Important Events

2023 ರ ಪೂಸಾ ಕೃಷಿ ಮೇಳದಲ್ಲಿ ಪೌಷ್ಠಿಕಾಂಶ ಹಾಗೂ ನಾವೀನ್ಯತೆ: ಭಾರತದಲ್ಲಿ ರೈತರ ಸಬಲೀಕರಣ ಹಾಗೂ ಕೃಷಿ ವರ್ಧನೆ

ಪೂಸಾ ಕೃಷಿ ಮೇಳವನ್ನು ಪ್ರಸ್ತುತ 2023 ರ ಮಾರ್ಚ್ ಮಾಹೆಯ 02 ರಿಂದ 04ರ ವರೆಗೆ 3 ದಿನಗಳ ಕಾಲ ನವದೆಹಲಿಯ ICAR-ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಆಯೋಜಿಸಲಾಗಿತ್ತು. ಸದರಿ  ಕಾರ್ಯಕ್ರಮದ ವಿಷಯ (ಥೀಮ್) ‘ಸಿರಿಧಾನ್ಯಗಳ (ಶ್ರೀ ಅನ್ನ) ಮೂಲಕ ಪೌಷ್ಟಿಕಾಂಶ, ಆಹಾರ ಮತ್ತು ಪರಿಸರ ಭದ್ರತೆ’ ಎಂದಾಗಿತ್ತು.  ಈ ಸಮಾರೋಪ ಸಮಾರಂಭದಲ್ಲಿ ರಾಜ್ಯಗಳ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಶ್ರೀ ಕೈಲಾಶ್ ಚೌಧರಿ ರವರು ಭಾಗವಹಿಸಿರುತ್ತಾರೆ.

ಅವಲೋಕನ

ಪ್ರಸ್ತುತ ಕಾರ್ಯಕ್ರಮದಲ್ಲಿ 6 ರೈತರು/ರೈತ ಮಹಿಳೆಯರು ಮತ್ತು 42 ನವೀನ ರೈತ/ರೈತ ಮಹಿಳೆಯರಿಗೆ ‘IARI ನವೀನ ರೈತ ಪ್ರಶಸ್ತಿ’ ಯನ್ನು ನೀಡಿ ಗೌರವಿಸಲಾಯಿತು. ಸದರಿ ಕಾರ್ಯಕ್ರಮದ ಮುಖ್ಯ ಅತಿಥಿಗಳು ಪೌಷ್ಟಿಕಾಂಶದ ಭದ್ರತೆಗಾಗಿ ಸಿರಿಧಾನ್ಯಗಳ ವಿವಿಧ ತಳಿಗಳ ಅಭಿವೃದ್ಧಿಯ ಅವಶ್ಯಕತೆಯನ್ನು ಹಾಗು ಆಹಾರ ಭದ್ರತೆ ಹಾಗು ಪರಿಸರ ಸುರಕ್ಷತೆಯನ್ನು ಸಾಧಿಸುವಲ್ಲಿ ಹೊಸ ಮತ್ತು ನವೀನ ಕೃಷಿ ತಂತ್ರಜ್ಞಾನಗಳ ಪ್ರಾಮುಖ್ಯತೆಯನ್ನು ಸಾರಿದರು. ಮುಂದೂವರಿದು, ಕೃಷಿಯಲ್ಲಿ ತಂತ್ರಜ್ಞಾನ ಬಳಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿವಿಧ ಯೋಜನೆಗಳ ಪ್ರಯತ್ನವನ್ನು ಅವರು ಪ್ರಸ್ತಾಪಿಸಿದರು.

