Govt for Farmers

ಹತ್ತಿ ಮತ್ತು ನಾರಗಸೆ  ಬೆಳೆಗಳ  ಮೇಲೆ ಕೇಂದ್ರ ಸರ್ಕಾರದಿಂದ ಅನುದಾನ

ಇತ್ತೀಚಿನ ಕೆಲವು ವರ್ಷಗಳಿಂದ ಕರ್ನಾಟಕ  ಮತ್ತು ಇತರೆ ರಾಜ್ಯಗಳು ಸೇರಿದಂತೆ ಭಾರತವು ಎಣ್ಣೆಕಾಳು ಬೆಳೆಗಳ  ಉತ್ಪಾದನೆ ಮತ್ತು ಆಮದುದಾರಿಕೆಯಲ್ಲಿ ಹೆಚ್ಚಿನ ಕೊಡುಗೆ ನೀಡುತ್ತಿವೆ. ದೇಶದಲ್ಲಿ ಖಾದ್ಯ ತೈಲಕ್ಕೆ  (ಅಡುಗೆ ಎಣ್ಣೆ) ಬೇಡಿಕೆ ಹೆಚ್ಚುತ್ತಿದ್ದು, ಎಣ್ಣೆಕಾಳು ಬೆಳೆಗಳ  ಹೆಚ್ಚು  ಉತ್ಪಾದನೆಗೆ ಒತ್ತುನೀಡಲು ಕೇಂದ್ರ ಸರ್ಕಾರವು ಎಣ್ಣೆಬೀಜಗಳು ಮತ್ತು ಎಣ್ಣೆ ಪಾಮ್ (NMOOP) ಯೋಜನೆಯನ್ನು  ರಾಷ್ಟ್ರೀಯ ಮಿಷನ್ ಅಡಿಯಲ್ಲಿ 2014 ರಲ್ಲಿ  ಜಾರಿಗೆ ತಂದಿದೆ.  

ಗುಣಮಟ್ಟದ ಎಣ್ಣೆಕಾಳುಗಳ ಉತ್ಪಾದನೆಯನ್ನು ಉತ್ತೇಜಿಸಲು ಹತ್ತಿ ಮತ್ತು ನಾರಗಸೆ ಬೆಳೆಗಳ ಮೇಲೆ ಅನುದಾನವನ್ನು ನೀಡುತ್ತಿದೆ. 

ಯೋಜನೆಯ  ಅವಲೋಕನ

  • ಯೋಜನೆಯ ಹೆಸರು: ಎಣ್ಣೆಬೀಜಗಳ ಮತ್ತು ಎಣ್ಣೆ ಪಾಮ್ ನ  ರಾಷ್ಟ್ರೀಯ ಮಿಷನ್ (NMOOP)
  • ಯೋಜನೆ   ತಿದ್ದುಪಡಿ  : 13-07-2018
  • ಯೋಜನೆಯ ನಿಧಿ ಹಂಚಿಕೆ: ರೂ.11,040 ಕೋಟಿ
  • ಯೋಜನೆಯ ಪ್ರಾಯೋಜಕರು: ಭಾರತ ಕೇಂದ್ರ ಸರ್ಕಾರ
  • ಪ್ರಾಯೋಜಿತ / ವಲಯ ಯೋಜನೆ: ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ
  • ಅರ್ಜಿ ಸಲ್ಲಿಸಲು ಆನ್ ಲೈನ್ ವೆಬ್‌ಸೈಟ್: https://nmoop.gov.in/
  • ಸಹಾಯವಾಣಿ ಸಂಖ್ಯೆ: 011-23381176

ಈ ಯೋಜನೆಯ ವಿಶಿಷ್ಟತೆಗಳು:

  • ಈ ಯೋಜನೆಯ ಉದ್ದೇಶವು  ಎಣ್ಣೆಬೀಜ ಕೃಷಿಯನ್ನು ಹೆಚ್ಚಿಸುವುದು ಮತ್ತು ಆ ಮೂಲಕ ಖಾದ್ಯ ತೈಲಗಳ ಆಮದು  ಅಗತ್ಯವನ್ನು ಕಡಿಮೆ ಮಾಡುವುದು.
  • ಬಳಕೆಯಾಗದ ಭೂ ಪ್ರದೇಶಗಳಲ್ಲಿ ಎಣ್ಣೆಕಾಳುಗಳನ್ನು ಬೆಳೆದು  ಹಾಗೂ  ಸರಿಯಾದ ನಿರ್ವಹಣಾ ತಂತ್ರಗಳನ್ನು ಬಳಸಿ ಎಣ್ಣೆಬೀಜ ಉತ್ಪಾದನೆಯನ್ನು ಹೆಚ್ಚಿಸುವುದು.
  • ಅರಣ್ಯೇತರ ಮತ್ತು ಅರಣ್ಯ ಪ್ರದೇಶಗಳಲ್ಲಿ ಹರಡಿರುವ ವಿವಿಧ ಮರದಿಂದ ಸಿಗುವ ಎಣ್ಣೆಕಾಳುಗಳನ್ನು ಕ್ರೂಡೀಕರಿಸಿವುದು .
  • ಬರಡು  ಭೂಮಿಯನ್ನು ಉತ್ಪಾದಕ ಭೂಮಿಯಾನ್ನಾಗಿ ಪರಿವರ್ತಿಸುವುದು .

ಈ ಯೋಜನೆಯ  ಉಪಯೋಗಗಳು

  • ಯೋಜನೆಯನ್ನು  ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಕ್ರಮವಾಗಿ 75:25 ಅನುಪಾತದಲ್ಲಿ ಮಾಡಲಾಗುತ್ತದೆ.
  • ಈ ಯೋಜನೆಯು ಈಶಾನ್ಯ ರಾಜ್ಯಗಳಲ್ಲಿ ಎಣ್ಣೆಬೀಜಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
  • ಬೀಜಗಳನ್ನು ನಾಟಿ ಮಾಡುವುದು, ನೀರಾವರಿ, ನಿರ್ವಹಣೆ, ಕಟಾವು ಹಂತಗಳಲ್ಲಿ   ಉಪಕರಣಗಳನ್ನು ಒದಗಿಸುವಲ್ಲಿ  ರೈತರಿಗೆ ನೆರವು ನೀಡಲಾಗುವುದು.
  • ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಕುಸಿತದ ಸಂದರ್ಭದಲ್ಲಿ ರೈತರು ತಮ್ಮ ಉತ್ಪನ್ನಗಳಿಗೆ ಸರಿಯಾದ ದರವನ್ನು ಕಂಡುಕೊಳ್ಳಲು ಯೋಜನೆಯು ಸಹಾಯ ಮಾಡುತ್ತದೆ.
  • ಈ ಯೋಜನೆಯು ಧಾನ್ಯಗಳು ಮತ್ತು ದ್ವಿದಳ ಧಾನ್ಯಗಳ ಜೊತೆಗೆ ಎಣ್ಣೆಬೀಜಗಳ ಅಂತರ ಬೆಳೆಯನ್ನು ಉತ್ತೇಜಿಸುತ್ತದೆ.
  • ರೈತರಿಗೆ ಅಗತ್ಯವಿದ್ದಲ್ಲಿ ತಾಂತ್ರಿಕ ನೆರವು ನೀಡಲು ಸರ್ಕಾರಿ ಸಂಸ್ಥೆಗಳು ಸಿದ್ಧವಿರುತ್ತವೆ.

