Govt for Farmers

ಯುವ ಕೃಷಿಕರಿಗೆ ಸರ್ಕಾರದ ಯೋಜನೆಗಳು

ಅಗ್ರಿ ಕ್ಲಿನಿಕ್ಸ್  ಮತ್ತು ಕೃಷಿ-ವ್ಯಾಪಾರ ಕೇಂದ್ರಗಳ ಯೋಜನೆ

ಭಾರತ ಸರ್ಕಾರವು  ಕೃಷಿ-ಕ್ಲಿನಿಕ್  ಮತ್ತು ಕೃಷಿ-ವ್ಯಾಪಾರ ಕೇಂದ್ರಗಳ ಯೋಜನೆಯನ್ನು ಏಪ್ರಿಲ್ 2002 ರಲ್ಲಿ ಪರಿಚಯಿಸಿತು, ಈ ಯೋಜನೆಯು ತರಬೇತಿ ಮತ್ತು ಸಹಾಯಧನದ ಮೇಲೆ ಕೇಂದ್ರೀಕರಿಸುತ್ತದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚರಲ್ ಎಕ್ಸ್‌ಟೆನ್ಶನ್ ಮ್ಯಾನೇಜ್‌ಮೆಂಟ್, ಕೃಷಿ ಪದವೀಧರರಿಗೆ ಕೃಷಿ ಸಂಬಂಧಿತ ಚಟುವಟಿಕೆಗಳ ಬಗ್ಗೆ ತರಬೇತಿಯನ್ನು ನೀಡಿ ಕೃಷಿ ಸಂಬಂದಿತ ವ್ಯಾಪಾರ ಘಟಕಗಳನ್ನು ಸ್ಥಾಪಿಸಲು ಸಹಾಯ ಮಾಡುತ್ತದೆ. ತರಬೇತಿ ಪಡೆದ ಅಭ್ಯರ್ಥಿಗಳಿಗೆ ಕೃಷಿ-ಉದ್ಯಮಗಳನ್ನು ಸ್ಥಾಪಿಸಲು ಸಾಲದ ಸೌಲಭ್ಯದ ಜೊತೆಗೆ ಕೆಲವು ಅಂಶಗಳನ್ನು ಪರಿಗಣಿಸಿ ಸಬ್ಸಿಡಿ/ಸಹಾಯಧನವನ್ನು ನೀಡಲಾಗುತ್ತದೆ. 

ಅಥವಾ

ಹಲವಾರು ಅಂಶಗಳನ್ನು ಪರಿಗಣಿಸಿ , ತರಬೇತಿ ಪಡೆದ ಅರ್ಜಿದಾರರಿಗೆ ಕೃಷಿ ಉದ್ಯಮಗಳನ್ನು ಪ್ರಾರಂಭಿಸಲು ಹಣಕಾಸಿನ ಸಹಾಯವನ್ನು ನೀಡಲಾಗುತ್ತದೆ.

ಗ್ರಾಮೀಣ ಯುವಕರಿಗೆ  ಕೌಶಲ್ಯ ತರಬೇತಿ (STRY)

ಗ್ರಾಮೀಣ ಯುವಕರಿಗೆ  ಕೌಶಲ್ಯ ತರಬೇತಿ (STRY) ಯೋಜನೆಯ ಉದ್ದೇಶವೇನೆಂದರೆ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಉದ್ಯೋಗವನ್ನು  ಹೆಚ್ಚಿಸಲು, ಕೃಷಿ ಮತ್ತು ಕೃಷಿಯೇತರ ಕಾರ್ಯಗಳಿಗೆ ಕೌಶಲ್ಯಪೂರ್ಣ ಕಾರ್ಮಿಕರ ಪಡೆಯನ್ನು  ಅಭಿವೃದ್ಧಿಪಡಿಸಲು , ಗ್ರಾಮೀಣ ಯುವಕರಿಗೆ ಕೃಷಿ ಹಾಗು  ಕೃಷಿಗೆ ಸಂಬಂಧಿತ ಇತರೆ  ಕೌಶಲ್ಯ ತರಬೇತಿಯನ್ನು  ನೀಡುವುದು. ಗ್ರಾಮೀಣಯುವಕರಿಗೆ ತರಬೇತಿಯನ್ನು ರಾಜ್ಯ / ಜಿಲ್ಲಾ ಮಟ್ಟದಲ್ಲಿ ಗುರುತಿಸಲಾದ ಯಾವುದೇ ತರಬೇತಿ ಸಂಸ್ಥೆಗಳ ಮೂಲಕ ನೀಡಲಾಗುತ್ತದೆ.

