Govt for Farmers

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ

ಕೃಷಿಯಲ್ಲಿ ನೀರು ಪ್ರಮುಖ ಪಾತ್ರ ವಹಿಸುತ್ತದೆ. ಭಾರತದಲ್ಲಿ ಸುಮಾರು 80% ನೀರಿನ ಬಳಕೆಯನ್ನು ಕೃಷಿ ನೀರಾವರಿಗಾಗಿ ಬಳಸಲಾಗುತ್ತದೆ. ಭಾರತೀಯ ರೈತರು ಇನ್ನೂ ತಮ್ಮ ಜಮೀನುಗಳಿಗೆ ನೀರಾವರಿಗಾಗಿ ಮಳೆಯ ಮೇಲೆ ಅವಲಂಬಿತರಾಗಿದ್ದಾರೆ, ಇದರಿಂದಾಗಿ ಅವರು ಬೆಳೆ ವೈಫಲ್ಯ ಮತ್ತು ಇತರ ಅಪಾಯಗಳಿಗೆ ಗುರಿಯಾಗುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು, ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು 2015 ರಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (PMKSY) ಅನ್ನು ಜಾರಿಗೆ ತಂದಿದೆ . ಈ ಯೋಜನೆಯು ಕೃಷಿ ಉತ್ಪಾದಕತೆಯನ್ನು ಸುಧಾರಿಸಲು ಮತ್ತು ನೀರಿನ ಸಂಪನ್ಮೂಲಗಳ ಉತ್ತಮ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಸಮಗ್ರ ಪರಿಹಾರವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಪ್ರಮುಖ ಅಂಶವೆಂದರೆ ಸೂಕ್ಷ್ಮ ನೀರಾವರಿ ಬಳಕೆ ಏಕೆಂದರೆ ಸೂಕ್ಷ್ಮ ನೀರಾವರಿ ಬಳಕೆಯಿಂದ  ಕೃಷಿಯಲ್ಲಿ  ನೀರಿನ ಸಮರ್ಥ ಬಳಕೆಯನ್ನು ಖಚಿತಪಡಿಸುತ್ತದೆ. 

ಯೋಜನೆಯ ಅವಲೋಕನ:

  • ಯೋಜನೆಯ ಹೆಸರು: ಪ್ರಧಾನ ಮಂತ್ರಿ ಕೃಷಿ ಸಿಂಚಯೀ ಯೋಜನೆ
  • ಯೋಜನೆ ಜಾರಿಗೊಳಿಸಲಾದ ವರ್ಷ: 2015
  • ಯೋಜನೆಯ ಅನುದಾನದ ಮಂಜೂರು : 93,068 ಕೋಟಿ (ಕೇಂದ್ರ ಸಹಾಯ – 37,454)
  • ಯೋಜನೆಯ ಪ್ರಕಾರ: ಕೇಂದ್ರ ವಲಯದ ಯೋಜನೆ/ಕೇಂದ್ರ ಸರ್ಕಾರದ ಯೋಜನೆ
  • ಪ್ರಾಯೋಜಿತ ಇಲಾಖೆ: ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ
  • ಅರ್ಜಿ ಸಲ್ಲಿಸಲು ವೆಬ್‌ಸೈಟ್: https://pmksy.gov.in/
  • ಸಹಾಯವಾಣಿ ಸಂಖ್ಯೆ: NA

ಪ್ರಧಾನ ಮಂತ್ರಿ ಕೃಷಿ ಸಿಂಚಯೀ ಯೋಜನೆಯ ಘಟಕಗಳು:

  1. ವೇಗವರ್ಧಿತ/ತ್ವರಿತ  ನೀರಾವರಿ ಪ್ರಯೋಜನ ಕಾರ್ಯಕ್ರಮ (AIBP): ಈ ಘಟಕದ ಉದ್ದೇಶವು ಅಣೆಕಟ್ಟುಗಳು, ಬ್ಯಾರೇಜ್‌ಗಳು, ಕಾಲುವೆಗಳು ಮತ್ತು ಬಾವಿಗಳಂತಹ ಚಾಲ್ತಿಯಲ್ಲಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಹಣಕಾಸಿನ ನೆರವನ್ನು  ರಾಜ್ಯಗಳಿಗೆ  ನೀಡುವುದು
  2. ಹರ್ ಖೇತ್ ಕೋ ಪಾನಿ (HKKP): HKKP ಘಟಕವು ಸೂಕ್ಷ್ಮ ನೀರಾವರಿ, ಜಲಾನಯನ ಅಭಿವೃದ್ಧಿ ಮತ್ತು ಮಳೆನೀರು ಕೊಯ್ಲು ಸೇರಿದಂತೆ ನೀರಿನ ಸಂರಕ್ಷಣೆ ಮತ್ತು ನಿರ್ವಹಣೆಗೆ ಸಮಗ್ರ  ಪರಿಹಾರಗಳನ್ನು ಒದಗಿಸುವ ಮೂಲಕ ಕೃಷಿಯಲ್ಲಿ  ನೀರಿನ ಬಳಕೆಯ ದಕ್ಷತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.
  3. ಜಲಾನಯನ ಅಭಿವೃದ್ಧಿ ಘಟಕ (WDC): PMKSY ಯಲ್ಲಿನ ಜಲಾನಯನ ಘಟಕವು ಮಣ್ಣಿನ ತೇವಾಂಶದ ಮಟ್ಟವನ್ನು ಮತ್ತು ಅಂತರ್ಜಲ ಮರುಪೂರಣವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

