ಭಾರತವು 2021-2022ರ ಸಾಲಿನಲ್ಲಿ 3.69 ಲಕ್ಷ ಟನ್ಗಳಷ್ಟು ಕಾಫಿಯನ್ನು ಉತ್ಪಾದಿಸಿದೆ. ವಿಶ್ವದ ಅತಿ ಹೆಚ್ಚು ಕಾಫಿ ಬೆಳೆಯುವ ರಾಷ್ಟಗಳೆಂದರೆ ಬ್ರೆಜಿಲ್, ವಿಯೆಟ್ನಾಂ, ಕೊಲಂಬಿಯಾ, ಇಂಡೋನೇಷಿಯಾ ಮತ್ತು ಇಥಿಯೋಪಿಯಾ. ಭಾರತವು ವಿಶ್ವದ ಏಳನೇ ಅತಿ ದೊಡ್ಡ ಕಾಫಿ ಬೆಳೆಯುವ ರಾಷ್ಟ್ರವಾಗಿದೆ. ಭಾರತದ ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಅತಿ ಹೆಚ್ಚು ಕಾಫಿ ಬೆಳೆಯನ್ನು ಬೆಳೆಸಲಾಗುತ್ತದೆ . ಭಾರತದ ಕಾಫಿ ಬೀಜಗಳನ್ನು ಉತ್ತಮ ಮಿಶ್ರಣಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಭಾರತವು, ಒಟ್ಟು ಕಾಫಿ ಉತ್ಪಾದನೆಯ ಸುಮಾರು 80% ರಷ್ಟನ್ನು ವಿವಿಧ ದೇಶಗಳಿಗೆ ವ್ಯಾಪಕವಾಗಿ ರಫ್ತು ಮಾಡುತ್ತದೆ. ಮುಖ್ಯವಾಗಿ ಭಾರತವು ಇಟಲಿ, ಜರ್ಮನಿ, ರಷ್ಯಾ, ಸ್ಪೇನ್, ಬೆಲ್ಜಿಯಂ, ಸ್ಲೊವೇನಿಯಾ, ಯುನೈಟೆಡ್ ಸ್ಟೇಟ್ಸ್ ಮತ್ತು ಯುನೈಟೆಡ್ ಕಿಂಗ್ಡಮ್ ದೇಶಗಳಿಗೆ ರಫ್ತು ಮಾಡುತ್ತದೆ. ಎರಡು ರೀತಿಯ ಕಾಫಿಯ ವಿಧಗಳನ್ನು ಬೆಳೆಸಲಾಗುತ್ತದೆ . ಅವುಗಳು ಯಾವುದೆಂದರೆ ಅರೇಬಿಕಾ ಮತ್ತು ರೋಬಸ್ಟಾ.
ಕಾಫಿಯಲ್ಲಿ ಎರಡು ಪ್ರಮುಖ ವಿಧಗಳಿವೆ, ಅರೇಬಿಕಾ ಮತ್ತು ರೋಬಸ್ಟಾ. ಈ ಎರಡು ವಿಧಗಳಲ್ಲಿ ಜನಪ್ರಿಯ ಮಿಶ್ರತಳಿಗಳೆಂದರೆ ಕೆಂಟ್, ಎಸ್-795, ಕಾವೇರಿ ಮತ್ತು ಸೆಲೆಕ್ಷನ್ 9.
