ಹೀರೆಕಾಯಿ (ಲುಫಾ ಅಕುಟಾಂಗುಲಾ) ಕುಕುರ್ಬಿಟೇಸಿಯೇ ಕುಟುಂಬಕ್ಕೆ ಸೇರಿದೆ. ವರ್ಷವಿಡೀ ಬೆಳೆಯುವ ಇದನ್ನು ತರಕಾರಿಯಾಗಿ ಬಳಸಲಾಗುತ್ತದೆ. ಇದು ಬಳ್ಳಿ ಜಾತಿಯ ತರಕಾರಿಯಾಗಿರುವುದರಿಂದ ಇದಕ್ಕೆ ಚಪ್ಪರದ ಅಗತ್ಯ ಇದೆ ಅಥವಾ ಒಂದು ಊರುಕೋಲು ಕೊಟ್ಟು ಕೋಲಿಗೆ ಹೀರೆಬಳ್ಳಿಯನ್ನು ಸುತ್ತಿ ದಾರದಿಂದ ಕಟ್ಟಬೇಕು. ಹಣ್ಣುಗಳ ಆಕಾರದಲ್ಲಿ ಮತ್ತು ಉದ್ದದಲ್ಲಿ ಬಹಳ ವ್ಯತ್ಯಾಸವಿರುತ್ತದೆ.
ಬೆಚ್ಚಗಿನ ಮತ್ತು ಆರ್ದ್ರ ವಾತಾವರಣವು ಇದರ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅನುಕೂಲಕರವಾಗಿರುತ್ತದೆ. ಸರಿಯಾದ ತಾಪಮಾನ 25-30 ಡಿಗ್ರಿ ಇರಬೇಕು.
ಹೀರೆಕಾಯಿಯನ್ನು ಎಲ್ಲಾ ರೀತಿಯ ಮಣ್ಣಿನಲ್ಲಿ ಬೆಳೆಯಬಹುದು ಆದರೆ ಜೇಡಿಮಣ್ಣು ಮತ್ತು ಸವಳು ಮಣ್ಣು ಈ ಬೆಳೆಗೆ ಸೂಕ್ತವಾಗಿರುತ್ತದೆ.
6.5 ರಿಂದ 7.5 ವರೆಗಿನ ಮಣ್ಣಿನ pH ನಲ್ಲಿ ಉತ್ತಮವಾಗಿ ಬೆಳೆಯುತ್ತದೆ. ಸರಿಯಾದ ಮಣ್ಣಿನ ಒಳಚರಂಡಿ ಹೆಚ್ಚು ಇಳುವರಿ ಪಡೆಯುವಲ್ಲಿ ಪ್ರಯೋಜನಕಾರಿಯಾಗಿರುತ್ತದೆ.
3.5 ರಿಂದ 5 ಕೆಜಿ/ಹೆಕ್ಟೇರ್ ಗೆ.
ಹೀರೆಕಾಯಿಯನ್ನು ಬೇಸಿಗೆ ಮತ್ತು ಮಳೆಗಾಲದ ಬೆಳೆಯಾಗಿ ಬೆಳೆಯಲಾಗುತ್ತದೆ.
ಬೇಸಿಗೆ ಬೆಳೆ: ಜನವರಿ ಯಿಂದ ಏಪ್ರಿಲ್.
ಮಳೆಗಾಲದ ಬೆಳೆ: ಜೂನ್ ನಿಂದ ಜುಲೈ.
1.5 ರಿಂದ 2.5 ಮೀ (ಸಾಲಿನಿಂದ ಸಾಲಿಗೆ) x 60 ರಿಂದ 120 ಸೆಂಮೀ (ಗಿಡ ದಿಂದ ಗಿಡಕ್ಕೆ) ಅಂತರವನ್ನು ನೀಡಬೇಕು.
ಭೂಮಿಯನ್ನು ಸಿದ್ಧಪಡಿಸುವ ಸಮಯದಲ್ಲಿ ಚೆನ್ನಾಗಿ ಕೊಳೆತ ಕೊಟ್ಟಿಗೆ ಗೊಬ್ಬರವನ್ನು @ 10-15 ಟನ್/ಹೆಕ್ಟೇರ್ ಗೆ ಹಾಕಬೇಕು.