(ಗಮನಿಸಿ: ಮೊದಲು PMKSY ಯ ಭಾಗವಾಗಿದ್ದ ಪ್ರತಿ ಹನಿ ಹೆಚ್ಚು ಬೆಳೆ ಘಟಕವನ್ನು ಈಗ ಪ್ರತ್ಯೇಕವಾಗಿ ಅಳವಡಿಸಲಾಗಿದೆ) 

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ವೈಶಿಷ್ಟ್ಯಗಳು:

ವರ್ಗ 

ಟಿಪ್ಪಣಿಗಳು

ಅವಧಿ 2026 ರವರೆಗೆ ವಿಸ್ತರಿಸಲಾಗಿದೆ (ಈ ಹಿಂದೆ ಇದು 2020 ರವರೆಗೆ ಇತ್ತು)
ಫಲಾನುಭವಿಗಳು ರೈತರು
PMKSY ಗಾಗಿ ಅರ್ಹತಾ ಮಾನದಂಡಗಳು
  • ಯಾವುದೇ ವರ್ಗ/ವಿಭಾಗದ ರೈತರು
  • ಜಮೀನು ಹೊಂದಿರುವ ರೈತರು ಯೋಜನೆಯಿಂದ ಗರಿಷ್ಠ ಲಾಭವನ್ನು ಪಡೆಯುತ್ತಾರೆ
  • ಸ್ವಸಹಾಯ ಸಂಸ್ಥೆಗಳು (ಎಸ್‌ಎಚ್‌ಒಗಳು), ರೈತರ ಉತ್ಪಾದಕರ ಗುಂಪು, ಟ್ರಸ್ಟ್ ಸಹಕಾರ ಸಂಘಗಳಿಗೆ ಸೇರಿದ ವ್ಯಕ್ತಿಗಳು
  • ಬಾಡಿಗೆ/ಗುತ್ತಿಗೆ ನೀಡಿದ ಭೂಮಿಯಲ್ಲಿ ಕೆಲಸ ಮಾಡುವ ರೈತರು
ಒಳಗೊಂಡಿರುವ ಸಮಿತಿಗಳು
  • ರಾಷ್ಟ್ರೀಯ ಚುಕ್ಕಾಣಿ ಸಮಿತಿ (NSC):
    • ಪ್ರಧಾನ ಮಂತ್ರಿಯವರ ನೇತೃತ್ವದಲ್ಲಿ
    • ಕಾರ್ಯಕ್ರಮದ ಚೌಕಟ್ಟಿಗೆ ಗುರಿ  ನಿರ್ದೇಶನವನ್ನು ಒದಗಿಸಿವುದು
  • ರಾಷ್ಟ್ರೀಯ ಕಾರ್ಯಕಾರಿ ಸಮಿತಿ (NEC):
    • NITI ಆಯೋಗ್‌ನ ಉಪಾಧ್ಯಕ್ಷರ ನೇತೃತ್ವದಲ್ಲಿ
    • • ರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಕ್ರಮ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ಆಡಳಿತಾತ್ಮಕ ಸಮಸ್ಯೆಗಳನ್ನು ಪರಿಹರಿಸುತ್ತದೆ
ಒಳಗೊಂಡಿರು ರಾಜ್ಯಗಳು ಈಶಾನ್ಯ ರಾಜ್ಯಗಳು ಸೇರಿದಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರ ಆಡಳಿತ ಪ್ರದೇಶಗಳು ಈ ಯೋಜನೆಯ ವ್ಯಾಪ್ತಿಗೆ ಒಳಪಡುತ್ತವೆ
PMKSY – HKKP ಹೊಂದಿರುವ ಪ್ರದೇಶಗಳಿಗೆ ಮಾತ್ರ ಅನ್ವಯಿಸುತ್ತದೆ
  • ಅಂತರ್ಜಲ ಅಭಿವೃದ್ಧಿ ಹಂತ < 60%
  • ಸರಾಸರಿ ಮಳೆ 750mm ಗಿಂತ ಹೆಚ್ಚು
  • ಆಳವಿಲ್ಲದ ಅಂತರ್ಜಲ ಮಟ್ಟಗಳು 15m bgl ಗಿಂತ ಕಡಿಮೆ (ನೆಲ ಮಟ್ಟಕ್ಕಿಂತ ಕಡಿಮೆ)
2021-2026 ರಿಂದ ಗುರಿ
  • ಹರ್ ಖೇತ್ ಕೋ ಪಾನಿ (HKKP) – 4.5 ಲಕ್ಷ ಹೆಕ್ಟೇರ್ ನೀರಾವರಿ ಸಾಮರ್ಥ್ಯದ ಸೃಷ್ಟಿ
  • ವೇಗವರ್ಧಿತ ನೀರಾವರಿ ಪ್ರಯೋಜನ ಕಾರ್ಯಕ್ರಮ (AIBP) – 30.23 ಲಕ್ಷ ಹೆಕ್ಟೇರ್ ಕೃಷಿಯೋಗ್ಯ ಕಮಾಂಡ್ ಪ್ರದೇಶವನ್ನು ಒಳಗೊಳ್ಳಲು