ನಮ್ಮಲ್ಲೇ ಲಭ್ಯವಿರುವ ಕಾಫಿ ಬೀಜಗಳಿಂದ ಕಾಫಿ ಗಿಡಗಳನ್ನು ಬೆಳೆಸುವುದು ತುಂಬಾ ಕಷ್ಟಕರ, ಆದ್ದರಿಂದ ಕಾಫಿ ಬೀಜಗಳನ್ನು ಸಾಮಾನ್ಯವಾಗಿ ವಿಶ್ವಾಸಾರ್ಹ ಚಿಲ್ಲರೆ ವ್ಯಾಪಾರಿಗಳಿಂದ ಖರೀದಿಸಲಾಗುತ್ತದೆ. ಕಾಫಿ ಬೀಜಗಳನ್ನು ಅಜೋಸ್ಪಿರಿಲಮ್ ಮತ್ತು ಫಾಸ್ಫೋಬ್ಯಾಕ್ಟೀರಿಯಾದ ದ್ರಾವಣದಿಂದ ಬೀಜೋಪಚಾರ ಮಾಡಬೇಕು. ಕಾಫಿ ಬೀಜಗಳನ್ನು ಹಲವಾರು ರಾಸಾಯನಿಕಗಳೊಂದಿಗೆ ಬೀಜೋಪಚಾರ ಮಾಡುವುದಿಲ್ಲ ಯಾಕೆಂದರೆ ಕಾಫಿ ಬೀಜಗಳು ಬಹಳ ಸೂಕ್ಷ್ಮ ವಾಗಿರುವ ಕಾರಣದಿಂದ ಹೆಚ್ಚು ರಾಸಾಯನಿಕಗಳನ್ನು ಉಪಯೋಗಿಸಿ ಬೀಜೋಪಚಾರ ಮಾಡಿದರೆ ಕಾಫಿ ಬೀಜದ ಮೊಳಕೆಯೊಡೆಯುವ ಪ್ರಕ್ರಿಯೆಯ ಮೇಲೆ ಅಡ್ಡ ಪರಿಣಾಮ ಬೀರುತ್ತದೆ . ಕಾಫಿ ಬೀಜದ ಸಿಪ್ಪೆಗಳನ್ನು ಎಚ್ಚರಿಕೆಯಿಂದ ತೆಗೆದುಹಾಕಬೇಕು. ನಂತರ ಬೀಜಗಳನ್ನು ಸೋಡಿಯಂ ಹೈಪೋಕ್ಲೋರೈಟ್ನ 1% ದ್ರಾವಣದಿಂದ ಚೆನ್ನಾಗಿ ತೊಳೆಯಬೇಕು. ಯಾವುದೇ ರಾಸಾಯನಿಕ ಉಳಿಕೆಗಳನ್ನು ತೆಗೆದುಹಾಕಲು ಬೀಜಗಳನ್ನು ತಕ್ಷಣವೇ ಖನಿಜೀಕರಿಸಿದ ನೀರಿನಿಂದ ತೊಳೆಯಬೇಕು. ನಂತರ ಬೀಜಗಳನ್ನು 48 ಗಂಟೆಗಳ ಕಾಲ ನೆನೆಸಿಡಬೇಕು.
ಕಾಫಿ ಸಸಿಗಳನ್ನು ಸಾಮಾನ್ಯವಾಗಿ ಖರೀದಿಸಿ, ನೆಡಲಾಗುತ್ತದೆ. ಕಾಫಿ ಬೀಜಗಳು ಬಹಳ ಸೂಕ್ಷ್ಮವಾಗಿರುವುದರಿಂದ ಬೀಜದಿಂದ ಕಾಫಿ ಸಸಿಗಳನ್ನು ಬೆಳೆಸುವದು ತುಂಬಾ ಕಷ್ಟ ಮತ್ತು ಬೆಳೆಸುವುದಕ್ಕೆ ಬಹಳ ಸಮಯ ತೆಗೆದುಕೊಳ್ಳುತ್ತದೆ.
ನರ್ಸರಿಗಳಲ್ಲಿ ಕಾಫಿ ಸಸಿಗಳನ್ನು ಸಾಮಾನ್ಯವಾಗಿ ಪಾಲಿಥಿನ್ ಚೀಲಗಳಲ್ಲಿ ಬೆಳೆಸಲಾಗುತ್ತದೆ. ಈ ಪಾಲಿಥಿನ್ ಚೀಲಗಳಲ್ಲಿ ಉತ್ತಮವಾದ ಮಣ್ಣು, ವರ್ಮಿಕ್ಯುಲೈಟ್ ಮತ್ತು ಹ್ಯೂಮಸ್ (ಭಾಗಶಃ ಕೊಳೆತ ಸಾವಯವ ವಸ್ತು ;ಮಣ್ಣಿನ ಸಾವಯವ ಘಟಕ) ಮಿಶ್ರಣವನ್ನು ತುಂಬಿಸಬೇಕು . ನಂತರ ಬೀಜಗಳನ್ನು ಪಾಲಿಥಿನ್ ಚೀಲಗಳಲ್ಲಿ ಬಿತ್ತನೆ ಮಾಡಿ ನೆರಳಿನಲ್ಲಿ ಇರಿಸಬೇಕು. ಸಾಮಾನ್ಯವಾಗಿ ಬೀಜಗಳು, ಮೊಳಕೆಯೊಡೆಯಲು 2.5 ತಿಂಗಳು ತೆಗೆದುಕೊಳ್ಳುತ್ತವೆ . ಕಾಫಿ ಬೀಜಗಳು ಬಹಳ ಸೂಕ್ಷ್ಮವಾಗಿರುವುದರಿಂದ ಅತಿಯಾದ ನೀರಾವರಿ ಅಥವಾ ಕಡಿಮೆ ಪ್ರಮಾಣದ ನೀರಾವರಿ ಕೊಡುವುದರಿಂದ ಬೀಜಗಳು ನಾಶವಾಗುತ್ತವೆ .
