News

ಭಾರತೀಯ ಕೃಷಿಯನ್ನು ಕ್ರಾಂತಿಗೊಳಿಸುವುದು: ಕೃಷಿ ಮೂಲಭೂತ ಸೌಕರ್ಯ ನಿಧಿಯ (AIF) ಪರಿಣಾಮ

ಪರಿಚಯ

   ಕೃಷಿ ಮೂಲಭೂತ ಸೌಕರ್ಯ ನಿಧಿ (AIF) ಜುಲೈ 8, 2020 ರಂದು ಸ್ಥಾಪನೆಯಾದ ಸರ್ಕಾರಿ ಕಾರ್ಯಕ್ರಮವಾಗಿದ್ದು, ಬೆಳೆ ಕಟಾವಿನ ನಂತರದ ನಿರ್ವಹಣೆಗೆ ಹಾಗೂ ಸಮುದಾಯ ಆಧಾರಿತ ಕೃಷಿಗೆ ಸುಮಾರು 1 ಲಕ್ಷ ಕೋಟಿ ಬಜೆಟ್‌ಅನ್ನು 2025-26 ರ ಆರ್ಥಿಕ ವರ್ಷದೊಳಗೆ ಖರ್ಚು ಮಾಡುವಂತೆ ನೀಡಲಾಗಿದೆ. ಪ್ರಸ್ತುತ ಮಾಹಿತಿಯಂತೆ, ಈ ಕಾರ್ಯಕ್ರಮವು ಕೃಷಿ ಮೂಲಸೌಕರ್ಯ ಉಪಕ್ರಮಗಳಿಗಾಗಿ ಸುಮಾರು 30,000 ಕೋಟಿಗಳನ್ನು ಸಂಗ್ರಹಿಸಿದೆ, ಇದರಲ್ಲಿ ಸುಮಾರು 15000 ಕೋಟಿ ಮೊತ್ತವು  AIFನಿಂದ ನಿಗದಿಪಡಿಸಲಾಗಿದೆ. AIF, ಶೇಕಡ 3 ಪ್ರತಿಷತ ಬಡ್ಡಿ ರಿಯಾಯಿತಿ ಸಹಾಯದೊಂದಿಗೆ, ಖಚಿತ ಸಾಲ ಬೆಂಬಲ ಹಾಗೂ  ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಇತರೆ ಯೋಜನೆಗಳೊಂದಿಗೆ ರೈತರಿಗೆ, ಕೃಷಿ ಉದ್ಯಮಿಗಳಿಗೆ ಹಾಗೂ ಕೃಷಿ ವಲಯದ ಪಾಲುದಾರರಿಗೆ ಬೆಂಬಲಿಸಲಿದೆ.

