News

ಮೀನು ಕೃಷಿ, ನೀಡಲಿದೆ ಖುಷಿ: ಜಲಕೃಷಿ ಉದ್ಯಮವನ್ನು ಉತ್ತೇಜಿಸಿದೆ 2023-24ನೇ ಸಾಲಿನ ಯೂನಿಯನ್ ಬಜೆಟ್

ಪರಿಚಯ:

2023-24 ನೇ ಆರ್ಥಿಕ ಸಾಲಿನ ಭಾರತೀಯ ಬಜೆಟ್ಅಧಿವೇಶನದಲ್ಲಿ ಮೀನುಗಾರಿಕಾ ಇಲಾಖೆಗೆ ರೂ. 2248.77 ಕೋಟಿಗಳ ಗಮನಾರ್ಹ ಮೊತ್ತವನ್ನು ಮೀಸಲಾಗಿದ್ದು, ಹಿಂದಿನ ಸಾಲಿಗೆ ಹೋಲಿಸಿದಾಗ ಶೇಕಡ 38.45 ರಷ್ಟು ಹೆಚ್ಚಳ ಕಂಡು ಬಂದಿದೆ. ಮೀನುಗಾರಿಕೆ ವಲಯದಲ್ಲಿ ಹೆಚ್ಚಿನ ಆದಾಯ ಸೃಷ್ಟಿಸಲು ಹಣಕಾಸು ಸಚಿವರು, ಪ್ರಧಾನ ಮಂತ್ರಿ ಮತ್ಸ್ಯ ಕಿಸಾನ್ ಸಮೃದ್ಧಿ ಸಾಹ್ಯೋಜನಾ (PM-MKSSY) ಎಂಬ ಹೊಸ ಉಪ ಯೋಜನೆಯನ್ನು ಘೋಷಿಸಿದರು. ಇದರ ಜೊತೆಗೆ ಪ್ರಾಥಮಿಕ ಸಹಕಾರ ಸಂಘಗಳ ಅಭಿವೃದ್ಧಿ, ಸಂಸ್ಥೆಯ ಹಣಕಾಸು ಹೆಚ್ಚಿಸುವುದು, ಆಮದು ಸುಂಕವನ್ನು ಕಡತಗೊಳಿಸುವುದು  ಹಾಗೂ ಆವಿಷ್ಕಾರಗಳನ್ನು ಉತ್ತೇಜಿಸುವುದು ಬಜೆಟ್ ನ ಉದ್ದೇಶವಾಗಿದೆ.

 ಅವಲೋಕನ:

   2023-24ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಬಜೆಟ್ಅಧಿವೇಶನದಲ್ಲಿ ಮೀನುಗಾರಿಕಾ ಇಲಾಖೆಗೆ ಗಮನಾರ್ಹ ಪ್ರಮಾಣದ ಮೊತ್ತವನ್ನು ಮೀಸಲಿಟ್ಟಿದೆ. ಮೀನುಗಾರಿಕಾ ಇಲಾಖೆಗೆ ರೂ. 2248.77 ಕೋಟಿಗಳ ಹಂಚಿಕೆಯು, ಇಲ್ಲಿಯವರೆಗೆ ಒದಗಿಸಿದ ಅತ್ಯಧಿಕ ವಾರ್ಷಿಕ ಬಜೆಟ್ ಬೆಂಬಲ ಆಗಿದ್ದು, ಸುಮಾರು ಹಿಂದಿನ ವರ್ಷಕ್ಕಿಂತ 38.45% ಹೆಚ್ಚಳವನ್ನು ಸೂಚಿಸಿದೆ. ಅದಲ್ಲದೇ ಹಣಕಾಸು ಸಚಿವರು PM-MKSSY ಎಂಬ ಹೊಸ ಯೋಜನೆಯನ್ನು ಘೋಷಿಸಿದ್ದು, ಸುಮಾರು 6,000 ಕೋಟಿಗಳ ಹೂಡಿಕೆಯೊಂದಿಗೆ ಮೀನುಗಾರರಿಗೆ, ಮತ್ಸ್ಯ ಮಾರಾಟಗಾರರಿಗೆ ಹಾಗೂ ಸದರಿ ಉದ್ಯಮದಲ್ಲಿ ಸಣ್ಣ ವ್ಯವಹಾರಗಳನ್ನು ಉತ್ತೇಜಿಸುವ ಮುಖಾಂತರ  ಆದಾಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಬಜೆಟ್ ಅಧಿವೇಶನದಲ್ಲಿ ಮೀನುಗಾರಿಕೆ ಸಹಕಾರ ಸಂಘಗಳು ಸೇರಿದಂತೆ ಪ್ರಾಥಮಿಕ ಸಹಕಾರ ಸಂಘಗಳ ರಚನೆ ಹಾಗೂ  ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸೇರಿದಂತೆ ಕೃಷಿ ಮತ್ತು ಇತರೆ ಸಂಬಂಧಿತ ವಲಯಗಳಿಗೆ ಆದಾಯ ಉತ್ಪತ್ತಿ ಆಗುವ ಬಗ್ಗೆ ಒತ್ತು ನೀಡಲಾಯಿತು. ಇದರ ಜೊತೆಗೆ ಸಾಲ, ಸಾಧನಗಳು ಮತ್ತು ಹೊಸ ನಾವೀನ್ಯತೆ ಮತ್ತು ರಫ್ತುಗಳನ್ನು ಉತ್ತೇಜಿಸುವ ಮೂಲಕ ಮೀನುಗಾರಿಕೆ ಮತ್ತು ಜಲಚರಗಳ ವಲಯದ ಏಳಿಗೆಗೆ ಬಜೆಟ್ ನಾಂದಿಯಾಗಿದೆ.

 2023-24ನೇ ಸಾಲಿನ ಬಜೆಟ್ನಲ್ಲಿ, ಮೀನುಗಾರಿಕೆ ಇಲಾಖೆಗೆ ಅನುದಾನ ಮೀಸಲಿಟ್ಟಿರುವುದರಿಂದ ಮೀನು ಸಾಕಾಣಿಕೆಯಲ್ಲಿ ಹೆಚ್ಚಿನ ಲಾಭ ಪ್ರಾಪ್ತಿಯಾಗಲಿದೆ. ಮೀನುಗಾರಿಕಾ ಸಹಕಾರ ಸಂಘಗಳುಮೀನುಗಾರಿಕಾ ಪ್ರಾಥಮಿಕ ಸಹಕಾರ ಸಂಘಗಳ ರಚನೆಯು ಮೀನುಗಾರಿಕಾ ಕ್ಷೇತ್ರಕ್ಕೆ ಔಪಚಾರಿಕ ರಚನೆಯನ್ನು ಒದಗಿಸುತ್ತದೆ. ರೈತರಿಗೆ ಉತ್ಪಾದನೆ ಹಾಗೂ ಕೊಯ್ಲಿನ ನಂತರದ ಚಟುವಟಿಕೆಗಳನ್ನು ಸಂಘಟಿತ ರೀತಿಯಲ್ಲಿ ಕೈಗೊಳ್ಳುವಂತೆ ಸಹಾಯ ಮಾಡಿದೆ. ಪ್ರಧಾನ ಮಂತ್ರಿ ಮತ್ಸ್ಯ ಕಿಸಾನ್ ಸಮೃದ್ಧಿ ಸಹಯೋಜನಾ(PM-MKSSY) ಎಂಬ ಹೊಸ ಉಪ ಯೋಜನೆಯು, ಮೀನುಗಾರಿಕಾ ಉದ್ಯಮದಲ್ಲಿ ಮೀನುಗಾರರು, ಮೀನು ವ್ಯಾಪಾರಿಗಳು ಹಾಗೂ ಸೂಕ್ಷ್ಮ ಮತ್ತು ಸಣ್ಣ ವ್ಯಾಪಾರಗಳ ಆದಾಯವನ್ನು ಹೆಚ್ಚಿಸುತ್ತದೆ. ಸದರಿ ಯೋಜನೆಯು ಮೀನುಗಾರಿಕೆಯಲ್ಲಿ ಔಪಚಾರಿಕತೆಯನ್ನು ಸೃಷ್ಟಿಸಲು ಡಿಜಿಟಲ್ ಸೇರ್ಪಡೆ, ಸಾಂಸ್ಥಿಕ ಹಣಕಾಸು ಪ್ರವೇಶ ಮೀನುಗಾರಿಕೆಯಲ್ಲಿ ಕಂಡು ಬರುವ ತೊಂದರೆಗಳನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಮುಂದೂವರಿದು, 2023-24ನೇ ಸಾಲಿನ ಬಜೆಟ್ ಮೀನುಗಾರಿಕೆ ಮತ್ತು ಜಲಕೃಷಿಯಲ್ಲಿ ಹೊಸ ತಿರುವಿನ ಬೆಳವಣಿಗೆಯನ್ನು ಸಾಧಿಸಲಿದೆ. ಹಾಗೆಯೇ, ಸಂಸ್ಥೆಯ ಆರ್ಥಿಕ ಸುಧಾರಣೆ, ಅಪಾಯ ಕಡಿಮೆಗೊಳಿಸುವ ಸಾಧನಗಳು, ಮಾರುಕಟ್ಟೆಯ ವಿಸ್ತರಣೆ ಮತ್ತು ಹೊಸ ನಾವೀನ್ಯತೆಗಳ ಪ್ರೋತ್ಸಾಹಕ್ಕೆ ಹೆಜ್ಜೆಯಿಟ್ಟಿದೆ.