ಕಾಫಿ ಬೆಳೆಯುವ ತೋಟಗಳು ಕಳೆಗಳಿಂದ ಮುಕ್ತವಾಗಿರಬೇಕು. ಯಾವುದೇ ಕಳೆ ಇಲ್ಲದ ರೀತಿಯಲ್ಲಿ ತೋಟವನ್ನು ಸ್ವಚ್ಛಗೊಳಿಸಬೇಕು. ಉತ್ತಮ ನೀರಿನ ನಿರ್ವಹಣೆಗಾಗಿ ಕಾಫಿಯನ್ನು ಇಳಿಜಾರಿನ ಪ್ರದೇಶದಲ್ಲಿ ಬೆಳೆಯುವುದರಿಂದ, ಮಣ್ಣು ಸಂರಕ್ಷಣಾ ಕ್ರಮಗಳನ್ನು ಅನುಸರಿಸಬೇಕು. ಯಾವುದೇ ಪೋಷಕಾಂಶ ಅಥವಾ ಗೊಬ್ಬರವನ್ನು ಹಾಕುವ ಮೊದಲು ಹೊಲವನ್ನು ಮಣ್ಣಿನ ಪರೀಕ್ಷೆಗೆ ಒಳಪಡಿಸಬೇಕು. ಮಣ್ಣಿನ ಪರೀಕ್ಷೆಯ ಫಲಿತಾಂಶಗಳ ಆಧಾರದ ಮೇಲೆ, ಅದಕ್ಕೆ ಅನುಗುಣವಾಗಿ ಸುಣ್ಣವನ್ನು ಹಾಕಬೇಕು. 5 ಟನ್ / ಹೆಕ್ಟೇರ್ಗೆ ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್ನಂತಹ ಬೃಹತ್ ಸಾವಯವ ಗೊಬ್ಬರಗಳನ್ನು (ಕೊಟ್ಟಿಗೆ ಗೊಬ್ಬರ ,ಕಾಂಪೋಸ್ಟ್ ಮತ್ತು ಹಸಿರು ಎಲೆ ಗೊಬ್ಬರದ ಮಿಶ್ರಣ ) ಸೇರಿಸುವುದು ಪ್ರಸ್ತುತ ವಿಧಾನವಾಗಿದೆ . ಕಾಫಿ ಸಸಿಗಳನ್ನು ಸಾಮಾನ್ಯವಾಗಿ ನೆರಳು ಇರುವ ಪ್ರದೇಶಗಳಲ್ಲಿ ಬೆಳೆಸಲಾಗುತ್ತದೆ , ಸಾಮಾನ್ಯವಾಗಿ ಅರಣ್ಯ ಬೆಳೆಗಳೊಂದಿಗೆ ಕಾಫಿ ಬೆಳೆಯನ್ನು ಬೆಳೆಸಲಾಗುತ್ತದೆ.
5 ರಿಂದ 6 pH ಮೌಲ್ಯ ಹೊಂದಿದ, ನೀರು ಬಸಿದು ಹೋಗುವ ಆಮ್ಲಿಯ ರಸಸಾರವಿರುವ ಮತ್ತು ಸಾವಯವಯುಕ್ತ ಮಣ್ಣು ಕಾಫಿ ಬೆಳೆಗೆ ಸೂಕ್ತವಾಗಿದೆ. ಮಣ್ಣಿನ ಫಲವತ್ತತೆಯ ಮಟ್ಟವನ್ನು ಕಂಡುಹಿಡಿಯಲು ಪ್ರತಿ 2 ವರ್ಷಗಳಿಗೊಮ್ಮೆ ಮಣ್ಣಿನ ಪರೀಕ್ಷೆಯನ್ನು ಮಾಡಬೇಕು.
ಕಾಫಿ ಬೆಳೆಯು ಅತ್ಯಂತ ಸೂಕ್ಷ್ಮವಾದ ಬೆಳೆಯಾಗಿದ್ದು, ಬೆಳೆಯ ನಿರ್ವಹಣೆಯು ತುಂಬಾ ಕಷ್ಟವಾಗಿದೆ . ಕಾಫಿ ಬೆಳೆಯನ್ನು ವ್ಯವಸ್ಥಿತವಾಗಿ ಬೆಳೆಸಿದರೆ, ರೈತನಿಗೆ ಹೂಡಿಕೆಯ ಮೇಲೆ ಹೆಚ್ಚಿನ ಲಾಭ ದೊರೆಯುತ್ತದೆ.