ಪ್ರಧಾನ ಮಂತ್ರಿ ಕೃಷಿ ಸಿಂಚಯೀ ಯೋಜನೆಯ ಉದ್ದೇಶಗಳು:

  • ದೇಶದಲ್ಲಿ ಕೃಷಿಯೋಗ್ಯ ಭೂಮಿಯನ್ನು ವಿಸ್ತರಿಸಲು ಮತ್ತು ಕೃಷಿ ಕ್ಷೇತ್ರದ ನೀರಾವರಿಯಲ್ಲಿ ಹೂಡಿಕೆಗಳ ಒಮ್ಮುಖವನ್ನು ಸಾಧಿಸಲು.
  • ಸುಸ್ಥಿರ ನೀರು ನಿರ್ವಹಣಾ ಪದ್ಧತಿಗಳನ್ನು ಉತ್ತೇಜಿಸಲು ಮತ್ತು ಕೃಷಿಯಲ್ಲಿ ನೀರಿನ ವ್ಯರ್ಥವನ್ನು ಕಡಿಮೆ ಮಾಡಲು.
  • ಸಣ್ಣ ಮತ್ತು ಅತಿ ಸಣ್ಣ ರೈತರು ಸೇರಿದಂತೆ ಎಲ್ಲಾ ರೈತರಿಗೆ ನೀರಾವರಿ ಸಂಪರ್ಕವನ್ನು  ಸುಧಾರಿಸಲು.
  • ನಿಖರವಾದ ನೀರಾವರಿ ತಂತ್ರಗಳು ಮತ್ತು ಇತರ ನೀರು-ಉಳಿತಾಯ ತಂತ್ರಜ್ಞಾನಗಳ ಅಳವಡಿಕೆಯನ್ನು ಹೆಚ್ಚಿಸಲು.
  • ಕೃಷಿಯಲ್ಲಿ ನೀರಿನ ಬಳಕೆಯನ್ನು ಕಡಿಮೆ ಮಾಡಲು ಹಾಗು  ಜಮೀನಿನಲ್ಲಿ ನೀರಿನ ಬಳಕೆಯ ದಕ್ಷತೆಯನ್ನು ಸುಧಾರಿಸುವುದು.
  • ನೀರಿನ ಸಂರಕ್ಷಣೆ, ನಿರ್ವಹಣೆ ಮತ್ತು ನೀರಾವರಿ ಮೂಲಸೌಕರ್ಯ ಅಭಿವೃದ್ಧಿಗೆ ಸಮಗ್ರ  ಪರಿಹಾರಗಳನ್ನು ಒದಗಿಸಲು.