 ಪ್ರಮುಖ ಅಂಶಗಳು:

  •     ಕೇಂದ್ರ ಹಣಕಾಸು ಸಚಿವರು 2023-24ನೇ ಆರ್ಥಿಕ ಸಾಲಿನ ಬಜೆಟ್‌ ಅಧಿವೇಶನದಲ್ಲಿ ಮೀನುಗಾರಿಕಾ ಇಲಾಖೆಗೆ ರೂ. 2248.77 ಕೋಟಿಗಳ ಗಮನಾರ್ಹ ಮೊತ್ತವನ್ನು ಮೀಸಲಾಗಿದ್ದು, ಹಿಂದಿನ ಸಾಲಿಗೆ ಹೋಲಿಸಿದಾಗ ಶೇಕಡ 38.45 ರಷ್ಟು ಹೆಚ್ಚಿದೆ.
  •     ಪ್ರಧಾನ ಮಂತ್ರಿ ಮತ್ಸ್ಯ ಕಿಸಾನ್ ಸಮೃದ್ಧಿ ಸಾಹ್-ಯೋಜನೆಯು (PM-MKSSY) ಮೀನುಗಾರಿಕಾ ವಲಯದಲ್ಲಿ ಆದಾಯವನ್ನು ಹೆಚ್ಚಿಸಲು ರೂ. 6,000 ಕೋಟಿ ಹೂಡಿಕೆ ಮಾಡುವ ನಿಟ್ಟಿನಲ್ಲಿದೆ.
  •     ಬಜೆಟಿನ ಭಾಷಣದಲ್ಲಿ ಪ್ರತಿ ಪಂಚಾಯತಿಗೆ ಮೀನುಗಾರಿಕಾ ಸಹಕಾರ ಸಂಘ ಸೇರಿದಂತೆ ಪ್ರಾಥಮಿಕ ಸಹಕಾರ ಸಂಘಗಳ ರಚನೆಗೆ ಅನುವು ಮಾಡಿದ್ದು ಔಪಚಾರಿಕಗೊಳಿಸಲು ಸಹಾಯ ಮಾಡಲಿದೆ.
  •     ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸೇರಿದಂತೆ ಕೃಷಿ ಮತ್ತು ಇತರೆ ಸಂಬಂಧಿತ ವಲಯದ ಆರ್ಥಿಕ ಗುರಿಯನ್ನು ರೂ.20 ಲಕ್ಷ ಕೋಟಿಗೆ ಹೆಚ್ಚಿಸಲಾಗಿದೆ.
  •     ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಲು ಮತ್ತು ರಫ್ತುಗಳನ್ನು ಸುಧಾರಿಸಲು ಸೀಗಡಿ ಆಹಾರಕ್ಕೆ ಅಗತ್ಯವಿರುವ ಒಳಹರಿವು ಮತ್ತು ಜಲವಾಸಿ ಆಹಾರ ಪದಾರ್ಥಗಳ ಮೇಲೆ ಆಮದು ಸುಂಕವನ್ನು ಕಡಿಮೆ ಮಾಡಲಾಗಿದೆ.
  •     ಕೃತಕ ಬುದ್ಧಿಮತ್ತೆಗಾಗಿ(ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಭಾರತದಲ್ಲಿ ಮೂರು ಶ್ರೇಷ್ಠತೆಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು,ಇದು ಮೀನು ಮಾರಾಟ ವ್ಯವಸ್ಥೆಯಲ್ಲಿ ಸುಧಾರಣೆಗೆ ಅವಕಾಶಗಳನ್ನು ನೀಡುತ್ತದೆ.
