Govt for Farmers

ಖಾಸಗಿ ಕೊಳವೆ ಬಾವಿ ಸಂಪರ್ಕ ಯೋಜನೆ

ಖಾಸಗಿ ಕೊಳವೆಬಾವಿ ಸಂಪರ್ಕ ಯೋಜನೆಯು, ರೈತರ ಹೊಲಗಳಲ್ಲಿ ಕೊಳವೆ ಬಾವಿಗಳನ್ನು ಅಳವಡಿಸಲು ಸರ್ಕಾರದ ಯೋಜನೆಯಾಗಿದೆ. ಹವಾಮಾನ ಬದಲಾವಣೆಯು ಕೃಷಿ  ಹಾಗೂ  ರೈತರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿದೆ. ರೈತರು ನೀರಾವರಿಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳನ್ನು ಸಹ ಎದುರಿಸಬೇಕಾಗುತ್ತದೆ. ಸುಧಾರಿತ ಮತ್ತು ಡೀಸೆಲ್‌ ಪಂಪ್‌ಗಳಿಂದ ರೈತರು ನೀರನ್ನು ಕೊಡಬೇಕಾಗುತ್ತದೆ.  ಈ ಯೋಜನೆಯಿಂದ ನೀರಿನ  ಅಗತ್ಯವನ್ನು ಪೂರೈಸಲು ಸಹಾಯ ಮಾಡುತ್ತದೆ ಮತ್ತು ನೀರಾವರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಉತ್ತಮ ಗುಣಮಟ್ಟದ ಕೃಷಿ ಉತ್ಪನ್ನಗಳನ್ನು ಪಡೆಯಲು ರೈತರಿಗೆ ಸಾಧ್ಯವಾಗಿಸುತ್ತದೆ.

ಖಾಸಗಿ ಕೊಳವೆ ಭಾವಿ ಸಂಪರ್ಕ ಯೋಜನೆಯ ಅವಲೋಕನ

  • ಯೋಜನೆಯ ಹೆಸರು – ಖಾಸಗಿ ಕೊಳವೆ ಭಾವಿ ಸಂಪರ್ಕ ಯೋಜನೆ
  • ಯೋಜನೆಯ ತಿದ್ದುಪಡಿ  ದಿನಾಂಕ – 2022
  • ಪ್ರಾಯೋಜಿತ ಸರ್ಕಾರ – ರಾಜ್ಯ ಸರ್ಕಾರ
  • ಆನ್ ಲೈನ್ ವೆಬ್‌ಸೈಟ್ – https://www.upenergy.in/
  • ಸಹಾಯವಾಣಿ ಸಂಖ್ಯೆ – 1912.

ಖಾಸಗಿ ಕೊಳವೆ ಭಾವಿ  ಸಂಪರ್ಕ ಯೋಜನೆಯ ಪ್ರಯೋಜನಗಳೇನು?

ಯೋಜನೆಯ ಉತ್ತಮ ಪ್ರಯೋಜನಗಳು ಈ ಕೆಳಗಿನಂತಿವೆ:

  • ಇದು ರೈತರಿಗೆ ದೊಡ್ಡ ಕೊಡುಗೆಯಾಗಿದೆ  – ಹಠಾತ್ ಹವಾಮಾನ ಬದಲಾವಣೆಗಳಿಂದಾಗಿ, ರೈತರು  ಇಳುವರಿಯಲ್ಲಿ ಹೊಡೆತವನ್ನು ಅನುಭವಿಸುತ್ತಿದ್ದಾರೆ.  ಈ ಪರಿಸ್ಥಿತಿಯಲ್ಲಿ, ಬೆಳೆಗಳಿಗೆ ನೀರು ಪೂರೈಕೆಯು  ರೈತರಿಗೆ ಮತ್ತೊಂದು ದೊಡ್ಡ ಸಮಸ್ಯೆಯಾಗಿದೆ. ರೈತರಿಗೆ ಈ ಯೋಜನೆಯು ಕೃಷಿಯಲ್ಲಿ ನೀರಾವರಿಯ  ಅಗತ್ಯತೆಯನ್ನು ಪೂರೈಸಲು ಕೊಳವೆ ಬಾವಿಗಳನ್ನು ಸ್ಥಾಪಿಸುವ ಮೂಲಕ ರೈತರಿಗೆ ಈ ಯೋಜನೆಯು ವರದಾನವಾಗಿ ಕಾರ್ಯನಿರ್ವಹಿಸುತ್ತದೆ.
  • ಇದು ನೀರಾವರಿ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುತ್ತದೆ – ಡೀಸೆಲ್-ಚಾಲಿತ ಕೊಳವೆ ಬಾವಿಗಳು ದುಬಾರಿಯಾಗಿದೆ ಮತ್ತು ಹಣದುಬ್ಬರವು ರೈತರಿಗೆ ಸಮಸ್ಯೆಯನ್ನು ಉಂಟುಮಾಡಬಹುದು, ಏಕೆಂದರೆ ಅವರು ಈಗಾಗಲೇ ಉತ್ಪಾದನೆಯ ಕುಸಿತದಿಂದ ತೊಂದರೆಗೊಳಗಾಗಿದ್ದಾರೆ.
  • ಕಡಿಮೆಯಾದ ಇಳುವರಿಯನ್ನು ರೈತರು ಎದುರಿಸಬೇಕಾಗಿದೆ. ಈ  ಯೋಜನೆಯು ನೀರಾವರಿಗೆ ಸಹಾಯ ಮಾಡುವ ವಿದ್ಯುತ್ ಕೊಳವೆ ಬಾವಿಗಳನ್ನು ಸ್ಥಾಪಿಸಲು ಅನುದಾನವನ್ನು ನೀಡುತ್ತದೆ  ಮತ್ತು ಕೃಷಿ ನೀರಾವರಿಯನ್ನು ಹೆಚ್ಚು ಸುಲಭಗೊಳಿಸುತ್ತದೆ.  ಬೆಳೆ ಉತ್ಪಾದನೆಯನ್ನು ಹೆಚ್ಚಿಸುವಂತೆ ಮಾಡುತ್ತದೆ ಮತ್ತು ರೈತರಿಗೆ ಅಂತಿಮವಾಗಿ ಹೆಚ್ಚು ಇಳುವರಿ ಪಡೆಯಲು  ಸಹಾಯ ಮಾಡುತ್ತದೆ.

ಖಾಸಗಿ ಕೊಳವೆ ಭಾವಿ  ಸಂಪರ್ಕ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ರೈತರು ಯೋಜನೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅದಕ್ಕೆ ಕೆಳಗಿನ ಹಂತಗಳು ಸಹಾಯ ಮಾಡಬಹುದು:

  • ಹಂತ 1– ರೈತರು ಅಧಿಕೃತ ವೆಬ್‌ಸೈಟ್ ಆಗಿರುವ https://www.upenergy.in/ ಗೆ ಭೇಟಿ ನೀಡಿ
  • ಹಂತ 2 – ಹೊಸ “ಟ್ಯೂಬ್‌ವೆಲ್ ಸಂಪರ್ಕ” ವಿಭಾಗ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
  • ಹಂತ 3 – ಅದರ ನಂತರ “ಟ್ಯೂಬ್‌ವೆಲ್ ಕನೆಕ್ಷನ್ ಆನ್‌ಲೈನ್ ಅಪ್ಲಿಕೇಶನ್” ಮೇಲೆ  ಕ್ಲಿಕ್ ಮಾಡಿ
  • ಹಂತ 4 -ಹೊಸ ನೋಂದಣಿ ಆಯ್ಕೆಯನ್ನು ಕ್ಲಿಕ್ ಮಾಡಿ
  • ಹಂತ 5 – ನೋಂದಣಿ ವಿವರಗಳನ್ನು ಭರ್ತಿ ಮಾಡಿ
  • ಹಂತ 6 – ಫಾರ್ಮ್ ಅನ್ನು ಸಲ್ಲಿಸಿ.
  • ಎಲ್ಲ ವಿವರಗಳನ್ನು ಸಲ್ಲಿಸಿದ ನಂತರ ರೈತರ ಜಮೀನಿನಲ್ಲಿ ಕೊಳವೆ ಬಾವಿ ಅಳವಡಿಸಲಾಗುವುದು.

ಅಗತ್ಯವಿರುವ ದಾಖಲೆಗಳೇನು?

