Govt for Farmers

ಪ್ರಧಾನ ಮಂತ್ರಿ ಕಿಸಾನ್ ಖಾದ್ ಯೋಜನೆ – ರಸಗೊಬ್ಬರಗಳ ಖರೀದಿಯ ಮೇಲೆ ಸಿಗಲಿದೆ ಸರ್ಕಾರದಿಂದ ಸಬ್ಸಿಡಿ!

ಪ್ರಧಾನಮಂತ್ರಿ ಕಿಸಾನ್ ಖಾದ್ ಯೋಜನೆಯು ರೈತರ  ಬೆಳೆಗಳಿಗೆ ಗುಣಮಟ್ಟದ ರಸಗೊಬ್ಬರಗಳನ್ನು ಪಡೆಯಲು ಸಬ್ಸಿಡಿಯನ್ನು ನೀಡುತ್ತದೆ. ಇದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು ಪಿಎಂ ಕಿಸಾನ್ ಯೋಜನೆಯಡಿ ರೈತರಿಗೆ ಉತ್ತಮ ಗುಣಮಟ್ಟದ ರಸಗೊಬ್ಬರಗಳನ್ನು ನೀಡುವುದಕ್ಕೆ ಇದನ್ನು ಯೋಜಿಸಲಾಗಿದೆ. ಈ ಯೋಜನೆಯಡಿಯಲ್ಲಿ  ರೈತರು ವಿವಿಧ ವರ್ಗಗಳ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಈ ನಿರ್ದಿಷ್ಟ ಕಿಸಾನ್ ಖಾದ್  ಯೋಜನೆಯು ರಸಗೊಬ್ಬರ ಖರೀದಿಗಾಗಿ,  ರೈತರ ಬ್ಯಾಂಕ್ ಖಾತೆಗೆ ಹಣವನ್ನು ನೇರವಾಗಿ ವರ್ಗಾಯಿಸಲಾಗುತ್ತದೆ.

ಯೋಜನೆಯ  ಅವಲೋಕನ

  • ಯೋಜನೆಯ ಹೆಸರು: ಪ್ರಧಾನ ಮಂತ್ರಿ ಕಿಸಾನ್ ಖಾದ್  ಯೋಜನೆ
  • ಯೋಜನೆಯ ತಿದ್ದುಪಡಿ : ಅಕ್ಟೋಬರ್ 2022
  • ಯೋಜನೆಯ ಮೊತ್ತ ಹಂಚಿಕೆ : ವರ್ಷಕ್ಕೆ INR 5000
  • ಸರ್ಕಾರದ  ಪ್ರಕಾರ: ಭಾರತ ಕೇಂದ್ರ ಸರ್ಕಾರ
  • ಪ್ರಾಯೋಜಿತ ಸರ್ಕಾರ : PM-ಕಿಸಾನ್ ಸಮ್ಮಾನ್ ನಿಧಿ
  • ಅರ್ಜಿ ಸಲ್ಲಿಸಲು ವೆಬ್‌ಸೈಟ್: https://fw.pmkisan.gov.in/
  • ಸಹಾಯವಾಣಿ ಸಂಖ್ಯೆ: 011-24300606,155261

