Crop

ಭತ್ತದ ಬೆಳೆಗೆ ಭೂಮಿ ಸಿದ್ಧತೆ

ಭಾರತವು 2021 – 22 ರಲ್ಲಿ ಖಾರಿಫ್ ಋತುವಿನಲ್ಲಿ 111.76 ಮಿಲಿಯನ್ ಟನ್ಗಳಷ್ಟು ಭತ್ತವನ್ನು ಉತ್ಪಾದಿಸಿದೆ.ಭಾರತವು ವಿಶ್ವದ ಎರಡನೇ ಅತಿ ದೊಡ್ಡ ಅಕ್ಕಿ ಉತ್ಪಾದಕ ರಾಷ್ಟ್ರವಾಗಿದೆ. ಕಳೆದ ಒಂದು ದಶಕದಲ್ಲಿ ಭತ್ತದ ಬೆಳೆ ಉತ್ಪಾದನೆಯಲ್ಲಿ ಸ್ಥಿರವಾದ ಬೆಳವಣಿಗೆ ಕಂಡುಬಂದಿದೆ. ಭಾರತವು ಭತ್ತದ ಕೃಷಿಯಲ್ಲಿ ಅತಿ ಹೆಚ್ಚು ಪ್ರದೇಶವನ್ನು ಹೊಂದಿದೆ,ಇದು ಇತರ ಕೃಷಿ ಬೆಳೆಗಳಿಗಿಂತ ಹೆಚ್ಚಿನದಾಗಿದೆ. ದೇಶದಾದ್ಯಂತ ಅಕ್ಕಿಯನ್ನು ಉತ್ಪಾದಿಸಲಾಗುತ್ತದೆ.

ಕಷ್ಟದ ಮಟ್ಟ : ಕಠಿಣ

ಬೀಜಗಳ ಆಯ್ಕೆ

ಮಾರುಕಟ್ಟೆಯಲ್ಲಿ 10,000 ಕ್ಕೂ ಹೆಚ್ಚು ಅಕ್ಕಿ ತಳಿಗಳಿವೆ. ಬಾಸುಮತಿ, ಜೋಹಾ, ಜ್ಯೋತಿ, ನವರ, ಪೊನ್ನಿ, ಪೂಸಾ, ಸೋನಾ ಮಸೂರಿ, ಜಯ, ಕಲಾಜಿರಿ (ಸುಗಂಧ), ಬೋಳಿ, ಪಾಲಕ್ಕಾಡ್ ಮಟ್ಟಾ, ಕಟ್ಟಮೋಡನ್, ಕೈರಲಿ, ಜ್ಯೋತಿ, ಭದ್ರ, ಆಶಾ, ರಕ್ತಶಾಲಿ ಮುಂತಾದವುಗಳು ದೇಶದಲ್ಲಿ ಬೆಳೆಯುವ ಪ್ರಮುಖ ಭತ್ತದ ತಳಿಗಳಿವೆ. ಕೇರಳದ; ಕೆಂಪು ಕವುನಿ, ಕೈವಾರ ಸಾಂಬಾ, ಮಾಪಿಳ್ಳೈ ಸಾಂಬಾ, ಕುರುವಿ ಕಾರ್, ಮತ್ತು ತಮಿಳುನಾಡಿನ ಪೂಂಗರ್.

ಕಳೆದ ವರ್ಷವೊಂದರಲ್ಲೇ 800ಕ್ಕೂ ಹೆಚ್ಚು ಬಗೆಯ ಹೊಸ ಭತ್ತದ  ತಳಿಗಳನ್ನು  ಪರಿಚಯಿಸಲಾಗಿದೆ.

ಬೀಜಗಳನ್ನು ಮೊದಲೇ ನೆನೆಸುವುದು

ಬೀಜಗಳನ್ನು ಮೊದಲೇ ನೆನೆಸಲು ಎರಡು ವಿಧಾನಗಳಿವೆ. ಸೀಡ್ ಪ್ರೈಮಿಂಗ್ ಮತ್ತು ಮೊಳಕೆಯೊಡೆಯಲು ಮುಂಚಿತವಾಗಿ ನೆನೆಸುವುದು .  ಸೀಡ್ ಪ್ರೈಮಿಂಗ್ ಎಂದರೆ ಭತ್ತದ ಬೀಜಗಳನ್ನು  4-8 ಗಂಟೆಗಳ ಕಾಲ ನೆನೆಸಿ, ಬಿತ್ತನೆ ಮಾಡುವ ಮೊದಲು ಬೀಜಗಳನ್ನು ಮತ್ತೆ ಒಣಗಿಸುವುದು. 