  • ಅಪ್ಲಿಕೇಶನ್ ಸಂಖ್ಯೆ
  • ರಶೀದಿ ಸಂಖ್ಯೆ
  • ಮೊಬೈಲ್ ಸಂಖ್ಯೆ

ನಿರ್ಣಯ :

ಖಾಸಗಿ ಕೊಳವೆ ಬಾವಿ ಸಂಪರ್ಕ ಯೋಜನೆಯು, ರೈತರಿಗೆ ನೀರಿನ ಅವಶ್ಯಕತೆ ಮತ್ತು ಅವರ ಕೃಷಿ ಅಗತ್ಯಗಳನ್ನು ಪೂರೈಸುತ್ತದೆ.  ಈ ಯೋಜನೆಯಡಿ ಅಳವಡಿಸಲಾಗಿರುವ ಕೊಳವೆಬಾವಿಗಳು ರೈತರಿಗೆ ಹೆಚ್ಚು  ನೀರಿನ ಅಗತ್ಯತೆಗಳನ್ನು ನೆರವೇರಿಸುತ್ತದೆ .  ಹಣ್ಣುಗಳು, ಭತ್ತ, ಹತ್ತಿ ಮತ್ತು ಇತರ ತರಕಾರಿ ಬೆಳೆಗಳನ್ನು ಬೆಳೆಯಲು ರೈತರಿಗೆ ಅನುದಾನ ನೀಡುವಲ್ಲಿ ಸಹಾಯ ಮಾಡುತ್ತದೆ. ಇದಲ್ಲದೆ, ರೈತರು ಸುಲಭವಾಗಿ ಅಂತರ್ಜಲವನ್ನು ಕಾಪಾಡಲು  ಪರಿಣಾಮಕಾರಿಯಾಗಿದೆ.   ಈ ಎಲ್ಲಾ ಪ್ರಯೋಜನಗಳ ಜೊತೆಗೆ ಉತ್ತಮ ಬೆಳೆ ಇಳುವರಿಯನ್ನು ಪಡೆಯಲು ಸಹಾಯ ಮಾಡುತ್ತದೆ, ಈ ಯೋಜನೆಯು,ಅಧಿಕ ಬೆಳೆ ಲಾಭ ಪಡೆಯಲು  ಅನುಕೂಲಕರವಾಗಿದೆ.

Recent Posts

ಸೆಲ್ ಜೆಲ್: ಆಧುನಿಕ ಕೃಷಿಗಾಗಿ ನೀರಿನ ಉತ್ತಮ ಸ್ಥಿತಿಯನ್ನು ರೂಪಿಸುವ ಕ್ರಾಂತಿಕಾರಿ ಉತ್ಪನ್ನ

ಕೃಷಿಯಲ್ಲಿ, ದಕ್ಷತೆ ಮತ್ತು ಉತ್ಪಾದಕತೆ ಯಾವಾಗಲೂ ಮುಖ್ಯವಾಗಿರುತ್ತದೆ. ಈಗ ನಾವು ನಿಮಗೆ ನಿಮ್ಮ ನೀರಿನ ಸ್ಥಿತಿ, ನಿಮ್ಮ ಸಸ್ಯ ಸಂರಕ್ಷಣಾ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸುವ…

January 28, 2025

ಎಕ್ಸ್‌ಸ್ಕೇಲೆಂಟ್ : ಡ್ರಿಪ್ ಕ್ಲೀನಿಂಗ್ ಕಾರ್ಯವಿಧಾನದ ಮೂಲಕ ಬೆಳೆಗಳಿಗೆ ಸುರಕ್ಷಿತ ಪರಿಹಾರಗಳು

ಇತ್ತೀಚಿನ ಆಧುನಿಕ ಕೃಷಿಯಲ್ಲಿ ಸಮರ್ಥ ನೀರಿನ ನಿರ್ವಹಣೆ ಮಾಡುವುದು ನಿರ್ಣಾಯಕವಾಗಿದೆ ಮತ್ತು ಹನಿ ನೀರಾವರಿ ಪದ್ದತಿಯು  ನೇರವಾಗಿ ಬೇರುಗಳ ವಲಯವನ್ನು ಗುರಿಯಾಗಿಸಿಕೊಂಡು ಸಸ್ಯಗಳಿಗೆ ನೀರನ್ನು ತಲುಪಿಸುವ ವಿಧಾನವನ್ನು…

