ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕಿಸಾನ್ ಡ್ರೋನ್ ಯೋಜನೆಯು ಭಾರತದಾದ್ಯಂತ ರಾಸಾಯನಿಕ ಮುಕ್ತ ಕೃಷಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.ಡ್ರೋನ್ಗಳನ್ನು ಬಳಸಿಕೊಂಡು ಬೆಳೆಗೆ ಕೀಟನಾಶಕಗಳನ್ನು ಸಿಂಪಡಿಸುವಲ್ಲಿ ರೈತರಿಗೆ ಸಹಾಯ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ. ಇದು 2022 ರ ವೇಳೆಗೆ ರೈತರ ಆದಾಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಈಗಾಗಲೇ 100 ಕಿಸಾನ್ ಡ್ರೋನ್ಗಳನ್ನು ಪ್ರಾರಂಭ ಮಾಡಲಾಗಿದೆ ಮತ್ತು ದೇಶದಲ್ಲಿ ಡ್ರೋನ್ ಸ್ಟಾರ್ಟ್-ಅಪ್ಗಳನ್ನು ಉತ್ತೇಜಿಸುವ ಯೋಜನೆಯನ ಹಮ್ಮಿಕೊಂಡಿದೆ. ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಲು ಸರ್ಕಾರ – ರೈತರಿಗೆ ನೆರವು ನೀಡುತ್ತದೆ.
ನ೦. | ಕಿಸಾನ್ ಡ್ರೋನ್ ಯೋಜನೆ ಬಗ್ಗೆ ವಿವರಗಳು | |
1. | ಡ್ರೋನ್ಗಳನ್ನು ತಯಾರಿಸುವವರು ಯಾರು? | ಗರುಡ ಏರೋಸ್ಪೇಸ್, ಚೆನ್ನೈ ಮೂಲದ ಸ್ವದೇಶಿ ಸ್ಟಾರ್ಟ್ಅಪ್. |
2. | ಡ್ರೋನ್ ಸಾಮರ್ಥ್ಯ ಎಷ್ಟು? | 10 ರಿಂದ 15 ಕೆಜಿ ಗು ಅಧಿಕ ಸಾಮರ್ಥ್ಯ. |
3. | ಸಿಂಪಡಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ? | ಒಂದು ಎಕರೆ ಜಮೀನಿನಲ್ಲಿ ಕೀಟನಾಶಕವನ್ನು ಸಿಂಪಡಿಸಲು 15 ನಿಮಿಷ ಬೇಕು. |
4. | ರೈತರ ಗುಂಪು ಅಥವಾ ಸಂಸ್ಥೆಗೆ ಸಬ್ಸಿಡಿ ಎಷ್ಟು ಸಿಗುತ್ತದೆ ? | ಒಟ್ಟಾರೆ ಬೆಲೆಯ 75% ವರೆಗೆ. |
5. | ರೈತರು ಅದನ್ನು ವೈಯಕ್ತಿಕ ಕಾರ್ಯಕಾಗಾಗಿ ಖರೀದಿಸಿದಾಗ ಎಷ್ಟು ವೆಚ್ಳವಾಗುತ್ತದೆ ? | ಅನುದಾನವು 40% ರಿಂದ 50% ವರೆಗೆ ಇರುತ್ತದೆ. |
6. | ಸಣ್ಣ, ಅತಿ ಸಣ್ಣ ರೈತರು ಮತ್ತು ಮಹಿಳೆಯರಿಗೆ ಅನುದಾನದ ಮೊತ್ತವೇನು? | ಸುಮಾರು ರೂ 50,000 ದಷ್ಟು. |
7. | ಡ್ರೋನ್ಗಳು ಪಡೆಯಲು ಎಲ್ಲಿ ಸಂಪರ್ಕಿಸಬೇಕು ? | ಕೃಷಿ ವಿಜ್ಞಾನ ಕೇಂದ್ರಗಳಲ್ಲಿ. |
ಇಲ್ಲಿಯವರೆಗೆ, 2022 ರ ವೇಳೆಗೆ ರೈತರ ಆದಾಯವನ್ನು ಹೆಚ್ಚಿಸುವ ಆರಂಭಿಕ ಭರವಸೆಯ ಮೇಲೆ ಕಾರ್ಯನಿರ್ವಹಿಸಲು ಸರ್ಕಾರದಿಂದ ಯಾವುದೇ ಗಮನಾರ್ಹ ಪ್ರಯತ್ನಗಳಾಗಿಲ್ಲ. ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಸಿಂಪಡಿಸುವುದರಿಂದ ಉತ್ಪಾದನೆಗೆ ಸಹಾಯವಾಗುತ್ತದೆ. ಆದರೆ , ಇದು ಹೆಚ್ಚಾಗಿ ಉದ್ಯಮಗಳಿಗೆ ಲಾಭವನ್ನು ನೀಡುತ್ತದೆ.
ಈ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನವೆಂದರೆ :ಕೃಷಿಗಾಗಿ ಯಾವುದೇ ಆಧುನಿಕ ಯಂತ್ರಕ್ಕೆ ಅರ್ಜಿ ಸಲ್ಲಿಸುವುದು.
ಹಂತ 1 – https://agrimachinery.nic.in/Farmer/SHGGroups/Registration ಗೆ ಭೇಟಿ ನೀಡಿ.
ಹಂತ 2 – ನೋಂದಣಿ ವಿಭಾಗಕ್ಕೆ ತೆರಳಿ.
ಹಂತ 3 – ಮೂರು ಆಯ್ಕೆಗಳಲ್ಲಿ, ರೈತರನ್ನು ಆಯ್ಕೆಮಾಡಿ.