ಕೃಷಿಯಲ್ಲಿ, ದಕ್ಷತೆ ಮತ್ತು ಉತ್ಪಾದಕತೆ ಯಾವಾಗಲೂ ಮುಖ್ಯವಾಗಿರುತ್ತದೆ. ಈಗ ನಾವು ನಿಮಗೆ ನಿಮ್ಮ ನೀರಿನ ಸ್ಥಿತಿ, ನಿಮ್ಮ ಸಸ್ಯ ಸಂರಕ್ಷಣಾ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸುವ…
ಇತ್ತೀಚಿನ ಆಧುನಿಕ ಕೃಷಿಯಲ್ಲಿ ಸಮರ್ಥ ನೀರಿನ ನಿರ್ವಹಣೆ ಮಾಡುವುದು ನಿರ್ಣಾಯಕವಾಗಿದೆ ಮತ್ತು ಹನಿ ನೀರಾವರಿ ಪದ್ದತಿಯು ನೇರವಾಗಿ ಬೇರುಗಳ ವಲಯವನ್ನು ಗುರಿಯಾಗಿಸಿಕೊಂಡು ಸಸ್ಯಗಳಿಗೆ ನೀರನ್ನು ತಲುಪಿಸುವ ವಿಧಾನವನ್ನು…
ಸುಸ್ಥಿರ ಕೃಷಿ ಪದ್ದತಿಯಲ್ಲಿ ಸರಳವಾದ ಆದರೆ ಆಳವಾದ ವಿಷಯವೇನೆಂದರೆ ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವುದು. ಸಾವಯವ ಕೃಷಿ ತ್ಯಾಜ್ಯವು ನಮಗೆ ಹೊರೆಯಾಗಿರದೆ ಮಣ್ಣನ್ನು ಸಮೃದ್ಧಗೊಳಿಸುವ, ಸಸ್ಯಗಳನ್ನು ಪೋಷಿಸುವ ಮತ್ತು…
ಇತ್ತೀಚೆಗೆ ಬದಲಾಗುತ್ತಿರುವ ಕೃಷಿ ಭೂದೃಶ್ಯದ ಕಾರಣವಾಗಿ, ಸಮರ್ಥನೀಯ ಮತ್ತು ಸಮರ್ಥ ಕೃಷಿ ವಿಧಾನಗಳನ್ನು ಕಂಡುಹಿಡಿಯುವುದು ನಿರ್ಣಾಯಕವಾಗಿದೆ. ಅದಕ್ಕಾಗಿಯೇ ಪರಿಚಯಿಸುತ್ತಿದ್ದೇವೆ, ಎಪಿಸೆಲ್! ಎಕ್ಸೆಲ್ ಇಂಡಸ್ಟ್ರೀಸ್ ರವರ ಈ ನವೀನ…
ನೀರು ಕೃಷಿಯಲ್ಲಿ ಮೂಲಭೂತ ಸಂಪನ್ಮೂಲವಾಗಿದ್ದು, ಬೆಳೆಗಳ ವೃದ್ಧಿಗಾಗಿ ಅಗತ್ಯ ಪೋಷಕಾಂಶಗಳ ಮತ್ತು ಬೆಳೆ ರಕ್ಷಣೆಗೆ ಅಗತ್ಯವಾದ ರಾಸಾಯನಿಕಗಳನ್ನು ಸಾಗಿಸುವಲ್ಲಿ ವಾಹಕವಾಗಿ ಕಾರ್ಯನಿರ್ವಹಿಸುತ್ತದೆ . ಆದಾಗ್ಯೂ, ಕಳೆನಾಶಕಗಳು, ಕೀಟನಾಶಕಗಳು,…
ಹನಿ ನೀರಾವರಿ ವ್ಯವಸ್ಥೆ ಆಧುನಿಕ ಕೃಷಿಯ ಅತ್ಯಗತ್ಯ ಅಂಶವಾಗಿದೆ. ಇದು ಸಸ್ಯಗಳ ಬೇರುಗಳಿಗೆ ನೇರವಾಗಿ ನೀರನ್ನು ತಲುಪಿಸುವ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಈ ವಿಧಾನವು ನೀರನ್ನು ಸಂರಕ್ಷಿಸುವುದು…