ಪ್ರಧಾನ ಮಂತ್ರಿ ಕಿಸಾನ್ ಖಾದ್ ಯೋಜನೆಯ ವೈಶಿಷ್ಟ್ಯಗಳು

  • ಪ್ರಧಾನ ಮಂತ್ರಿ ಕಿಸಾನ್ ಖಾದ್ ಯೋಜನೆ ಭಾರತ ಸರ್ಕಾರದ ಇತ್ತೀಚಿನ ರೈತ ಸ್ನೇಹಿ ಯೋಜನೆಗಳಲ್ಲಿ ಒಂದು. ಇದು ಫಲಾನುಭವಿಗಳಿಗೆ ರಸಗೊಬ್ಬರಗಳನ್ನು ಖರೀದಿಸಲು ವರ್ಷಕ್ಕೆ INR 5000 ನೇರ ಆರ್ಥಿಕ ಪ್ರಯೋಜನಗಳನ್ನು ಪಡೆಯಲು ಸಹಾಯ ಮಾಡುತ್ತದೆ.
  • ತಮ್ಮ ರಸಗೊಬ್ಬರ ಅಗತ್ಯತೆಗಳನ್ನು ಪೂರೈಸಲು ಹೆಣಗಾಡುತ್ತಿರುವವರಿಗೆ ಈ ಯೋಜನೆ ದೊಡ್ಡ ಸಹಾಯ ಹಸ್ತವಾಗಿದೆ. ಅಕ್ಟೋಬರ್ 2022 ರಲ್ಲಿ ಘೋಷಿಸಲಾದ ಈ ಯೋಜನೆಯು ರೈತರಿಗೆ ದೀಪಾವಳಿ ಉಡುಗೊರೆಯಾಗಿ ಬಂದಿದೆ.
  • ಫಲಾನುಭವಿಗಳು ನಿಜವಾದ ರೈತರೇ ಆಗಿರುತ್ತಾರೆ.
  • ಪ್ರಧಾನಮಂತ್ರಿ ಕಿಸಾನ್ ಖಾದ್ ಯೋಜನೆಯ ಮಾರ್ಗಸೂಚಿಗಳು ಯಾರು ಅರ್ಹರಲ್ಲ ಎಂಬುದನ್ನು ನಿರ್ದಿಷ್ಟಪಡಿಸುತ್ತದೆ, ಇದರಿಂದ ಯಾವುದೇ ಅನರ್ಹ ಅಭ್ಯರ್ಥಿ ಮಧ್ಯಪ್ರವೇಶಿಸದೆ ಅಗತ್ಯವಿರುವವರು ಮಾತ್ರ ನಿಜವಾದ ಸಹಾಯವನ್ನು ಪಡೆಯುತ್ತಾರೆ.

ಪ್ರಧಾನ ಮಂತ್ರಿ ಕಿಸಾನ್ ಖಾದ್ ಯೋಜನೆಯ ಪ್ರಯೋಜನಗಳು

  • ಪ್ರಧಾನಮಂತ್ರಿ ಕಿಸಾನ್ ಖಾದ್ ಯೋಜನೆಯು ದುಬಾರಿ ರಸಗೊಬ್ಬರಗಳನ್ನು ಪಡೆಯಲು ಸಾಧ್ಯವಾಗದ ಅಥವಾ ಕೆಲವೊಮ್ಮೆ ಮೂಲಭೂತ ರಸಗೊಬ್ಬರ ಅವಶ್ಯಕತೆ ಗಳನ್ನು ಪೂರೈಸಿಕೊಳ್ಳಲಾಗದ  ರೈತರಿಗೆ ಅನುಕೂಲಕರ ಆರ್ಥಿಕ ಬೆಂಬಲವಾಗಿದೆ. ತಮ್ಮ ಇಳುವರಿಯನ್ನು ಹೆಚ್ಚಿಸಲು ಸಹಾಯ ಮಾಡಲು ರೈತರಿಗೆ  ವರ್ಷಕ್ಕೆ ಎರಡು ಬಾರಿ ರೂ  2500 ರಂತೆ ನೀಡಲಾಗುತ್ತಿದೆ.
  • ಈ ಪ್ರಧಾನ ಮಂತ್ರಿ ಕಿಸಾನ್ ಖಾದ್ ಯೋಜನೆಯು ರೈತರಿಗೆ ಈಗಾಗಲೇ ಜಾರಿಗೊಳಿಸಲಾದ INR 6000 ಜೊತೆಗೆ ಹೆಚ್ಚುವರಿ ಪ್ರಯೋಜನಗಳನ್ನು ಒದಗಿಸುವ ಯೋಜನೆಯಾಗಿದೆ. ಈ ಯೋಜನೆಯೊಂದಿಗೆ, ರೈತರಿಗೆ ವಾರ್ಷಿಕ ಆರ್ಥಿಕ ನೆರವು ರೂ. 11,000 ಆಗಿರುತ್ತದೆ.
  • ಇದಕ್ಕಾಗಿ ಅರ್ಜಿ ಪ್ರಕ್ರಿಯೆಯು ಸಂಬಂಧಿತ KYC ವಿಧಿವಿಧಾನಗಳೊಂದಿಗೆ PM ಕಿಸಾನ್ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿದೆ.
  • ಎಲ್ಲ ಮಧ್ಯವರ್ತಿಗಳನ್ನು ಬೈಪಾಸ್ ಮಾಡಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾ ಆಗುವುದು ಇಲ್ಲಿನ ದೊಡ್ಡ ಲಾಭವಾಗಿದೆ.