ಕೃಷಿ ಯಾಂತ್ರೀಕರಣದ ಉಪ ಮಿಷನ್ (SMAM)

ಈ ಯೋಜನೆಯಡಿಯಲ್ಲಿ, ಭಾರತ ಸರ್ಕಾರವು ವಿವಿಧ ರಾಜ್ಯಗಳಿಗೆ ಕೃಷಿ ಯಾಂತ್ರೀಕರಣಕ್ಕಾಗಿ ಅಂದರೆ ಕೃಷಿ ಯಂತ್ರ ಧಾರೆ ಕೇಂದ್ರಗಳ  ಸ್ಥಾಪನೆಗೆ, ಕೃಷಿ ಯಂತ್ರೋಪಕರಣಗಳ ಬ್ಯಾಂಕ್ ಸ್ಥಾಪಿಸಲು ಮತ್ತು ಅತ್ಯುತ್ತಮ ತಂತ್ರಜ್ಞಾನದ ಕೇಂದ್ರಗಳನ್ನು ಸ್ಥಾಪಿಸಲು ಹಣ ಬಿಡುಗಡೆ ಮಾಡುತ್ತದೆ. ಇದು ರೈತರ ಆದಾಯವನ್ನು ಹೆಚ್ಚಿಸಲು ಮತ್ತು ಕೃಷಿ ಆರ್ಥಿಕತೆಯ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆ – ಕೃಷಿ ಮತ್ತು ಸಂಬಂಧಿತ ವಲಯಗಳ ಪುನರುಜ್ಜೀವನಕ್ಕಾಗಿ ಸಂಭಾವನೆಯ ವಿಧಾನಗಳು (RKVY-RAFTAAR)

ಈ ಯೋಜನೆಯು ದೇಶದಲ್ಲಿ ಕೃಷಿ ಮತ್ತು ಸಂಬಂಧಿತ ವಲಯಗಳಲ್ಲಿ ಮೂಲಸೌಕರ್ಯವನ್ನು ಬಲಪಡಿಸುವ ಮೂಲಕ ಕೃಷಿ ಉದ್ಯಾಮಶೀಲತೆ ಮತ್ತು ಕೃಷಿ ವ್ಯಾವಹಾರಿಕ ವ್ಯವಸ್ಥೆಯನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ ಹಾಗು ಸಂಭಾವ್ಯ ಕೃಷಿಸ್ಟಾರ್ಟಪ್‌ಗಳಿಗೆ ಹಣಕಾಸಿನ ನೆರವು ಮತ್ತು ಉದ್ಯಮದ ಅಭಿರುದ್ದಿಗೆ ಸಹಕರಿಸುವುದು

ಪ್ರಮಾಣೀಕೃತ ಕೃಷಿ  ಸಲಹೆಗಾರ/ಪ್ರಮಾಣೀಕೃತ ಜಾನುವಾರು ಸಲಹೆಗಾರರ  ಕಾರ್ಯಕ್ರಮ

ಕೃಷಿ ವಿಸ್ತರಣಾ ಸಿಬ್ಬಂದಿಯನ್ನು ಬೆಳೆ/ಜಾನುವಾರು ತಜ್ಞರಾಗಿ ಅಭಿವೃದ್ಧಿಪಡಿಸಲು ಈ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ. ಇದು ಮೂಲಭೂತ ವಿಷಯಗಳೊಂದಿಗೆ ಬೆಳೆ/ಜಾನುವಾರುಗಳಲ್ಲಿ ಹೊಸ ತಂತ್ರಜ್ಞಾನವನ್ನು ಒಳಗೊಂಡಿದೆ ಮತ್ತು 3 ತಿಂಗಳ MANAGE ಆನ್‌ಲೈನ್ ತರಬೇತಿ ಕಾರ್ಯಕ್ರಮವನ್ನು ನಡೆಸುತ್ತದೆ. 