ಬಿತ್ತನೆ ಮಾಡುವ ಮೊದಲು ರಸಗೊಬ್ಬರವನ್ನು @ 25:30:30 ಕೆಜಿ/ಹೆಕ್ಟೇರ್ ಗೆ ಹಾಕಬೇಕು. ಮೂವತ್ತು ದಿನಗಳ ನಂತರ 15-25 ಕೆಜಿ ಸಾರಜನಕ/ ಹೆಕ್ಟೇರ್ ಗೆ ಹಾಕಬೇಕು.
ಪೋಷಕಾಂಶಗಳ ಎರಡನೇ ಡೋಸ್ ಅಪ್ಲಿಕೇಶನ್ – ಕ್ಯಾಲ್ಸಿಯಂ ನೈಟ್ರೇಟ್ 15 ಕೆಜಿ + 20: 20: 00 : 13 – 100 ಕೆಜಿ; ಮಲ್ಟಿಪ್ಲೆಕ್ಸ್ ಮಹಾಫಲ್ 1 L + ಯೂರಿಯಾ 45 ಕೆಜಿ + 25 ಕೆಜಿ MOP ಯೊಂದಿಗೆ ಬಲವರ್ಧಿತ 45 ಕೆಜಿ + 25 ಕೆಜಿ MOP ಅನ್ನು ಮಣ್ಣಿಗೆ ಹಾಕಬಹುದು ಮತ್ತು ಮಣ್ಣಿನಿಂದ ಮುಚ್ಚಬೇಕು.
ಒಣ ಪ್ರದೇಶದಲ್ಲಿ ಈ ಬೆಳೆಗೆ, ನೀರನ್ನು ಸಂರಕ್ಷಿಸಲು ಸಮಗ್ರ ನೀರಾವರಿ ಕೃಷಿ ತಂತ್ರಜ್ಞಾನ ಪದ್ದತಿಯನ್ನುಮಾಡಬೇಕು. ಸಾಮಾನ್ಯವಾಗಿ ಹನಿ ನೀರಾವರಿ ತಂತ್ರಜ್ಞಾನವನ್ನು ರೈತರು ಅಳವಡಿಸಿಕೊಳ್ಳುತ್ತಾರೆ.
ಮಲ್ಚಿಂಗ್ ಶೀಟ್(ಹೊದಿಕೆಗಳಿಂದ)ಗಳಿಂದ ಮಣ್ಣಿನ ಮೇಲ್ಮೈಯನ್ನು ಮುಚ್ಚುವ ಮೂಲಕ ಹೆಚ್ಚಿನ ಮಣ್ಣಿನ ತೇವಾಂಶವನ್ನು ಕಾಯ್ದಿರಿಸಬಹುದು ಮತ್ತು ಕಳೆಗಳ ಬೆಳವಣಿಗೆಯನ್ನು ತಡೆಯಬಹುದು. 25-30 ಮೈಕ್ರಾನ್ನ ಕಪ್ಪು ಅಥವಾ ಬಿಳಿ ಮಲ್ಚ್ ಪೇಪರ್ ಅನ್ನು ಬೆಳೆ ಹೊದಿಕೆಯನ್ನಾಗಿ ಬಳಸಬಹುದು.
ಬೀಜಗಳನ್ನು ಸುಮಾರು 1 ರಿಂದ 2 ಗಂಟೆಗಳ ಕಾಲ ಬಿತ್ತನೆ ಮಾಡುವ ಮೊದಲು ನೀರಿನಲ್ಲಿ ನೆನೆಸಿಡಬಹುದು. ಬಿತ್ತನೆ ಮಾಡುವ ಮೊದಲು ಬೀಜಗಳನ್ನು 100 ಗ್ರಾಂ ಮೆಟಲಾಕ್ಸಿಲ್ 35% 1 ಗ್ರಾಂ ನೊಂದಿಗೆ ಸಂಸ್ಕರಿಸಿ ½ ಇಂಚು ಆಳದಲ್ಲಿ ಬಿತ್ತಿ ನಂತರ ಮೇಲ್ಮಣ್ಣಿನಿಂದ ಮುಚ್ಚಲಾಗುತ್ತದೆ.