ಪ್ರಧಾನ ಮಂತ್ರಿ ಕಿಸಾನ್ ಖಾದ್ ಯೋಜನೆಯ ನ್ಯೂನತೆಗಳು

ಈ ಯೋಜನೆಯು ಸಣ್ಣ ಪ್ರಮಾಣದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ದೊಡ್ಡ ಪ್ರಮಾಣದ ರೈತರಿಗೆ, ಹೆಚ್ಚಿನ ಪ್ರಮಾಣದ ರಸಗೊಬ್ಬರಗಳು ಬೇಕಾಗಿರುವುದರಿಂದ ಅವರ ಬೇಡಿಕೆಗಳನ್ನು ಪೂರೈಸಲು ಇದು ಸಾಕಾಗುವುದಿಲ್ಲ. ಅದೇ ಸಮಯದಲ್ಲಿ, ಭಾರತದ ಕೇಂದ್ರ ಸರ್ಕಾರದ ಇತರ ಯೋಜನೆಗಳು ಇದಕ್ಕೆ ಸಹಾಯ ಮಾಡುತ್ತವೆ. ಇದಲ್ಲದೆ, ಹೆಚ್ಚು ಪ್ರಮಾಣದಲ್ಲಿ ಹಣಕಾಸಿನ ನೆರವು ಉತ್ತಮ ಆಯ್ಕೆಯಾಗಿರಬಹುದು. ಈ ರೀತಿಯಲ್ಲಿ ರೈತರು ತಮ್ಮ ಕೃಷಿ ಭೂಮಿ ಅಥವಾ ವೆಚ್ಚಗಳಿಗೆ ಅನುಗುಣವಾಗಿ ಬೆಂಬಲವನ್ನು ಪಡೆಯುತ್ತಾರೆ. 

ಪಿಎಂ ಕಿಸಾನ್ ಖಾದ್ ಯೋಜನೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

ಪಿಎಂ ಕಿಸಾನ್ ಖಾದ್ ಯೋಜನೆಯ ಪ್ರಯೋಜನಗಳನ್ನು ಪಡೆಯಲು, ನೀವು ಪಿಎಂ ಕಿಸಾನ್ ಅಧಿಕೃತ ವೆಬ್‌ಸೈಟ್‌ಗೆ ಹೋಗಬೇಕಾಗುತ್ತದೆ.

  • ಹಂತ 1: ಪಿಎಂ ಕಿಸಾನ್ ಖಾದ್ ಯೋಜನೆ ಆನ್‌ಲೈನ್ ನೋಂದಣಿಯನ್ನು ಪೂರ್ಣಗೊಳಿಸಲು ನೀವು ಮೊದಲು DBT (ನೇರ ಲಾಭ ವರ್ಗಾವಣೆ) ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ಇಲ್ಲಿ, ನೀವು ನೋಂದಾಯಿಸಿಕೊಂಡ ನಂತರ,  ನಿಮ್ಮ ಬ್ಯಾಂಕ್ ಖಾತೆಯನ್ನು ನಿಮ್ಮ ಆಧಾರ್ ವಿವರಗಳೊಂದಿಗೆ ಲಿಂಕ್ ಮಾಡಬೇಕು.
  • ಹಂತ 2: ಮುಂದಿನ ಹಂತವು ಮೊಬೈಲ್ ಸಂಖ್ಯೆಯ OTP ಮೂಲಕ KYC ಅನ್ನು ಪೂರ್ಣಗೊಳಿಸುವುದು, ಅದು ಆಧಾರ್ ನೋಂದಾಯಿತ ಸಂಖ್ಯೆಯಂತೆಯೇ ಇರಬೇಕು.
  • ಹಂತ 3: ಈಗ, ನೀವು DBT ಪೋರ್ಟಲ್‌ನಿಂದ PM ಕಿಸಾನ್ ಯೋಜನೆಯನ್ನು ಆಯ್ಕೆ ಮಾಡಬಹುದು ಮತ್ತು ಆಯಾ ಸೈಟ್‌ಗೆ ಹೋಗಬಹುದು ಅಥವಾ ನೇರವಾಗಿ ಅಲ್ಲಿಗೆ ಭೇಟಿ ನೀಡಬಹುದು.
  • ಹಂತ 4: ನಿಮ್ಮ ಖಾತೆಗೆ ಲಾಗ್ ಇನ್ ಮಾಡಿ, ಅಗತ್ಯವಿರುವ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಮತ್ತು ಪಿಎಂ ಕಿಸಾನ್ ಖಾದ್ ಯೋಜನೆ ಪ್ರಯೋಜನಗಳಿಗೆ ಅರ್ಜಿ ಸಲ್ಲಿಸಲು ಫಾರ್ಮ್ ಅನ್ನು ಸಲ್ಲಿಸಿ.
  • ನೀವು ಆನ್‌ಲೈನ್ ನೋಂದಣಿಯನ್ನು ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ, ನೀವು ಸ್ಥಳೀಯ ಕೃಷಿ ಇಲಾಖೆ ಕಚೇರಿಯನ್ನು ಸಹ ಸಂಪರ್ಕಿಸಬಹುದು.