  •     ಸದರಿ ಬಜೆಟ್ ಅಧಿವೇಶನದಿಂದ ಮೀನುಗಾರಿಕೆ ಮತ್ತು ಜಲಚರಗಳ ವಲಯದಲ್ಲಿ ಸಾಂಸ್ಥಿಕ ಆದಾಯಕ್ಕೆ ಹೆಚ್ಚಿನ ಆಧ್ಯತೆ, ಅಪಾಯ ತಗ್ಗಿಸುವಿಕೆ, ಮಾರುಕಟ್ಟೆ ವಿಸ್ತರಣೆ ಮತ್ತು ನಾವೀನ್ಯತೆಯ ಮೂಲಕ ಶ್ರೀಘ್ರವಾದ ಬೆಳವಣಿಗೆಯನ್ನು ಉಪೇಕ್ಷಿಸಬಹುದು.

 ತೀರ್ಮಾನ:

   2023-24ನೇ ಸಾಲಿನ ಬಜೆಟ್ ಅಧಿವೇಶನವು, ಮೀನುಗಾರಿಕೆ ಮತ್ತು ಜಲಚರ ಸಾಕಾಣಿಕೆ ಕ್ಷೇತ್ರಕ್ಕೆ ಹೊಸ ಬೆಳವಣಿಗೆಯ ಯುಗವನ್ನು ನೀಡಲಿದೆ. ಸದರಿ ಅಧಿವೇಶನದಲ್ಲಿ ನೀಡಿರುವ ರೂ.2248.77 ಕೋಟಿಯ ಅನುದಾನವು, ಕಳೆದ ಸಾಲಿಗಿಂತ ಶೇಕಡ 38.45 ರಷ್ಟು ಹೆಚ್ಚಾಗಿದ್ದು, ಮೀನುಗಾರರ, ಮೀನು ಮಾರಾಟಗಾರ ಮತ್ತು ಸದರಿ ಸಣ್ಣ ವ್ಯಾಪಾರಿಗಳ ಆದಾಯವನ್ನು ಹೆಚ್ಚಿಸುತ್ತದೆ. ಅದಲ್ಲದೇ, ಹೊಸ ಉಪ ಯೋಜನೆಯಾದ  ಪ್ರಧಾನ ಮಂತ್ರಿ ಮತ್ಸ್ಯ ಕಿಸಾನ್ ಸಮೃದ್ಧಿ ಸಹಯೋಜನೆಯು ಸದರಿ ಕ್ಷೇತ್ರದಲ್ಲಿ ಔಪಚಾರಿಕತೆಯನ್ನು ತರುತ್ತದೆ ಮತ್ತು ಸಾಂಸ್ಥಿಕ ಹಣಕಾಸನ್ನು ಅಧಿಕಗೊಳಿಸಿದೆ. ಸಹಕಾರ ಸಂಘಗಳ ರಚನೆಯಿಂದ ಮೀನುಗಾರರಿಗೆ ಉತ್ಪಾದನೆ ಮತ್ತು ಕೊಯ್ಲಿನ ನಂತರದ ಚಟುವಟಿಕೆಗಳನ್ನು ಕೈಗೊಳ್ಳುವಂತೆ ಮಾಡಿದೆ. ಸದರಿ ಅನುದಾನವು ಕೃಷಿ ಮತ್ತು ಸಂಬಂಧಿತ ಕ್ಷೇತ್ರದಲ್ಲೂ ಪ್ರಯೋಜನಕರಿಯಾಗಲಿದೆ. ಸದರಿ ಮೀನುಗಾರಿಕೆ ವಲಯವು ಇನ್ನೂ ಹೆಚ್ಚು ಸಾಧನೆ ಮಾಡಲು ಹಾಗೂ ಬಡ ಸಮುದಾಯಗಳಿಗೆ ಒಂದು ಸುಸ್ಥಿರವಾದ ಜೀವನೋಪಾಯವನ್ನು ಒದಗಿಸುವ ನಿಟ್ಟಿನಲ್ಲಿದೆ.

