ಪರಿಚಯ–
ರಾಷ್ಟ್ರೀಯ ತೋಟಗಾರಿಕಾ ಮಂಡಳಿಯು (NHB), ತೋಟಗಾರಿಕಾ ಯೋಜನೆಗಳಿಗೆ ತ್ವರಿತ ಹಾಗೂ ಸರಳ ಅನುಮೋದನೆ ಪ್ರಕ್ರಿಯೆಯನ್ನು ರೈತರಿಗೆ ಅನುವು ಮಾಡುವಂತೆ ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಗಿತ್ತು. ಸಂಪೂರ್ಣವಾಗಿ ಡಿಜಿಟಲ್ ಮಾಡಿ ಕೇವಲ ಅಗತ್ಯವಿರುವ ಕನಿಷ್ಠ ದಾಖಲಾತಿಗಳೊಂದಿಗೆ ಈಗ ಒಂದೇ ಸರಳ ವಿಧಾನವನ್ನು ಪಾಲಿಸಿದರೆ ಸದರಿ ಪ್ರಕ್ರಿಯೆಯು ಪೂರ್ಣವಾಗುತ್ತದೆ. ಈ ವಿನ್ಯಾಸವು ಜನವರಿ 1, 2023 ರಿಂದ ಜಾರಿಗೆ ಬರಲಿದ್ದು, ಸದರಿ ವ್ಯವಸ್ಥೆಯು ಪರಿಣಾಮಕಾರಿಯಾಗುವ ಗುರಿಯನ್ನು ಹೊಂದಿದೆ, ಜೊತೆಗೆ ರೈತರಿಗೆ ಸರಳ ವ್ಯಾಪಾರ ಮಾಡಲು ಪ್ರೇರೇಪಿಸಿದೆ.
ಅವಲೋಕನ–
ನವದೆಹಲಿಯಲ್ಲಿ ಜರುಗಿದ ಸದರಿ ಸಭೆಯಲ್ಲಿ ತೋಟಗಾರಿಕಾ ಯೋಜನೆಗಳ ಪ್ರಯೋಜನವನ್ನು ಪಡೆಯುವ ನಿಟ್ಟಿನಲ್ಲಿ, ರೈತರು ಈ ಮೊದಲು ಅನುಸರಿಸುತ್ತಿರುವ ಪ್ರಕ್ರಿಯೆಯು ದೀರ್ಘಕಾಲಿಕ ಹಾಗೂ ಕಠಿಣವಾಗಿರುವುದರಿಂದ, ರಾಷ್ಟ್ರೀಯ ತೋಟಗಾರಿಕಾ ಮಂಡಳಿಯು (NHB) ರೈತರಿಗೆ ಸರಳ ಅನುಮೋದನೆ ಪ್ರಕ್ರಿಯೆಗೆ ಸೂಕ್ತವಾದ ಮಾರ್ಗವನ್ನು ನೀಡುವಂತೆ ಚರ್ಚಿಸಲಾಯಿತು. ಈ ಸಂಬಂಧ ಅನುಮೋದನೆ ಪ್ರಕ್ರಿಯೆಯನ್ನು ಸರಳೀಕರಣಗೊಳಿಸುವುದು, ಸಂಪೂರ್ಣ ಡಿಜಿಟಲ್ ಮಾಡುವುದು, ಕನಿಷ್ಠ ದಾಖಲೆ ಪಡೆದುಕೊಳ್ಳುವುದರಿಂದ ರೈತರಿಗೆ ಸುಲಭವಾಗಿ ವ್ಯಾಪಾರಮಾಡಲು ಹುರಿದುಂಬಿಸಿದೆ. ಅದಲ್ಲದೆ ಸ್ವಚ್ಚ ಸಸಿ ಕಾರ್ಯಕ್ರಮ ಎಂಬ ಹೊಸ ವಿನ್ಯಾಸದ ಕುರಿತು ಚರ್ಚಿಸಲಾಗಿದ್ದು, ಈ ಸಂಬಂಧ ಏಷ್ಯನ್ ಅಭಿವೃದ್ಧಿ ಬ್ಯಾಂಕ್ ನೆರವಿನಿಂದ 2100 ಕೋಟಿ ರೂಪಾಯಿಗಳ ಹೂಡಿಕೆಯಿಂದ ರೈತರಿಗೆ ನಾಟಿ ಸಸಿಗಳ ಲಭ್ಯತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಸಾವಯವ ಮತ್ತು ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಳ್ಳುವಂತೆ ರಾಷ್ಟ್ರೀಯ ತೋಟಗಾರಿಕಾ ಮಂಡಳಿಯು ಪ್ರಯತ್ನಿಸಲಿದೆ. ಈ ಹೊಸ ವಿನ್ಯಾಸವು ಜನವರಿ 1, 2023 ರಿಂದ ಜಾರಿಗೆ ಬರಲಿದೆ.
