ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು, 2022-23ನೇ ಸಾಲಿನ ಪ್ರಮುಖ ಕೃಷಿ ಬೆಳೆಗಳ ಉತ್ಪಾದನೆಯ ಎರಡನೇ ಮುಂಗಡ ಅಂದಾಜನ್ನು ಬಿಡುಗಡೆ ಮಾಡಿದೆ. ಪ್ರಸಕ್ತ ಸಾಲಿನ ಒಟ್ಟು ಆಹಾರ ಧಾನ್ಯಗಳ ಉತ್ಪಾದನೆ 3235.54 ಲಕ್ಷ ಟನ್ಗಳು ಎಂದು ಅಂದಾಜಿಸಲಾಗಿದ್ದು, ಇದು ಕಳೆದ ಸಾಲಿನ ಉತ್ಪಾದನೆಗಿಂತ ಅಧಿಕವಾಗಿದೆ. ಜೊತೆಗೆ ಇತರ ಬೆಳೆಗಳಾದ ಭತ್ತ, ಗೋಧಿ, ಜೋಳ, ಪೌಷ್ಠಿಕ/ಒರಟಾದ ಧಾನ್ಯಗಳು, ಮೂಂಗ್, ದ್ವಿದಳ ಧಾನ್ಯಗಳು, ಎಣ್ಣೆಕಾಳುಗಳು, ಹತ್ತಿ ಮತ್ತು ಸೆಣಬು & ಮೇಸ್ತ ಬೆಳೆಗಳ ಅಂದಾಜು ಉತ್ಪಾದನೆಯು ಕಳೆದ ಸಾಲಿಗಿಂತ ಹೆಚ್ಚಾಗಿದೆ.
ರಾಜ್ಯಗಳು ಮತ್ತು ಇತರ ಮೂಲಗಳಿಂದ ಉತ್ಪಾದನೆ ಕುರಿತು ದೊರೆತ ಮಾಹಿತಿಯನ್ನು ಆಧರಿಸಿ ತದನಂತರ ಇದಕ್ಕೆ ಸಂಬಂಧಿಸಿದಂತೆ ಇತರೆ ಆಧಾರಗಳ ಮೇಲೆ ಸದರಿ ಮಾಹಿತಿಯನ್ನು ಪರಷ್ಕರಿಸಲಾಗುತ್ತದೆ. ಕೇಂದ್ರ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಮಾನ್ಯಶ್ರೀ ನರೇಂದ್ರ ಸಿಂಗ್ ತೋಮರ್ ರವರು ಉತ್ಪಾದನೆಯ ಹೆಚ್ಚಳವನ್ನು ಪ್ರೇರೇಪಿಸಿ, ಮುಂದಿನ ಸಾಲಿನಲ್ಲಿ ಇನ್ನಷ್ಟು ಅಧಿಕ ಉತ್ಪಾದನೆಯನ್ನು ಸಾಧಿಸುವ ಭರವಸೆಯನ್ನು ವ್ಯಕ್ತಪಡಿಸಿದರು.
ಬೆಳೆ | ಅಂದಾಜು ಉತ್ಪಾದನೆ (2022-23) | ಹಿಂದಿನ ವರ್ಷಕ್ಕಿಂತ (2021-22) ಅಧಿಕ |
ಆಹಾರ ಧಾನ್ಯಗಳು | 3235.54 ಲಕ್ಷ ಟನ್ಗಳು (ದಾಖಲೆ) | 79.38 ಲಕ್ಷ ಟನ್ಗಳು |
ಭತ್ತ | 1308.37 ಲಕ್ಷ ಟನ್ಗಳು (ದಾಖಲೆ) | 13.65 ಲಕ್ಷ ಟನ್ಗಳು |
ಗೋಧಿ | 1121.82 ಲಕ್ಷ ಟನ್ಗಳು (ದಾಖಲೆ) | 44.40 ಲಕ್ಷ ಟನ್ಗಳು |
ಪೌಷ್ಠಿಕ/ ಸಿರಿ ಧಾನ್ಯಗಳು | 527.26 ಲಕ್ಷ ಟನ್ಗಳು | 16.25 ಲಕ್ಷ ಟನ್ಗಳು |
ಮೆಕ್ಕೆಜೋಳ | 346.13 ಲಕ್ಷ ಟನ್ಗಳು (ದಾಖಲೆ) | 8.83 ಲಕ್ಷ ಟನ್ಗಳು |
ಬಾರ್ಲಿ | 22.04 ಲಕ್ಷ ಟನ್ಗಳು (ದಾಖಲೆ) | 8.33 ಲಕ್ಷ ಟನ್ಗಳು |
ಒಟ್ಟು ಬೇಳೆಕಾಳುಗಳು | 278.10 ಲಕ್ಷ ಟನ್ಗಳು (ದಾಖಲೆ) | 5.08 ಲಕ್ಷ ಟನ್ಗಳು |
ಬೇಳೆಗಳು | 136.32 ಲಕ್ಷ ಟನ್ಗಳು (ದಾಖಲೆ) | 0.88 ಲಕ್ಷ ಟನ್ಗಳು |
ಮೂಂಗ್ | 35.45 ಲಕ್ಷ ಟನ್ಗಳು (ದಾಖಲೆ) | 3.80 ಲಕ್ಷ ಟನ್ಗಳು |
ಎಣ್ಣೆಬೀಜಗಳು | 400.01 ಲಕ್ಷ ಟನ್ಗಳು (ದಾಖಲೆ) | 20.38 ಲಕ್ಷ ಟನ್ಗಳು |