ರೈತರು ಮತ್ತು ಮಹಿಳೆಯರಿಗಾಗಿ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು

ಈ ಯೋಜನೆಯು ಭಾರತದಾದ್ಯಂತ  ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಇರುವ ಯುವಕರಿಗೆ ಅಲ್ಪಾವಧಿ ಮತ್ತು ದೀರ್ಘಾವಧಿಯ ಕಾರ್ಯಕ್ರಮದ ಮೂಲಕ ಉದ್ಯೋಗ ಕೌಶಲ್ಯಗಳನ್ನು ಒದಗಿಸುವ ಯೋಜನೆಯಾಗಿದೆ

ಈ ಯೋಜನೆಯು ಶಾಲೆಯಿಂದ ಹೊರಗುಳಿದವರಿಗೆ ಮತ್ತು ನಿರುದ್ಯೋಗಿ ಯುವಕರಿಗೆ ನಾವೀನ್ಯ ರೀತಿಯ ಕೌಶಲ್ಯವನ್ನು ಒದಗಿಸುತ್ತದೆ, ಮತ್ತು ಕಡಿಮೆ ಪ್ರಾತಿನಿಧ್ಯತೆ   ಹೊಂದಿರುವ ಗುಂಪುಗಳಿಗೆ ಕೌಶಲ್ಯ ಅಗತ್ಯಗಳನ್ನು ನೀಡುವ ವಿಶೇಷ ಯೋಜನೆಗಳನ್ನು ಒಳಗೊಂಡಿದೆ.

ಪ್ರಾಜೆಕ್ಟ್ ಆರ್ಯ (ಕೃಷಿಯಲ್ಲಿ ಯುವಕರನ್ನು ಆಕರ್ಷಿಸುವುದು ಮತ್ತು ಉಳಿಸಿಕೊಳ್ಳುವುದು)

ಪ್ರಾಜೆಕ್ಟ್ ARYA ಗುರಿಯು ಗ್ರಾಮೀಣ ಯುವಕರನ್ನು ವಿವಿಧ ಕೃಷಿ ಮತ್ತು ಸಂಬಂಧಿತ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಮತ್ತು ಸಬಲೀಕರಣಗೊಳಿಸುವುದು. ಯೋಜನೆಯ ಗುರಿಗಳೇನೆಂದರೆ ಉದ್ಯೋಗಗಳನ್ನು ಸೃಷ್ಟಿಸುವುದು, ಸ್ಥಿರ ಆದಾಯವನ್ನು ಖಾತರಿಪಡಿಸುವುದು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಮತ್ತು ಸಂಬಂಧಿತ ಕೈಗಾರಿಕೆಗಳನ್ನು ಮುನ್ನಡೆಸುವುದು.

Recent Posts

ಕಬ್ಬು ಬೆಳೆಯಲ್ಲಿ ಬಿಳಿ ಗೊಣ್ಣೆ ಹುಳುವಿನ ಸೋಂಕಿನಿಂದ ಮುತ್ತಿಕೊಳ್ಳುವಿಕೆಯಿಂದ ಅಂತಿಮ ನಿರ್ವಹಣೆ ಕ್ರಮಗಳು

ಕಬ್ಬಿನ ಬಿಳಿ ಗೊಣ್ಣೆ ಹುಳು ಒಂದು ಗಂಭೀರವಾದ ಕೃಷಿ ಕೀಟವಾಗಿದ್ದು, ಇದು ವಿಶ್ವಾದ್ಯಂತ ಕಬ್ಬಿನ ಬೆಳೆಗಳ ಉತ್ಪಾದಕತೆ ಮತ್ತು ಸುಸ್ಥಿರತೆಗೆ ಗಮನಾರ್ಹ ಅಪಾಯವನ್ನುಂಟುಮಾಡುತ್ತದೆ. ಈ ಬಿಳಿ ಗೊಣ್ಣೆ…