January 28, 2025

ಬಯೋಕ್ಯುಲಮ್ AW: ಬೆಳೆ ಸುಸ್ಥಿರತೆಗಾಗಿ ಬಳಸಲು ಸಿದ್ಧವಾಗಿರುವ ಡಿಕಂಪೋಸರ್

ಸುಸ್ಥಿರ ಕೃಷಿ ಪದ್ದತಿಯಲ್ಲಿ ಸರಳವಾದ ಆದರೆ ಆಳವಾದ ವಿಷಯವೇನೆಂದರೆ ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವುದು. ಸಾವಯವ ಕೃಷಿ ತ್ಯಾಜ್ಯವು ನಮಗೆ ಹೊರೆಯಾಗಿರದೆ ಮಣ್ಣನ್ನು ಸಮೃದ್ಧಗೊಳಿಸುವ, ಸಸ್ಯಗಳನ್ನು ಪೋಷಿಸುವ ಮತ್ತು…

January 28, 2025

ಎಪಿಸೆಲ್: ಸುಸ್ಥಿರ ಕೃಷಿಗಾಗಿ ನಿಮ್ಮ ಬೆಳೆಗಳ ಸಂಪೂರ್ಣ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ

ಇತ್ತೀಚೆಗೆ ಬದಲಾಗುತ್ತಿರುವ ಕೃಷಿ ಭೂದೃಶ್ಯದ ಕಾರಣವಾಗಿ, ಸಮರ್ಥನೀಯ ಮತ್ತು ಸಮರ್ಥ ಕೃಷಿ ವಿಧಾನಗಳನ್ನು ಕಂಡುಹಿಡಿಯುವುದು ನಿರ್ಣಾಯಕವಾಗಿದೆ. ಅದಕ್ಕಾಗಿಯೇ ಪರಿಚಯಿಸುತ್ತಿದ್ದೇವೆ, ಎಪಿಸೆಲ್! ಎಕ್ಸೆಲ್ ಇಂಡಸ್ಟ್ರೀಸ್‌ ರವರ ಈ ನವೀನ…

January 28, 2025

ಸೆಲ್ ಜೆಲ್‌ನೊಂದಿಗೆ ಕೃಷಿ ದಕ್ಷತೆಯನ್ನು ಹೆಚ್ಚಿಸುವುದು: ನೀರಿನ ಕಂಡೀಷನಿಂಗ್ ಮತ್ತು pH ಸಮತೋಲನ ಮಾಡಲು ಸಲಹೆಗಳು

ನೀರು ಕೃಷಿಯಲ್ಲಿ ಮೂಲಭೂತ ಸಂಪನ್ಮೂಲವಾಗಿದ್ದು, ಬೆಳೆಗಳ ವೃದ್ಧಿಗಾಗಿ ಅಗತ್ಯ ಪೋಷಕಾಂಶಗಳ ಮತ್ತು ಬೆಳೆ ರಕ್ಷಣೆಗೆ ಅಗತ್ಯವಾದ ರಾಸಾಯನಿಕಗಳನ್ನು ಸಾಗಿಸುವಲ್ಲಿ ವಾಹಕವಾಗಿ ಕಾರ್ಯನಿರ್ವಹಿಸುತ್ತದೆ . ಆದಾಗ್ಯೂ, ಕಳೆನಾಶಕಗಳು, ಕೀಟನಾಶಕಗಳು,…

January 28, 2025

ಎಕ್ಸ್‌ಸ್ಕೇಲೆಂಟ್: ಹನಿ ನೀರಾವರಿ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಸುರಕ್ಷಿತ ಮತ್ತು ಪರಿಣಾಮಕಾರಿ ಪರಿಹಾರ

ಹನಿ ನೀರಾವರಿ ವ್ಯವಸ್ಥೆ ಆಧುನಿಕ ಕೃಷಿಯ ಅತ್ಯಗತ್ಯ ಅಂಶವಾಗಿದೆ. ಇದು ಸಸ್ಯಗಳ ಬೇರುಗಳಿಗೆ ನೇರವಾಗಿ ನೀರನ್ನು ತಲುಪಿಸುವ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಈ ವಿಧಾನವು ನೀರನ್ನು ಸಂರಕ್ಷಿಸುವುದು…

January 28, 2025