ಅವಲೋಕನ

ಈ ಕಾರ್ಯಕ್ರಮವು ಕೃಷಿ ಮೂಲಸೌಕರ್ಯ ಉಪಕ್ರಮಗಳಿಗಾಗಿ ಸುಮಾರು 30,000 ಕೋಟಿಗಳನ್ನು ಸಂಗ್ರಹಿಸಿದೆ, ಇದರಲ್ಲಿ ಸುಮಾರು 15000 ಕೋಟಿ ಮೊತ್ತವು  AIFನಿಂದ ನಿಗದಿಪಡಿಸಲಾಗಿದೆ.ಸದರಿ ಯೋಜನೆಯು ರೈತರಿಗೆ, ಕೃಷಿ ಉದ್ಯಮಿಗಳಿಗೆ ಹಾಗೂ ರೈತಸಂಘಗಳಿಗೆ,  ಬಡ್ಡಿ ರಿಯಾಯಿತಿ ನೀಡುವ ಮೂಲಕ, ಖಚಿತ ಸಾಲ ಬೆಂಬಲ ನೀಡುವ ಮೂಲಕ ಹಾಗೂ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಇತರೆ ಯೋಜನೆಗಳ ಸಹಯೋಗದಿಂದ ಉತ್ತಮ ಅವಕಾಶ ಕಲ್ಪಿಸಿದೆ. ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಯೋಗೇಶ್ ಸಿ. ಬಿ. ಮತ್ತು ಮಧ್ಯ ಪ್ರದೇಶದ ಜಬಲ್‌ಪುರ ಜಿಲ್ಲೆಯ ಆನಂದ್ ಪಟೇಲ್ ಎಂಬವರು ಸದರಿ ಯೋಜನೆಯ 20 ಸಾವಿರ ಫಲಾನುಭವಿಗಳಲ್ಲಿ ಪ್ರಮುಖರಾಗಿದ್ದಾರೆ. ಯೋಗೇಶ್ ಸಿ. ಬಿ. ರವರು  ಪ್ರಾಥಮಿಕ ತರಕಾರಿ ಸಂಸ್ಕರಣಾ ಕೇಂದ್ರ ಮಾಡುವಲ್ಲಿ  ಹಾಗೂ ಆನಂದ್ ಪಟೆಲ್ ರವರು ಸ್ಥಳೀಯರಿಗೆ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆಗೆ ನೀಡುವ ಹೈಟೆಕ್ ಹಬ್ ಅನ್ನು ಸ್ಥಾಪಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ಈ ಯೋಜನೆಯು ಭಾರತದ ಕೃಷಿಯಲ್ಲಿ ಆಧುನಿಕತೆಯನ್ನು ಅಳವಡಿಸುವ ಮೂಲಕ, ರೈತರ ಫಸಲಿಗೆ ಉತ್ತಮ ಬೆಲೆಯನ್ನು ಕಂಡುಕೊಳ್ಳುವಲ್ಲಿ ಪ್ರಯೋಜನಕಾರಿಯಾಗಿದೆ.

ಸದರಿ ಮಾಹಿತಿಯು ಪ್ರತ್ಯೇಕವಾಗಿ ಕೃಷಿಕರಿಗೆ, ಕೃಷಿ ಉದ್ಯಮೆದಾರರಿಗೆ ಹಾಗು ರೈತ ಸಂಘಗಳಿಗೆ ಉಪಯೋಗವಾಗಲಿದ್ದು, ಇವರಿಗೆ ಕೃಷಿ ವಲಯದಲ್ಲಿ ಮೂಲಭೂತಸೌಕರ್ಯಗಳನ್ನು ಸ್ಥಾಪಿಸಲು ಮತ್ತು ಆಧುನೀಕರಿಸಲು ಆರ್ಥಿಕ ಬೆಂಬಲವನ್ನು ಒದಗಿಸಿದೆ. ಪ್ರಸ್ತುತ ಯೋಜನೆಯು ಸಂಘಗಳಿಗೆ ಕೊಯ್ಲಿನ ನಂತರದ  ನಿರ್ವಹಣೆ ಕಾರ್ಯಗಳಿಗೆ ಮೂಲಸೌಕರ್ಯನಿಧಿ ಹಾಗೂ ಸಮುದಾಯ ಕೃಷಿಗೆ ಆರ್ಥಿಕ ಮೌಲ್ಯಕ್ಕೆ ಸರಿಹೊಂದುವ ಗುರಿಯನ್ನು ನೀಡಿ, ಸದರಿಯವರಿಗೆ ಬಡ್ಡಿ ರಿಯಾಯಿತಿ, ಕ್ರೆಡಿಟ್ ಗ್ಯಾರಂಟಿ ಬೆಂಬಲ, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಇತರೆ ಯೋಜನೆಗಳ ಒಮ್ಮುಖದ ಫಲವನ್ನು ನೀಡುವ ನಿಟ್ಟಿನಲ್ಲಿ ಸಹಾಯ ಮಾಡಲಿದೆ.  

