ಕಮಲಂ ಅಥವಾ ಡ್ರ್ಯಾಗನ್ ಹಣ್ಣು, ಕ್ಯಾಕ್ಟಸ್ ಆಧಾರಿತ ಹಣ್ಣಾಗಿದ್ದು,ತನ್ನ ಆರ್ಥಿಕ ಮೌಲ್ಯಕ್ಕೆ ಹಾಗೂ ಆರೋಗ್ಯಕರವಾದ ಗುಣಗಳಿಗೆ ಹೆಸರುವಾಸಿಯಾಗಿದೆ. ಈ ಹಣ್ಣಿನ ಮೂಲ ಸ್ಥಾನವು ದಕ್ಷಿಣ ಮೆಕ್ಸಿಕೋ, ಮಧ್ಯ ಮತ್ತು ದಕ್ಷಿಣ ಅಮೇರಿಕ ಆಗಿದ್ದು, ಈಗ ಭಾರತ ಸೇರಿದಂತೆ ವಿಶ್ವದಾದ್ಯಂತ 22 ಕ್ಕೂ ಹೆಚ್ಚಿನ ದೇಶಗಳಲ್ಲಿ ಬೆಳೆಯಲಾಗುತ್ತಿದೆ.
ಕಮಲಂ ಅಥವಾ ಡ್ರ್ಯಾಗನ್ ಹಣ್ಣು, ಮೊದಲನೇಯ ವರ್ಷದಿಂದಲೇ ತ್ವರಿತ ಲಾಭವನ್ನು ನೀಡಲಾರಂಭಿಸುತ್ತದೆ ಮತ್ತು 3-4 ವರ್ಷಗಳಲ್ಲಿ ಹೆಚ್ಚಿನ ಆರ್ಥಿಕ ಲಾಭವನ್ನು ಕಂಡುಕೊಳ್ಳಬಹುದು. ಪ್ರಸ್ತುತ ಬೆಳೆಗೆ ಸುಮಾರು 20 ವರ್ಷಗಳ ಜೀವಿತಾವಧಿಯಿದ್ದು , ಗಿಡವನ್ನು ನೆಟ್ಟ 2 ವರ್ಷಗಳಲ್ಲಿ ಪ್ರತಿ ಎಕರೆಗೆ 10 ಟನ್ ಗಳ ಇಳುವರಿ ಪಡೆಯಬಹುದು. ಪ್ರತಿ ಕೆ.ಜಿ. ಹಣ್ಣಿಗೆ ರೂ.100/- ಮಾತ್ರದ ಮಾರುಕಟ್ಟೆ ದರ ಇದ್ದಲ್ಲಿ ವರ್ಷಕ್ಕೆ ರೂ.10,00,000/- ಆದಾಯ ಪಡೆಯಬಹುದು. ಆದ್ದರಿಂದ ಕಮಲಂ ಹಣ್ಣು ಬೆಳೆಯುವ ರೈತರಿಗೆ ಹೆಚ್ಚಿನ ಆರ್ಥಿಕ ಲಾಭ ದೊರೆಯುತ್ತದೆ.
4 ಬರ-ನಿರೋಧಕ ಬೆಳೆ: ಕಮಲಂ ಬರ-ನಿರೋಧಕ ಬೆಳೆಯಾಗಿದ್ದು, ನೀರಿನ ಕೊರತೆ ಇರುವ ಪ್ರದೇಶಗಳಲ್ಲಿ ಸಹ ಬೆಳೆಯಬಹುದು. ಇತರೆ ಬೆಳೆಗಳು ಸಾಮಾನ್ಯವಾಗಿ ಬೆಳೆಯದ ಒಣ ಪ್ರದೇಶಗಳಲ್ಲಿ, ರೈತರು ಸದರಿ ಬೆಳೆಯನ್ನು ಬೆಳೆದು ಪ್ರಯೋಜನವನ್ನು ಪಡೆದುಕೊಳ್ಳಬಹುದು.