ಭತ್ತದ ಬೀಜಗಳು  ಮೊಳಕೆಯೊಡೆಯಲು, ಬೀಜಗಳನ್ನು 12-14 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಬೇಕು.

ಬೀಜೋಪಚಾರ

ಭತ್ತದಲ್ಲಿ ಜೈವಿಕ  ಬೀಜೋಪಚಾರ:

ಭತ್ತದಲ್ಲಿ ಬೀಜ ಬೀಜೋಪಚಾರಕ್ಕೆ ಹಲವಾರು ವಿಧಗಳಿವೆ. ಭತ್ತದ ಬೀಜೋಪಚಾರದಲ್ಲಿ  ಸಾವಯವ ಮತ್ತು ಅಜೈವಿಕ ವಿಧಾನಗಳಿವೆ. ಜನಪ್ರಿಯ ಸಾವಯವ ಬಿಜೋಪಚಾರದಲ್ಲಿ 600g/ha ಅಜೋಸ್ಪಿರಿಲಿಯಂ ಅಥವಾ 1200g/ha ಅಜೋಫೋವನ್ನು ಬಳಸಬೇಕು.ಇದರಲ್ಲಿ, ಬೀಜಗಳನ್ನು ಜೈವಿಕ ಬಯೋ – ಇನಾಕ್ಯುಲೇಷನ್ ಮಾಡಬೇಕು, ಬಿತ್ತನೆ ಮಾಡುವ ಮೊದಲು ರಾತ್ರಿಯಿಡೀ  ಸಾಕಷ್ಟು ಪ್ರಮಾಣದ ನೀರಿನಲ್ಲಿ ನೆನೆಸಿಡಲಾಗುತ್ತದೆ.ಭತ್ತದಲ್ಲಿ,ಜೈವಿಕ ನಿಯಂತ್ರಣ ಏಜೆಂಟ್‌ಗಳು ಜೈವಿಕ ಗೊಬ್ಬರಗಳೊಂದಿಗೆ ಹೊಂದಿಕೊಳ್ಳುತ್ತವೆ. ಆದ್ದರಿಂದ ಜೈವಿಕ ಗೊಬ್ಬರಗಳು ಮತ್ತು ಜೈವಿಕ ನಿಯಂತ್ರಣ ಏಜೆಂಟ್‌ಗಳನ್ನು ಒಟ್ಟಿಗೆ ಮಿಶ್ರಣ ಮಾಡಬಹುದು. 

ಭತ್ತದ ಬೀಜೋಪಚಾರವನ್ನು ಸ್ಯೂಡೋಮೊನಾಸ್ ಫ್ಲೋರೊಸೆನ್ಸ್‌ನ ಟಾಲ್ಕ್-ಆಧಾರಿತ ಸ್ಯೂಡೋಮೊನಾಸ್ ಫ್ಲೋರೊಸೆನ್ಸ್‌ನೊಂದಿಗೆ 10 ಗ್ರಾಂ/ಕೆಜಿ ಬೀಜವನ್ನು ಬೆರೆಸಿ, 1 ಲೀಟರ್ ನೀರಿನಲ್ಲಿ ರಾತ್ರಿಯಿಡೀ ನೆನೆಸಲಾಗುತ್ತದೆ. ಹೆಚ್ಚುವರಿ ನೀರನ್ನು ಬೇರ್ಪಡಿಸಬಹುದು ಮತ್ತು ಬೀಜಗಳನ್ನು ಮೊಳಕೆಯೊಡೆಯಲು 24 ಗಂಟೆಗಳ ಕಾಲ ಬಿಡಲಾಗುತ್ತದೆ ಮತ್ತು ನಂತರ ಬಿತ್ತಲಾಗುತ್ತದೆ.

