News

ಬದಲಾವಣೆಯ ಕ್ರಾಂತಿ: “ಕೃಷಿ ಕ್ಷೇತ್ರದಲ್ಲಿ ಸಮರ್ಥ ಮತ್ತು ಸುಸ್ಥಿರ ಬದಲಾವಣೆಗಾಗಿ ಜಿ20 ದೇಶಗಳ ಸಹಭಾಗಿತ್ವ”

 ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಭಾರತವು ಜಿ 20 ರ ಕೃಷಿ ಕಾರ್ಯಕಾರಿ ಗುಂಪು (AWG) ಸಚಿವರ ಸಭೆಯ ಮೂರು ದಿನಗಳ ಕಾರ್ಯಕ್ರಮವನ್ನು ಹೈದರಾಬಾದ್‌ನಲ್ಲಿ 2023 ಜೂನ್ 15 ರಿಂದ 17 ರವರೆಗೆ ಆಯೋಜಿಸಲಾಗಿತ್ತು. ಪ್ರಮುಖ ಕೃಷಿ ತಜ್ಞರು, ಮಂತ್ರಿಗಳು ಮತ್ತು ಸಂಸ್ಥೆಗಳ ಕ್ರಿಯಾತ್ಮಕ ಸಹಯೋಗದಲ್ಲಿ ಅವರು ಕೃಷಿಯಲ್ಲಿನ ಪ್ರಮುಖ ಸವಾಲುಗಳನ್ನು ಚರ್ಚಿಸಿದರು  ಮತ್ತು ಸುಸ್ಥಿರ ಕೃಷಿಯನ್ನು ಉತ್ತೇಜಿಸಿದರು. 

 ಈ ನಿರ್ಣಾಯಕ ಸಭೆಯಲ್ಲಿ ಅವರು, ಕೃಷಿಯ ಭವಿಷ್ಯವನ್ನು ರೂಪಿಸುವ ಮತ್ತು ಸಹಯೋಗವನ್ನು ಬೆಳೆಸುವ ಆದ್ಯತೆಯ ಕ್ಷೇತ್ರಗಳು ಮತ್ತು ಸಭೆಗಳ  ಬಗ್ಗೆ ಪರಿಶೀಲಿಸಿದರು. 

ಅವಲೋಕನ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಗೌರವಾನ್ವಿತ ನಾಯಕತ್ವದಲ್ಲಿ, ಕೃಷಿಯನ್ನು ಪ್ರಮುಖ ಚರ್ಚೆಯ ವಿಷಯವಾಗಿ ತೆಗೆದುಕೊಂಡು, ಭಾರತವು ಜಿ-20 ನ ಅಧ್ಯಕ್ಷರ ಜವಾಬ್ದಾರಿಯನ್ನು ಹೆಮ್ಮೆಯಿಂದ ವಹಿಸಿಕೊಂಡಿದೆ. ಜಿ –20 ಕೃಷಿ ಮಂತ್ರಿಗಳ ಸಭೆಯು ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು, ಸುಸ್ಥಿರ ಕೃಷಿಯನ್ನು ಉತ್ತೇಜಿಸಲು, ರೈತರಿಗೆ ಮೂಲಸೌಕರ್ಯವನ್ನು ಬಲಪಡಿಸಲು ಮತ್ತು ಡಿಜಿಟಲ್ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವಲ್ಲಿ ಸಹಯೋಗ ಮತ್ತು ಸಾಮೂಹಿಕ ಕ್ರಮವನ್ನು ಉತ್ತೇಜಿಸುವ ವೇದಿಕೆಯಾಗಿದೆ. 