ಹತ್ತಿ ಮತ್ತು ನಾರಗಸೆ  ಬೆಳೆ ಅನುದಾನದ  ಕೊರತೆಗಳು

  • ರಾಜ್ಯ ಸರ್ಕಾರವು ಎನ್‌ಎಂಒಒಪಿ ಯೋಜನೆಯ ಫಲಾನುಭವಿಯನ್ನು ಪಂಚಾಯತ್ ಮೂಲಕ ಆಯ್ಕೆ ಮಾಡುತ್ತದೆ.
  • ಸರ್ಕಾರವು ಎಣ್ಣೆ ಕಾಳು ಯೋಜನೆಯ ಪ್ರದೇಶವನ್ನು ಆಯ್ಕೆ ಮಾಡುತ್ತದೆ,ಇದು ಕಾರ್ಯವು ರೈತರ ದೃಷ್ಟಿಕೋನದಿಂದ ಕಷ್ಟಕರವಾಗಿರುತ್ತದೆ.
  • ಯೋಜನೆಯು ನೈಸರ್ಗಿಕ ವಿಕೋಪ ಅಥವಾ ವಿಪತ್ತಿನ ಸಂದರ್ಭದಲ್ಲಿ ಪುನಃಸ್ಥಾಪನೆ ಪ್ರಕ್ರಿಯೆಯನ್ನು ಒಳಗೊಳ್ಳುತ್ತದೆ.
  • ಯೋಜನೆಯ ಪ್ರಾರಂಭ ಹಂತದ ಮೊದಲು ಭೂಮಿ ಮತ್ತು ಇತರ ವಿವರಗಳನ್ನು ನಿರ್ಣಯಿಸುವ ಪರಿಶೀಲನಾ ಸಮಿತಿಯ ಬಹು ಹಂತಗಳಿವೆ. ಯೋಜನೆಯ ಉದ್ದಕ್ಕೂ ನಿರಂತರ ಮೇಲ್ವಿಚಾರಣೆ ನಡೆಯುತ್ತದೆ.
  • ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭಾಗಿಯಾಗಿರುವುದರಿಂದ, ಪ್ರಕ್ರಿಯೆಯ ಉದ್ದಕ್ಕೂ ಕೆಂಪು ಪಟ್ಟಿಯನ್ನು ಒಳಗೊಂಡಿರುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

ಈ ಯೋಜನೆಯಡಿಯಲ್ಲಿ ಹತ್ತಿ ಮತ್ತು ನಾರಗಸೆ ಬೆಳೆಗಳ ರೈತರಿಗೆ – ಆರ್ಥಿಕವಾಗಿ, ಭೌತಿಕವಾಗಿ ಮತ್ತು ತಾಂತ್ರಿಕವಾಗಿ ಸಹಾಯವನ್ನು ಈ ಅನುದಾನದ ಮೂಲಕ ಪಡೆಯಬಹುದು. ಎಣ್ಣೆಕಾಳು ಬೀಜಗಳನ್ನು ಬೆಳೆಯುವ ರೈತರು ಈ ಯೋಜನೆಯಡಿಯಲ್ಲಿ ಫಲಾನುಭವಿಯಾಗಬಹುದು ಮತ್ತು ಇತರ ಬೆಳೆ ಉತ್ಪಾದನೆಯ ಅನುಮೋದನೆ ಪೂರೈಸುವುದಕ್ಕಿಂತ  ಹೆಚ್ಚು ಅನುಕೂಲಕರವಾಗಿರುತ್ತದೆ. ನೀವು ಫಲಾನುಭವಿಯಾಗಿ ಆಯ್ಕೆಯಾದ ನಂತರ, ಪ್ರತಿ ಹಂತದಲ್ಲಿ ಮತ್ತು ಅಗತ್ಯವಿದ್ದಾಗ ಬೆಳೆ ಉತ್ಪಾದನೆಯ ವಿವಿಧ ಹಂತಗಳಲ್ಲಿ ನಿಮಗೆ ಸಹಾಯ ಸಿಗುತ್ತದೆ. 

ನೀಡಬೇಕಿರುವ  ದಾಖಲೆಗಳು

ಅಗತ್ಯವಿರುವ ಇತರ ದಾಖಲೆಗಳನ್ನು ಯೋಜನೆಗೆ ಅರ್ಜಿ  ಹಾಕುವ ಸಮಯದಲ್ಲಿ ಅಧಿಕಾರಿಗಳು ತಿಳಿಸುತ್ತಾರೆ.