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಸವಾಲುಗಳು:

ಹವಾಮಾನ ಬದಲಾವಣೆಯು PMKSY ಯ ಯಶಸ್ಸಿನ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು. ಮಳೆಯ ನಮೂನೆಗಳು ಮತ್ತು ನೀರಿನ ಲಭ್ಯತೆಗಳಲ್ಲಿನ ಬದಲಾವಣೆಗಳು ನೀರಾವರಿ ಮೂಲಸೌಕರ್ಯದ ಪರಿಣಾಮಕಾರಿತ್ವದ ಮೇಲೆ ಪರಿಣಾಮ ಬೀರಬಹುದು, ಇದು ನೀರಿನ ಸಂಪನ್ಮೂಲಗಳ ಸುಸ್ಥಿರ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಕಷ್ಟವಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ

ಹಂತ 1: ಪ್ರಧಾನ ಮಂತ್ರಿ ಕೃಷಿ ಸಿಂಚಯೀ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ https://pmksy.gov.in/  ಭೇಟಿ ನೀಡಿ, 

ಹಂತ 2: ಮುಖಪುಟದಲ್ಲಿ ‘ಲಾಗಿನ್’ ಬಟನ್ ಕ್ಲಿಕ್ ಮಾಡಿ 

ಹಂತ 3: ಅಗತ್ಯ ಮಾಹಿತಿಗಳನ್ನು  ನಮೂದಿಸಿ ಮತ್ತು ನಿಮ್ಮ ಖಾತೆಗೆ ಲಾಗಿನ್ ಮಾಡಿ 

ಹಂತ 4: ಯಶಸ್ವಿಯಾಗಿ ಲಾಗಿನ್ ಆದ ನಂತರ, ‘ಬಳಕೆದಾರ’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ಬಳಕೆದಾರರ ಡ್ರಾಪ್-ಡೌನ್ ಮೆನುವಿನಿಂದ ‘ಬಳಕೆದಾರರನ್ನು ರಚಿಸಿ’ ಆಯ್ಕೆಮಾಡಿ.

ಹಂತ 5: ಪೋರ್ಟಲ್ ನಿಮ್ಮನ್ನು ‘ಹೊಸ ಬಳಕೆದಾರ ನೋಂದಣಿ ಫಾರ್ಮ್’ಗೆ ಮರುನಿರ್ದೇಶಿಸುತ್ತದೆ 

ಹಂತ 6: ಕೇಳಲಾದ ಎಲ್ಲಾ ಮಾಹಿತಿಯನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ ಮತ್ತು ಪೂರ್ಣಗೊಳಿಸಿದ ನಂತರ ‘ಸಲ್ಲಿಸು’ ಬಟನ್ ಕ್ಲಿಕ್ ಮಾಡಿ. 

ಅಗತ್ಯವಿರುವ ದಾಖಲೆಗಳು:

  • ಆಧಾರ್ ಕಾರ್ಡ್
  • ವಿಳಾಸ ಪುರಾವೆ
  • ಕೃಷಿ ಭೂಮಿ ಕಾಗದಗಳು
  • ಬ್ಯಾಂಕ್ ಪಾಸ್‌ಬುಕ್
  • ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ
  • ರಾಜ್ಯದ ನಿವಾಸ ಪ್ರಮಾಣಪತ್ರ
  • ಜಾತಿ ಪ್ರಮಾಣಪತ್ರ

ಹಿನ್ನುಡಿ

ಒಟ್ಟಿನಲ್ಲಿ, ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯು ರೈತರಿಗೆ ಮತ್ತು ಸಮಗ್ರ ಕೃಷಿಗೆ, ನೀರಿನ ಸಂಪನ್ಮೂಲಗಳ ಸಮರ್ಥ ಬಳಕೆಗೆ   ಗಮನಾರ್ಹ ಪ್ರಯೋಜನಗಳನ್ನು ನೀಡುತ್ತದೆ. 

Recent Posts

ಪ್ರಧಾನ ಮಂತ್ರಿಗಳ ಕೇಂದ್ರ ಪ್ರಾಯೋಜಿತ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ

ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯು (PMFME) 2020 ರಲ್ಲಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ (MoFPI) ಪ್ರಾರಂಭಿಸಿದ ಒಂದು ಉಪಕ್ರಮವಾಗಿದೆ. ಈ ದೂರದೃಷ್ಟಿಯ ಯೋಜನೆಯನ್ನು…

