ಭಾರತವು 2021-22ರಲ್ಲಿ 21.20 ಲಕ್ಷ ಟನ್ ಶುಂಠಿಯನ್ನು ಉತ್ಪಾದಿಸಿದೆ ಹಾಗು ಅದೇ ವರ್ಷದಲ್ಲಿ,ಭಾರತವು 837.34 ಕೋಟಿ ಮೌಲ್ಯದ 1.48 ಲಕ್ಷ ಟನ್ ಶುಂಠಿಯನ್ನು ಬೇರೆ ಬೇರೆ ದೇಶಗಳಿಗೆ ರಫ್ತು ಮಾಡಿದೆ. ಭಾರತದಲ್ಲಿ ಶುಂಠಿ ಬೆಳೆಯುವ ಪ್ರಮುಖ ರಾಜ್ಯಗಳೆಂದರೆ ಮಧ್ಯಪ್ರದೇಶ, ಕರ್ನಾಟಕ, ಅಸ್ಸಾಂ, ಪಶ್ಚಿಮ ಬಂಗಾಳ, ಒಡಿಶಾ, ಕೇರಳ, ಮಹಾರಾಷ್ಟ್ರ ಮತ್ತು ಮೇಘಾಲಯ.
ಶೀತ, ಕೆಮ್ಮು, ವಾಂತಿ, ತಲೆತಿರುಗುವಿಕೆ, ಅಧಿಕ ರಕ್ತದೊತ್ತಡ ಮತ್ತು ದುರ್ಬಲ ದೃಷ್ಟಿಯಂತಹ ಸಮಸ್ಯೆಗಳಿಗೆ ಶುಂಠಿ ಪ್ರಯೋಜನಕಾರಿಯಾಗಿದೆ . ಭಾರತೀಯ ಸಾಂಪ್ರದಾಯಿಕ ಆಯುರ್ವೇದ ಔಷಧದಲ್ಲಿ ಶುಂಠಿಯನ್ನು ಜೀರ್ಣಕ್ರಿಯೆ, ಜ್ವರ ಮತ್ತು ಹೊಟ್ಟೆಯ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಹಾಗು ಸಮಸ್ಯೆಗಳ ನಿವಾರಣೆಗೆ ಬಳಸಲಾಗುತ್ತದೆ
ಭಾರತದಲ್ಲಿ ಹೈಬ್ರಿಡ್ ಮತ್ತು ವಂಶಾಂತರೀ ಬೆಳೆಗಳ ತಳಿಗಳಿಗಿಂತ, ಹಲವು ಸ್ಥಳೀಯ ಹಾಗು ಸಾಂಪ್ರದಾಯಿಕ ತಳಿಗಳಿವೆ . ಶುಂಠಿಯ ಕೆಲವು ಪ್ರಮುಖ ತಳಿಗಳೆಂದರೆ IISR ಸುಪ್ರಭಾ, ಸುರುಚಿ, ಸುರಭಿ, ಹಿಮಗಿರಿ, ಚೀನಾ, ಅಸ್ಸಾಂ, ಮಾರನ್, ಹಿಮಾಚಲ, ನಾಡಿಯಾ, ಮತ್ತು ವಿದೇಶಿ ತಳಿಯಾದ ರಿಯೋ-ಡಿ-ಜನೈೆರೋ ತಳಿಯು ಅತ್ಯಂತ ಜನಪ್ರಿಯವಾಗಿದೆ
ಶುಂಠಿಯನ್ನು ಗೆಡ್ಡೆ/ರೈಜೋಮ್ (ಬೇರು ಕಾಂಡ) ಮೂಲಕ ಬೆಳೆಸಲಾಗುತ್ತದೆ.ಈ ಗೆಡ್ಡೆಗಳನ್ನು, 25-5.0 ಸೆಂ.ಮೀ ಉದ್ದ, 20-25 ಗ್ರಾಂ ತೂಕ ಮತ್ತು ಕನಿಷ್ಠ ಒಂದು ಅಥವಾ ಎರಡು ಗಿಣ್ಣು ಮೊಗ್ಗು ಇರುವಂತೆ ಸುರಕ್ಷಿತವಾಗಿ ಸಣ್ಣ ತುಂಡುಗಳಾಗಿ ಕತ್ತರಿಸಬೇಕು. ಈ ರೀತಿ ಮಾಡಿದ ಶುಂಠಿ ಗೆಡ್ಡೆಗಳನ್ನು 30 ನಿಮಿಷಗಳ ಕಾಲ ಮ್ಯಾಂಕೋಜೆಬ್ 0.3% ದ್ರಾವಣದಲ್ಲಿ (3 ಗ್ರಾಂ/ಲೀ ನೀರು) ಅದ್ದಿ ತೆಗೆದ ನಂತರ 3 ರಿಂದ 4 ಗಂಟೆಗಳ ಕಾಲ ನೆರಳಿನಲ್ಲಿ ಒಣಗಿಸಬೇಕು . ಈ ರೀತಿ ಮಾಡುವುದರಿಂದ ಗೆಡ್ಡೆಗಳಲ್ಲಿ ಕಂಡುಬರುವ ಹಾಗು ಗಿಣ್ಣು ಮೊಗ್ಗುಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಯಾವುದೇ ಶಿಲೀಂಧ್ರ ಸೋಂಕನ್ನು ತಡೆಗಟ್ಟಬಹುದು
