಪಿರಿಲಮ್ ಕೂಡ ಸೂಕ್ಷ್ಮ ಏರೋಫಿಲಿಕ್ ಸಾರಜನಕ ಸ್ಥಿರೀಕರಣವಾಗಿದೆ. ಅಜೂಸ್ಪಿರಿಲಂ ಸಾರಜನಕದ ಅಗತ್ಯವನ್ನು 25-30% ರಷ್ಟು ಕಡಿಮೆ ಮಾಡುತ್ತದೆ. 

  • ಹತ್ತಿ ಬೆಳೆಗಾಗಿ ಕ್ಷೇತ್ರ ಸಿದ್ಧತೆಗಳು:
  • ತ್ತಿಗೆ ಬೆಳೆಯಲು ಸೂಕ್ತ ಮಣ್ಣಿನ ವಿಧ: ಮರಳು ಮಿಶ್ರಿತ ಕಪ್ಪು ಮಣ್ಣು
  • ಮಣ್ಣಿನ pH: ಸ್ವಲ್ಪ ಆಮ್ಲೀಯ
  • ಹತ್ತಿ ಬೆಳೆಗಾಗಿ ಭೂಮಿ ಸಿದ್ಧತೆಗಳು

ಗದ್ದೆಯಲ್ಲಿ ಎರಡು ಬಾರಿ ವಿರುದ್ಧ ದಿಕ್ಕುಗಳಲ್ಲಿ ಹೆಂಟೆ ಒಡೆಯಲಾಗುತ್ತದೆ ಮತ್ತು ನಂತರ ದುಂಡನೆಯ ನೇಗಿಲಿನಿಂದ ಉಳುಮೆ ಮಾಡುವುದರಿಂದ ಮಣ್ಣನ್ನು ಸಡಿಲಗೊಳಿಸುತ್ತದೆ. ಹೆಂಟೆ ಹೊಡೆದ ನಂತರ, 0.5 ಮೀ ಅಂತರದಲ್ಲಿ ಗಟ್ಟಿ ನೆಲ ರಚನೆಯಾಗಲು ಚೀಸೆಲ್ /ಉಳಿ ನೇಗಿಲಿನಿಂದ ಭೂಮಿಯನ್ನು ಉಳುಮೆ ಮಾಡಿ . 

ಸಾಮಾನ್ಯವಾಗಿ,10 ಟನ್ ಕೊಟ್ಟಿಗೆ ಗೊಬ್ಬರವನ್ನು ಮರಳು ಮಿಶ್ರಿತ ಗೋಡುಮಣ್ಣಿನೊಂದಿಗೆ ಬೆರೆಸಿ ಅಥವಾ ಮಿಶ್ರಣ ಮಾಡಿ ಹತ್ತಿ ಬೆಳೆಯಲು ಭೂಮಿ ಸಿದ್ಧತೆ ಮಾಡಬೇಕಾಗುತ್ತದೆ. ಬೀಜಗಳನ್ನು 3 ಪ್ಯಾಕೆಟ್ ಅಜೋಸ್ಪಿರಿಲಮ್ (600 ಗ್ರಾಂ/ಹೆ) ಮತ್ತು 3 ಪ್ಯಾಕೆಟ್ (600 ಗ್ರಾಂ/ಹೆ) ಫಾಸ್ಫೋಬ್ಯಾಕ್ಟೀರಿಯಾ ಅಥವಾ 6 ಪ್ಯಾಕೆಟ್ ಅಜೋಫಾಸ್ (1200 ಗ್ರಾಂ/ಹೆ) ನೊಂದಿಗೆ ಮಿಶ್ರಣದೊಂದಿಗೆ ಬೆರೆಸಿ. ಈ ರೀತಿ ಮಾಡುವುದರಿಂದ ಸಸಿಗೆ ಸಾಕಷ್ಟು ಸಾರಜನಕವನ್ನು ಪೂರೈಸಿದಂತೆ!

ಹಿನ್ನುಡಿ

ಹತ್ತಿಯು ಶೀತ ಹವಾಮಾನವನ್ನು ತಡೆದುಕೊಳ್ಳುವ ಬೆಳೆಯಾಗಿದ್ದು, ಭಾರತದಾದ್ಯಂತ ಬೆಳೆಯಲಾಗುತ್ತಿದೆ .2022-23 ನೇ ಸಾಲಿನ ಆದಾಯದ ವಾಣಿಜ್ಯ ಬೆಳೆಯಾಗಿದೆ. ಹತ್ತಿ ಬೆಳೆಗೆ  ಸರಿಯಾದ ಆರೈಕೆಯ ಅಗತ್ಯ ಇದ್ದರೂ ಕೂಡ ಇತರೆ ವಾಣಿಜ್ಯ ಬೆಳೆಗಳಂತೆ ಇದಕ್ಕೆ ಹೆಚ್ಚಿನ ನಿರ್ವಹಣೆಯ ಅಗತ್ಯ ಇರುವುದಿಲ್ಲ. ಭಾರತದ ವಾಯುಗುಣಕ್ಕೆ ಇದು ಯೋಗ್ಯವಾದ ಬೆಳೆಯಾಗಿದ್ದು, ಹೆಚ್ಚು ಹೆಚ್ಚು ಈ ಬೆಳೆಯನ್ನ ಬೆಳೆಯುವುದರ ಮೂಲಕ ಸಾಕಷ್ಟು ಆದಾಯವನ್ನು ಗಳಿಸಬಹುದಾಗಿದೆ.