Recent Posts

ಸೆಲ್ ಜೆಲ್: ಆಧುನಿಕ ಕೃಷಿಗಾಗಿ ನೀರಿನ ಉತ್ತಮ ಸ್ಥಿತಿಯನ್ನು ರೂಪಿಸುವ ಕ್ರಾಂತಿಕಾರಿ ಉತ್ಪನ್ನ

ಕೃಷಿಯಲ್ಲಿ, ದಕ್ಷತೆ ಮತ್ತು ಉತ್ಪಾದಕತೆ ಯಾವಾಗಲೂ ಮುಖ್ಯವಾಗಿರುತ್ತದೆ. ಈಗ ನಾವು ನಿಮಗೆ ನಿಮ್ಮ ನೀರಿನ ಸ್ಥಿತಿ, ನಿಮ್ಮ ಸಸ್ಯ ಸಂರಕ್ಷಣಾ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸುವ…

January 28, 2025

ಎಕ್ಸ್‌ಸ್ಕೇಲೆಂಟ್ : ಡ್ರಿಪ್ ಕ್ಲೀನಿಂಗ್ ಕಾರ್ಯವಿಧಾನದ ಮೂಲಕ ಬೆಳೆಗಳಿಗೆ ಸುರಕ್ಷಿತ ಪರಿಹಾರಗಳು

ಇತ್ತೀಚಿನ ಆಧುನಿಕ ಕೃಷಿಯಲ್ಲಿ ಸಮರ್ಥ ನೀರಿನ ನಿರ್ವಹಣೆ ಮಾಡುವುದು ನಿರ್ಣಾಯಕವಾಗಿದೆ ಮತ್ತು ಹನಿ ನೀರಾವರಿ ಪದ್ದತಿಯು  ನೇರವಾಗಿ ಬೇರುಗಳ ವಲಯವನ್ನು ಗುರಿಯಾಗಿಸಿಕೊಂಡು ಸಸ್ಯಗಳಿಗೆ ನೀರನ್ನು ತಲುಪಿಸುವ ವಿಧಾನವನ್ನು…

