ಅಣಬೆ ಬೇಸಾಯವು ಅತ್ಯಂತ ಲಾಭದಾಯಕ ಕೃಷಿ-ವ್ಯಾಪಾರವಾಗಿದ್ದು, ಕಡಿಮೆ ಹೂಡಿಕೆ ಮತ್ತು ಸ್ಥಳಾವಕಾಶದೊಂದಿಗೆ ಇದನ್ನು ಪ್ರಾರಂಭಿಸಬಹುದು. ಪ್ರಪಂಚದಾದ್ಯಂತ, ಚೀನಾ, ಅಮೇರಿಕಾ, ಇಟಲಿ ಮತ್ತು ನೆದರ್ಲ್ಯಾಂಡ್ಸ್ ದೇಶಗಳು ಅಣಬೆಯ ಪ್ರಮುಖ ಉತ್ಪಾದನಾ ದೇಶಗಳಾಗಿವೆ . ಭಾರತದಲ್ಲಿ, ಉತ್ತರ ಪ್ರದೇಶವು ಅಣಬೆ ಬೇಸಾಯದಲ್ಲಿ ಅಗ್ರ ಸ್ಥಾನದಲ್ಲಿದ್ದು, ನಂತರದಲ್ಲಿ ತ್ರಿಪುರ ಮತ್ತು ಕೇರಳ ಅಣಬೆ ಉತ್ಪಾದನೆ ಮಾಡುತ್ತವೆ. ದಕ್ಷಿಣ ಕನ್ನಡ ಜಿಲ್ಲೆಗಳು ಸೇರಿದಂತೆ ರಾಜ್ಯಾದ್ಯಂತ, ಅಣಬೆಗೆ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮೂಲ ಉತ್ಪನ್ನದ ಕೊರತೆ ಹೆಚ್ಚಾಗುತ್ತಿದೆ. ಇದರಿಂದ ಬೇಡಿಕೆಯಷ್ಟು ಅಣಬೆ ಪೂರೈಕೆ ಮಾಡಲು ಅಸಾಧ್ಯವಾದ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆ ಈ ಬಾರಿ ಸರ್ಕಾರದಿಂದ ಅನುದಾನ ಪಡೆದು ಅಣಬೆ ಕೃಷಿ ಬೆಳೆಸಲು ರೈತರಿಗೆ ಪ್ರೋತ್ಸಾಹ ನೀಡುತ್ತಿದೆ.
ಅಣಬೆ ಉತ್ಪಾದನೆಯನ್ನು ಉತ್ತೇಜಿಸಲು ಮತ್ತು ರೈತರ ಪ್ರಯತ್ನಗಳಿಗೆ ಸಹಾಯ ಮಾಡಲು ರಾಷ್ಟ್ರೀಯ ತೋಟಗಾರಿಕೆ ಮಂಡಳಿಯ ಅಡಿ 2011 ರಲ್ಲಿ ಅಣಬೆ ಕೃಷಿಗೆ ಸರ್ಕಾರದಿಂದ ಅನುದಾನ ನೀಡಲಾಗುತ್ತಿದೆ. ಈ ಅಣಬೆ ಅನುದಾನ ಯೋಜನೆಯು ರೈತರಿಗೆ ತಮ್ಮ ಅಣಬೆ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಆರ್ಥಿಕ ನೆರವು ನೀಡುತ್ತದೆ.
ಫಲಾನುಭವಿಗಳ ಜಾಗದಲ್ಲಿ ಹಾಲಿ ಇರುವ ಕಟ್ಟಡಗಳಲ್ಲಿ, ಬಳಸದೆ ಬಾಕಿಯಿರುವ ಗೋಡೌನ್ , ಫಾರಂ ಹೌಸ್, ಶೆಡ್, ಪಡಸಾಲೆ, ರೇಷ್ಮೆ ಮನೆ, ಬಳಸದೆ ಇರುವ ಕೊಟ್ಟಿಗೆ, ಹಳೆ ಮನೆ ಇತ್ಯಾದಿ ಸ್ಥಳಗಳನ್ನು ಸ್ವಚ್ಛವಾಗಿಸಿಕೊಂಡು ಅಣಬೆ ಘಟಕಕ್ಕೆ ಅಗತ್ಯ ಮೂಲಭೂತ ಸೌಕರ್ಯ ಅಭಿವೃದ್ದಿ ಪಡಿಸಲು ಅನುದಾನವು ಸಹಕಾರಿಯಾಗಿದೆ.
