ಸೀಡ್ ಟ್ರೇಸಬಿಲಿಟಿ ಸಿಸ್ಟಮ್ ಎಂಬುವುದು ರೈತರಿಗೆ ಉತ್ತಮ ಗುಣಮಟ್ಟದ ಬೀಜಗಳು/ಸಸಿಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಬೀಜ ವ್ಯಾಪಾರದಲ್ಲಿ ಮೋಸವನ್ನು ತಡೆಯವ ನಿಟ್ಟಿನಲ್ಲಿ ಮಾನ್ಯಶ್ರೀ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಪ್ರಾರಂಭಿಸಲಿರುವ ಹೊಸ ಉಪಕ್ರಮವಾಗಿದೆ. ಸದರಿ ಉಪಕ್ರಮವು ರೈತರಿಗೆ ಹಾಗೂ ಬೀಜಗಳ ವಲಯದಲ್ಲಿ ಮಧ್ಯಸ್ಥರಿಗೆ ಉಪಕಾರಿಯಾಗಲು ನಿರೀಕ್ಷಿಸಲಾಗಿದೆ.
ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಶೀಘ್ರದಲ್ಲೇ ಸರ್ಕಾರವು ಸೀಡ್ ಟ್ರೇಸಬಿಲಿಟಿ ಸಿಸ್ಟಮ್ ಅನ್ನು ಪ್ರಾರಂಭಿಸಲಿದೆ ಎಂದು ಭಾರತದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಶ್ರೀ ನರೇಂದ್ರ ಸಿಂಗ್ ತೋಮರ್ ರವರು ಘೋಷಿಸಿದ್ದಾರೆ. ಸದರಿ ವ್ಯವಸ್ಥೆಯಿಂದ ಬೀಜ ವ್ಯಾಪಾರ ಕ್ಷೇತ್ರದಲ್ಲಿ ಮೋಸಗಾರರನ್ನು ತಡೆಯುವ ನಿಟ್ಟಿನಲ್ಲಿ ಹಾಗೂ ರೈತರಿಗೆ ಮತ್ತು ಬಿತ್ತನೆ ಬೀಜಗಳ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ರೈತರಿಗೆ ಪ್ರಯೋಜನವನ್ನು ನೀಡುತ್ತದೆ. ಶ್ರೀಮಾನ್ ತೋಮರ್ ರವರು ಎಣ್ಣೆಕಾಳುಗಳು ಮತ್ತು ಹತ್ತಿ ಬೆಳೆಗಳ ಕ್ಷೇತ್ರದಲ್ಲಿ ಭಾರತವನ್ನು ಸದರಿ ಸ್ವಾವಲಂಬಿಯಾಗಿಸುವಲ್ಲಿ ಬೀಜೊತ್ಪಾದನೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. ಅವರು ವಿಜ್ಞಾನಿಗಳ ಕೊಡುಗೆಯನ್ನು ಪ್ರಶಂಶಿಸಿದರು ಅವರು ವಿಜ್ಞಾನಿಗಳ ಕೊಡುಗೆಯನ್ನು ಪ್ರಶಂಶಿಸಿದರು ನಂತರ ನವದೆಹಲಿಯಲ್ಲಿ ನ್ಯಾಷನಲ್ ಸೀಡ್ ಅಸೋಸಿಯೇಷನ್ ಆಫ್ ಇಂಡಿಯಾ,ಆಯೋಜಿಸಿದ್ದ ದಿ ಇಂಡಿಯನ್ ಸೀಡ್ ಕಾಂಗ್ರೆಸ್ ನಲ್ಲಿ “ಜಾಗತಿಕ ಏಕತೆಗಾಗಿ ಬೀಜಗಳು( ಸೀಡ್ಸ್ ಫರ್ ಗ್ಲೋಬಲ್ ಯೂನಿಟಿ) ” ಎಂಬ ಮಾಹಿತಿಯನ್ನು ಅನಾವರಣಗೊಳಿಸಿದರು. ಪರಸ್ಪರ ನಂಬಿಕೆಯ ವಾತಾವರಣವನ್ನು ಸೃಷ್ಟಿಸುವ ಸರ್ಕಾರದ ದೃಷ್ಟಿಕೋನವು ದೇಶದ ವ್ಯಾಪಾರ ಮತ್ತು ಉದ್ಯಮ ಕ್ಷೇತ್ರವನ್ನು ಬಲಪಡಿಸಲು ಸಹಾಯ ಮಾಡಲಿದೆ.