January 28, 2025

ಬಯೋಕ್ಯುಲಮ್ AW: ಬೆಳೆ ಸುಸ್ಥಿರತೆಗಾಗಿ ಬಳಸಲು ಸಿದ್ಧವಾಗಿರುವ ಡಿಕಂಪೋಸರ್

ಸುಸ್ಥಿರ ಕೃಷಿ ಪದ್ದತಿಯಲ್ಲಿ ಸರಳವಾದ ಆದರೆ ಆಳವಾದ ವಿಷಯವೇನೆಂದರೆ ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವುದು. ಸಾವಯವ ಕೃಷಿ ತ್ಯಾಜ್ಯವು ನಮಗೆ ಹೊರೆಯಾಗಿರದೆ ಮಣ್ಣನ್ನು ಸಮೃದ್ಧಗೊಳಿಸುವ, ಸಸ್ಯಗಳನ್ನು ಪೋಷಿಸುವ ಮತ್ತು…

January 28, 2025

ಎಪಿಸೆಲ್: ಸುಸ್ಥಿರ ಕೃಷಿಗಾಗಿ ನಿಮ್ಮ ಬೆಳೆಗಳ ಸಂಪೂರ್ಣ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ

ಇತ್ತೀಚೆಗೆ ಬದಲಾಗುತ್ತಿರುವ ಕೃಷಿ ಭೂದೃಶ್ಯದ ಕಾರಣವಾಗಿ, ಸಮರ್ಥನೀಯ ಮತ್ತು ಸಮರ್ಥ ಕೃಷಿ ವಿಧಾನಗಳನ್ನು ಕಂಡುಹಿಡಿಯುವುದು ನಿರ್ಣಾಯಕವಾಗಿದೆ. ಅದಕ್ಕಾಗಿಯೇ ಪರಿಚಯಿಸುತ್ತಿದ್ದೇವೆ, ಎಪಿಸೆಲ್! ಎಕ್ಸೆಲ್ ಇಂಡಸ್ಟ್ರೀಸ್‌ ರವರ ಈ ನವೀನ…

January 28, 2025

ಸೆಲ್ ಜೆಲ್‌ನೊಂದಿಗೆ ಕೃಷಿ ದಕ್ಷತೆಯನ್ನು ಹೆಚ್ಚಿಸುವುದು: ನೀರಿನ ಕಂಡೀಷನಿಂಗ್ ಮತ್ತು pH ಸಮತೋಲನ ಮಾಡಲು ಸಲಹೆಗಳು

ನೀರು ಕೃಷಿಯಲ್ಲಿ ಮೂಲಭೂತ ಸಂಪನ್ಮೂಲವಾಗಿದ್ದು, ಬೆಳೆಗಳ ವೃದ್ಧಿಗಾಗಿ ಅಗತ್ಯ ಪೋಷಕಾಂಶಗಳ ಮತ್ತು ಬೆಳೆ ರಕ್ಷಣೆಗೆ ಅಗತ್ಯವಾದ ರಾಸಾಯನಿಕಗಳನ್ನು ಸಾಗಿಸುವಲ್ಲಿ ವಾಹಕವಾಗಿ ಕಾರ್ಯನಿರ್ವಹಿಸುತ್ತದೆ . ಆದಾಗ್ಯೂ, ಕಳೆನಾಶಕಗಳು, ಕೀಟನಾಶಕಗಳು,…

January 28, 2025

ಎಕ್ಸ್‌ಸ್ಕೇಲೆಂಟ್: ಹನಿ ನೀರಾವರಿ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಸುರಕ್ಷಿತ ಮತ್ತು ಪರಿಣಾಮಕಾರಿ ಪರಿಹಾರ

ಹನಿ ನೀರಾವರಿ ವ್ಯವಸ್ಥೆ ಆಧುನಿಕ ಕೃಷಿಯ ಅತ್ಯಗತ್ಯ ಅಂಶವಾಗಿದೆ. ಇದು ಸಸ್ಯಗಳ ಬೇರುಗಳಿಗೆ ನೇರವಾಗಿ ನೀರನ್ನು ತಲುಪಿಸುವ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಈ ವಿಧಾನವು ನೀರನ್ನು ಸಂರಕ್ಷಿಸುವುದು…

January 28, 2025