ಪಿಎಂ ಕಿಸಾನ್ ಖಾದ್ ಯೋಜನೆ ಆನ್‌ಲೈನ್ ನೋಂದಣಿಗೆ ಅಗತ್ಯವಿರುವ ದಾಖಲೆಗಳು: 

  • ಆಧಾರ್ ಕಾರ್ಡ್
  • ಪಡಿತರ ಚೀಟಿಯ ಪ್ರತಿ
  • ಬ್ಯಾಂಕ್ ಪಾಸ್ ಬುಕ್ ನ ಪ್ರತಿ
  • ಮೊಬೈಲ್ ನಂಬರ್
  • ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
  • ಭೂ ಕಾಗದಗಳು

ನೀವು ಪಿಎಂ ಕಿಸಾನ್ ಖಾದ್ ಯೋಜನೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದಾಗ, ನಿಮ್ಮ ಭಾಷೆ, ಗ್ರಾಮ ಅಥವಾ ಪಟ್ಟಣವನ್ನು ನೀವು ಆಯ್ಕೆ ಮಾಡಬಹುದು ಮತ್ತು ಅದಕ್ಕೆ ಅನುಗುಣವಾಗಿ ಅರ್ಜಿ ನಮೂನೆಯು ಲಭ್ಯವಿರುತ್ತದೆ. ಹೆಚ್ಚಿನ ರೈತರು ಸರ್ಕಾರಿ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳುವುದರಿಂದ ಈ ಯೋಜನೆಗೆ ನೋಂದಾಯಿಸುವುದು ಸುಲಭ. ಪ್ರಯೋಜನಗಳು ಬ್ಯಾಂಕ್ ಮೂಲಕ ನೇರ ವರ್ಗಾವಣೆಯಾಗುವುದರಿಂದ, ಭಾರತ ಸರ್ಕಾರದಿಂದ ಎಲ್ಲಾ ಇತರ ಹಣಕಾಸಿನ ನೆರವು ಪಡೆಯಲು DBT ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳುವುದು ಅತ್ಯಗತ್ಯ.

Recent Posts

ಸೆಲ್ ಜೆಲ್: ಆಧುನಿಕ ಕೃಷಿಗಾಗಿ ನೀರಿನ ಉತ್ತಮ ಸ್ಥಿತಿಯನ್ನು ರೂಪಿಸುವ ಕ್ರಾಂತಿಕಾರಿ ಉತ್ಪನ್ನ

ಕೃಷಿಯಲ್ಲಿ, ದಕ್ಷತೆ ಮತ್ತು ಉತ್ಪಾದಕತೆ ಯಾವಾಗಲೂ ಮುಖ್ಯವಾಗಿರುತ್ತದೆ. ಈಗ ನಾವು ನಿಮಗೆ ನಿಮ್ಮ ನೀರಿನ ಸ್ಥಿತಿ, ನಿಮ್ಮ ಸಸ್ಯ ಸಂರಕ್ಷಣಾ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸುವ…

January 28, 2025

ಎಕ್ಸ್‌ಸ್ಕೇಲೆಂಟ್ : ಡ್ರಿಪ್ ಕ್ಲೀನಿಂಗ್ ಕಾರ್ಯವಿಧಾನದ ಮೂಲಕ ಬೆಳೆಗಳಿಗೆ ಸುರಕ್ಷಿತ ಪರಿಹಾರಗಳು

ಇತ್ತೀಚಿನ ಆಧುನಿಕ ಕೃಷಿಯಲ್ಲಿ ಸಮರ್ಥ ನೀರಿನ ನಿರ್ವಹಣೆ ಮಾಡುವುದು ನಿರ್ಣಾಯಕವಾಗಿದೆ ಮತ್ತು ಹನಿ ನೀರಾವರಿ ಪದ್ದತಿಯು  ನೇರವಾಗಿ ಬೇರುಗಳ ವಲಯವನ್ನು ಗುರಿಯಾಗಿಸಿಕೊಂಡು ಸಸ್ಯಗಳಿಗೆ ನೀರನ್ನು ತಲುಪಿಸುವ ವಿಧಾನವನ್ನು…