  • ಆಧಾರ್ ಕಾರ್ಡ್
  • ಪಡಿತರ ಚೀಟಿ
  • ವಿಳಾಸ ಪುರಾವೆ ಮತ್ತು
  • ಭೂಮಿ  ದಾಖಲೆಗಳು

ನಿರ್ಣಯ

ಈ ಯೋಜನೆ ಅಡಿಯಲ್ಲಿ ಹತ್ತಿ ಮತ್ತು ನಾರಗಸೆ  ಬೆಳೆ ಅನುದಾನ ಅನುಕೂಲವಾಗಿದ್ದು,  ಈ  ಯೋಜನೆಯು ಖಾದ್ಯ ಮತ್ತು ಖಾದ್ಯವಲ್ಲದ ಎಣ್ಣೆ ಬೀಜಗಳನ್ನು ಒಳಗೊಂಡಿದೆ. ಈ ಯೋಜನೆಯು ಮುಂದಿನ ಕೆಲವು ವರ್ಷಗಳಲ್ಲಿ ಒಟ್ಟು 75,000 ಹೆಕ್ಟೇರ್ ಭೂ ವ್ಯಾಪ್ತಿಯನ್ನು ಆವರಿಸುವ ಗುರಿಯನ್ನು ಹೊಂದಿದೆ. ಸರಿಯಾಗಿ ಅನುಷ್ಠಾನಗೊಳಿಸಿ್ದರೆ, ರೈತರಿಗೆ ಮತ್ತು ಸರ್ಕಾರಕ್ಕೆ ಸಮಾನವಾಗಿ ಪ್ರಯೋಜನವನ್ನು ನೀಡುವ ಅತ್ಯುತ್ತಮ ಯೋಜನೆಗಳಲ್ಲಿ ಒಂದಾಗಿದೆ.

Recent Posts

ಸೆಲ್ ಜೆಲ್: ಆಧುನಿಕ ಕೃಷಿಗಾಗಿ ನೀರಿನ ಉತ್ತಮ ಸ್ಥಿತಿಯನ್ನು ರೂಪಿಸುವ ಕ್ರಾಂತಿಕಾರಿ ಉತ್ಪನ್ನ

ಕೃಷಿಯಲ್ಲಿ, ದಕ್ಷತೆ ಮತ್ತು ಉತ್ಪಾದಕತೆ ಯಾವಾಗಲೂ ಮುಖ್ಯವಾಗಿರುತ್ತದೆ. ಈಗ ನಾವು ನಿಮಗೆ ನಿಮ್ಮ ನೀರಿನ ಸ್ಥಿತಿ, ನಿಮ್ಮ ಸಸ್ಯ ಸಂರಕ್ಷಣಾ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸುವ…

January 28, 2025

ಎಕ್ಸ್‌ಸ್ಕೇಲೆಂಟ್ : ಡ್ರಿಪ್ ಕ್ಲೀನಿಂಗ್ ಕಾರ್ಯವಿಧಾನದ ಮೂಲಕ ಬೆಳೆಗಳಿಗೆ ಸುರಕ್ಷಿತ ಪರಿಹಾರಗಳು

ಇತ್ತೀಚಿನ ಆಧುನಿಕ ಕೃಷಿಯಲ್ಲಿ ಸಮರ್ಥ ನೀರಿನ ನಿರ್ವಹಣೆ ಮಾಡುವುದು ನಿರ್ಣಾಯಕವಾಗಿದೆ ಮತ್ತು ಹನಿ ನೀರಾವರಿ ಪದ್ದತಿಯು  ನೇರವಾಗಿ ಬೇರುಗಳ ವಲಯವನ್ನು ಗುರಿಯಾಗಿಸಿಕೊಂಡು ಸಸ್ಯಗಳಿಗೆ ನೀರನ್ನು ತಲುಪಿಸುವ ವಿಧಾನವನ್ನು…