ಭತ್ತದಲ್ಲಿ ರಾಸಾಯನಿಕ  ಬೀಜೋಪಚಾರ

ಶಿಲೀಂಧ್ರನಾಶಕ ಮತ್ತು ಜೈವಿಕ ನಿಯಂತ್ರಣ ಏಜೆಂಟ್‌ಗಳು ಹೊಂದಿಕೆಯಾಗುವುದಿಲ್ಲ. ಶಿಲೀಂಧ್ರನಾಶಕ ಬೀಜ ಸಂಸ್ಕರಣೆ ಎಂದರೇ 1 ಕೆಜಿ ಬೀಜಗಳನ್ನು ಬೆನ್ಲೇಟ್ ಅಥವಾ ಮ್ಯಾಂಕೋಜೆಬ್ ಅಥವಾ ಅರಜೋನ್ ಕೆಂಪು 3 ಗ್ರಾಂ/ಲೀಟರ್ ನಂತಹ  ಶಿಲೀಂಧ್ರನಾಶಕಗಳೊಂದಿಗೆ  ಲೇಪಿಸುವುದು  .

 1 ಕೆಜಿ ಬೀಜಗಳಿಗೆ, 2 ಗ್ರಾಂ/ಲೀಟರ್  ನೀರಿನಲ್ಲಿ ಕಾರ್ಬೆಂಡಜಿಮ್ ಅಥವಾ ಪೈರೊಕ್ವಿಲಾನ್ ಅಥವಾ ಟ್ರೈಸೈಕ್ಲೋಜೋಲ್ ದ್ರಾವಣವನ್ನು ಬೆರೆಸುವುದರಿಂದ,ಬೀಜದಿಂದ ಹರಡುವ ರೋಗಗಳನ್ನು ನಿರ್ವಹಣೆ ಮಾಡಬಹುದು.

1ಕೆಜಿ ಬೀಜಗಳಿಗೆ ,ಕಾರ್ಬೆಂಡಜಿಮ್(ಬಾವಿಸ್ಟಿನ್)ಅನ್ನು 2ಗ್ರಾಂ/ಲೀಟರ್ ನೀರಿಗೆ  ಲೇಪಿಸಲಾಗುತ್ತದೆ. ಬೀಜಗಳನ್ನು ನಂತರ 10 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ಮತ್ತು ಹೆಚ್ಚುವರಿ ನೀರನ್ನು ಹೊರಹಾಕಲಾಗುತ್ತದೆ. ಇದನ್ನು ತೇವ  ಬೀಜಗಳ  ಬೀಜೋಪಚಾರ ಎಂದು ಕರೆಯಲಾಗುತದೆ ,ಇದು ಬೆಂಕಿ ರೋಗ ಮತ್ತು ಇತರ ರೋಗಗಳಿಂದ 40 ದಿನಗಳವರೆಗೆ ರಕ್ಷಣೆ ನೀಡುತ್ತದೆ. ಬೀಜೋಪಚಾರ ಮಾಡಿದ  ಬೀಜಗಳನ್ನು ಕತ್ತಲೆ ಪ್ರದೇಶದಲ್ಲಿ ಗೋಣಿ ಚೀಲದಲ್ಲಿ ಶೇಖರಿಸಿ ಇಡಿ ಮತ್ತು ಹೆಚ್ಚು ಗೋಣಿ ಚೀಲಗಳಿಂದ ಮುಚ್ಚಬೇಕು. ಮೊಳಕೆಯೊಡೆಯಲು ಬೀಜಗಳನ್ನು 24 ಗಂಟೆಗಳ ಕಾಲ ತೊಂದರೆಯಾಗದಂತೆ ಇಡಬೇಕು.

ಭತ್ತದ  ಸಸಿಮಡಿ ತಯಾರಿಕೆ :

ವಿವಿಧ ರೀತಿಯ ಭತ್ತದ ಸಸಿಮಡಿ ವಿಧಗಳಿವೆ. ಕೆಸರು ಮಡಿಗಳು ಇವೆ.  2.5 ಮೀ ಅಗಲ ಮತ್ತು 30 ಸೆಂ.ಮೀ ವಿಸ್ತಾರದ ಚಾನಲ್‌ಗಳೊಂದಿಗೆ ಸಸಿಮಡಿಯನ್ನು ತಯಾರಿಸಲಾಗುತ್ತದೆ . ಭೂಮಿಯ ಮಣ್ಣು ಮತ್ತು ಇಳಿಜಾರಿನ ಪ್ರಕಾರ,ಮಡಿಯು  ಬದಲಾಗಬಹುದು.