 ಕೃಷಿ ಕಾರ್ಯಕಾರಿ ಗುಂಪುಸಭೆಯು ನಾಲ್ಕು ಆದ್ಯತೆಯ ಕ್ಷೇತ್ರಗಳನ್ನು ಒಳಗೊಂಡಿದೆ:- 

  • ಆಹಾರ ಭದ್ರತೆ ಮತ್ತು ಪೋಷಣೆ
  • ಸುಸ್ಥಿರ ಕೃಷಿ ಮತ್ತು ಹವಾಮಾನ ಸ್ಥಿತಿಸ್ಥಾಪಕತ್ವವನ್ನು ಉತ್ತೇಜಿಸುವುದು
  • ಸಣ್ಣ ಮತ್ತು ಅತಿ ಸಣ್ಣ ರೈತರು ಮತ್ತು ಯುವಕರಿಗೆ ಮೂಲಸೌಕರ್ಯಗಳನ್ನು ಬಲಪಡಿಸುವುದು
  • ಕೃಷಿಯಲ್ಲಿ ಉತ್ತಮ ಪರಿವರ್ತನೆಗಾಗಿ ಡಿಜಿಟಲೀಕರಣವನ್ನು ಬಳಸಿಕೊಳ್ಳುವುದು

ಪ್ರಮುಖ ಅಂಶಗಳು

  • ಆಹಾರ ಭದ್ರತೆ, ಸುಸ್ಥಿರ ಕೃಷಿ, ಮೂಲಸೌಕರ್ಯ ಮತ್ತು ಡಿಜಿಟಲ್ ರೂಪಾಂತರಕ್ಕಾಗಿ ಜಿ 20 ಕೃಷಿ ಮಂತ್ರಿಗಳ ಸಭೆ ಹೈದರಾಬಾದ್‌ನಲ್ಲಿ ಪ್ರಾರಂಭವಾಯಿತು.
  • ಈ ಪ್ರದರ್ಶನದಲ್ಲಿ ತ್ಯಾಜ್ಯ ನಿರ್ವಹಣೆ, ಕೃಷಿ ಆವಿಷ್ಕಾರಗಳು ಮತ್ತು ನಿಖರ ಕೃಷಿ ಸೇರಿದಂತೆ ಕೃಷಿಯಲ್ಲಿನ ಸಾಧನೆಗಳನ್ನು ಪ್ರದರ್ಶಿಸುತ್ತದೆ.
  • ಸಭೆಯ ಆದ್ಯತೆಯ ಕ್ಷೇತ್ರಗಳಲ್ಲಿ – ಆಹಾರ ಭದ್ರತೆ, ಕೃಷಿ ವೈವಿಧ್ಯೀಕರಣ, ಹವಾಮಾನ ಸ್ಥಿತಿಸ್ಥಾಪಕ ಕೃಷಿ, ಸಣ್ಣ ರೈತರಿಗೆ ಮೂಲಸೌಕರ್ಯ ಮತ್ತು ಡಿಜಿಟಲೀಕರಣಕ್ಕೆ ಮುಖ್ಯ ಆಧ್ಯತೆ ನೀಡಲಾಗಿದೆ.
  • ಸಮಿತಿಯ ಚರ್ಚೆಯಲ್ಲಿ ರೈತರು ಕೃಷಿ ವ್ಯವಹಾರವನ್ನು ಲಾಭದಾಯಕವಾಗಿ ನಿರ್ವಹಿಸುವುದಕ್ಕೆ ಅವಕಾಶವನ್ನು ಕಲ್ಪಿಸುವುದರ ಜೊತೆಗೆ ಸುಸ್ಥಿರ ಆಹಾರ ಪೂರೈಕೆ ಸರಪಳಿ ವ್ಯವಸ್ಥೆಗಳಿಗೆ ಒತ್ತು ನೀಡುತ್ತವೆ.
  • ಮುಖ್ಯವಾಗಿ ಕೃಷಿಯಲ್ಲಿ ಡಿಜಿಟಲ್ ತಂತ್ರಜ್ಞಾನದ ಶಕ್ತಿಯನ್ನು ಮತ್ತು ಡಿಜಿಟಲ್ ವಿಭಜನೆಯನ್ನು ಸೇತುವೆ ಮಾಡುವ ತಂತ್ರಗಳನ್ನು ಪ್ರದರ್ಶಿಸಲಾಯಿತು.
  • ಜಿ 20 ನಲ್ಲಿ ಭಾರತದ ನಾಯಕತ್ವವು ಜಾಗತಿಕ ಕೃಷಿ ಅಭಿವೃದ್ಧಿ ಮತ್ತು ಜ್ಞಾನ ಹಂಚಿಕೆಯಲ್ಲಿ ಅದರ ಬದ್ಧತೆಯನ್ನು ಪ್ರದರ್ಶಿಸುತ್ತದೆ.
  • ಸುಸ್ಥಿರ ಕೃಷಿ ಪದ್ಧತಿಗಳಿಗೆ ಕೊಡುಗೆ ನೀಡುವ ಮೊದಲ ಹೆಜ್ಜೆಯಾಗಿ ಭಾರತದ ಅಂತರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಮತ್ತು ಬೆಳೆ ವೈವಿಧ್ಯತೆಯ ಜಾಗೃತಿ ಕಾರ್ಯಕ್ರಮಗಳು ಜಿ 20 ಸಭೆಗಳೊಂದಿಗಿನ ಒಮ್ಮತವನ್ನು ಸಾರುತ್ತದೆ.
  • ಭಾರತದಲ್ಲಿ ಜಾರಿಗೊಳಿಸಲಾದ ಯಶಸ್ವಿ ನೀತಿಗಳು ಮತ್ತು ಕಾರ್ಯಕ್ರಮಗಳು ಆಹಾರ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಮತ್ತು ರೈತರ ಕಲ್ಯಾಣಕ್ಕೆ ಆದ್ಯತೆ ನೀಡುವಲ್ಲಿ ಯಶಸ್ವಿಯಾಯಿತು.
  • ಜಿ 20 ಕೃಷಿ ಮಂತ್ರಿಗಳ ಸಭೆಯು ಕೃಷಿಯಲ್ಲಿ ಚೇತರಿಸಿಕೊಳ್ಳುವ ಮತ್ತು ಸಮೃದ್ಧ ಭವಿಷ್ಯಕ್ಕಾಗಿ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ರೂಪಿಸುವ ಗುರಿಯನ್ನು ಹೊಂದಿದೆ.