ಸದರಿ ನಿರ್ಧಾರದಿಂದ ಕನಿಷ್ಠ ದಾಖಲಾತಿಯೊಂದಿಗೆ, ಸಂಪೂರ್ಣ ಡಿಜಿಟಲ್ ಆಗಿ, ಒಂದೇ ಹಂತದಲ್ಲಿ ಅನುಮೋದನೆ ಸಾಧ್ಯವಾಗಲಿದ್ದು, ರೈತರಿಗೆ ಅನುಕೂಲವಾಗಿದೆ. ಇದರಿಂದ ಇನ್ನು ಹೆಚ್ಚಿನ ಯೋಜನೆಗಳಿಗೆ ನಾಂದಿಯಾಗಿ ಹೊರಹೊಮ್ಮಲ್ಲಿದ್ದು, ಇದರ ಪ್ರಕ್ರಿಯೆಯು ಪಾರದರ್ಶಕವಾಗಿದ್ದು ಹೆಚ್ಚು ಪರಿಣಾಮಕಾರಿಯಾಗಿದೆ. ಇದರಿಂದ ರೈತ ಸಮುದಾಯಕ್ಕೆ ಹೆಚ್ಚಿನ ವ್ಯಾಪಾರವನ್ನು ಕೈಗೊಳ್ಲಲು ಉತ್ತೇಜನ ನೀಡಿದೆ. NHBಯ ಉಪ-ಯೋಜನೆಯಾಗಿರುವ ಸ್ವಚ್ಚ ಸಸಿ ಕಾರ್ಯಕ್ರಮವು ರೈತರಿಗೆ ಆರೋಗ್ಯಕರ ಕಸಿ ಲಭ್ಯತೆಯ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ದೇಶದಾದ್ಯಂತ ಗುಣಮಟ್ಟದ ಕಸಿಯನ್ನು ಒದಗಿಸುವ ಮೂಲಕ ರೈತರಿಗೆ ಅನುಕೂಲವಾಗಿದೆ. ಜೊತೆಗೆ ಸಾವಯವ ಮತ್ತು ನೈಸರ್ಗಿಕ ಕೃಷಿಯನ್ನು ಅಳವಡಿಸುವ ರೈತರಿಗೆ ಪ್ರೋತ್ಸಾಹವನ್ನು ನೀಡಿ, ಇದನ್ನು ಅಳವಡಿಸಿರುವ ರೈತರಿಗೆ ಪ್ರಯೋಜನಕಾರಿಯಾಗಿದೆ.
ಪ್ರಮುಖ ಮಾಹಿತಿ:
ತೀರ್ಮಾನ–
ಈ ಹಿಂದೆ ನಡೆದ ರಾಷ್ಟ್ರೀಯ ತೋಟಗಾರಿಕಾ ಮಂಡಳಿಯ ಸಭೆಯು, ರೈತರಿಗೆ ತೋಟಗಾರಿಕೆ ಯೋಜನೆಗಳನ್ನು ಅನುಷ್ಠಾನ ಮಾಡುವಲ್ಲಿ ಸುಧಾರಣೆಯ ಕುರಿತು ಚರ್ಚಿಸಲಾಯಿತು. ಜನವರಿ 1, 2023 ರಿಂದ ಜಾರಿಗೆ ಬರಲಿರುವ ಸದರಿ ವಿನ್ಯಾಸವು ಅನುಮೋದನೆಯಲ್ಲಿ ಸರಳ ಮಾರ್ಗ ಹೊಂದಲಿದ್ದು, ಹೆಚ್ಚು ಪರಿಣಾಮಕಾರಿಯಾಗಲಿದೆ. ಮುಂದುವರಿದು, ಆರೋಗ್ಯವಾದ ಕಸಿಯನ್ನು ಒದಗಿಸುವಲ್ಲಿ ಹಾಗೆಯೇ ಸಾವಯವ ಮತ್ತು ನೈಸರ್ಗಿಕ ಕೃಷಿಯನ್ನು ಅಳವಡಿಸುವಂತೆ ರೈತರಿಗೆ ಉಪಾಯಕಾರಿಯಾಗಲಿದೆ. ಮುಂದುವರಿದು, ದೇಶದ ತೋಟಗಾರಿಕಾ ವಲಯದಲ್ಲಿ ಪ್ರಗತಿ ಸಾಧಸುವಲ್ಲಿ ಲಾಭದಾಯಕವಾಗಿದೆ.