ಸಸಿಮಡಿಗೆ ಸಾಕಷ್ಟು ನೀರಿನ ವ್ಯವಸ್ಥೆ  ಹಾಗೂ ಸರಿಯಾದ ಒಳಚರಂಡಿ ಇರಬೇಕು. ಮಡಿಯನ್ನು ಒಣ ಉಳುಮೆ ಮಾಡಿ, ಒಂದು ಟನ್  FYM  ಅನ್ನು ಹಾಕಬೇಕು. ಮತ್ತೊಮ್ಮೆ  ಉಳುಮೆ ಮಾಡಿ,ಮಡಿಯ ತುಂಬಾ ನೀರನ್ನು ನಿಲ್ಲಿಸಬೇಕು . ಎರಡು ದಿನ ಗಳ ಕಾಲ ನೀರನ್ನು ಹಾಗೆಯೇ ನಿಲ್ಲಿಸಬೇಕು. ನಂತರ ಭತ್ತದ ಗದ್ದೆಯಲ್ಲಿ ಉಳುಮೆ ಮಾಡಬೇಕು. 

ಗದ್ದೆಯಲ್ಲಿ ನಿಂತಿರುವ ನೀರಿನಲ್ಲಿ 5 – 10 ಸೆಂ.ಮೀ ಆಳದವರೆಗೆ ಉಳುಮೆ ಮಾಡಿ. ಕಬ್ಬಿಣದ ಪಡ್ಲರ್ ನಿಂದ ಉಳುಮೆ ಮಾಡಿ. ಉತ್ತಮ ನೀರಿನ ಹರಿವಿಗಾಗಿ  ವಿರುದ್ಧ ದಿಕ್ಕಿನಲ್ಲಿ ಮಣ್ಣನ್ನು ಸಡಿಲಗೊಳಿಸಿ.  ಇತ್ತೀಚಿನ ಕೆಲವು ಹೊಸ ಮತ್ತು ವಿಶಿಷ್ಟವಾದ ಭತ್ತದ ಸಸಿಮಡಿ ತಯಾರಿಕೆ ವಿಧಾನಗಳಲ್ಲಿ ದಪೋಗ್, ಮ್ಯಾಟ್ ಮತ್ತು ಒಣ ಸಸಿ ಮಡಿ ವಿಧಾನಗಳು ಸೇರಿವೆ. 

ಭತ್ತದ  ಭೂಮಿ ಸಿದ್ಧತೆ :

  • ಭತ್ತಕ್ಕೆ ಕಪ್ಪು ಮಿಶ್ರಿತ  ಮಣ್ಣು ಅವಶ್ಯಕತೆ ಇರುತ್ತದೆ. ಜೇಡಿಮಣ್ಣು ಮಿಶ್ರಿತ  ಅಥವಾ ಕಪ್ಪು ಮಿಶ್ರಿತ ಮಣ್ಣಿನಲ್ಲಿ ಭತ್ತವು ಉತ್ತಮವಾಗಿ ಬೆಳೆಯುತ್ತದೆ.
  • ಮಣ್ಣಿನ pH : ಸ್ವಲ್ಪ ಆಮ್ಲೀಯತೆ ಇರುವ  ಮಣ್ಣು(pH 6).

ಭತ್ತದ ಗದ್ದೆ ತಯಾರಿ ( ಕಸಿ ವಿಧಾನ):