ಜಿ 20 ಪ್ರಾಮುಖ್ಯತೆ ಮತ್ತು ಭಾರತದ ಪಾತ್ರ:

G20 ನಲ್ಲಿ ಭಾರತದ ಭಾಗವಹಿಸುವಿಕೆ ಮತ್ತು ನಾಯಕತ್ವವು ಜಾಗತಿಕ ಕೃಷಿ ಅಭಿವೃದ್ಧಿಗೆ ಅದರ ಬದ್ಧತೆಯನ್ನು ತೋರಿಸುತ್ತದೆ. ಪ್ರಬಲವಾದ ಕೃಷಿ ಕ್ಷೇತ್ರದೊಂದಿಗೆ, ಭಾರತವು ತನ್ನ ಜ್ಞಾನ ಮತ್ತು ಅನುಭವಗಳನ್ನು ಜಾಗತಿಕ ಕೃಷಿ ಸಮುದಾಯದ ಪ್ರಯೋಜನಕ್ಕಾಗಿ ಹಂಚಿಕೊಂಡಿದೆ. ದೇಶದ ಪೂರ್ವಭಾವಿ ಕಾರ್ಯಕ್ರಮಗಳಾದ ಅಂತರಾಷ್ಟ್ರೀಯ ಸಿರಿಧಾನ್ಯಗಳ ವರ್ಷ, ಬೆಳೆ ವೈವಿಧ್ಯತೆಯ ಜಾಗೃತಿ ಕಾರ್ಯಕ್ರಮ, ಸಾವಯವ ಮತ್ತು ನೈಸರ್ಗಿಕ ಕೃಷಿಯ ಉತ್ತೇಜನ ಮತ್ತು ಐಸಿಎಆರ್ನ ಹವಾಮಾನ-ಸೂಕ್ತ ತಳಿಗಳು,  ಸುಸ್ಥಿರ ಕೃಷಿ ಮತ್ತು ರೈತರ ಕಲ್ಯಾಣಕ್ಕೆ ಅದರ ಸಮರ್ಪಣೆಯನ್ನು ಎತ್ತಿ ತೋರಿಸುತ್ತವೆ. ಭಾರತದ ಯಶಸ್ವಿ ನೀತಿಗಳು, ಪ್ರವರ್ತಕ ಕಾರ್ಯಕ್ರಮಗಳು ಮತ್ತು ಸುಸ್ಥಿರ ಪರಿಹಾರಗಳು ಆಹಾರ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಮತ್ತು ಕೃಷಿಯ ಭೂನೋಟವನ್ನು ಪರಿವರ್ತಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. 