ಶಿಲೀಂಧ್ರ ರೋಗಗಳು ಮತ್ತು ಕೀಟಗಳ ಯಾವುದೇ ದಾಳಿಯನ್ನು ತಡೆಗಟ್ಟಲು ಸಸಿಗಳ ಬೇರುಗಳನ್ನು ಕೀಟನಾಶಕ ಮತ್ತು ಶಿಲೀಂಧ್ರನಾಶಕ ಮಿಶ್ರಣದಲ್ಲಿ (ಮೆಟಲಾಕ್ಸಿಲ್ 35 % 0.5 gm/L+ ಕ್ಲೋರೋಪೈರಿಫೋಸ್ 50 Ec 2 mL/L) ಅದ್ದಬೇಕು.
ಅಗತ್ಯವಿದ್ದರೆ ಕೈ ಕಳೆಯನ್ನು ಮಾಡಬೇಕು ಅಥವಾ ಸಣ್ಣ ಉಪಕರಣಗಳೊಂದಿಗೆ ಕೈ ಕಳೆ ಮಾಡಬಹುದು.
ಕಳೆ ಬಂದ ನಂತರದ ಕಳೆನಾಶಕಗಳನ್ನು (ಅಜಿಲ್ @ 2 ಮಿಲಿ/ಲೀ) ನೀರಿಗೆ ಬೆರೆಸಿ ಸಿಂಪಡಿಸಬಹುದು.
ಬಳ್ಳಿಗೆ ತೆಳುವಾದ ಬಿದಿರಿನ ಕಂಬದ ಸಹಾಯದಿಂದ ಬಳ್ಳಿಗೆ ಬೆಂಬಲ ನೀಡಬೇಕು, ಇದನ್ನು ಬೆಂಬಲಿಸುವುದಕ್ಕಾಗಿ ಬಳಸಲಾಗುತ್ತದೆ.
ಗಿಡಹೇನುಗಳು: ಸಾಮಾನ್ಯವಾಗಿ ಎಳೆಯ, ಬೆಳೆಯುವ ಮತ್ತು ರಸವತ್ತಾದ ಸಸ್ಯ ಭಾಗಗಳ ರಸವನ್ನು ಹೀರುತ್ತವೆ. ಎಳೆಯ ಎಲೆಗಳು, ಕಾಂಡಗಳು, ಮೊಗ್ಗುಗಳು, ಹೂವುಗಳು, ಹಣ್ಣುಗಳ ಮೇಲೆ ಹೆಚ್ಚಾಗಿ ಪರಿಣಾಮ ಬೀರುತ್ತವೆ.
ಗಿಡಹೇನುಗಳಿಂದ ದಾಳಿಗೊಳಗಾದ ಸಸಿ ಭಾಗಗಳ ಮೇಲೆ ತಿರುಚಿದ, ಸುರುಳಿಯಾಕಾರದ ಅಥವಾ ಊದಿಕೊಂಡ ಮಚ್ಚೆಗಳನ್ನು ಕಾಣಬಹುದು. ಹಳದಿ ಮಚ್ಚೆಯುಳ್ಳ ಎಲೆಗಳು, ಸೋಂಕಿತ ಸಸ್ಯದ ಭಾಗಗಳು ಕಂದು ಬಣ್ಣಕ್ಕೆ ಕಾರಣವಾಗಬಹುದು.
ನಿಯಂತ್ರಣ : ಮೊನೊಕ್ರೊಟೊಫಾಸ್ @0.05-0.01% ಅಥವಾ ಡೆಮೆಟಾನ್ ಮೀಥೈಲ್ @0.05-0.02% ಗಿಡಹೇನುಗಳಿಂದ ಸಸ್ಯವನ್ನು ರಕ್ಷಿಸಲು ಸಹಾಯ ಮಾಡುತ್ತದೆ.
ಹಸಿರು ಜಿಗಿ ಹುಳುಗಳು:ಬೇಸಿಗೆಯ ತಿಂಗಳುಗಳಲ್ಲಿ, ಜಿಗಿ ಹುಳುಗಳು ಈ ಬೆಳೆಗೆ ಭಾರೀ ನಷ್ಟವನ್ನು ಉಂಟುಮಾಡುತ್ತವೆ. ಹಸಿರು ಜಿಗಿ ಹುಳು, ಎಲೆಗಳ ಮೇಲೆ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ ಹಾಗೂ ರಸವನ್ನು ಹೀರುತ್ತವೆ.