ನೆಲಗಡಲೆ | 100.56 ಲಕ್ಷ ಟನ್ | |
ಸೋಯಾಬೀನ್ | 139.75 ಲಕ್ಷ ಟನ್ | 9.89 ಲಕ್ಷ ಟನ್ |
ರೇಪ್ಸೀಡ್ ಮತ್ತು ಸಾಸಿವೆ | 128.18 ಲಕ್ಷ ಟನ್ಗಳು (ದಾಖಲೆ) | 8.55 ಲಕ್ಷ ಟನ್ಗಳು |
ಹತ್ತಿ | 337.23 ಲಕ್ಷ ಬೇಲ್ಗಳು (ತಲಾ 170 ಕೆಜಿ) | 2 6.05 ಲಕ್ಷ ಬೇಲ್ಗಳು |
ಕಬ್ಬು | 4687.89 ಲಕ್ಷ ಟನ್ಗಳು (ದಾಖಲೆ) | 2 93.64 ಲಕ್ಷ ಟನ್ಗಳು |
ಸೆಣಬು ಮತ್ತು ಮೇಸ್ತಾ | 100.49 ಲಕ್ಷ ಬೇಲ್ಗಳು (ತಲಾ 180 ಕೆಜಿ) |
ಕೃಷಿಯಲ್ಲಿ, ದಕ್ಷತೆ ಮತ್ತು ಉತ್ಪಾದಕತೆ ಯಾವಾಗಲೂ ಮುಖ್ಯವಾಗಿರುತ್ತದೆ. ಈಗ ನಾವು ನಿಮಗೆ ನಿಮ್ಮ ನೀರಿನ ಸ್ಥಿತಿ, ನಿಮ್ಮ ಸಸ್ಯ ಸಂರಕ್ಷಣಾ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸುವ…
ಇತ್ತೀಚಿನ ಆಧುನಿಕ ಕೃಷಿಯಲ್ಲಿ ಸಮರ್ಥ ನೀರಿನ ನಿರ್ವಹಣೆ ಮಾಡುವುದು ನಿರ್ಣಾಯಕವಾಗಿದೆ ಮತ್ತು ಹನಿ ನೀರಾವರಿ ಪದ್ದತಿಯು ನೇರವಾಗಿ ಬೇರುಗಳ ವಲಯವನ್ನು ಗುರಿಯಾಗಿಸಿಕೊಂಡು ಸಸ್ಯಗಳಿಗೆ ನೀರನ್ನು ತಲುಪಿಸುವ ವಿಧಾನವನ್ನು…
ಸುಸ್ಥಿರ ಕೃಷಿ ಪದ್ದತಿಯಲ್ಲಿ ಸರಳವಾದ ಆದರೆ ಆಳವಾದ ವಿಷಯವೇನೆಂದರೆ ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವುದು. ಸಾವಯವ ಕೃಷಿ ತ್ಯಾಜ್ಯವು ನಮಗೆ ಹೊರೆಯಾಗಿರದೆ ಮಣ್ಣನ್ನು ಸಮೃದ್ಧಗೊಳಿಸುವ, ಸಸ್ಯಗಳನ್ನು ಪೋಷಿಸುವ ಮತ್ತು…
ಇತ್ತೀಚೆಗೆ ಬದಲಾಗುತ್ತಿರುವ ಕೃಷಿ ಭೂದೃಶ್ಯದ ಕಾರಣವಾಗಿ, ಸಮರ್ಥನೀಯ ಮತ್ತು ಸಮರ್ಥ ಕೃಷಿ ವಿಧಾನಗಳನ್ನು ಕಂಡುಹಿಡಿಯುವುದು ನಿರ್ಣಾಯಕವಾಗಿದೆ. ಅದಕ್ಕಾಗಿಯೇ ಪರಿಚಯಿಸುತ್ತಿದ್ದೇವೆ, ಎಪಿಸೆಲ್! ಎಕ್ಸೆಲ್ ಇಂಡಸ್ಟ್ರೀಸ್ ರವರ ಈ ನವೀನ…
ನೀರು ಕೃಷಿಯಲ್ಲಿ ಮೂಲಭೂತ ಸಂಪನ್ಮೂಲವಾಗಿದ್ದು, ಬೆಳೆಗಳ ವೃದ್ಧಿಗಾಗಿ ಅಗತ್ಯ ಪೋಷಕಾಂಶಗಳ ಮತ್ತು ಬೆಳೆ ರಕ್ಷಣೆಗೆ ಅಗತ್ಯವಾದ ರಾಸಾಯನಿಕಗಳನ್ನು ಸಾಗಿಸುವಲ್ಲಿ ವಾಹಕವಾಗಿ ಕಾರ್ಯನಿರ್ವಹಿಸುತ್ತದೆ . ಆದಾಗ್ಯೂ, ಕಳೆನಾಶಕಗಳು, ಕೀಟನಾಶಕಗಳು,…
ಹನಿ ನೀರಾವರಿ ವ್ಯವಸ್ಥೆ ಆಧುನಿಕ ಕೃಷಿಯ ಅತ್ಯಗತ್ಯ ಅಂಶವಾಗಿದೆ. ಇದು ಸಸ್ಯಗಳ ಬೇರುಗಳಿಗೆ ನೇರವಾಗಿ ನೀರನ್ನು ತಲುಪಿಸುವ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಈ ವಿಧಾನವು ನೀರನ್ನು ಸಂರಕ್ಷಿಸುವುದು…