ಶುಂಠಿ ಬೆಳೆಯಲು ಭೂಮಿಯನ್ನು 4 ರಿಂದ 5 ಬಾರಿ ಚೆನ್ನಾಗಿ ಉಳುಮೆ ಮಾಡಬೇಕು . ಬಿತ್ತನೆ ಸಮಯದಲ್ಲಿ 25-30 ಟನ್/ಹೆಕ್ಟೇರ್ ಅಷ್ಟು ಚೆನ್ನಾಗಿ ಕೊಳೆತ ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್ ಅನ್ನು ಸೇರಿಸಿ. ನಂತರ 1 ಮೀಟರ್ ಅಗಲ, 30 ಸೆಂ.ಮೀ ಎತ್ತರದ ಮಡಿಗಳನ್ನು 50 ಸೆಂ.ಮೀ ಅಂತರ ಇರುವಂತೆ ಸಿದ್ಧಪಡಿಸಬೇಕು. ಶುಂಠಿ ಗೆಡ್ಡೆಗಳು ಮುಖ್ಯವಾಗಿ ಜಂತುಹುಳುಗಳ ದಾಳಿಗೆ ಗುರಿಯಾಗುತ್ತವೆ ಹಾಗು ಇದು ಇಳುವರಿಯನ್ನು ಕಡಿಮೆ ಮಾಡುತ್ತದೆ. ಶುಂಠಿ ಬಿತ್ತನೆ ಸಮಯದಲ್ಲಿ ಬೇವಿನ ಹಿಂಡಿಯನ್ನು 2 ಟನ್/ಹೆಕ್ಟೇರ್ ಗೆ ಮಣ್ಣಿನಲ್ಲಿ ಸೇರಿಸುವುದರಿಂದ ಜಂತುಹುಳುಗಳ ದಾಳಿಯನ್ನು ಕಡಿಮೆ ಮಾಡಬಹುದು
ಶುಂಠಿ ಬೆಳೆಗೆ ಸಾಮಾನ್ಯವಾಗಿ NPK 100:50:50 ಕೆಜಿ/ ಹೆಕ್ಟೇರ್ ರಸಗೊಬ್ಬರಗಳನ್ನು ಶಿಫಾರಸು ಮಾಡಲಾಗುತ್ತದೆ. ಈ ಶಿಫಾರಸು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ನಾಟಿ ಮಾಡುವ ಸಮಯದಲ್ಲಿ ಪೂರ್ತಿ ಪ್ರಮಾಣದ ರಂಜಕವನ್ನು ನೀಡಬೇಕು, ಸಮ ಪ್ರಮಾಣದ ಸಾರಜನಕ ಮತ್ತು ಪೊಟ್ಯಾಷ್ ಅನ್ನು ನಾಟಿ ಮಾಡಿದ ನಂತರ ನೀಡಬೇಕು
ಶುಂಠಿಗ ಬೆಳೆಗೆ ನಿರ್ದಿಷ್ಟ ರೀತಿಯ ಮಣ್ಣಿನ ಅವಶ್ಯಕತೆ ಇರುತ್ತದೆ . ಶುಂಠಿಯನ್ನು ಅದರ ವ್ಯಾಪಕ ಸ್ವಭಾವದಿಂದಾಗಿ ವರ್ಷದಿಂದ ವರ್ಷಕ್ಕೆ ಒಂದೇ ಮಣ್ಣಿನಲ್ಲಿ ಬೆಳೆಯಲು ಸಾಧ್ಯವಾಗವುದಿಲ್ಲ . ಹೆಚ್ಚು ಸಾವಯವ ಹೊಂದಿದ ಮರಳು ಗೂಡು ಮಣಿನಲ್ಲಿ, ನೀರು ಬಸಿದು ಹೋಗುವಂತಹ ಮರಳು ಮಿಶ್ರಿತಗೊಂಡ ಹಾಗೂ ಕೆಂಪು ಅಥವಾ ಜಂಬುಇಟ್ಟಿಗೆ ಮಣ್ಣಿನಲ್ಲಿ ಶುಂಠಿಯು ಚೆನ್ನಾಗಿ ಬೆಳೆಯುತ್ತದೆ.
