Govt for Farmers

ಸರ್ಕಾರದಿಂದ ಕಿಸಾನ್ ಡ್ರೋನ್ ಯೋಜನೆ –  ಯೋಜನೆಯಿಂದಾಗುವ ಪ್ರಯೋಜನಗಳ ಬಗ್ಗೆ ತಿಳಿಯಿರಿ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕಿಸಾನ್ ಡ್ರೋನ್ ಯೋಜನೆಯು ಭಾರತದಾದ್ಯಂತ ರಾಸಾಯನಿಕ ಮುಕ್ತ ಕೃಷಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.ಡ್ರೋನ್‌ಗಳನ್ನು ಬಳಸಿಕೊಂಡು ಬೆಳೆಗೆ ಕೀಟನಾಶಕಗಳನ್ನು ಸಿಂಪಡಿಸುವಲ್ಲಿ ರೈತರಿಗೆ ಸಹಾಯ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ. ಇದು 2022 ರ ವೇಳೆಗೆ ರೈತರ ಆದಾಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಈಗಾಗಲೇ 100 ಕಿಸಾನ್ ಡ್ರೋನ್‌ಗಳನ್ನು ಪ್ರಾರಂಭ ಮಾಡಲಾಗಿದೆ  ಮತ್ತು ದೇಶದಲ್ಲಿ ಡ್ರೋನ್ ಸ್ಟಾರ್ಟ್-ಅಪ್‌ಗಳನ್ನು ಉತ್ತೇಜಿಸುವ ಯೋಜನೆಯನ ಹಮ್ಮಿಕೊಂಡಿದೆ. ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಲು ಸರ್ಕಾರ – ರೈತರಿಗೆ ನೆರವು ನೀಡುತ್ತದೆ.

ಕಿಸಾನ್ ಡ್ರೋನ್ ಯೋಜನೆ – ಇದರ ಬಗ್ಗೆ  ಅವಲೋಕನ

  • ಯೋಜನೆಯ ಹೆಸರು – ಕಿಸಾನ್ ಡ್ರೋನ್ ಯೋಜನೆ
  • ಯೋಜನೆಯ  ತಿದ್ದುಪಡಿ ದಿನಾಂಕ – ಜನವರಿ 2022 ರಂದು ನೀಡಲಾದ ಪರಿಷ್ಕೃತ ಮಾರ್ಗಸೂಚಿಗಳು
  • ಯೋಜನೆಯ ಮೊತ್ತದ  ಹಂಚಿಕೆ – ರೂ. 200 ಕೋಟಿ
  • ಪ್ರಾಯೋಜಿತ ಸರ್ಕಾರ – ಕೇಂದ್ರ ಸರ್ಕಾರ
  • ಸಹಾಯವಾಣಿ ಸಂಖ್ಯೆ – 011-23381092.

ಕಿಸಾನ್ ಡ್ರೋನ್ ಯೋಜನೆಯ ವೈಶಿಷ್ಟ್ಯಗಳು    

ನ೦.

ಕಿಸಾನ್ ಡ್ರೋನ್ ಯೋಜನೆ ಬಗ್ಗೆ ವಿವರಗಳು

1. ಡ್ರೋನ್‌ಗಳನ್ನು ತಯಾರಿಸುವವರು ಯಾರು? ಗರುಡ ಏರೋಸ್ಪೇಸ್, ಚೆನ್ನೈ ಮೂಲದ ಸ್ವದೇಶಿ ಸ್ಟಾರ್ಟ್‌ಅಪ್.
2. ಡ್ರೋನ್ ಸಾಮರ್ಥ್ಯ ಎಷ್ಟು? 10 ರಿಂದ 15 ಕೆಜಿ ಗು ಅಧಿಕ ಸಾಮರ್ಥ್ಯ.
3. ಸಿಂಪಡಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ? ಒಂದು ಎಕರೆ ಜಮೀನಿನಲ್ಲಿ ಕೀಟನಾಶಕವನ್ನು  ಸಿಂಪಡಿಸಲು 15 ನಿಮಿಷ ಬೇಕು.
4. ರೈತರ ಗುಂಪು ಅಥವಾ ಸಂಸ್ಥೆಗೆ ಸಬ್ಸಿಡಿ ಎಷ್ಟು ಸಿಗುತ್ತದೆ ? ಒಟ್ಟಾರೆ ಬೆಲೆಯ 75% ವರೆಗೆ.
5. ರೈತರು ಅದನ್ನು ವೈಯಕ್ತಿಕ ಕಾರ್ಯಕಾಗಾಗಿ ಖರೀದಿಸಿದಾಗ ಎಷ್ಟು ವೆಚ್ಳವಾಗುತ್ತದೆ ? ಅನುದಾನವು 40% ರಿಂದ 50% ವರೆಗೆ ಇರುತ್ತದೆ.
6. ಸಣ್ಣ, ಅತಿ ಸಣ್ಣ ರೈತರು ಮತ್ತು ಮಹಿಳೆಯರಿಗೆ  ಅನುದಾನದ ಮೊತ್ತವೇನು? ಸುಮಾರು ರೂ 50,000 ದಷ್ಟು.
7. ಡ್ರೋನ್‌ಗಳು ಪಡೆಯಲು ಎಲ್ಲಿ ಸಂಪರ್ಕಿಸಬೇಕು ? ಕೃಷಿ ವಿಜ್ಞಾನ ಕೇಂದ್ರಗಳಲ್ಲಿ.