ನಂ. | ವರ್ಗ | ಟೀಕೆಗಳು |
1. | ಅನುದಾನದ ವೆಚ್ಚ | 10 ಲಕ್ಷದವರೆಗೆ |
2. | ಯಾರು ಅರ್ಹರು | ವೈಯಕ್ತಿಕ ರೈತರು |
3 | ಈ ಯೋಜನೆಯಡಿ ಏನನ್ನು ಸೇರಿಸಲಾಗಿದೆ? | ಅಣಬೆ ಘಟಕ ಸ್ಥಾಪನೆ, ಗೊಬ್ಬರ ತಯಾರಿಕಾ ಘಟಕಗಳು ಮತ್ತುಅಣಬೆ ಉತ್ಪಾದನೆ. |
ತೋಟಗಾರಿಕೆ ಇಲಾಖೆಯಿಂದ ಅಣಬೆ ಅನುದಾನವು ಅಣಬೆ ಘಟಕಗಳ ಜೊತೆಗೆ ಎರೆಹುಳು ಗೊಬ್ಬರದ ಘಟಕಕ್ಕೆ ಸಹ ನೆರವು ಪಡೆಯಲು, ಸಣ್ಣ ಮತ್ತು ಮಧ್ಯಮ ಹಿಡುವಳಿ ರೈತರಿಗೆ ಒಂದು ಕೊಡುಗೆಯಾಗಿದೆ. ಹೆಚ್ಚಿನ ಮಾಹಿತಿಗಾಗಿ ನೀವು ರಾಜ್ಯ ಸರ್ಕಾರದ ಅಧಿಕಾರಿಗಳನ್ನು ಸಂಪರ್ಕಿಸಬಹುದು ಮತ್ತು ನಿಮ್ಮ ಅಣಬೆ ಕೃಷಿ ಘಟಕವನ್ನು ಪ್ರಾರಂಭಿಸುವ ವಿಧಾನವನ್ನು ತಿಳಿದುಕೊಳ್ಳಬಹುದು .
ಕೃಷಿಯಲ್ಲಿ, ದಕ್ಷತೆ ಮತ್ತು ಉತ್ಪಾದಕತೆ ಯಾವಾಗಲೂ ಮುಖ್ಯವಾಗಿರುತ್ತದೆ. ಈಗ ನಾವು ನಿಮಗೆ ನಿಮ್ಮ ನೀರಿನ ಸ್ಥಿತಿ, ನಿಮ್ಮ ಸಸ್ಯ ಸಂರಕ್ಷಣಾ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸುವ…
ಇತ್ತೀಚಿನ ಆಧುನಿಕ ಕೃಷಿಯಲ್ಲಿ ಸಮರ್ಥ ನೀರಿನ ನಿರ್ವಹಣೆ ಮಾಡುವುದು ನಿರ್ಣಾಯಕವಾಗಿದೆ ಮತ್ತು ಹನಿ ನೀರಾವರಿ ಪದ್ದತಿಯು ನೇರವಾಗಿ ಬೇರುಗಳ ವಲಯವನ್ನು ಗುರಿಯಾಗಿಸಿಕೊಂಡು ಸಸ್ಯಗಳಿಗೆ ನೀರನ್ನು ತಲುಪಿಸುವ ವಿಧಾನವನ್ನು…
ಸುಸ್ಥಿರ ಕೃಷಿ ಪದ್ದತಿಯಲ್ಲಿ ಸರಳವಾದ ಆದರೆ ಆಳವಾದ ವಿಷಯವೇನೆಂದರೆ ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವುದು. ಸಾವಯವ ಕೃಷಿ ತ್ಯಾಜ್ಯವು ನಮಗೆ ಹೊರೆಯಾಗಿರದೆ ಮಣ್ಣನ್ನು ಸಮೃದ್ಧಗೊಳಿಸುವ, ಸಸ್ಯಗಳನ್ನು ಪೋಷಿಸುವ ಮತ್ತು…
ಇತ್ತೀಚೆಗೆ ಬದಲಾಗುತ್ತಿರುವ ಕೃಷಿ ಭೂದೃಶ್ಯದ ಕಾರಣವಾಗಿ, ಸಮರ್ಥನೀಯ ಮತ್ತು ಸಮರ್ಥ ಕೃಷಿ ವಿಧಾನಗಳನ್ನು ಕಂಡುಹಿಡಿಯುವುದು ನಿರ್ಣಾಯಕವಾಗಿದೆ. ಅದಕ್ಕಾಗಿಯೇ ಪರಿಚಯಿಸುತ್ತಿದ್ದೇವೆ, ಎಪಿಸೆಲ್! ಎಕ್ಸೆಲ್ ಇಂಡಸ್ಟ್ರೀಸ್ ರವರ ಈ ನವೀನ…
ನೀರು ಕೃಷಿಯಲ್ಲಿ ಮೂಲಭೂತ ಸಂಪನ್ಮೂಲವಾಗಿದ್ದು, ಬೆಳೆಗಳ ವೃದ್ಧಿಗಾಗಿ ಅಗತ್ಯ ಪೋಷಕಾಂಶಗಳ ಮತ್ತು ಬೆಳೆ ರಕ್ಷಣೆಗೆ ಅಗತ್ಯವಾದ ರಾಸಾಯನಿಕಗಳನ್ನು ಸಾಗಿಸುವಲ್ಲಿ ವಾಹಕವಾಗಿ ಕಾರ್ಯನಿರ್ವಹಿಸುತ್ತದೆ . ಆದಾಗ್ಯೂ, ಕಳೆನಾಶಕಗಳು, ಕೀಟನಾಶಕಗಳು,…
ಹನಿ ನೀರಾವರಿ ವ್ಯವಸ್ಥೆ ಆಧುನಿಕ ಕೃಷಿಯ ಅತ್ಯಗತ್ಯ ಅಂಶವಾಗಿದೆ. ಇದು ಸಸ್ಯಗಳ ಬೇರುಗಳಿಗೆ ನೇರವಾಗಿ ನೀರನ್ನು ತಲುಪಿಸುವ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಈ ವಿಧಾನವು ನೀರನ್ನು ಸಂರಕ್ಷಿಸುವುದು…