Important Events

2023 ರ ಪೂಸಾ ಕೃಷಿ ಮೇಳದಲ್ಲಿ ಪೌಷ್ಠಿಕಾಂಶ ಹಾಗೂ ನಾವೀನ್ಯತೆ: ಭಾರತದಲ್ಲಿ ರೈತರ ಸಬಲೀಕರಣ ಹಾಗೂ ಕೃಷಿ ವರ್ಧನೆ

ಪೂಸಾ ಕೃಷಿ ಮೇಳವನ್ನು ಪ್ರಸ್ತುತ 2023 ರ ಮಾರ್ಚ್ ಮಾಹೆಯ 02 ರಿಂದ 04ರ ವರೆಗೆ 3 ದಿನಗಳ ಕಾಲ ನವದೆಹಲಿಯ ICAR-ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಆಯೋಜಿಸಲಾಗಿತ್ತು. ಸದರಿ  ಕಾರ್ಯಕ್ರಮದ ವಿಷಯ (ಥೀಮ್) ‘ಸಿರಿಧಾನ್ಯಗಳ (ಶ್ರೀ ಅನ್ನ) ಮೂಲಕ ಪೌಷ್ಟಿಕಾಂಶ, ಆಹಾರ ಮತ್ತು ಪರಿಸರ ಭದ್ರತೆ’ ಎಂದಾಗಿತ್ತು.  ಈ ಸಮಾರೋಪ ಸಮಾರಂಭದಲ್ಲಿ ರಾಜ್ಯಗಳ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಶ್ರೀ ಕೈಲಾಶ್ ಚೌಧರಿ ರವರು ಭಾಗವಹಿಸಿರುತ್ತಾರೆ.

ಅವಲೋಕನ

ಪ್ರಸ್ತುತ ಕಾರ್ಯಕ್ರಮದಲ್ಲಿ 6 ರೈತರು/ರೈತ ಮಹಿಳೆಯರು ಮತ್ತು 42 ನವೀನ ರೈತ/ರೈತ ಮಹಿಳೆಯರಿಗೆ ‘IARI ನವೀನ ರೈತ ಪ್ರಶಸ್ತಿ’ ಯನ್ನು ನೀಡಿ ಗೌರವಿಸಲಾಯಿತು. ಸದರಿ ಕಾರ್ಯಕ್ರಮದ ಮುಖ್ಯ ಅತಿಥಿಗಳು ಪೌಷ್ಟಿಕಾಂಶದ ಭದ್ರತೆಗಾಗಿ ಸಿರಿಧಾನ್ಯಗಳ ವಿವಿಧ ತಳಿಗಳ ಅಭಿವೃದ್ಧಿಯ ಅವಶ್ಯಕತೆಯನ್ನು ಹಾಗು ಆಹಾರ ಭದ್ರತೆ ಹಾಗು ಪರಿಸರ ಸುರಕ್ಷತೆಯನ್ನು ಸಾಧಿಸುವಲ್ಲಿ ಹೊಸ ಮತ್ತು ನವೀನ ಕೃಷಿ ತಂತ್ರಜ್ಞಾನಗಳ ಪ್ರಾಮುಖ್ಯತೆಯನ್ನು ಸಾರಿದರು. ಮುಂದೂವರಿದು, ಕೃಷಿಯಲ್ಲಿ ತಂತ್ರಜ್ಞಾನ ಬಳಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿವಿಧ ಯೋಜನೆಗಳ ಪ್ರಯತ್ನವನ್ನು ಅವರು ಪ್ರಸ್ತಾಪಿಸಿದರು.