 

ಕಿಸಾನ್ ಡ್ರೋನ್ ಯೋಜನೆಯ ಪ್ರಯೋಜನಗಳು ?

ಯೋಜನೆಯ ಪ್ರಯೋಜನಗಳೆಂದರೆ:

  • ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವುದು, ಬೆಳೆ ಮೌಲ್ಯಮಾಪನ ಮಾಡುವುದು, ಪೋಷಕಾಂಶಗಳು ಮತ್ತು ಕೀಟನಾಶಕಗಳನ್ನು ಡ್ರೋನ್ ಗಳನ್ನ  ಬಳಸಿ ಸಿಂಪಡಿಸಬಹುದು.
  • ಕೃಷಿ ಕಾರ್ಯಗಳಿಗೆ ಉಪಯೋಗವಾಗಲು ಡ್ರೋನ್ಅನ್ನು ಖರೀದಿಸಲು ರೈತರಿಗೆ ಅನುದಾನ ಸಿಗಲಿದೆ.
  • ಇದು ರೈತರಿಗೆ ಡ್ರೋನ್‌ ಬಳಸಿಕೊಂಡು ಸಸ್ಯ ರೋಗ ಹಾಗೂ ಕೀಟಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಅದು ಅವರ ಶ್ರಮ ಮತ್ತು ಸಮಯವನ್ನು ಉಳಿಸುತ್ತದೆ, ಅವರು ಆ ಸಮಯವನ್ನು ತಮ್ಮ ಗಳಿಕೆಯನ್ನು ಹೆಚ್ಚಿಸಲು ಬೇರೆಡೆ ಬಳಸಬಹುದು.
  • ಇದು 7 ರಿಂದ 10 ನಿಮಿಷಗಳಲ್ಲಿ ಒಂದು ಎಕರೆ ಭೂಮಿಯಲ್ಲಿ ಔಷಧಿಗಳು , ಯೂರಿಯಾ ಮತ್ತು ಕೀಟನಾಶಕಗಳನ್ನು ಸುಲಭವಾಗಿ ಸಿಂಪಡಿಸಲು, ರೈತರಿಗೆ ಸಹಾಯ ಮಾಡುತ್ತದೆ

ಕಿಸಾನ್ ಡ್ರೋನ್ ಯೋಜನೆಯ ಕೊರತೆಗಳೇನು ?

ಇಲ್ಲಿಯವರೆಗೆ, 2022 ರ ವೇಳೆಗೆ ರೈತರ ಆದಾಯವನ್ನು ಹೆಚ್ಚಿಸುವ ಆರಂಭಿಕ ಭರವಸೆಯ ಮೇಲೆ ಕಾರ್ಯನಿರ್ವಹಿಸಲು ಸರ್ಕಾರದಿಂದ ಯಾವುದೇ ಗಮನಾರ್ಹ ಪ್ರಯತ್ನಗಳಾಗಿಲ್ಲ. ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಸಿಂಪಡಿಸುವುದರಿಂದ ಉತ್ಪಾದನೆಗೆ ಸಹಾಯವಾಗುತ್ತದೆ. ಆದರೆ , ಇದು ಹೆಚ್ಚಾಗಿ ಉದ್ಯಮಗಳಿಗೆ ಲಾಭವನ್ನು ನೀಡುತ್ತದೆ.

ಕಿಸಾನ್ ಡ್ರೋನ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಈ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನವೆಂದರೆ :ಕೃಷಿಗಾಗಿ ಯಾವುದೇ ಆಧುನಿಕ ಯಂತ್ರಕ್ಕೆ ಅರ್ಜಿ ಸಲ್ಲಿಸುವುದು.