ಗಮನಾರ್ಹ ಅಂಶಗಳು:

ಗೌರವಾನ್ವಿತ ರಾಜ್ಯ ಸಚಿವ, ಶ್ರೀ ಕೈಲಾಶ್ ಚೌಧರಿ ಅವರ ಉಪಸ್ಥಿತಿಯಲ್ಲಿ ಜಿ –20 ಕೃಷಿ ಮಂತ್ರಿಗಳ ಸಭೆಯ ಮೊದಲ ದಿನವು ವಸ್ತು ಪ್ರದರ್ಶನದ ಮೂಲಕ ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿನ ಸಾಧನೆಗಳನ್ನು ಪ್ರದರ್ಶಿಸಲಾಯಿತು. ವಿವಿಧ ಸಂಸ್ಥೆಗಳು, ಐಸಿಎಆರ್ ಸಂಸ್ಥೆ, ಖಾಸಗಿ ಕಂಪನಿಗಳು ಮತ್ತು ಸ್ಟಾರ್ಟ್‌ಅಪ್‌ಗಳುಇದರಲ್ಲಿ ಭಾಗವಹಿಸಿದರು.ತ್ಯಾಜ್ಯ ನಿರ್ವಹಣೆ, ನಿಖರವಾದ ಕೃಷಿ, ನವೀಕರಣ ಮೌಲ್ಯ ಸರಪಳಿ ನಿರ್ವಹಣೆಯಲ್ಲಿ ತಮ್ಮ ಇತ್ತೀಚಿನ ಪ್ರಗತಿಯನ್ನು ಪ್ರಸ್ತುತಪಡಿಸಿದರು. 

ಈ ಎರಡು ಕಡೆಯ ಕಾರ್ಯಕ್ರಮದಲ್ಲಿ,

  • ಸಮಿತಿಯ ಮೊದಲ ದಿನದ ಚರ್ಚೆಯಲ್ಲಿ ರೈತರು ಕೃಷಿ ವ್ಯವಹಾರವನ್ನು ಲಾಭದಾಯಕವಾಗಿ ನಿರ್ವಹಿಸುವುದಕ್ಕೆ ಅವಕಾಶವನ್ನು ಕಲ್ಪಿಸುವುದರ ಜೊತೆಗೆ ಸುಸ್ಥಿರ ಪೂರೈಕೆ ಸರಪಳಿ ವ್ಯವಸ್ಥೆಗಳಿಗೆ ಒತ್ತು ನೀಡಲಾಯಿತು.
  • ಎರಡನೇ ದಿನದ ಕಾರ್ಯಕ್ರಮದಲ್ಲಿ ಕೃಷಿಯಲ್ಲಿ ಡಿಜಿಟಲ್ ತಂತ್ರಜ್ಞಾನದ ಶಕ್ತಿಯನ್ನು ಮತ್ತು ಡಿಜಿಟಲ್ ವಿಭಜನೆಯನ್ನು ಸೇತುವೆ ಮಾಡುವ ತಂತ್ರಗಳನ್ನು ಪ್ರದರ್ಶಿಸಲಾಯಿತು.