ನಿಯಂತ್ರಣ : ಆರಂಭದಲ್ಲಿ ಹದಿನೈದು ದಿನಗಳ ಮಧ್ಯಂತರದಲ್ಲಿ ಬೇವಿನ ಎಣ್ಣೆ ಬೆಳ್ಳುಳ್ಳಿ ಮಿಶ್ರಣಮಾಡಿ ಬೆರೆಸಿ ಸಿಂಪಡಿಸುವುದರಿಂದ ಜಿಗಿ ಹುಳುಗಳ ನಿಯಂತ್ರಣವನ್ನು ಮಾಡಬಹುದು. ಅಸಿಟಾಫ್, ಇಮಿಡಾಕ್ಲೋಪ್ರಿಡ್ @ 0.05-0.01% ಇತ್ಯಾದಿ ಕೀಟನಾಶಕಗಳ ಸಿಂಪಡಣೆಯು ಜಿಗಿ ಹುಳುಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ.
ಎಲೆ ಚುಕ್ಕೆರೋಗ : ಎಲೆಗಳ ಮೇಲೆ ಹಳದಿ, ಬೂದು ಅಥವಾ ಕಂದು ಬಣ್ಣದ ಚುಕ್ಕೆಗಳು ಕಾಣುತ್ತದೆ ಹಾಗೂ ದೊಡ್ಡದಾಗಿ, ವೃತ್ತಾಕಾರದ ಕೇಂದ್ರೀಕೃತ ಉಂಗುರ ತರಹದ ಮಚ್ಚೆಗಳು ಕಾಣುತ್ತದೆ ಕ್ರಮೇಣವಾಗಿ ಕಪ್ಪು ಕಲೆಗಳು ಒಗ್ಗೂಡಿ ಎಲೆಗಳ ರೋಗಕ್ಕೆ ಕಾರಣವಾಗುತ್ತವೆ.
ಇದರ ತೀವ್ರತೆ ಹೆಚ್ಚಾದಾಗ, ತೊಟ್ಟುಗಳು, ಕಾಂಡದ ಭಾಗಗಳ ಮೇಲೂ ಕಲೆಗಳು ಕಾಣಿಸಿಕೊಳ್ಳುತ್ತವೆ.
ನಿಯಂತ್ರಣ ಕ್ರಮಗಳು:
ಕಾಂಡ ಕೊಳೆತ: ಮಣ್ಣಿನ ಮಟ್ಟದಲ್ಲಿರುವ ಕಾಂಡದ ಬುಡಗಳು ಕೊಳೆತು, ಸಸ್ಯಗಳು ಸಾಯುತ್ತವೆ. ಈ ರೋಗದ ಹೆಚ್ಚು ಪರಿಣಾಮವನ್ನು ನೀರಾವರಿ ಪ್ರದೇಶಗಳಲ್ಲಿ ಮತ್ತು ಮಳೆಗಾಲದಲ್ಲಿ ಕಾಣಬಹುದು.
ನಿಯಂತ್ರಣ ಕ್ರಮಗಳು:
ಬಿತ್ತನೆ ಮಾಡಿದ 45-60 ದಿನಗಳಲ್ಲಿ ಹೀರೆಕಾಯಿಗಳು ಕೊಯ್ಲಿಗೆ ಸಿದ್ಧವಾಗುತ್ತವೆ. ಕಾಯಿಗಳು ಇನ್ನೂ ಎಳೆಯ ಮತ್ತು ಮೃದುವಾಗಿರುವಾಗಲೇ ಕೊಯ್ಯಬೇಕು. ತಡವಾದ ಕೊಯ್ಲು ಕಾಯಿಗಳ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಕಡಿಮೆ ಬೆಲೆಯನ್ನು ಪಡೆಯಬಹುದು ಹಾಗೂ ರುಚಿಯನ್ನು ಕಳೆದುಕೊಳ್ಳುತ್ತದೆ.