ನಾಟಿ ಮಾಡುವ ಒಂದು ಅಥವಾ ಎರಡು ದಿನಗಳ ಮೊದಲು ಗದ್ದೆಗೆ ನೀರನ್ನು ತುಂಬಿಸಿ , ಗದ್ದೆಯನ್ನು ಸಿದ್ಧಪಡಿಸಲಾಗುತ್ತದೆ.ಉತ್ತಮ ಬೇಸಾಯಕ್ಕಾಗಿ ಗದ್ದೆಯನ್ನು ಒಂದು ಅಥವಾ ಎರಡು ಬಾರಿ  ಉಳುಮೆ ಮಾಡಲಾಗುತ್ತದೆ. ಕೊನೆಯ ಉಳುಮೆಯಲ್ಲಿ 6.25ಟನ್ /ಹೆಕ್ಟೇರ್ ಗೆ 12.5 ಟನ್ FYM ಅಥವಾ ಕಾಂಪೋಸ್ಟ್ ಅಥವಾ ಹಸಿರು ಎಲೆ ಗೊಬ್ಬರವನ್ನು ಸೇರಿಸಲಾಗುತ್ತದೆ.. ನಾಟಿ ಮಾಡುವ ಹತ್ತು ದಿನಗಳ ಮೊದಲು 22ಕೆಜಿ / ಹೆಕ್ಟೇರ್ ಗೆ ಯೂರಿಯ ಗೊಬ್ಬರವನ್ನು ಹಾಕಬೇಕು . ನಾಟಿ ಮಾಡುವ ಸಮಯದಲ್ಲಿ ಗದ್ದೆಯಲ್ಲಿ ಕನಿಷ್ಠ 2-2.5ಸೆಂ.ಮೀ ನೀರು ಇರಬೇಕು 

ಹಿನ್ನುಡಿ

ಭತ್ತದ  ಬೆಳೆಗೆ  ಹೆಚ್ಚಿನ ಕಾಳಜಿ ಮತ್ತು ಸಂರಕ್ಷಣೆ ತುಂಬಾ ಅಗತ್ಯವಿರುತ್ತದೆ. ಭತ್ತದ ಬೆಳೆಯ ಕೃಷಿ ಅಷ್ಟು ಸುಲಭವಲ್ಲ .ಅಕ್ಕಿಯು ದೇಶದ ಅತ್ಯಂತ ಪ್ರಧಾನ ಆಹಾರವಾಗಿದೆ, ಆದ್ಧರಿಂದ ಅಕ್ಕಿಗೆ ಮಾರುಕಟ್ಟೆಯಲ್ಲಿ ಯಾವಾಗಲು ಉತ್ತಮ ಬೇಡಿಕೆ ಇರುತ್ತದೆ . 

Recent Posts

ಸೆಲ್ ಜೆಲ್: ಆಧುನಿಕ ಕೃಷಿಗಾಗಿ ನೀರಿನ ಉತ್ತಮ ಸ್ಥಿತಿಯನ್ನು ರೂಪಿಸುವ ಕ್ರಾಂತಿಕಾರಿ ಉತ್ಪನ್ನ

ಕೃಷಿಯಲ್ಲಿ, ದಕ್ಷತೆ ಮತ್ತು ಉತ್ಪಾದಕತೆ ಯಾವಾಗಲೂ ಮುಖ್ಯವಾಗಿರುತ್ತದೆ. ಈಗ ನಾವು ನಿಮಗೆ ನಿಮ್ಮ ನೀರಿನ ಸ್ಥಿತಿ, ನಿಮ್ಮ ಸಸ್ಯ ಸಂರಕ್ಷಣಾ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸುವ…

January 28, 2025

ಎಕ್ಸ್‌ಸ್ಕೇಲೆಂಟ್ : ಡ್ರಿಪ್ ಕ್ಲೀನಿಂಗ್ ಕಾರ್ಯವಿಧಾನದ ಮೂಲಕ ಬೆಳೆಗಳಿಗೆ ಸುರಕ್ಷಿತ ಪರಿಹಾರಗಳು

ಇತ್ತೀಚಿನ ಆಧುನಿಕ ಕೃಷಿಯಲ್ಲಿ ಸಮರ್ಥ ನೀರಿನ ನಿರ್ವಹಣೆ ಮಾಡುವುದು ನಿರ್ಣಾಯಕವಾಗಿದೆ ಮತ್ತು ಹನಿ ನೀರಾವರಿ ಪದ್ದತಿಯು  ನೇರವಾಗಿ ಬೇರುಗಳ ವಲಯವನ್ನು ಗುರಿಯಾಗಿಸಿಕೊಂಡು ಸಸ್ಯಗಳಿಗೆ ನೀರನ್ನು ತಲುಪಿಸುವ ವಿಧಾನವನ್ನು…