ಡಾ|| ಹಿಮಾಂಶು ಪಾಠಕ್, ಕಾರ್ಯದರ್ಶಿ, DARA ಮತ್ತು ಡೈರೆಕ್ಟರ್ ಜನರಲ್, ಐಸಿಎಆರ್ ರವರು ಮಾತನಾಡಿ ಐಸಿಎಆರ್ ಸಂಸ್ಥೆಯ ವತಿಯಿಂದ ರೈತರ ಅಭಿವೃದ್ಧಿಗಾಗಿ ವಾರ್ಷಿಕವಾಗಿ ತರಬೇತಿ ಕಾರ್ಯಕ್ರಮವನ್ನು ನಡೆಸಲಾಗುತ್ತದೆ ಎಂದರು. ಸದರಿ ತರಬೇತಿ ಕಾರ್ಯಕ್ರಮಗಳು ರೈತರಿಗೆ ಇತ್ತೀಚಿನ ಕೃಷಿ ತಂತ್ರಗಳು ಮತ್ತು ತಂತ್ರಜ್ಞಾನಗಳ ಬಗ್ಗೆ ನವೀಕೃತರಾಗಲು ಸಹಾಯ ಮಾಡುತ್ತದೆ. 

ಪ್ರಸ್ತುತ ಕೃಷಿ ಮೇಳ ಹಾಗೂ ಸಮಾರೋಪ ಸಮಾರಂಭವು ರೈತರಿಗೆ ಆಧುನಿಕ ಕೃಷಿ ತಂತ್ರಜ್ಞಾನಗಳ ಬಗ್ಗೆ  ಹಾಗೂ ನವೀನ ಪದ್ಧತಿಗಳ ಮಾಹಿತಿ ನೀಡುವ ಮೂಲಕ ರೈತರಿಗೆ ಅನುಕುಲದಾಯಕವಾಗಿದೆ. ಅದಲ್ಲದೆ ರೈತರ ಅಭಿವೃದ್ಧಿಗಾಗಿ ಸರ್ಕಾರದ ಪ್ರಯತ್ನಗಳನ್ನು ತಿಳಿಸಿದರು.

ಪ್ರಮುಖ ಅಂಶಗಳು

  • ಪೂಸಾ ಕೃಷಿ ಮೇಳವು 3 ದಿನಗಳ ಕಾಲ ನಡೆದಿದ್ದು, ಸದರಿ ಕಾರ್ಯಕ್ರಮದ ವಿಷಯ(ಥೀಮ್ ) ‘ಸಿರಿಧಾನ್ಯಗಳ (ಶ್ರೀ ಅನ್ನ) ಮೂಲಕ ಪೌಷ್ಟಿಕಾಂಶ, ಆಹಾರ ಮತ್ತು ಪರಿಸರ ಭದ್ರತೆ’ ಆಗಿರುತ್ತದೆ.
  • ಸದರಿ ಸಮಾರೋಪ ಸಮಾರಂಭದಲ್ಲಿ ರಾಜ್ಯದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ  ಶ್ರೀ ಕೈಲಾಶ್ ಚೌಧರಿ ಭಾಗವಹಿಸಿದ್ದರು.
  • ಹಲವಾರು ರೈತರು/ರೈತ ಮಹಿಳೆಯರಿಗೆ ‘IARI ನವೀನ ರೈತ ಪ್ರಶಸ್ತಿ’ ಯನ್ನು ನೀಡಿ ಗೌರವಿಸಲಾಯಿತು.
  • ಮುಖ್ಯ ಅತಿಥಿಗಳು ಪೌಷ್ಟಿಕಾಂಶದ ಭದ್ರತೆಗಾಗಿ ಸಿರಿಧಾನ್ಯಗಳ ವಿವಿಧ ತಳಿಗಳ ಅಭಿವೃದ್ಧಿಯ ಅವಶ್ಯಕತೆಯನ್ನು ಹಾಗು ಆಹಾರ ಭದ್ರತೆ ಹಾಗು ಪರಿಸರ ಸುರಕ್ಷತೆಯನ್ನು ಸಾಧಿಸುವಲ್ಲಿ ಹೊಸ ಮತ್ತು ನವೀನ ಕೃಷಿ ತಂತ್ರಜ್ಞಾನಗಳ ಪ್ರಾಮುಖ್ಯತೆಯನ್ನು ತಿಳಿಸಿರುತ್ತಾರೆ.