ಕೃಷಿಯಲ್ಲಿ, ದಕ್ಷತೆ ಮತ್ತು ಉತ್ಪಾದಕತೆ ಯಾವಾಗಲೂ ಮುಖ್ಯವಾಗಿರುತ್ತದೆ. ಈಗ ನಾವು ನಿಮಗೆ ನಿಮ್ಮ ನೀರಿನ ಸ್ಥಿತಿ, ನಿಮ್ಮ ಸಸ್ಯ ಸಂರಕ್ಷಣಾ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸುವ…
ಇತ್ತೀಚಿನ ಆಧುನಿಕ ಕೃಷಿಯಲ್ಲಿ ಸಮರ್ಥ ನೀರಿನ ನಿರ್ವಹಣೆ ಮಾಡುವುದು ನಿರ್ಣಾಯಕವಾಗಿದೆ ಮತ್ತು ಹನಿ ನೀರಾವರಿ ಪದ್ದತಿಯು ನೇರವಾಗಿ ಬೇರುಗಳ ವಲಯವನ್ನು ಗುರಿಯಾಗಿಸಿಕೊಂಡು ಸಸ್ಯಗಳಿಗೆ ನೀರನ್ನು ತಲುಪಿಸುವ ವಿಧಾನವನ್ನು…
ಸುಸ್ಥಿರ ಕೃಷಿ ಪದ್ದತಿಯಲ್ಲಿ ಸರಳವಾದ ಆದರೆ ಆಳವಾದ ವಿಷಯವೇನೆಂದರೆ ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವುದು. ಸಾವಯವ ಕೃಷಿ ತ್ಯಾಜ್ಯವು ನಮಗೆ ಹೊರೆಯಾಗಿರದೆ ಮಣ್ಣನ್ನು ಸಮೃದ್ಧಗೊಳಿಸುವ, ಸಸ್ಯಗಳನ್ನು ಪೋಷಿಸುವ ಮತ್ತು…
ಇತ್ತೀಚೆಗೆ ಬದಲಾಗುತ್ತಿರುವ ಕೃಷಿ ಭೂದೃಶ್ಯದ ಕಾರಣವಾಗಿ, ಸಮರ್ಥನೀಯ ಮತ್ತು ಸಮರ್ಥ ಕೃಷಿ ವಿಧಾನಗಳನ್ನು ಕಂಡುಹಿಡಿಯುವುದು ನಿರ್ಣಾಯಕವಾಗಿದೆ. ಅದಕ್ಕಾಗಿಯೇ ಪರಿಚಯಿಸುತ್ತಿದ್ದೇವೆ, ಎಪಿಸೆಲ್! ಎಕ್ಸೆಲ್ ಇಂಡಸ್ಟ್ರೀಸ್ ರವರ ಈ ನವೀನ…
ನೀರು ಕೃಷಿಯಲ್ಲಿ ಮೂಲಭೂತ ಸಂಪನ್ಮೂಲವಾಗಿದ್ದು, ಬೆಳೆಗಳ ವೃದ್ಧಿಗಾಗಿ ಅಗತ್ಯ ಪೋಷಕಾಂಶಗಳ ಮತ್ತು ಬೆಳೆ ರಕ್ಷಣೆಗೆ ಅಗತ್ಯವಾದ ರಾಸಾಯನಿಕಗಳನ್ನು ಸಾಗಿಸುವಲ್ಲಿ ವಾಹಕವಾಗಿ ಕಾರ್ಯನಿರ್ವಹಿಸುತ್ತದೆ . ಆದಾಗ್ಯೂ, ಕಳೆನಾಶಕಗಳು, ಕೀಟನಾಶಕಗಳು,…
ಹನಿ ನೀರಾವರಿ ವ್ಯವಸ್ಥೆ ಆಧುನಿಕ ಕೃಷಿಯ ಅತ್ಯಗತ್ಯ ಅಂಶವಾಗಿದೆ. ಇದು ಸಸ್ಯಗಳ ಬೇರುಗಳಿಗೆ ನೇರವಾಗಿ ನೀರನ್ನು ತಲುಪಿಸುವ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಈ ವಿಧಾನವು ನೀರನ್ನು ಸಂರಕ್ಷಿಸುವುದು…