ಸೀಡ್ ಟ್ರೇಸಬಿಲಿಟಿ ಸಿಸ್ಟಮ್, ರೈತರಿಗೆ ಉತ್ತಮ ಗುಣಮಟ್ಟದ ಬೀಜಗಳನ್ನು ಪಡೆಯುವಲ್ಲಿ ಸಹಾಯ ಮಾಡುತ್ತದೆ, ಇದು ಬೆಳೆಯ ಇಳುವರಿ ಮತ್ತು ಗುಣಮಟ್ಟವನ್ನು ಸುಧಾರಿಸುತ್ತದೆ. ಕಳಪೆ ಗುಣಮಟ್ಟದ ಬೀಜಗಳಿಂದಾಗಿ ಬೆಳೆ ವೈಫಲ್ಯದ ಅಪಾಯವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ. ಪ್ರಸ್ತುತ ಅವಕಾಶದಿಂದ ರೈತರಿಗೆ ತಮ್ಮ ಬೀಜಗಳ ಮೂಲವನ್ನು ತಿಳಿದುಕೊಳ್ಳಲು ಅನುವು ಮಾಡಿಕೊಡುತ್ತದೆ. ಸದರಿಯಿಂದ ಬೀಜ ವ್ಯಾಪಾರ ವಲಯದಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸಿ ವಂಚನೆಯನ್ನು ಕಡಿಮೆ ಮಾಡುತ್ತದೆ.
ಸೀಡ್ ಟ್ರೇಸಬಿಲಿಟಿ ಸಿಸ್ಟಮ್, ಭಾರತ ಸರ್ಕಾರದ ಒಂದು ಮಹತ್ವದ ಉಪಕ್ರಮವಾಗಿದ್ದು, ಬಿತ್ತನೆ ಬೀಜಗಳ ಕ್ಷೇತ್ರದಲ್ಲಿ ರೈತರಿಗೆ ಮತ್ತು ಮಧ್ಯಸ್ಥಗಾರರಿಗೆ ಪ್ರಯೋಜನವನ್ನು ನೀಡುತ್ತದೆ. ಇದು ಬೆಳೆ ಇಳುವರಿ ಮತ್ತು ಗುಣಮಟ್ಟವನ್ನು ಸುಧಾರಿಸಲಿದ್ದು, ಬೆಳೆ ವೈಫಲ್ಯದ ಅಪಾಯವನ್ನು ಕಡಿಮೆ ಮಾಡುತ್ತದೆ, ಮುಂದೂವರಿದು ಬೀಜ ವ್ಯಾಪರದಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ. ಜೊತೆಗೆ ಬೀಜಗಳ ವಲಯದಲ್ಲಿ ಉತ್ತಮ ಕಾರ್ಯನಿರ್ವಹಿಸುವ ಜನರನ್ನು ರಕ್ಷಿಸುತ್ತದೆ. ಸದರಿ ವ್ಯವಸ್ಥೆಯು ಕೃಷಿ ಕ್ಷೇತ್ರದ ಬಗ್ಗೆ ಸರ್ಕಾರದ ಬದ್ಧತೆಯನ್ನು ಹಾಗೆ ಕೃಷಿಕರ ಏಳಿಗೆಯನ್ನು ಖಾತರಿಪಡಿಸಿಕೊಳ್ಳಲು ಪ್ರಯತ್ನಗಳಿಗೆ ನಾಂದಿಯಾಗಿದೆ.