ತೀರ್ಮಾನ

ICAR-ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ, ನವದೆಹಲಿಯಲ್ಲಿ ನಡೆದ ಪೂಸಾ ಕೃಷಿ ಮೇಳವು ಕೃಷಿಯಲ್ಲಿ ಪ್ರಗತಿ ಹಾಗೂ ರೈತರ ಆರ್ಥಿಕ ಏಳಿಗೆಯ ಮೇಲೆ ಪ್ರಭಾವ ಬೀರಿತು. ‘ಸಿರಿಧಾನ್ಯಗಳ ಮೂಲಕ ಪೌಷ್ಟಿಕಾಂಶ, ಆಹಾರ ಮತ್ತು ಪರಿಸರ ಭದ್ರತೆ’ ಎಂಬ ವಿಷಯವನ್ನು  (ಥೀಮ್) ಹೊಂದಿದ್ದು, ಹೊಸ ನವೀನ ಕೃಷಿ ಪದ್ದತಿಗಳ ಹಾಗೂ ಹವಾಮಾನಕ್ಕೆ ಹೊಂದುವ ಕೃಷಿ ಪದ್ಧತಿಗಳ ಮಾಹಿತಿ ಪ್ರಸರಿಸಲಾಗಿತ್ತು. ಹಲವಾರು ICAR ಸಂಸ್ಥೆಗಳು ಪಾಲ್ಗೊಳ್ಳುವಿಕೆಯಿಂದ ಹಾಗೂ ನವೀನ ರೈತರ ಸನ್ಮಾನದಿಂದ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಬಳಸುವುದರಿಂದ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ತಮ್ಮ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಹಾಗೂ ಲಾಭ ಹೆಚ್ಚಿಸಿಕೊಳ್ಳಲು ಉಪಯೋಗವಾಗಲಿದೆ. ಸಾವಯವ ಮತ್ತು ನೈಸರ್ಗಿಕ ಕೃಷಿಗೆ ಸರ್ಕಾರದ ಪ್ರಯತ್ನ ಹಾಗೂ ತಂತ್ರಜ್ಞಾನ ಅಳವಡಿಕೆಯಲ್ಲಿ ಕೃಷಿಕರ ಸುಸ್ಥಿರ ಹಾಗೂ ಲಾಭದಾಯಕ ಭವಿಷ್ಯಕ್ಕೆ ನಾಂದಿಯಾಗಲಿದೆ.

 

Recent Posts

ಸೆಲ್ ಜೆಲ್: ಆಧುನಿಕ ಕೃಷಿಗಾಗಿ ನೀರಿನ ಉತ್ತಮ ಸ್ಥಿತಿಯನ್ನು ರೂಪಿಸುವ ಕ್ರಾಂತಿಕಾರಿ ಉತ್ಪನ್ನ

ಕೃಷಿಯಲ್ಲಿ, ದಕ್ಷತೆ ಮತ್ತು ಉತ್ಪಾದಕತೆ ಯಾವಾಗಲೂ ಮುಖ್ಯವಾಗಿರುತ್ತದೆ. ಈಗ ನಾವು ನಿಮಗೆ ನಿಮ್ಮ ನೀರಿನ ಸ್ಥಿತಿ, ನಿಮ್ಮ ಸಸ್ಯ ಸಂರಕ್ಷಣಾ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸುವ…

January 28, 2025

ಎಕ್ಸ್‌ಸ್ಕೇಲೆಂಟ್ : ಡ್ರಿಪ್ ಕ್ಲೀನಿಂಗ್ ಕಾರ್ಯವಿಧಾನದ ಮೂಲಕ ಬೆಳೆಗಳಿಗೆ ಸುರಕ್ಷಿತ ಪರಿಹಾರಗಳು

ಇತ್ತೀಚಿನ ಆಧುನಿಕ ಕೃಷಿಯಲ್ಲಿ ಸಮರ್ಥ ನೀರಿನ ನಿರ್ವಹಣೆ ಮಾಡುವುದು ನಿರ್ಣಾಯಕವಾಗಿದೆ ಮತ್ತು ಹನಿ ನೀರಾವರಿ ಪದ್ದತಿಯು  ನೇರವಾಗಿ ಬೇರುಗಳ ವಲಯವನ್ನು ಗುರಿಯಾಗಿಸಿಕೊಂಡು ಸಸ್ಯಗಳಿಗೆ ನೀರನ್ನು ತಲುಪಿಸುವ ವಿಧಾನವನ್ನು…