ಕೃಷಿಯಲ್ಲಿ, ದಕ್ಷತೆ ಮತ್ತು ಉತ್ಪಾದಕತೆ ಯಾವಾಗಲೂ ಮುಖ್ಯವಾಗಿರುತ್ತದೆ. ಈಗ ನಾವು ನಿಮಗೆ ನಿಮ್ಮ ನೀರಿನ ಸ್ಥಿತಿ, ನಿಮ್ಮ ಸಸ್ಯ ಸಂರಕ್ಷಣಾ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸುವ…
ಇತ್ತೀಚಿನ ಆಧುನಿಕ ಕೃಷಿಯಲ್ಲಿ ಸಮರ್ಥ ನೀರಿನ ನಿರ್ವಹಣೆ ಮಾಡುವುದು ನಿರ್ಣಾಯಕವಾಗಿದೆ ಮತ್ತು ಹನಿ ನೀರಾವರಿ ಪದ್ದತಿಯು ನೇರವಾಗಿ ಬೇರುಗಳ ವಲಯವನ್ನು ಗುರಿಯಾಗಿಸಿಕೊಂಡು ಸಸ್ಯಗಳಿಗೆ ನೀರನ್ನು ತಲುಪಿಸುವ ವಿಧಾನವನ್ನು…
ಸುಸ್ಥಿರ ಕೃಷಿ ಪದ್ದತಿಯಲ್ಲಿ ಸರಳವಾದ ಆದರೆ ಆಳವಾದ ವಿಷಯವೇನೆಂದರೆ ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವುದು. ಸಾವಯವ ಕೃಷಿ ತ್ಯಾಜ್ಯವು ನಮಗೆ ಹೊರೆಯಾಗಿರದೆ ಮಣ್ಣನ್ನು ಸಮೃದ್ಧಗೊಳಿಸುವ, ಸಸ್ಯಗಳನ್ನು ಪೋಷಿಸುವ ಮತ್ತು…
ಇತ್ತೀಚೆಗೆ ಬದಲಾಗುತ್ತಿರುವ ಕೃಷಿ ಭೂದೃಶ್ಯದ ಕಾರಣವಾಗಿ, ಸಮರ್ಥನೀಯ ಮತ್ತು ಸಮರ್ಥ ಕೃಷಿ ವಿಧಾನಗಳನ್ನು ಕಂಡುಹಿಡಿಯುವುದು ನಿರ್ಣಾಯಕವಾಗಿದೆ. ಅದಕ್ಕಾಗಿಯೇ ಪರಿಚಯಿಸುತ್ತಿದ್ದೇವೆ, ಎಪಿಸೆಲ್! ಎಕ್ಸೆಲ್ ಇಂಡಸ್ಟ್ರೀಸ್ ರವರ ಈ ನವೀನ…
ನೀರು ಕೃಷಿಯಲ್ಲಿ ಮೂಲಭೂತ ಸಂಪನ್ಮೂಲವಾಗಿದ್ದು, ಬೆಳೆಗಳ ವೃದ್ಧಿಗಾಗಿ ಅಗತ್ಯ ಪೋಷಕಾಂಶಗಳ ಮತ್ತು ಬೆಳೆ ರಕ್ಷಣೆಗೆ ಅಗತ್ಯವಾದ ರಾಸಾಯನಿಕಗಳನ್ನು ಸಾಗಿಸುವಲ್ಲಿ ವಾಹಕವಾಗಿ ಕಾರ್ಯನಿರ್ವಹಿಸುತ್ತದೆ . ಆದಾಗ್ಯೂ, ಕಳೆನಾಶಕಗಳು, ಕೀಟನಾಶಕಗಳು,…
ಹನಿ ನೀರಾವರಿ ವ್ಯವಸ್ಥೆ ಆಧುನಿಕ ಕೃಷಿಯ ಅತ್ಯಗತ್ಯ ಅಂಶವಾಗಿದೆ. ಇದು ಸಸ್ಯಗಳ ಬೇರುಗಳಿಗೆ ನೇರವಾಗಿ ನೀರನ್ನು ತಲುಪಿಸುವ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಈ ವಿಧಾನವು ನೀರನ್ನು ಸಂರಕ್ಷಿಸುವುದು…