January 28, 2025

ಬಯೋಕ್ಯುಲಮ್ AW: ಬೆಳೆ ಸುಸ್ಥಿರತೆಗಾಗಿ ಬಳಸಲು ಸಿದ್ಧವಾಗಿರುವ ಡಿಕಂಪೋಸರ್

ಸುಸ್ಥಿರ ಕೃಷಿ ಪದ್ದತಿಯಲ್ಲಿ ಸರಳವಾದ ಆದರೆ ಆಳವಾದ ವಿಷಯವೇನೆಂದರೆ ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವುದು. ಸಾವಯವ ಕೃಷಿ ತ್ಯಾಜ್ಯವು ನಮಗೆ ಹೊರೆಯಾಗಿರದೆ ಮಣ್ಣನ್ನು ಸಮೃದ್ಧಗೊಳಿಸುವ, ಸಸ್ಯಗಳನ್ನು ಪೋಷಿಸುವ ಮತ್ತು…

January 28, 2025

ಎಪಿಸೆಲ್: ಸುಸ್ಥಿರ ಕೃಷಿಗಾಗಿ ನಿಮ್ಮ ಬೆಳೆಗಳ ಸಂಪೂರ್ಣ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ

ಇತ್ತೀಚೆಗೆ ಬದಲಾಗುತ್ತಿರುವ ಕೃಷಿ ಭೂದೃಶ್ಯದ ಕಾರಣವಾಗಿ, ಸಮರ್ಥನೀಯ ಮತ್ತು ಸಮರ್ಥ ಕೃಷಿ ವಿಧಾನಗಳನ್ನು ಕಂಡುಹಿಡಿಯುವುದು ನಿರ್ಣಾಯಕವಾಗಿದೆ. ಅದಕ್ಕಾಗಿಯೇ ಪರಿಚಯಿಸುತ್ತಿದ್ದೇವೆ, ಎಪಿಸೆಲ್! ಎಕ್ಸೆಲ್ ಇಂಡಸ್ಟ್ರೀಸ್‌ ರವರ ಈ ನವೀನ…

January 28, 2025

ಸೆಲ್ ಜೆಲ್‌ನೊಂದಿಗೆ ಕೃಷಿ ದಕ್ಷತೆಯನ್ನು ಹೆಚ್ಚಿಸುವುದು: ನೀರಿನ ಕಂಡೀಷನಿಂಗ್ ಮತ್ತು pH ಸಮತೋಲನ ಮಾಡಲು ಸಲಹೆಗಳು

ನೀರು ಕೃಷಿಯಲ್ಲಿ ಮೂಲಭೂತ ಸಂಪನ್ಮೂಲವಾಗಿದ್ದು, ಬೆಳೆಗಳ ವೃದ್ಧಿಗಾಗಿ ಅಗತ್ಯ ಪೋಷಕಾಂಶಗಳ ಮತ್ತು ಬೆಳೆ ರಕ್ಷಣೆಗೆ ಅಗತ್ಯವಾದ ರಾಸಾಯನಿಕಗಳನ್ನು ಸಾಗಿಸುವಲ್ಲಿ ವಾಹಕವಾಗಿ ಕಾರ್ಯನಿರ್ವಹಿಸುತ್ತದೆ . ಆದಾಗ್ಯೂ, ಕಳೆನಾಶಕಗಳು, ಕೀಟನಾಶಕಗಳು,…

January 28, 2025

ಎಕ್ಸ್‌ಸ್ಕೇಲೆಂಟ್: ಹನಿ ನೀರಾವರಿ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಸುರಕ್ಷಿತ ಮತ್ತು ಪರಿಣಾಮಕಾರಿ ಪರಿಹಾರ

ಹನಿ ನೀರಾವರಿ ವ್ಯವಸ್ಥೆ ಆಧುನಿಕ ಕೃಷಿಯ ಅತ್ಯಗತ್ಯ ಅಂಶವಾಗಿದೆ. ಇದು ಸಸ್ಯಗಳ ಬೇರುಗಳಿಗೆ ನೇರವಾಗಿ ನೀರನ್ನು ತಲುಪಿಸುವ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಈ ವಿಧಾನವು ನೀರನ್ನು ಸಂರಕ್ಷಿಸುವುದು…

January 28, 2025