ಕೆಲವು ಸಂಬಂಧಿತ ವಿಷಯಗಳು ಮತ್ತು ಅಂಕಿ ಅಂಶಗಳು
ವಿಷಯ | ವಿವರಣೆ |
ಬೆಳೆಯ ಹೆಸರು | ಕಮಲಂ/ ಡ್ರಾಗನ್ ಹಣ್ಣು |
ಮೂಲ ಸ್ಥಾನ | ದಕ್ಷಿಣ ಮೆಕ್ಸಿಕೋ, ಮಧ್ಯ ಮತ್ತು ದಕ್ಷಿಣ ಅಮೇರಿಕ |
ಪ್ರಮುಖವಾಗಿ ಕರೆಯುವ ಹೆಸರು | ಪಿತಾಯ, ಪಿಟಾಯಾ, ಪಿಟಾಯಾ ರೋಜಾ, ಪಿತಾಜಾ |
ಆರ್ಥಿಕ ಮೌಲ್ಯ | ಜ್ಯೂಸ್, ಜಾಮ್, ಜೆಲ್ಲಿ ಮುಂತಾದ ಆಹಾರ ಉತ್ಪನ್ನಗಳು ಜೊತೆಗೆ ಆರೋಗ್ಯಕರ ಉಪಯುಕ್ತತೆಗಳು ಅಂದರೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು, ಜೀರ್ಣಕ್ರಿಯೆಗೆ ಸಹಾಯ ಮಾಡುವುದು ಆಗಿರುತ್ತದೆ ಜೊತೆಗೆ ಫೈಬರ್, ಆಂಟಿಆಕ್ಸಿಡೆಂಟ್ಗಳು ಮತ್ತು ವಿಟಮಿನ್ಗಳಲ್ಲಿ ಸಮೃದ್ಧವಾಗಿದೆ. |
ಕೃಷಿ ವಿಸ್ತರಣೆ | ಆಗ್ನೇಯ –ಏಷ್ಯಾ, ಭಾರತ, ಯುಎಸ್ಎ, ಕೆರಿಬಿಯನ್, ಆಸ್ಟ್ರೇಲಿಯಾ |
ಭಾರತದ ಸಾಗುವಳಿ ಪ್ರದೇಶ | > 3,000 ಹೆಕ್ಟೇರ್ |
ಭಾರತಕ್ಕೆ ಕಮಲಂ ಹಣ್ಣುಗಳ ಆಮದು | 2017ರಲ್ಲಿ 327 ಟನ್, 2019ರಲ್ಲಿ 9162 ಟನ್, 2020ರಲ್ಲಿ ಅಂದಾಜು 11916 ಟನ್, 2021ರಲ್ಲಿ ಅಂದಾಜು 15491 ಟನ್ |
ಆಮದು ಮೌಲ್ಯ (2021) | ರೂ.100 ಕೋಟಿಗಳು |
ಇಳುವರಿ ಪ್ರತಿ ಎಕರೆಗೆ | 10 ಟನ್ |
ಮಾರುಕಟ್ಟೆ ದರ | ರೂ.100 ಪ್ರತಿ ಕೆ.ಜಿ. ಗೆ |
ಲಾಭ ವೆಚ್ಚ ಅನುಪಾತ (BCR) | 2.58 |
ಕಮಲಂ ಹಣ್ಣಿಗೆ MIDH ಗುರಿ | 5 ವರ್ಷಗಳಲ್ಲಿ 50,000 ಹೆಕ್ಟೇರ್ |
ಇಳುವರಿ ನೀರಿಕ್ಷೆ ಅವಧಿ | ಸುಮಾರು 20 ವರ್ಷ |
ಸೆಂಟರ್ ಆಫ್ ಎಕ್ಸಲೆನ್ಸ್ | 09-03-2023ರಂದು ಬೆಂಗಳೂರಿನ IIHR ನಲ್ಲಿ ಸ್ಥಾಪನೆ |
ಸೆಂಟರ್ ಆಫ್ ಎಕ್ಸಲೆನ್ಸ್ ಫೋಕಸ್ | ಉತ್ಪಾದನೆ, ಕೊಯ್ಲಿನ ನಂತರದ ಕಾರ್ಯಗಳು, ಮೌಲ್ಯವರ್ಧನೆ ಮತ್ತು ಸಂಶೋಧನೆ |
ರೈತರಲ್ಲಿ ಹೆಚ್ಚುತ್ತಿರುವ ಆಸಕ್ತಿ ಮತ್ತು ಅಲ್ಪ ಭೂಮಿಯಲ್ಲಿಯೇ ಕಮಲವನ್ನು ಬೆಳೆಸುವುದರಿಂದ ಅವರು ಪಡೆಯುತ್ತಿರುವ ತ್ವರಿತ ಆದಾಯದೊಂದಿಗೆ, ಕಮಲಂ ಹೊಸ ಪ್ರದೇಶಗಳಿಗೆ ವಿಸ್ತರಿಸುತ್ತದೆ ಮತ್ತು ದೇಶೀಯ ಕೃಷಿಯು ಆಮದುಗಳನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಕಮಲಂ ಹಣ್ಣಿನ ಉತ್ಕೃಷ್ಟತೆಯ ಕೇಂದ್ರದ ಸ್ಥಾಪನೆಯು ಕಮಲಂ ಹಣ್ಣಿನ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು, ಮೌಲ್ಯವರ್ಧನೆ ಮತ್ತು ರೈತ ಸಮುದಾಯದ ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಕೃಷಿಯಲ್ಲಿ, ದಕ್ಷತೆ ಮತ್ತು ಉತ್ಪಾದಕತೆ ಯಾವಾಗಲೂ ಮುಖ್ಯವಾಗಿರುತ್ತದೆ. ಈಗ ನಾವು ನಿಮಗೆ ನಿಮ್ಮ ನೀರಿನ ಸ್ಥಿತಿ, ನಿಮ್ಮ ಸಸ್ಯ ಸಂರಕ್ಷಣಾ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸುವ…
ಇತ್ತೀಚಿನ ಆಧುನಿಕ ಕೃಷಿಯಲ್ಲಿ ಸಮರ್ಥ ನೀರಿನ ನಿರ್ವಹಣೆ ಮಾಡುವುದು ನಿರ್ಣಾಯಕವಾಗಿದೆ ಮತ್ತು ಹನಿ ನೀರಾವರಿ ಪದ್ದತಿಯು ನೇರವಾಗಿ ಬೇರುಗಳ ವಲಯವನ್ನು ಗುರಿಯಾಗಿಸಿಕೊಂಡು ಸಸ್ಯಗಳಿಗೆ ನೀರನ್ನು ತಲುಪಿಸುವ ವಿಧಾನವನ್ನು…
ಸುಸ್ಥಿರ ಕೃಷಿ ಪದ್ದತಿಯಲ್ಲಿ ಸರಳವಾದ ಆದರೆ ಆಳವಾದ ವಿಷಯವೇನೆಂದರೆ ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವುದು. ಸಾವಯವ ಕೃಷಿ ತ್ಯಾಜ್ಯವು ನಮಗೆ ಹೊರೆಯಾಗಿರದೆ ಮಣ್ಣನ್ನು ಸಮೃದ್ಧಗೊಳಿಸುವ, ಸಸ್ಯಗಳನ್ನು ಪೋಷಿಸುವ ಮತ್ತು…
ಇತ್ತೀಚೆಗೆ ಬದಲಾಗುತ್ತಿರುವ ಕೃಷಿ ಭೂದೃಶ್ಯದ ಕಾರಣವಾಗಿ, ಸಮರ್ಥನೀಯ ಮತ್ತು ಸಮರ್ಥ ಕೃಷಿ ವಿಧಾನಗಳನ್ನು ಕಂಡುಹಿಡಿಯುವುದು ನಿರ್ಣಾಯಕವಾಗಿದೆ. ಅದಕ್ಕಾಗಿಯೇ ಪರಿಚಯಿಸುತ್ತಿದ್ದೇವೆ, ಎಪಿಸೆಲ್! ಎಕ್ಸೆಲ್ ಇಂಡಸ್ಟ್ರೀಸ್ ರವರ ಈ ನವೀನ…
ನೀರು ಕೃಷಿಯಲ್ಲಿ ಮೂಲಭೂತ ಸಂಪನ್ಮೂಲವಾಗಿದ್ದು, ಬೆಳೆಗಳ ವೃದ್ಧಿಗಾಗಿ ಅಗತ್ಯ ಪೋಷಕಾಂಶಗಳ ಮತ್ತು ಬೆಳೆ ರಕ್ಷಣೆಗೆ ಅಗತ್ಯವಾದ ರಾಸಾಯನಿಕಗಳನ್ನು ಸಾಗಿಸುವಲ್ಲಿ ವಾಹಕವಾಗಿ ಕಾರ್ಯನಿರ್ವಹಿಸುತ್ತದೆ . ಆದಾಗ್ಯೂ, ಕಳೆನಾಶಕಗಳು, ಕೀಟನಾಶಕಗಳು,…
ಹನಿ ನೀರಾವರಿ ವ್ಯವಸ್ಥೆ ಆಧುನಿಕ ಕೃಷಿಯ ಅತ್ಯಗತ್ಯ ಅಂಶವಾಗಿದೆ. ಇದು ಸಸ್ಯಗಳ ಬೇರುಗಳಿಗೆ ನೇರವಾಗಿ ನೀರನ್ನು ತಲುಪಿಸುವ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಈ ವಿಧಾನವು ನೀರನ್ನು ಸಂರಕ್ಷಿಸುವುದು…