Recent Posts

ಕಬ್ಬು ಬೆಳೆಯಲ್ಲಿ ಬಿಳಿ ಗೊಣ್ಣೆ ಹುಳುವಿನ ಸೋಂಕಿನಿಂದ ಮುತ್ತಿಕೊಳ್ಳುವಿಕೆಯಿಂದ ಅಂತಿಮ ನಿರ್ವಹಣೆ ಕ್ರಮಗಳು

ಕಬ್ಬಿನ ಬಿಳಿ ಗೊಣ್ಣೆ ಹುಳು ಒಂದು ಗಂಭೀರವಾದ ಕೃಷಿ ಕೀಟವಾಗಿದ್ದು, ಇದು ವಿಶ್ವಾದ್ಯಂತ ಕಬ್ಬಿನ ಬೆಳೆಗಳ ಉತ್ಪಾದಕತೆ ಮತ್ತು ಸುಸ್ಥಿರತೆಗೆ ಗಮನಾರ್ಹ ಅಪಾಯವನ್ನುಂಟುಮಾಡುತ್ತದೆ. ಈ ಬಿಳಿ ಗೊಣ್ಣೆ…

May 18, 2024

ಕಬ್ಬಿನ ಇಂಟರ್ನೋಡ್ ಬೋರರ್  ಮುತ್ತಿಕೊಳ್ಳುವಿಕೆ ಮತ್ತು ಅದರ ನಿರ್ವಹಣೆಯ

ಪ್ರಪಂಚದ ಅನೇಕ ಉಷ್ಣವಲಯದ ಮತ್ತು ಉಪೋಷ್ಣವಲಯದ ಪ್ರದೇಶಗಳಲ್ಲಿ ಕಬ್ಬು ಒಂದು ಪ್ರಮುಖ ನಗದು ಬೆಳೆಯಾಗಿದೆ. ಆದಾಗ್ಯೂ, ಕಬ್ಬಿನ ಮಧ್ಯ ಕೊರಕವು ಗಮನಾರ್ಹವಾದ ಕೀಟವಾಗಿದ್ದು, ಕಬ್ಬು ರೈತರಿಗೆ ಗಣನೀಯ…

May 8, 2024

ಕಬ್ಬಿನ ಆರಂಭಿಕ ಚಿಗುರು ಕೊರೆಯುವವರ ವಿರುದ್ಧ ಹೋರಾಟ: ಪರಿಣಾಮಕಾರಿ ನಿರ್ವಹಣೆ ತಂತ್ರಗಳು

ಕಬ್ಬಿನ ಆರಂಭಿಕ ಚಿಗುರು ಕೊರೆಯುವ ಕೀಟ, ಚಿಲೋ ಇನ್ಫ್ಯೂಸ್ಕಾಟೆಲಸ್ ಒಂದು ಕೀಟ ಕೀಟವಾಗಿದ್ದು, ಇದು ಸಸ್ಯದ ಎಳೆಯ ಚಿಗುರುಗಳಿಗೆ ಕೊರೆಯುವ ಮೂಲಕ ಕಬ್ಬಿನ ಬೆಳೆಗಳಿಗೆ ಗಮನಾರ್ಹ ಹಾನಿಯನ್ನುಂಟುಮಾಡುತ್ತದೆ.…

April 15, 2024

ಮಣ್ಣಿನ pH – ಬೆಳೆ ಉತ್ಪಾದನೆಯಲ್ಲಿ ಪ್ರಮುಖ ಅಂಶ

ಮಣ್ಣಿನ pH ಎಂಬುದು ಮಣ್ಣಿನ ಆಮ್ಲೀಯತೆ ಅಥವಾ ಕ್ಷಾರೀಯತೆಯ ಅಳತೆಯಾಗಿದೆ, ಇದು ಮಣ್ಣಿನಲ್ಲಿರುವ ಹೈಡ್ರೋಜನ್ ಅಯಾನುಗಳ (H+) ಸಾಂದ್ರತೆಯಿಂದ ನಿರ್ಧರಿಸಲ್ಪಡುತ್ತದೆ. pH ಪ್ರಮಾಣವು 0 ರಿಂದ 14…

April 8, 2024

ಆಹಾರ ಸಂಸ್ಕರಣಾ ವಲಯಕ್ಕೆ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (PLI) ಯೋಜನೆ

ಉತ್ಪಾದನೆ ಆಧಾರಿತ ವಲಯಗಳು ಭಾರತದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆಹಾರ ಸಂಸ್ಕರಣಾ ವಲಯಕ್ಕೆ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್‌ಐ) ಯೋಜನೆಯು ಮಾರ್ಚ್ 2021 ರಲ್ಲಿ ಪ್ರಾರಂಭವಾದ…

April 6, 2024

ಮಾವಿನ ಹಣ್ಣಿನ ನೊಣದ ಪರಿಣಾಮಕಾರಿ ನಿರ್ವಹಣೆ

ಬೇಸಿಗೆ ಕಾಲ ಈಗಾಗಲೇ ಬಂದಿದೆ. ನಿಮ್ಮ ಬಹು ನಿರೀಕ್ಷಿತ ಮಾವಿನ ಕೊಯ್ಲಿಗೆ ನೀವು ಕಾಯುತ್ತಿದ್ದೀರಾ? ರೈತರೇ ಎಚ್ಚರ! ಹಣ್ಣಿನ ನೊಣಗಳು ನಿಮ್ಮ ಮಾವಿನ ಇಳುವರಿಯನ್ನು ತಡೆಯಲು ಮತ್ತು…

March 30, 2024