ಪ್ರಮುಖ ಮಾಹಿತಿ

ü  ಕೃಷಿ ಮೂಲಭೂತಸೌಕರ್ಯ ನಿಧಿ (AIF) ಯೋಜನೆಯು ಕೇಂದ್ರ ಸರ್ಕಾರ ಪ್ರಾಯೋಜಿತ ಕಾರ್ಯಕ್ರಮವಾಗಿದ್ದು, ಕೃಷಿ ವಲಯದ ಮೂಲಭೂತಸೌಕರ್ಯಗಳನ್ನು ಸೃಷ್ಟಿಸುವ ಹಾಗೂ ಆಧುನೀಕರಿಸುವ ಗುರಿ ಹೊಂದಿದೆ.

ü  ಈ ಯೋಜನೆಯು ರೈತರಿಗೆ, ಕೃಷಿ ಉದ್ಯಮಿಗಳಿಗೆ ಹಾಗೂ ರೈತ ಸಂಘಗಳಿಗೆ,  ಬಡ್ಡಿ ರಿಯಾಯಿತಿ ನೀಡುವ ಮೂಲಕ, ಖಚಿತ ಸಾಲ ಬೆಂಬಲ ನೀಡುವ ಮೂಲಕ ಹಾಗೂ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಇತರೆ ಯೋಜನೆಗಳ ಸಹಯೋಗದಿಂದ ಅಧಿಕ ಆರ್ಥಿಕ ಬೆಂಬಲವನ್ನು ನೀಡಿದೆ.

ü  AIF ಕಟಾವಿನ ನಂತರದ ನಷ್ಟವನ್ನು  ಕಡತಗೊಳಿಸಲು,  ಆಧುನಿಕ ಕೃಷಿ ಅಳವಡಿಸಿ ಮುಂದೆ ರೈತರ ಫಸಲಿಗೆ ಉತ್ತಮ ಬೆಲೆ ಒದಗಿಸುವ ನಿಟ್ಟಿನಲ್ಲಿದೆ.

ü  ಈ ಯೋಜನೆಯು ಸಹಸ್ರಾರು ರೈತರಿಗೆ ಹಾಗೂ ಸಂಘಗಳಿಗೆ, ಪ್ರಾಥಮಿಕ ತರಕಾರಿ ಸಂಸ್ಕರಣಾ ಕೇಂದ್ರ ಸ್ಥಾಪಿಸುವಲ್ಲಿ ಹಾಗೂ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆಗೆ ನೀಡುವ ಹೈಟೆಕ್ ಹಬ್ ಅನ್ನು ಸ್ಥಾಪಿಸುವಲ್ಲಿ ಪ್ರಯೋಜನಕಾರಿಯಾಗಿದೆ.

ü  ಸದರಿ ಯೋಜನೆಯು ಕೃಷಿ ಕ್ಷೇತ್ರದ ನಿರ್ದಿಷ್ಟ ಗುಂಪುಗಳನ್ನು ಆಯ್ಕೆಮಾಡಿ, ಕೃಷಿ ವಲಯದಲ್ಲಿ ಅವರ ಅಭಿವೃದ್ಧಿಯನ್ನು ಸೃಷ್ಟಿಸುವಲ್ಲಿ ಹಾಗೂ ಪ್ರತ್ಯೇಕವಾಗಿ ಅವರ ಜೀವನ ಸಾಗಿಸುವಲ್ಲಿ ನೇರ ಪರಿಣಾಮ ಬೀರುವ ಉದ್ದೇಶವನ್ನು ಹೊಂದಿದೆ.