ಡಾ|| ಹಿಮಾಂಶು ಪಾಠಕ್, ಕಾರ್ಯದರ್ಶಿ, DARA ಮತ್ತು ಡೈರೆಕ್ಟರ್ ಜನರಲ್, ಐಸಿಎಆರ್ ರವರು ಮಾತನಾಡಿ ಐಸಿಎಆರ್ ಸಂಸ್ಥೆಯ ವತಿಯಿಂದ ರೈತರ ಅಭಿವೃದ್ಧಿಗಾಗಿ ವಾರ್ಷಿಕವಾಗಿ ತರಬೇತಿ ಕಾರ್ಯಕ್ರಮವನ್ನು ನಡೆಸಲಾಗುತ್ತದೆ ಎಂದರು. ಸದರಿ ತರಬೇತಿ ಕಾರ್ಯಕ್ರಮಗಳು ರೈತರಿಗೆ ಇತ್ತೀಚಿನ ಕೃಷಿ ತಂತ್ರಗಳು ಮತ್ತು ತಂತ್ರಜ್ಞಾನಗಳ ಬಗ್ಗೆ ನವೀಕೃತರಾಗಲು ಸಹಾಯ ಮಾಡುತ್ತದೆ. 

ಪ್ರಸ್ತುತ ಕೃಷಿ ಮೇಳ ಹಾಗೂ ಸಮಾರೋಪ ಸಮಾರಂಭವು ರೈತರಿಗೆ ಆಧುನಿಕ ಕೃಷಿ ತಂತ್ರಜ್ಞಾನಗಳ ಬಗ್ಗೆ  ಹಾಗೂ ನವೀನ ಪದ್ಧತಿಗಳ ಮಾಹಿತಿ ನೀಡುವ ಮೂಲಕ ರೈತರಿಗೆ ಅನುಕುಲದಾಯಕವಾಗಿದೆ. ಅದಲ್ಲದೆ ರೈತರ ಅಭಿವೃದ್ಧಿಗಾಗಿ ಸರ್ಕಾರದ ಪ್ರಯತ್ನಗಳನ್ನು ತಿಳಿಸಿದರು.

ಪ್ರಮುಖ ಅಂಶಗಳು

  • ಪೂಸಾ ಕೃಷಿ ಮೇಳವು 3 ದಿನಗಳ ಕಾಲ ನಡೆದಿದ್ದು, ಸದರಿ ಕಾರ್ಯಕ್ರಮದ ವಿಷಯ(ಥೀಮ್ ) ‘ಸಿರಿಧಾನ್ಯಗಳ (ಶ್ರೀ ಅನ್ನ) ಮೂಲಕ ಪೌಷ್ಟಿಕಾಂಶ, ಆಹಾರ ಮತ್ತು ಪರಿಸರ ಭದ್ರತೆ’ ಆಗಿರುತ್ತದೆ.
  • ಸದರಿ ಸಮಾರೋಪ ಸಮಾರಂಭದಲ್ಲಿ ರಾಜ್ಯದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ  ಶ್ರೀ ಕೈಲಾಶ್ ಚೌಧರಿ ಭಾಗವಹಿಸಿದ್ದರು.
  • ಹಲವಾರು ರೈತರು/ರೈತ ಮಹಿಳೆಯರಿಗೆ ‘IARI ನವೀನ ರೈತ ಪ್ರಶಸ್ತಿ’ ಯನ್ನು ನೀಡಿ ಗೌರವಿಸಲಾಯಿತು.
  • ಮುಖ್ಯ ಅತಿಥಿಗಳು ಪೌಷ್ಟಿಕಾಂಶದ ಭದ್ರತೆಗಾಗಿ ಸಿರಿಧಾನ್ಯಗಳ ವಿವಿಧ ತಳಿಗಳ ಅಭಿವೃದ್ಧಿಯ ಅವಶ್ಯಕತೆಯನ್ನು ಹಾಗು ಆಹಾರ ಭದ್ರತೆ ಹಾಗು ಪರಿಸರ ಸುರಕ್ಷತೆಯನ್ನು ಸಾಧಿಸುವಲ್ಲಿ ಹೊಸ ಮತ್ತು ನವೀನ ಕೃಷಿ ತಂತ್ರಜ್ಞಾನಗಳ ಪ್ರಾಮುಖ್ಯತೆಯನ್ನು ತಿಳಿಸಿರುತ್ತಾರೆ.