January 28, 2025

ಬಯೋಕ್ಯುಲಮ್ AW: ಬೆಳೆ ಸುಸ್ಥಿರತೆಗಾಗಿ ಬಳಸಲು ಸಿದ್ಧವಾಗಿರುವ ಡಿಕಂಪೋಸರ್

ಸುಸ್ಥಿರ ಕೃಷಿ ಪದ್ದತಿಯಲ್ಲಿ ಸರಳವಾದ ಆದರೆ ಆಳವಾದ ವಿಷಯವೇನೆಂದರೆ ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವುದು. ಸಾವಯವ ಕೃಷಿ ತ್ಯಾಜ್ಯವು ನಮಗೆ ಹೊರೆಯಾಗಿರದೆ ಮಣ್ಣನ್ನು ಸಮೃದ್ಧಗೊಳಿಸುವ, ಸಸ್ಯಗಳನ್ನು ಪೋಷಿಸುವ ಮತ್ತು…

January 28, 2025

ಎಪಿಸೆಲ್: ಸುಸ್ಥಿರ ಕೃಷಿಗಾಗಿ ನಿಮ್ಮ ಬೆಳೆಗಳ ಸಂಪೂರ್ಣ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ

ಇತ್ತೀಚೆಗೆ ಬದಲಾಗುತ್ತಿರುವ ಕೃಷಿ ಭೂದೃಶ್ಯದ ಕಾರಣವಾಗಿ, ಸಮರ್ಥನೀಯ ಮತ್ತು ಸಮರ್ಥ ಕೃಷಿ ವಿಧಾನಗಳನ್ನು ಕಂಡುಹಿಡಿಯುವುದು ನಿರ್ಣಾಯಕವಾಗಿದೆ. ಅದಕ್ಕಾಗಿಯೇ ಪರಿಚಯಿಸುತ್ತಿದ್ದೇವೆ, ಎಪಿಸೆಲ್! ಎಕ್ಸೆಲ್ ಇಂಡಸ್ಟ್ರೀಸ್‌ ರವರ ಈ ನವೀನ…

January 28, 2025

ಸೆಲ್ ಜೆಲ್‌ನೊಂದಿಗೆ ಕೃಷಿ ದಕ್ಷತೆಯನ್ನು ಹೆಚ್ಚಿಸುವುದು: ನೀರಿನ ಕಂಡೀಷನಿಂಗ್ ಮತ್ತು pH ಸಮತೋಲನ ಮಾಡಲು ಸಲಹೆಗಳು

ನೀರು ಕೃಷಿಯಲ್ಲಿ ಮೂಲಭೂತ ಸಂಪನ್ಮೂಲವಾಗಿದ್ದು, ಬೆಳೆಗಳ ವೃದ್ಧಿಗಾಗಿ ಅಗತ್ಯ ಪೋಷಕಾಂಶಗಳ ಮತ್ತು ಬೆಳೆ ರಕ್ಷಣೆಗೆ ಅಗತ್ಯವಾದ ರಾಸಾಯನಿಕಗಳನ್ನು ಸಾಗಿಸುವಲ್ಲಿ ವಾಹಕವಾಗಿ ಕಾರ್ಯನಿರ್ವಹಿಸುತ್ತದೆ . ಆದಾಗ್ಯೂ, ಕಳೆನಾಶಕಗಳು, ಕೀಟನಾಶಕಗಳು,…

January 28, 2025

ಎಕ್ಸ್‌ಸ್ಕೇಲೆಂಟ್: ಹನಿ ನೀರಾವರಿ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಸುರಕ್ಷಿತ ಮತ್ತು ಪರಿಣಾಮಕಾರಿ ಪರಿಹಾರ

ಹನಿ ನೀರಾವರಿ ವ್ಯವಸ್ಥೆ ಆಧುನಿಕ ಕೃಷಿಯ ಅತ್ಯಗತ್ಯ ಅಂಶವಾಗಿದೆ. ಇದು ಸಸ್ಯಗಳ ಬೇರುಗಳಿಗೆ ನೇರವಾಗಿ ನೀರನ್ನು ತಲುಪಿಸುವ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಈ ವಿಧಾನವು ನೀರನ್ನು ಸಂರಕ್ಷಿಸುವುದು…

January 28, 2025