January 28, 2025

ಬಯೋಕ್ಯುಲಮ್ AW: ಬೆಳೆ ಸುಸ್ಥಿರತೆಗಾಗಿ ಬಳಸಲು ಸಿದ್ಧವಾಗಿರುವ ಡಿಕಂಪೋಸರ್

ಸುಸ್ಥಿರ ಕೃಷಿ ಪದ್ದತಿಯಲ್ಲಿ ಸರಳವಾದ ಆದರೆ ಆಳವಾದ ವಿಷಯವೇನೆಂದರೆ ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವುದು. ಸಾವಯವ ಕೃಷಿ ತ್ಯಾಜ್ಯವು ನಮಗೆ ಹೊರೆಯಾಗಿರದೆ ಮಣ್ಣನ್ನು ಸಮೃದ್ಧಗೊಳಿಸುವ, ಸಸ್ಯಗಳನ್ನು ಪೋಷಿಸುವ ಮತ್ತು…

January 28, 2025

ಎಪಿಸೆಲ್: ಸುಸ್ಥಿರ ಕೃಷಿಗಾಗಿ ನಿಮ್ಮ ಬೆಳೆಗಳ ಸಂಪೂರ್ಣ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ

ಇತ್ತೀಚೆಗೆ ಬದಲಾಗುತ್ತಿರುವ ಕೃಷಿ ಭೂದೃಶ್ಯದ ಕಾರಣವಾಗಿ, ಸಮರ್ಥನೀಯ ಮತ್ತು ಸಮರ್ಥ ಕೃಷಿ ವಿಧಾನಗಳನ್ನು ಕಂಡುಹಿಡಿಯುವುದು ನಿರ್ಣಾಯಕವಾಗಿದೆ. ಅದಕ್ಕಾಗಿಯೇ ಪರಿಚಯಿಸುತ್ತಿದ್ದೇವೆ, ಎಪಿಸೆಲ್! ಎಕ್ಸೆಲ್ ಇಂಡಸ್ಟ್ರೀಸ್‌ ರವರ ಈ ನವೀನ…

January 28, 2025

ಸೆಲ್ ಜೆಲ್‌ನೊಂದಿಗೆ ಕೃಷಿ ದಕ್ಷತೆಯನ್ನು ಹೆಚ್ಚಿಸುವುದು: ನೀರಿನ ಕಂಡೀಷನಿಂಗ್ ಮತ್ತು pH ಸಮತೋಲನ ಮಾಡಲು ಸಲಹೆಗಳು

ನೀರು ಕೃಷಿಯಲ್ಲಿ ಮೂಲಭೂತ ಸಂಪನ್ಮೂಲವಾಗಿದ್ದು, ಬೆಳೆಗಳ ವೃದ್ಧಿಗಾಗಿ ಅಗತ್ಯ ಪೋಷಕಾಂಶಗಳ ಮತ್ತು ಬೆಳೆ ರಕ್ಷಣೆಗೆ ಅಗತ್ಯವಾದ ರಾಸಾಯನಿಕಗಳನ್ನು ಸಾಗಿಸುವಲ್ಲಿ ವಾಹಕವಾಗಿ ಕಾರ್ಯನಿರ್ವಹಿಸುತ್ತದೆ . ಆದಾಗ್ಯೂ, ಕಳೆನಾಶಕಗಳು, ಕೀಟನಾಶಕಗಳು,…

January 28, 2025

ಎಕ್ಸ್‌ಸ್ಕೇಲೆಂಟ್: ಹನಿ ನೀರಾವರಿ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಸುರಕ್ಷಿತ ಮತ್ತು ಪರಿಣಾಮಕಾರಿ ಪರಿಹಾರ

ಹನಿ ನೀರಾವರಿ ವ್ಯವಸ್ಥೆ ಆಧುನಿಕ ಕೃಷಿಯ ಅತ್ಯಗತ್ಯ ಅಂಶವಾಗಿದೆ. ಇದು ಸಸ್ಯಗಳ ಬೇರುಗಳಿಗೆ ನೇರವಾಗಿ ನೀರನ್ನು ತಲುಪಿಸುವ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಈ ವಿಧಾನವು ನೀರನ್ನು ಸಂರಕ್ಷಿಸುವುದು…

January 28, 2025