ಕಬ್ಬಿನ ಬಿಳಿ ಗೊಣ್ಣೆ ಹುಳು ಒಂದು ಗಂಭೀರವಾದ ಕೃಷಿ ಕೀಟವಾಗಿದ್ದು, ಇದು ವಿಶ್ವಾದ್ಯಂತ ಕಬ್ಬಿನ ಬೆಳೆಗಳ ಉತ್ಪಾದಕತೆ ಮತ್ತು ಸುಸ್ಥಿರತೆಗೆ ಗಮನಾರ್ಹ ಅಪಾಯವನ್ನುಂಟುಮಾಡುತ್ತದೆ. ಈ ಬಿಳಿ ಗೊಣ್ಣೆ…
ಪ್ರಪಂಚದ ಅನೇಕ ಉಷ್ಣವಲಯದ ಮತ್ತು ಉಪೋಷ್ಣವಲಯದ ಪ್ರದೇಶಗಳಲ್ಲಿ ಕಬ್ಬು ಒಂದು ಪ್ರಮುಖ ನಗದು ಬೆಳೆಯಾಗಿದೆ. ಆದಾಗ್ಯೂ, ಕಬ್ಬಿನ ಮಧ್ಯ ಕೊರಕವು ಗಮನಾರ್ಹವಾದ ಕೀಟವಾಗಿದ್ದು, ಕಬ್ಬು ರೈತರಿಗೆ ಗಣನೀಯ…
ಕಬ್ಬಿನ ಆರಂಭಿಕ ಚಿಗುರು ಕೊರೆಯುವ ಕೀಟ, ಚಿಲೋ ಇನ್ಫ್ಯೂಸ್ಕಾಟೆಲಸ್ ಒಂದು ಕೀಟ ಕೀಟವಾಗಿದ್ದು, ಇದು ಸಸ್ಯದ ಎಳೆಯ ಚಿಗುರುಗಳಿಗೆ ಕೊರೆಯುವ ಮೂಲಕ ಕಬ್ಬಿನ ಬೆಳೆಗಳಿಗೆ ಗಮನಾರ್ಹ ಹಾನಿಯನ್ನುಂಟುಮಾಡುತ್ತದೆ.…
ಮಣ್ಣಿನ pH ಎಂಬುದು ಮಣ್ಣಿನ ಆಮ್ಲೀಯತೆ ಅಥವಾ ಕ್ಷಾರೀಯತೆಯ ಅಳತೆಯಾಗಿದೆ, ಇದು ಮಣ್ಣಿನಲ್ಲಿರುವ ಹೈಡ್ರೋಜನ್ ಅಯಾನುಗಳ (H+) ಸಾಂದ್ರತೆಯಿಂದ ನಿರ್ಧರಿಸಲ್ಪಡುತ್ತದೆ. pH ಪ್ರಮಾಣವು 0 ರಿಂದ 14…
ಉತ್ಪಾದನೆ ಆಧಾರಿತ ವಲಯಗಳು ಭಾರತದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆಹಾರ ಸಂಸ್ಕರಣಾ ವಲಯಕ್ಕೆ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್ಐ) ಯೋಜನೆಯು ಮಾರ್ಚ್ 2021 ರಲ್ಲಿ ಪ್ರಾರಂಭವಾದ…
ಬೇಸಿಗೆ ಕಾಲ ಈಗಾಗಲೇ ಬಂದಿದೆ. ನಿಮ್ಮ ಬಹು ನಿರೀಕ್ಷಿತ ಮಾವಿನ ಕೊಯ್ಲಿಗೆ ನೀವು ಕಾಯುತ್ತಿದ್ದೀರಾ? ರೈತರೇ ಎಚ್ಚರ! ಹಣ್ಣಿನ ನೊಣಗಳು ನಿಮ್ಮ ಮಾವಿನ ಇಳುವರಿಯನ್ನು ತಡೆಯಲು ಮತ್ತು…