ಶುಂಠಿ ಬೆಳೆಗೆ 5.5 ರಿಂದ 6.5 pH ಹೊಂದಿದ ಮರಳು ಗೂಡು ಅಥವಾ ಸಡಿಲವಾದ ಮಣ್ಣು ಸೂಕ್ತವಾಗಿದೆ
ಶುಂಠಿ ಬೆಳೆಯು ಒಂದು ಸಮಗ್ರ ಬೆಳೆಯಾಗಿದ್ದು, ಇದನ್ನು ಪದೇ ಪದೇ ಒಂದೇ ಮಣ್ಣಿನಲ್ಲಿ ಬೆಳೆಯಲು ಸಾದ್ಯವಾಗುವುದಿಲ್ಲ. ಶುಂಠಿ ಬೆಳೆಯು ದೀರ್ಘಾವಧಿಯ ಬೆಳೆಯಾಗಿದ್ದು. ಮೌಲ್ಯವರ್ಧನೆಯಿಲ್ಲದಿದ್ದರೂ ಸಹ ಹೆಚ್ಚಿನ ಬೇಡಿಕೆಯ ಬೆಳೆಯಾಗಿದೆ ಮತ್ತು ಅಧಿಕ ಆದಾಯದ ಭರವಸೆಯನ್ನು ನೀಡುತ್ತದೆ.
ಕೃಷಿಯಲ್ಲಿ, ದಕ್ಷತೆ ಮತ್ತು ಉತ್ಪಾದಕತೆ ಯಾವಾಗಲೂ ಮುಖ್ಯವಾಗಿರುತ್ತದೆ. ಈಗ ನಾವು ನಿಮಗೆ ನಿಮ್ಮ ನೀರಿನ ಸ್ಥಿತಿ, ನಿಮ್ಮ ಸಸ್ಯ ಸಂರಕ್ಷಣಾ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸುವ…
ಇತ್ತೀಚಿನ ಆಧುನಿಕ ಕೃಷಿಯಲ್ಲಿ ಸಮರ್ಥ ನೀರಿನ ನಿರ್ವಹಣೆ ಮಾಡುವುದು ನಿರ್ಣಾಯಕವಾಗಿದೆ ಮತ್ತು ಹನಿ ನೀರಾವರಿ ಪದ್ದತಿಯು ನೇರವಾಗಿ ಬೇರುಗಳ ವಲಯವನ್ನು ಗುರಿಯಾಗಿಸಿಕೊಂಡು ಸಸ್ಯಗಳಿಗೆ ನೀರನ್ನು ತಲುಪಿಸುವ ವಿಧಾನವನ್ನು…
ಸುಸ್ಥಿರ ಕೃಷಿ ಪದ್ದತಿಯಲ್ಲಿ ಸರಳವಾದ ಆದರೆ ಆಳವಾದ ವಿಷಯವೇನೆಂದರೆ ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವುದು. ಸಾವಯವ ಕೃಷಿ ತ್ಯಾಜ್ಯವು ನಮಗೆ ಹೊರೆಯಾಗಿರದೆ ಮಣ್ಣನ್ನು ಸಮೃದ್ಧಗೊಳಿಸುವ, ಸಸ್ಯಗಳನ್ನು ಪೋಷಿಸುವ ಮತ್ತು…
ಇತ್ತೀಚೆಗೆ ಬದಲಾಗುತ್ತಿರುವ ಕೃಷಿ ಭೂದೃಶ್ಯದ ಕಾರಣವಾಗಿ, ಸಮರ್ಥನೀಯ ಮತ್ತು ಸಮರ್ಥ ಕೃಷಿ ವಿಧಾನಗಳನ್ನು ಕಂಡುಹಿಡಿಯುವುದು ನಿರ್ಣಾಯಕವಾಗಿದೆ. ಅದಕ್ಕಾಗಿಯೇ ಪರಿಚಯಿಸುತ್ತಿದ್ದೇವೆ, ಎಪಿಸೆಲ್! ಎಕ್ಸೆಲ್ ಇಂಡಸ್ಟ್ರೀಸ್ ರವರ ಈ ನವೀನ…
ನೀರು ಕೃಷಿಯಲ್ಲಿ ಮೂಲಭೂತ ಸಂಪನ್ಮೂಲವಾಗಿದ್ದು, ಬೆಳೆಗಳ ವೃದ್ಧಿಗಾಗಿ ಅಗತ್ಯ ಪೋಷಕಾಂಶಗಳ ಮತ್ತು ಬೆಳೆ ರಕ್ಷಣೆಗೆ ಅಗತ್ಯವಾದ ರಾಸಾಯನಿಕಗಳನ್ನು ಸಾಗಿಸುವಲ್ಲಿ ವಾಹಕವಾಗಿ ಕಾರ್ಯನಿರ್ವಹಿಸುತ್ತದೆ . ಆದಾಗ್ಯೂ, ಕಳೆನಾಶಕಗಳು, ಕೀಟನಾಶಕಗಳು,…
ಹನಿ ನೀರಾವರಿ ವ್ಯವಸ್ಥೆ ಆಧುನಿಕ ಕೃಷಿಯ ಅತ್ಯಗತ್ಯ ಅಂಶವಾಗಿದೆ. ಇದು ಸಸ್ಯಗಳ ಬೇರುಗಳಿಗೆ ನೇರವಾಗಿ ನೀರನ್ನು ತಲುಪಿಸುವ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಈ ವಿಧಾನವು ನೀರನ್ನು ಸಂರಕ್ಷಿಸುವುದು…