ತೀರ್ಮಾನ

ICAR-ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ, ನವದೆಹಲಿಯಲ್ಲಿ ನಡೆದ ಪೂಸಾ ಕೃಷಿ ಮೇಳವು ಕೃಷಿಯಲ್ಲಿ ಪ್ರಗತಿ ಹಾಗೂ ರೈತರ ಆರ್ಥಿಕ ಏಳಿಗೆಯ ಮೇಲೆ ಪ್ರಭಾವ ಬೀರಿತು. ‘ಸಿರಿಧಾನ್ಯಗಳ ಮೂಲಕ ಪೌಷ್ಟಿಕಾಂಶ, ಆಹಾರ ಮತ್ತು ಪರಿಸರ ಭದ್ರತೆ’ ಎಂಬ ವಿಷಯವನ್ನು  (ಥೀಮ್) ಹೊಂದಿದ್ದು, ಹೊಸ ನವೀನ ಕೃಷಿ ಪದ್ದತಿಗಳ ಹಾಗೂ ಹವಾಮಾನಕ್ಕೆ ಹೊಂದುವ ಕೃಷಿ ಪದ್ಧತಿಗಳ ಮಾಹಿತಿ ಪ್ರಸರಿಸಲಾಗಿತ್ತು. ಹಲವಾರು ICAR ಸಂಸ್ಥೆಗಳು ಪಾಲ್ಗೊಳ್ಳುವಿಕೆಯಿಂದ ಹಾಗೂ ನವೀನ ರೈತರ ಸನ್ಮಾನದಿಂದ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಬಳಸುವುದರಿಂದ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ತಮ್ಮ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಹಾಗೂ ಲಾಭ ಹೆಚ್ಚಿಸಿಕೊಳ್ಳಲು ಉಪಯೋಗವಾಗಲಿದೆ. ಸಾವಯವ ಮತ್ತು ನೈಸರ್ಗಿಕ ಕೃಷಿಗೆ ಸರ್ಕಾರದ ಪ್ರಯತ್ನ ಹಾಗೂ ತಂತ್ರಜ್ಞಾನ ಅಳವಡಿಕೆಯಲ್ಲಿ ಕೃಷಿಕರ ಸುಸ್ಥಿರ ಹಾಗೂ ಲಾಭದಾಯಕ ಭವಿಷ್ಯಕ್ಕೆ ನಾಂದಿಯಾಗಲಿದೆ.

 

Recent Posts

ಪ್ರಧಾನ ಮಂತ್ರಿಗಳ ಕೇಂದ್ರ ಪ್ರಾಯೋಜಿತ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ

ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯು (PMFME) 2020 ರಲ್ಲಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ (MoFPI) ಪ್ರಾರಂಭಿಸಿದ ಒಂದು ಉಪಕ್ರಮವಾಗಿದೆ. ಈ ದೂರದೃಷ್ಟಿಯ ಯೋಜನೆಯನ್ನು…

July 17, 2024

ಸೈನಿಕ ಹುಳು: ಜೋಳದ ಬೆಳೆಯಲ್ಲಿ ವಿನಾಶಕಾರಿ ಕೀಟ

ಸಾಮಾನ್ಯವಾಗಿ ಸೈನಿಕ ಹುಳು ಎಂದು ಕರೆಯಲ್ಪಡುವ ಸ್ಪೋಡೋಪ್ಟೆರಾ ಫ್ರುಗಿಪರ್ಡಾ ಪ್ರಪಂಚದಾದ್ಯಂತದ ಬೆಳೆಗಳ ಮೇಲೆ ಹೆಚ್ಚು ಆಕ್ರಮಣಕಾರಿ ಕೀಟಗಳಲ್ಲಿ ಪ್ರಮುಖವಾಗಿದ್ದು, ಮುಖ್ಯ ಬೆಳೆಗಳಿಗೆ ತೀವ್ರ  ನಷ್ಟವನ್ನು ಉಂಟುಮಾಡುತ್ತದೆ. ಇದು…