ಹಿನ್ನುಡಿ :

 G20 ಕೃಷಿ ಮಂತ್ರಿಗಳ ಸಭೆಯು ಕೊನೆಗೊಳ್ಳುತ್ತಿದ್ದಂತೆ, ರೈತರಿಗೆ ಸುಸ್ಥಿರ ಮತ್ತು ಸಮೃದ್ಧ ಭವಿಷ್ಯವನ್ನು ಸೃಷ್ಟಿಸುವಲ್ಲಿ ನಮ್ಮ ಮಂತ್ರಿಗಳು, ತಜ್ಞರು ಮತ್ತು ಸಂಸ್ಥೆಗಳು ಬದ್ಧತೆಯನ್ನು ಮತ್ತು ಒಗ್ಗೂಡುವಿಕೆಯನ್ನು ತೋರಿಸಿತು. ಸಹಯೋಗ, ಜ್ಞಾನದ ಹಂಚಿಕೆ ಮತ್ತು ಡಿಜಿಟಲ್ ಪರಿಹಾರಗಳ ಅಳವಡಿಕೆಯ ಮೂಲಕ, ಸಭೆಯು ವಿಶ್ವಾದ್ಯಂತ ರೈತರಿಗೆ ಪ್ರಯೋಜನವಾಗುವ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ರೂಪಿಸುವ ಗುರಿಯನ್ನು ಹೊಂದಿದೆ. “ಒಂದು ಭೂಮಿ, ಒಂದು ಕುಟುಂಬ ಮತ್ತು ಒಂದು ಭವಿಷ್ಯ” ಎಂಬ ಮನೋಭಾವವನ್ನು ಅಳವಡಿಸಿಕೊಳ್ಳುವ ಮೂಲಕ, ರಾಷ್ಟ್ರಗಳ ಸಾಮೂಹಿಕ ಕ್ರಮಗಳು ಚೇತರಿಸಿಕೊಳ್ಳುವ ಮತ್ತು ಅಭಿವೃದ್ಧಿ ಹೊಂದುತ್ತಿರುವ ಕೃಷಿ ಕ್ಷೇತ್ರಕ್ಕೆ ದಾರಿ ಮಾಡಿಕೊಡುತ್ತವೆ. 

 

Recent Posts

ಸೆಲ್ ಜೆಲ್: ಆಧುನಿಕ ಕೃಷಿಗಾಗಿ ನೀರಿನ ಉತ್ತಮ ಸ್ಥಿತಿಯನ್ನು ರೂಪಿಸುವ ಕ್ರಾಂತಿಕಾರಿ ಉತ್ಪನ್ನ

ಕೃಷಿಯಲ್ಲಿ, ದಕ್ಷತೆ ಮತ್ತು ಉತ್ಪಾದಕತೆ ಯಾವಾಗಲೂ ಮುಖ್ಯವಾಗಿರುತ್ತದೆ. ಈಗ ನಾವು ನಿಮಗೆ ನಿಮ್ಮ ನೀರಿನ ಸ್ಥಿತಿ, ನಿಮ್ಮ ಸಸ್ಯ ಸಂರಕ್ಷಣಾ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸುವ…

January 28, 2025

ಎಕ್ಸ್‌ಸ್ಕೇಲೆಂಟ್ : ಡ್ರಿಪ್ ಕ್ಲೀನಿಂಗ್ ಕಾರ್ಯವಿಧಾನದ ಮೂಲಕ ಬೆಳೆಗಳಿಗೆ ಸುರಕ್ಷಿತ ಪರಿಹಾರಗಳು

ಇತ್ತೀಚಿನ ಆಧುನಿಕ ಕೃಷಿಯಲ್ಲಿ ಸಮರ್ಥ ನೀರಿನ ನಿರ್ವಹಣೆ ಮಾಡುವುದು ನಿರ್ಣಾಯಕವಾಗಿದೆ ಮತ್ತು ಹನಿ ನೀರಾವರಿ ಪದ್ದತಿಯು  ನೇರವಾಗಿ ಬೇರುಗಳ ವಲಯವನ್ನು ಗುರಿಯಾಗಿಸಿಕೊಂಡು ಸಸ್ಯಗಳಿಗೆ ನೀರನ್ನು ತಲುಪಿಸುವ ವಿಧಾನವನ್ನು…