May 18, 2024

ಕಬ್ಬಿನ ಇಂಟರ್ನೋಡ್ ಬೋರರ್  ಮುತ್ತಿಕೊಳ್ಳುವಿಕೆ ಮತ್ತು ಅದರ ನಿರ್ವಹಣೆಯ

ಪ್ರಪಂಚದ ಅನೇಕ ಉಷ್ಣವಲಯದ ಮತ್ತು ಉಪೋಷ್ಣವಲಯದ ಪ್ರದೇಶಗಳಲ್ಲಿ ಕಬ್ಬು ಒಂದು ಪ್ರಮುಖ ನಗದು ಬೆಳೆಯಾಗಿದೆ. ಆದಾಗ್ಯೂ, ಕಬ್ಬಿನ ಮಧ್ಯ ಕೊರಕವು ಗಮನಾರ್ಹವಾದ ಕೀಟವಾಗಿದ್ದು, ಕಬ್ಬು ರೈತರಿಗೆ ಗಣನೀಯ…

May 8, 2024

ಕಬ್ಬಿನ ಆರಂಭಿಕ ಚಿಗುರು ಕೊರೆಯುವವರ ವಿರುದ್ಧ ಹೋರಾಟ: ಪರಿಣಾಮಕಾರಿ ನಿರ್ವಹಣೆ ತಂತ್ರಗಳು

ಕಬ್ಬಿನ ಆರಂಭಿಕ ಚಿಗುರು ಕೊರೆಯುವ ಕೀಟ, ಚಿಲೋ ಇನ್ಫ್ಯೂಸ್ಕಾಟೆಲಸ್ ಒಂದು ಕೀಟ ಕೀಟವಾಗಿದ್ದು, ಇದು ಸಸ್ಯದ ಎಳೆಯ ಚಿಗುರುಗಳಿಗೆ ಕೊರೆಯುವ ಮೂಲಕ ಕಬ್ಬಿನ ಬೆಳೆಗಳಿಗೆ ಗಮನಾರ್ಹ ಹಾನಿಯನ್ನುಂಟುಮಾಡುತ್ತದೆ.…

April 15, 2024

ಮಣ್ಣಿನ pH – ಬೆಳೆ ಉತ್ಪಾದನೆಯಲ್ಲಿ ಪ್ರಮುಖ ಅಂಶ

ಮಣ್ಣಿನ pH ಎಂಬುದು ಮಣ್ಣಿನ ಆಮ್ಲೀಯತೆ ಅಥವಾ ಕ್ಷಾರೀಯತೆಯ ಅಳತೆಯಾಗಿದೆ, ಇದು ಮಣ್ಣಿನಲ್ಲಿರುವ ಹೈಡ್ರೋಜನ್ ಅಯಾನುಗಳ (H+) ಸಾಂದ್ರತೆಯಿಂದ ನಿರ್ಧರಿಸಲ್ಪಡುತ್ತದೆ. pH ಪ್ರಮಾಣವು 0 ರಿಂದ 14…

April 8, 2024

ಆಹಾರ ಸಂಸ್ಕರಣಾ ವಲಯಕ್ಕೆ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (PLI) ಯೋಜನೆ

ಉತ್ಪಾದನೆ ಆಧಾರಿತ ವಲಯಗಳು ಭಾರತದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆಹಾರ ಸಂಸ್ಕರಣಾ ವಲಯಕ್ಕೆ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್‌ಐ) ಯೋಜನೆಯು ಮಾರ್ಚ್ 2021 ರಲ್ಲಿ ಪ್ರಾರಂಭವಾದ…

April 6, 2024

ಮಾವಿನ ಹಣ್ಣಿನ ನೊಣದ ಪರಿಣಾಮಕಾರಿ ನಿರ್ವಹಣೆ

ಬೇಸಿಗೆ ಕಾಲ ಈಗಾಗಲೇ ಬಂದಿದೆ. ನಿಮ್ಮ ಬಹು ನಿರೀಕ್ಷಿತ ಮಾವಿನ ಕೊಯ್ಲಿಗೆ ನೀವು ಕಾಯುತ್ತಿದ್ದೀರಾ? ರೈತರೇ ಎಚ್ಚರ! ಹಣ್ಣಿನ ನೊಣಗಳು ನಿಮ್ಮ ಮಾವಿನ ಇಳುವರಿಯನ್ನು ತಡೆಯಲು ಮತ್ತು…

March 30, 2024