ಹಂತ 4 – ವಿವರಗಳನ್ನು ನಿಗಾ ವಹಿಸಿ ಭರ್ತಿ ಮಾಡಿ ಮತ್ತು ಸಲ್ಲಿಸಿ.
ಕಿಸಾನ್ ಡ್ರೋನ್ ಯೋಜನೆಯಲ್ಲಿ, ಡ್ರೋನ್ಗಳನ್ನು ಹಾರಿಸಲು ರೈತರಿಗೆ ತರಬೇತಿಯನ್ನು ನೀಡುತ್ತದೆ. ತರಬೇತಿ ಕಾರ್ಯಕ್ರಮಗಳನ್ನು ಕೃಷಿ ಕಾಲೇಜುಗಳು ಮತ್ತು ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ನಡೆಸಲಾಗುತ್ತದೆ. ಈ ತರಬೇತಿಗೆ ರೈತರು ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ. ಆದಾಗ್ಯೂ, ಮೊಬೈಲ್ ಟವರ್ಗಳು ಮತ್ತು ಹೈ-ಟೆನ್ಷನ್ ಲೈನ್ಗಳನ್ನು ಹೊಂದಿರುವ ಸ್ಥಳಗಳಲ್ಲಿ ಡ್ರೋನ್ಗಳನ್ನು ಅನುಮತಿಯೊಂದಿಗೆ ಬಳಸಬೇಕಾಗುತ್ತದೆ.
ಕೃಷಿಯಲ್ಲಿ, ದಕ್ಷತೆ ಮತ್ತು ಉತ್ಪಾದಕತೆ ಯಾವಾಗಲೂ ಮುಖ್ಯವಾಗಿರುತ್ತದೆ. ಈಗ ನಾವು ನಿಮಗೆ ನಿಮ್ಮ ನೀರಿನ ಸ್ಥಿತಿ, ನಿಮ್ಮ ಸಸ್ಯ ಸಂರಕ್ಷಣಾ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸುವ…
ಇತ್ತೀಚಿನ ಆಧುನಿಕ ಕೃಷಿಯಲ್ಲಿ ಸಮರ್ಥ ನೀರಿನ ನಿರ್ವಹಣೆ ಮಾಡುವುದು ನಿರ್ಣಾಯಕವಾಗಿದೆ ಮತ್ತು ಹನಿ ನೀರಾವರಿ ಪದ್ದತಿಯು ನೇರವಾಗಿ ಬೇರುಗಳ ವಲಯವನ್ನು ಗುರಿಯಾಗಿಸಿಕೊಂಡು ಸಸ್ಯಗಳಿಗೆ ನೀರನ್ನು ತಲುಪಿಸುವ ವಿಧಾನವನ್ನು…
ಸುಸ್ಥಿರ ಕೃಷಿ ಪದ್ದತಿಯಲ್ಲಿ ಸರಳವಾದ ಆದರೆ ಆಳವಾದ ವಿಷಯವೇನೆಂದರೆ ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವುದು. ಸಾವಯವ ಕೃಷಿ ತ್ಯಾಜ್ಯವು ನಮಗೆ ಹೊರೆಯಾಗಿರದೆ ಮಣ್ಣನ್ನು ಸಮೃದ್ಧಗೊಳಿಸುವ, ಸಸ್ಯಗಳನ್ನು ಪೋಷಿಸುವ ಮತ್ತು…
ಇತ್ತೀಚೆಗೆ ಬದಲಾಗುತ್ತಿರುವ ಕೃಷಿ ಭೂದೃಶ್ಯದ ಕಾರಣವಾಗಿ, ಸಮರ್ಥನೀಯ ಮತ್ತು ಸಮರ್ಥ ಕೃಷಿ ವಿಧಾನಗಳನ್ನು ಕಂಡುಹಿಡಿಯುವುದು ನಿರ್ಣಾಯಕವಾಗಿದೆ. ಅದಕ್ಕಾಗಿಯೇ ಪರಿಚಯಿಸುತ್ತಿದ್ದೇವೆ, ಎಪಿಸೆಲ್! ಎಕ್ಸೆಲ್ ಇಂಡಸ್ಟ್ರೀಸ್ ರವರ ಈ ನವೀನ…
ನೀರು ಕೃಷಿಯಲ್ಲಿ ಮೂಲಭೂತ ಸಂಪನ್ಮೂಲವಾಗಿದ್ದು, ಬೆಳೆಗಳ ವೃದ್ಧಿಗಾಗಿ ಅಗತ್ಯ ಪೋಷಕಾಂಶಗಳ ಮತ್ತು ಬೆಳೆ ರಕ್ಷಣೆಗೆ ಅಗತ್ಯವಾದ ರಾಸಾಯನಿಕಗಳನ್ನು ಸಾಗಿಸುವಲ್ಲಿ ವಾಹಕವಾಗಿ ಕಾರ್ಯನಿರ್ವಹಿಸುತ್ತದೆ . ಆದಾಗ್ಯೂ, ಕಳೆನಾಶಕಗಳು, ಕೀಟನಾಶಕಗಳು,…
ಹನಿ ನೀರಾವರಿ ವ್ಯವಸ್ಥೆ ಆಧುನಿಕ ಕೃಷಿಯ ಅತ್ಯಗತ್ಯ ಅಂಶವಾಗಿದೆ. ಇದು ಸಸ್ಯಗಳ ಬೇರುಗಳಿಗೆ ನೇರವಾಗಿ ನೀರನ್ನು ತಲುಪಿಸುವ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಈ ವಿಧಾನವು ನೀರನ್ನು ಸಂರಕ್ಷಿಸುವುದು…