July 11, 2024

ಮೆಕ್ಕೆಜೋಳ: ನಾಟಿ ಮತ್ತು ಸುಧಾರಿತ ಬೇಸಾಯ ಕ್ರಮಗಳು

ಮೆಕ್ಕೆ ಜೋಳ (ಜಿಯಾ ಮೇಸ್ ಎಲ್.) ಹೆಚ್ಚು ಹೊಂದಿಕೊಳ್ಳಬಲ್ಲ ಬೆಳೆಗಳಲ್ಲಿ ಒಂದಾಗಿದೆ, ಇದು ವ್ಯಾಪಕ ಶ್ರೇಣಿಯ ಕೃಷಿ-ಹವಾಮಾನ ಪರಿಸ್ಥಿತಿಗಳಲ್ಲಿ ಬೆಳೆಯಲು ಸಾಧ್ಯವಾಗುತ್ತದೆ. ಇದು ಎಲ್ಲಾ ಧಾನ್ಯಗಳಿಗಿಂತ ದೊಡ್ಡ…

June 28, 2024

ಸಮೃದ್ಧ ಕೊಯ್ಲಿಗೆ ಪಪ್ಪಾಯಿ ಕೃಷಿ ಪದ್ಧತಿಗಳು

ಪಪ್ಪಾಯಿ (ಕಾರಿಕಾ ಪಪ್ಪಾಯಿ) ಒಂದು ಉಷ್ಣವಲಯದ ಹಣ್ಣಾಗಿದ್ದು, ಅಡುಗೆಮನೆಯ ತೋಟಗಳಲ್ಲಿ ಬೆಳೆಯಲು ಸೂಕ್ತವಾಗಿದೆ. ಪಪ್ಪಾಯಿಯು ವಿಟಮಿನ್ ಸಿ, ವಿಟಮಿನ್ ಎ, ಖನಿಜಗಳು ಮತ್ತು ಪೊಟ್ಯಾಸಿಯಮ್ನಂತಹ ಪೋಷಕಾಂಶಗಳ ಸಮೃದ್ಧ…

June 24, 2024

ಸಾಫ್ಟ್ ರೊಟ್ ರೋಗ ಭೀತಿ: ಶುಂಠಿಯನ್ನು ವಿನಾಶದಿಂದ ರಕ್ಷಿಸುವುದು

ಶುಂಠಿಯು ಹೆಚ್ಚು ಬೇಡಿಕೆಯಿರುವ ಮಸಾಲೆ ಬೆಳೆಯಾಗಿದ್ದು, 2022 ರಲ್ಲಿ ಭಾರತವು ಸುಮಾರು 2.12 ಮಿಲಿಯನ್ ಮೆಟ್ರಿಕ್ ಟನ್‌ಗಳನ್ನು ಉತ್ಪಾದಿಸುತ್ತದೆ ಎಂದು ನಿಮಗೆ ತಿಳಿದಿದೆಯೇ?  ಆದಾಗ್ಯೂ, ಸಾಫ್ಟ್ ರೊಟ್…

June 19, 2024

ಸೋಯಾಬೀನ್: ನಾಟಿ ಮತ್ತು ಕೃಷಿ ಅಭ್ಯಾಸಗಳು

ಹೆಚ್ಚಿನ ಪ್ರೊಟೀನ್ ಮತ್ತು ಎಣ್ಣೆಯ ಅಂಶದಿಂದಾಗಿ ಸೋಯಾಬೀನ್ ಅನ್ನು ಗೋಲ್ಡನ್ ಬೀನ್ ಅಥವಾ ಮಿರಾಕಲ್ ಕ್ರಾಪ್ ಎಂದೂ ಕರೆಯಲಾಗುತ್ತದೆ. ಸೋಯಾಬೀನ್ ಚೀನಾದಲ್ಲಿ ಹುಟ್ಟಿಕೊಂಡ ದ್ವಿದಳ ಧಾನ್ಯದ ವಿಧ.…

June 17, 2024