July 17, 2024

ಸೈನಿಕ ಹುಳು: ಜೋಳದ ಬೆಳೆಯಲ್ಲಿ ವಿನಾಶಕಾರಿ ಕೀಟ

ಸಾಮಾನ್ಯವಾಗಿ ಸೈನಿಕ ಹುಳು ಎಂದು ಕರೆಯಲ್ಪಡುವ ಸ್ಪೋಡೋಪ್ಟೆರಾ ಫ್ರುಗಿಪರ್ಡಾ ಪ್ರಪಂಚದಾದ್ಯಂತದ ಬೆಳೆಗಳ ಮೇಲೆ ಹೆಚ್ಚು ಆಕ್ರಮಣಕಾರಿ ಕೀಟಗಳಲ್ಲಿ ಪ್ರಮುಖವಾಗಿದ್ದು, ಮುಖ್ಯ ಬೆಳೆಗಳಿಗೆ ತೀವ್ರ  ನಷ್ಟವನ್ನು ಉಂಟುಮಾಡುತ್ತದೆ. ಇದು…

July 11, 2024

ಮೆಕ್ಕೆಜೋಳ: ನಾಟಿ ಮತ್ತು ಸುಧಾರಿತ ಬೇಸಾಯ ಕ್ರಮಗಳು

ಮೆಕ್ಕೆ ಜೋಳ (ಜಿಯಾ ಮೇಸ್ ಎಲ್.) ಹೆಚ್ಚು ಹೊಂದಿಕೊಳ್ಳಬಲ್ಲ ಬೆಳೆಗಳಲ್ಲಿ ಒಂದಾಗಿದೆ, ಇದು ವ್ಯಾಪಕ ಶ್ರೇಣಿಯ ಕೃಷಿ-ಹವಾಮಾನ ಪರಿಸ್ಥಿತಿಗಳಲ್ಲಿ ಬೆಳೆಯಲು ಸಾಧ್ಯವಾಗುತ್ತದೆ. ಇದು ಎಲ್ಲಾ ಧಾನ್ಯಗಳಿಗಿಂತ ದೊಡ್ಡ…

June 28, 2024

ಸಮೃದ್ಧ ಕೊಯ್ಲಿಗೆ ಪಪ್ಪಾಯಿ ಕೃಷಿ ಪದ್ಧತಿಗಳು

ಪಪ್ಪಾಯಿ (ಕಾರಿಕಾ ಪಪ್ಪಾಯಿ) ಒಂದು ಉಷ್ಣವಲಯದ ಹಣ್ಣಾಗಿದ್ದು, ಅಡುಗೆಮನೆಯ ತೋಟಗಳಲ್ಲಿ ಬೆಳೆಯಲು ಸೂಕ್ತವಾಗಿದೆ. ಪಪ್ಪಾಯಿಯು ವಿಟಮಿನ್ ಸಿ, ವಿಟಮಿನ್ ಎ, ಖನಿಜಗಳು ಮತ್ತು ಪೊಟ್ಯಾಸಿಯಮ್ನಂತಹ ಪೋಷಕಾಂಶಗಳ ಸಮೃದ್ಧ…

June 24, 2024

ಸಾಫ್ಟ್ ರೊಟ್ ರೋಗ ಭೀತಿ: ಶುಂಠಿಯನ್ನು ವಿನಾಶದಿಂದ ರಕ್ಷಿಸುವುದು

ಶುಂಠಿಯು ಹೆಚ್ಚು ಬೇಡಿಕೆಯಿರುವ ಮಸಾಲೆ ಬೆಳೆಯಾಗಿದ್ದು, 2022 ರಲ್ಲಿ ಭಾರತವು ಸುಮಾರು 2.12 ಮಿಲಿಯನ್ ಮೆಟ್ರಿಕ್ ಟನ್‌ಗಳನ್ನು ಉತ್ಪಾದಿಸುತ್ತದೆ ಎಂದು ನಿಮಗೆ ತಿಳಿದಿದೆಯೇ?  ಆದಾಗ್ಯೂ, ಸಾಫ್ಟ್ ರೊಟ್…

June 19, 2024

ಸೋಯಾಬೀನ್: ನಾಟಿ ಮತ್ತು ಕೃಷಿ ಅಭ್ಯಾಸಗಳು

ಹೆಚ್ಚಿನ ಪ್ರೊಟೀನ್ ಮತ್ತು ಎಣ್ಣೆಯ ಅಂಶದಿಂದಾಗಿ ಸೋಯಾಬೀನ್ ಅನ್ನು ಗೋಲ್ಡನ್ ಬೀನ್ ಅಥವಾ ಮಿರಾಕಲ್ ಕ್ರಾಪ್ ಎಂದೂ ಕರೆಯಲಾಗುತ್ತದೆ. ಸೋಯಾಬೀನ್ ಚೀನಾದಲ್ಲಿ ಹುಟ್ಟಿಕೊಂಡ ದ್ವಿದಳ ಧಾನ್ಯದ ವಿಧ.…

June 17, 2024