January 28, 2025

ಬಯೋಕ್ಯುಲಮ್ AW: ಬೆಳೆ ಸುಸ್ಥಿರತೆಗಾಗಿ ಬಳಸಲು ಸಿದ್ಧವಾಗಿರುವ ಡಿಕಂಪೋಸರ್

ಸುಸ್ಥಿರ ಕೃಷಿ ಪದ್ದತಿಯಲ್ಲಿ ಸರಳವಾದ ಆದರೆ ಆಳವಾದ ವಿಷಯವೇನೆಂದರೆ ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವುದು. ಸಾವಯವ ಕೃಷಿ ತ್ಯಾಜ್ಯವು ನಮಗೆ ಹೊರೆಯಾಗಿರದೆ ಮಣ್ಣನ್ನು ಸಮೃದ್ಧಗೊಳಿಸುವ, ಸಸ್ಯಗಳನ್ನು ಪೋಷಿಸುವ ಮತ್ತು…

January 28, 2025

ಎಪಿಸೆಲ್: ಸುಸ್ಥಿರ ಕೃಷಿಗಾಗಿ ನಿಮ್ಮ ಬೆಳೆಗಳ ಸಂಪೂರ್ಣ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ

ಇತ್ತೀಚೆಗೆ ಬದಲಾಗುತ್ತಿರುವ ಕೃಷಿ ಭೂದೃಶ್ಯದ ಕಾರಣವಾಗಿ, ಸಮರ್ಥನೀಯ ಮತ್ತು ಸಮರ್ಥ ಕೃಷಿ ವಿಧಾನಗಳನ್ನು ಕಂಡುಹಿಡಿಯುವುದು ನಿರ್ಣಾಯಕವಾಗಿದೆ. ಅದಕ್ಕಾಗಿಯೇ ಪರಿಚಯಿಸುತ್ತಿದ್ದೇವೆ, ಎಪಿಸೆಲ್! ಎಕ್ಸೆಲ್ ಇಂಡಸ್ಟ್ರೀಸ್‌ ರವರ ಈ ನವೀನ…

January 28, 2025

ಸೆಲ್ ಜೆಲ್‌ನೊಂದಿಗೆ ಕೃಷಿ ದಕ್ಷತೆಯನ್ನು ಹೆಚ್ಚಿಸುವುದು: ನೀರಿನ ಕಂಡೀಷನಿಂಗ್ ಮತ್ತು pH ಸಮತೋಲನ ಮಾಡಲು ಸಲಹೆಗಳು

ನೀರು ಕೃಷಿಯಲ್ಲಿ ಮೂಲಭೂತ ಸಂಪನ್ಮೂಲವಾಗಿದ್ದು, ಬೆಳೆಗಳ ವೃದ್ಧಿಗಾಗಿ ಅಗತ್ಯ ಪೋಷಕಾಂಶಗಳ ಮತ್ತು ಬೆಳೆ ರಕ್ಷಣೆಗೆ ಅಗತ್ಯವಾದ ರಾಸಾಯನಿಕಗಳನ್ನು ಸಾಗಿಸುವಲ್ಲಿ ವಾಹಕವಾಗಿ ಕಾರ್ಯನಿರ್ವಹಿಸುತ್ತದೆ . ಆದಾಗ್ಯೂ, ಕಳೆನಾಶಕಗಳು, ಕೀಟನಾಶಕಗಳು,…

January 28, 2025

ಎಕ್ಸ್‌ಸ್ಕೇಲೆಂಟ್: ಹನಿ ನೀರಾವರಿ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಸುರಕ್ಷಿತ ಮತ್ತು ಪರಿಣಾಮಕಾರಿ ಪರಿಹಾರ

ಹನಿ ನೀರಾವರಿ ವ್ಯವಸ್ಥೆ ಆಧುನಿಕ ಕೃಷಿಯ ಅತ್ಯಗತ್ಯ ಅಂಶವಾಗಿದೆ. ಇದು ಸಸ್ಯಗಳ ಬೇರುಗಳಿಗೆ ನೇರವಾಗಿ ನೀರನ್ನು ತಲುಪಿಸುವ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಈ ವಿಧಾನವು ನೀರನ್ನು ಸಂರಕ್ಷಿಸುವುದು…

January 28, 2025