January 28, 2025

ಬಯೋಕ್ಯುಲಮ್ AW: ಬೆಳೆ ಸುಸ್ಥಿರತೆಗಾಗಿ ಬಳಸಲು ಸಿದ್ಧವಾಗಿರುವ ಡಿಕಂಪೋಸರ್

ಸುಸ್ಥಿರ ಕೃಷಿ ಪದ್ದತಿಯಲ್ಲಿ ಸರಳವಾದ ಆದರೆ ಆಳವಾದ ವಿಷಯವೇನೆಂದರೆ ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವುದು. ಸಾವಯವ ಕೃಷಿ ತ್ಯಾಜ್ಯವು ನಮಗೆ ಹೊರೆಯಾಗಿರದೆ ಮಣ್ಣನ್ನು ಸಮೃದ್ಧಗೊಳಿಸುವ, ಸಸ್ಯಗಳನ್ನು ಪೋಷಿಸುವ ಮತ್ತು…

January 28, 2025

ಎಪಿಸೆಲ್: ಸುಸ್ಥಿರ ಕೃಷಿಗಾಗಿ ನಿಮ್ಮ ಬೆಳೆಗಳ ಸಂಪೂರ್ಣ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ

ಇತ್ತೀಚೆಗೆ ಬದಲಾಗುತ್ತಿರುವ ಕೃಷಿ ಭೂದೃಶ್ಯದ ಕಾರಣವಾಗಿ, ಸಮರ್ಥನೀಯ ಮತ್ತು ಸಮರ್ಥ ಕೃಷಿ ವಿಧಾನಗಳನ್ನು ಕಂಡುಹಿಡಿಯುವುದು ನಿರ್ಣಾಯಕವಾಗಿದೆ. ಅದಕ್ಕಾಗಿಯೇ ಪರಿಚಯಿಸುತ್ತಿದ್ದೇವೆ, ಎಪಿಸೆಲ್! ಎಕ್ಸೆಲ್ ಇಂಡಸ್ಟ್ರೀಸ್‌ ರವರ ಈ ನವೀನ…

January 28, 2025

ಸೆಲ್ ಜೆಲ್‌ನೊಂದಿಗೆ ಕೃಷಿ ದಕ್ಷತೆಯನ್ನು ಹೆಚ್ಚಿಸುವುದು: ನೀರಿನ ಕಂಡೀಷನಿಂಗ್ ಮತ್ತು pH ಸಮತೋಲನ ಮಾಡಲು ಸಲಹೆಗಳು

ನೀರು ಕೃಷಿಯಲ್ಲಿ ಮೂಲಭೂತ ಸಂಪನ್ಮೂಲವಾಗಿದ್ದು, ಬೆಳೆಗಳ ವೃದ್ಧಿಗಾಗಿ ಅಗತ್ಯ ಪೋಷಕಾಂಶಗಳ ಮತ್ತು ಬೆಳೆ ರಕ್ಷಣೆಗೆ ಅಗತ್ಯವಾದ ರಾಸಾಯನಿಕಗಳನ್ನು ಸಾಗಿಸುವಲ್ಲಿ ವಾಹಕವಾಗಿ ಕಾರ್ಯನಿರ್ವಹಿಸುತ್ತದೆ . ಆದಾಗ್ಯೂ, ಕಳೆನಾಶಕಗಳು, ಕೀಟನಾಶಕಗಳು,…

January 28, 2025

ಎಕ್ಸ್‌ಸ್ಕೇಲೆಂಟ್: ಹನಿ ನೀರಾವರಿ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಸುರಕ್ಷಿತ ಮತ್ತು ಪರಿಣಾಮಕಾರಿ ಪರಿಹಾರ

ಹನಿ ನೀರಾವರಿ ವ್ಯವಸ್ಥೆ ಆಧುನಿಕ ಕೃಷಿಯ ಅತ್ಯಗತ್ಯ ಅಂಶವಾಗಿದೆ. ಇದು ಸಸ್ಯಗಳ ಬೇರುಗಳಿಗೆ ನೇರವಾಗಿ ನೀರನ್ನು ತಲುಪಿಸುವ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಈ ವಿಧಾನವು ನೀರನ್ನು ಸಂರಕ್ಷಿಸುವುದು…

January 28, 2025