ಹಂತ 1 – https://agrimachinery.nic.in/Farmer/SHGGroups/Registration ಗೆ ಭೇಟಿ ನೀಡಿ.

ಹಂತ 2 – ನೋಂದಣಿ ವಿಭಾಗಕ್ಕೆ ತೆರಳಿ.

ಹಂತ 3 – ಮೂರು ಆಯ್ಕೆಗಳಲ್ಲಿ, ರೈತರನ್ನು  ಆಯ್ಕೆಮಾಡಿ.

ಹಂತ 4 – ವಿವರಗಳನ್ನು ನಿಗಾ ವಹಿಸಿ ಭರ್ತಿ ಮಾಡಿ ಮತ್ತು ಸಲ್ಲಿಸಿ.

ಅಗತ್ಯವಿರುವ ದಾಖಲೆಗಳು ?

  • ಆಧಾರ್ ಕಾರ್ಡ್
  • ಭೂಮಿಯ ವಿವರಗಳನ್ನು  ದಾಖಲಿಸಲು ಭೂಮಿಯ ಹಕ್ಕು (ROR)ಪತ್ರ .
  • ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ
  • ಬ್ಯಾಂಕ್ ಪಾಸ್ ಪುಸ್ತಕದ ಮೊದಲ ಪುಟದ ಫೋಟೋ ಪ್ರತಿ
  • ಯಾವುದೇ ಐಡಿ ಪುರಾವೆಯ ಪ್ರತಿ
  • SC / ST / OBC ಜಾತಿ ವರ್ಗ ಪ್ರಮಾಣಪತ್ರದ ಪ್ರತಿ.

ಕಿಸಾನ್ ಡ್ರೋನ್ ಯೋಜನೆಯಲ್ಲಿ, ಡ್ರೋನ್‌ಗಳನ್ನು ಹಾರಿಸಲು ರೈತರಿಗೆ ತರಬೇತಿಯನ್ನು ನೀಡುತ್ತದೆ. ತರಬೇತಿ ಕಾರ್ಯಕ್ರಮಗಳನ್ನು ಕೃಷಿ ಕಾಲೇಜುಗಳು ಮತ್ತು ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ನಡೆಸಲಾಗುತ್ತದೆ. ಈ ತರಬೇತಿಗೆ ರೈತರು ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ. ಆದಾಗ್ಯೂ, ಮೊಬೈಲ್ ಟವರ್‌ಗಳು ಮತ್ತು ಹೈ-ಟೆನ್ಷನ್ ಲೈನ್‌ಗಳನ್ನು ಹೊಂದಿರುವ ಸ್ಥಳಗಳಲ್ಲಿ ಡ್ರೋನ್‌ಗಳನ್ನು ಅನುಮತಿಯೊಂದಿಗೆ ಬಳಸಬೇಕಾಗುತ್ತದೆ.

Recent Posts

₹500 ನಗದು ಗೆಲ್ಲಿರಿ: ಕೋರ್ಟ್ೇವಾ ಕಳೆ ನಿಯಂತ್ರಣವನ್ನು ಲಾಭದಾಯಕವಾಗಿಸುತ್ತದೆ*

ಪ್ರತಿ ಅಕ್ಕಿ ರೈತನ ಅನುಭವ ಒಂದೇ — ಬೆಳೆ ನಿಲ್ಲುವ ಮೊದಲು ಕಳೆ ಹೊಕ್ಕು ಬೆಳೆಯನ್ನು ಹಿಡಿದಿಟ್ಟುಕೊಳ್ಳುತ್ತದೆ. ಎಚಿನೋಕ್ಲೋವಾ, ಸೈಪೆರಸ್, ಲುಡ್ವಿಗಿಯಾ... ಇವು ಬೆಳಕನ್ನು, ಪೋಷಕಾಂಶಗಳನ್ನು ಮತ್ತು…

July 11, 2025

ಸೆಲ್ ಜೆಲ್: ಆಧುನಿಕ ಕೃಷಿಗಾಗಿ ನೀರಿನ ಉತ್ತಮ ಸ್ಥಿತಿಯನ್ನು ರೂಪಿಸುವ ಕ್ರಾಂತಿಕಾರಿ ಉತ್ಪನ್ನ

ಕೃಷಿಯಲ್ಲಿ, ದಕ್ಷತೆ ಮತ್ತು ಉತ್ಪಾದಕತೆ ಯಾವಾಗಲೂ ಮುಖ್ಯವಾಗಿರುತ್ತದೆ. ಈಗ ನಾವು ನಿಮಗೆ ನಿಮ್ಮ ನೀರಿನ ಸ್ಥಿತಿ, ನಿಮ್ಮ ಸಸ್ಯ ಸಂರಕ್ಷಣಾ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸುವ…

January 28, 2025

ಎಕ್ಸ್‌ಸ್ಕೇಲೆಂಟ್ : ಡ್ರಿಪ್ ಕ್ಲೀನಿಂಗ್ ಕಾರ್ಯವಿಧಾನದ ಮೂಲಕ ಬೆಳೆಗಳಿಗೆ ಸುರಕ್ಷಿತ ಪರಿಹಾರಗಳು

ಇತ್ತೀಚಿನ ಆಧುನಿಕ ಕೃಷಿಯಲ್ಲಿ ಸಮರ್ಥ ನೀರಿನ ನಿರ್ವಹಣೆ ಮಾಡುವುದು ನಿರ್ಣಾಯಕವಾಗಿದೆ ಮತ್ತು ಹನಿ ನೀರಾವರಿ ಪದ್ದತಿಯು  ನೇರವಾಗಿ ಬೇರುಗಳ ವಲಯವನ್ನು ಗುರಿಯಾಗಿಸಿಕೊಂಡು ಸಸ್ಯಗಳಿಗೆ ನೀರನ್ನು ತಲುಪಿಸುವ ವಿಧಾನವನ್ನು…

January 28, 2025

ಬಯೋಕ್ಯುಲಮ್ AW: ಬೆಳೆ ಸುಸ್ಥಿರತೆಗಾಗಿ ಬಳಸಲು ಸಿದ್ಧವಾಗಿರುವ ಡಿಕಂಪೋಸರ್

ಸುಸ್ಥಿರ ಕೃಷಿ ಪದ್ದತಿಯಲ್ಲಿ ಸರಳವಾದ ಆದರೆ ಆಳವಾದ ವಿಷಯವೇನೆಂದರೆ ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವುದು. ಸಾವಯವ ಕೃಷಿ ತ್ಯಾಜ್ಯವು ನಮಗೆ ಹೊರೆಯಾಗಿರದೆ ಮಣ್ಣನ್ನು ಸಮೃದ್ಧಗೊಳಿಸುವ, ಸಸ್ಯಗಳನ್ನು ಪೋಷಿಸುವ ಮತ್ತು…

January 28, 2025

ಎಪಿಸೆಲ್: ಸುಸ್ಥಿರ ಕೃಷಿಗಾಗಿ ನಿಮ್ಮ ಬೆಳೆಗಳ ಸಂಪೂರ್ಣ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ

ಇತ್ತೀಚೆಗೆ ಬದಲಾಗುತ್ತಿರುವ ಕೃಷಿ ಭೂದೃಶ್ಯದ ಕಾರಣವಾಗಿ, ಸಮರ್ಥನೀಯ ಮತ್ತು ಸಮರ್ಥ ಕೃಷಿ ವಿಧಾನಗಳನ್ನು ಕಂಡುಹಿಡಿಯುವುದು ನಿರ್ಣಾಯಕವಾಗಿದೆ. ಅದಕ್ಕಾಗಿಯೇ ಪರಿಚಯಿಸುತ್ತಿದ್ದೇವೆ, ಎಪಿಸೆಲ್! ಎಕ್ಸೆಲ್ ಇಂಡಸ್ಟ್ರೀಸ್‌ ರವರ ಈ ನವೀನ…

January 28, 2025

ಸೆಲ್ ಜೆಲ್‌ನೊಂದಿಗೆ ಕೃಷಿ ದಕ್ಷತೆಯನ್ನು ಹೆಚ್ಚಿಸುವುದು: ನೀರಿನ ಕಂಡೀಷನಿಂಗ್ ಮತ್ತು pH ಸಮತೋಲನ ಮಾಡಲು ಸಲಹೆಗಳು

ನೀರು ಕೃಷಿಯಲ್ಲಿ ಮೂಲಭೂತ ಸಂಪನ್ಮೂಲವಾಗಿದ್ದು, ಬೆಳೆಗಳ ವೃದ್ಧಿಗಾಗಿ ಅಗತ್ಯ ಪೋಷಕಾಂಶಗಳ ಮತ್ತು ಬೆಳೆ ರಕ್ಷಣೆಗೆ ಅಗತ್ಯವಾದ ರಾಸಾಯನಿಕಗಳನ್ನು ಸಾಗಿಸುವಲ್ಲಿ ವಾಹಕವಾಗಿ ಕಾರ್ಯನಿರ್ವಹಿಸುತ್ತದೆ . ಆದಾಗ್ಯೂ, ಕಳೆನಾಶಕಗಳು, ಕೀಟನಾಶಕಗಳು,…

January 28, 2025