ತೀರ್ಮಾನ-

         ಪ್ರಸ್ತುತ ಲೇಖನವು, ಸರ್ಕಾರ ಪ್ರಾಯೋಜಿತ ಕಾರ್ಯಕ್ರಮವಾದ ಕೃಷಿ ಮೂಲಭೂತಸೌಕರ್ಯ ನಿಧಿಯ (AIF) ಪಾತ್ರವನ್ನು ಸಾರಿ,  ಭಾರತ ದೇಶದ ಕೃಷಿ ಕ್ಷೇತ್ರದಲ್ಲಿ ಮೂಲಭೂತಸೌಕರ್ಯವನ್ನು ಸೃಷ್ಟಿಸುವ ಹಾಗೂ ಆಧುನೀಕರಣಗೊಳಿಸುವ ಧ್ಯೇಯ ಹೊಂದಿದೆ. ಪ್ರಸ್ತುತ ಯೋಜನೆಯು ಕೃಷಿಕರಿಗೆ, ಕೃಷಿ ಉದ್ಯಮೆದಾರರಿಗೆ ಹಾಗು ರೈತ ಸಂಘಗಳಿಗೆ ಬಡ್ಡಿ ರಿಯಾಯಿತಿ ನೀಡುವ ಮೂಲಕ, ಖಚಿತ ಸಾಲ ಬೆಂಬಲ ನೀಡುವ ಮೂಲಕ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಇತರೆ ಯೋಜನೆಗಳ ವಿನಿಮಯ, ಮುಂತಾದ ಹಲವಾರು ವಿಧಗಳ ಮೂಲಕ ಆರ್ಥಿಕ ಬೆಂಬಲವನ್ನು ನೀಡಿದೆ. ಪ್ರತ್ಯೇಕವಾಗಿ AIF ಕಾರ್ಯಕ್ರಮವು ಕೃಷಿ ವಲಯದ ದಕ್ಷತೆ ಹಾಗೂ ಲಾಭವನ್ನು ಸುಧಾರಿಸುವ ನಿಟ್ಟಿನಲ್ಲಿ, ರೈತರ  ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ನೀಡಿ  ಆದಾಯ ಹೆಚ್ಚಿಸುವ ಗುರಿ ಇಟ್ಟುಕೊಂಡಿದೆ.  ಎಲ್ಲಕ್ಕೂ ಹೆಚ್ಚಾಗಿ ಕೃಷಿ ಮೂಲಭೂತಸೌಕರ್ಯ ನಿಧಿಯು, ಕೃಷಿ ಕ್ಷೇತ್ರದಲ್ಲಿ ಸುಸ್ಥಿರವಾದ ಹಾಗೂ ಅಂತರ್ಗತ ಬೆಳವಣಿಗೆಯನ್ನು ಉತ್ತೇಜಿಸುವ ಪ್ರಮುಖ ಉಪಕ್ರಮವಾಗಿದೆ.

Recent Posts

ಪ್ರಧಾನ ಮಂತ್ರಿಗಳ ಕೇಂದ್ರ ಪ್ರಾಯೋಜಿತ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ

ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯು (PMFME) 2020 ರಲ್ಲಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ (MoFPI) ಪ್ರಾರಂಭಿಸಿದ ಒಂದು ಉಪಕ್ರಮವಾಗಿದೆ. ಈ ದೂರದೃಷ್ಟಿಯ ಯೋಜನೆಯನ್ನು…

July 17, 2024

ಸೈನಿಕ ಹುಳು: ಜೋಳದ ಬೆಳೆಯಲ್ಲಿ ವಿನಾಶಕಾರಿ ಕೀಟ

ಸಾಮಾನ್ಯವಾಗಿ ಸೈನಿಕ ಹುಳು ಎಂದು ಕರೆಯಲ್ಪಡುವ ಸ್ಪೋಡೋಪ್ಟೆರಾ ಫ್ರುಗಿಪರ್ಡಾ ಪ್ರಪಂಚದಾದ್ಯಂತದ ಬೆಳೆಗಳ ಮೇಲೆ ಹೆಚ್ಚು ಆಕ್ರಮಣಕಾರಿ ಕೀಟಗಳಲ್ಲಿ ಪ್ರಮುಖವಾಗಿದ್ದು, ಮುಖ್ಯ ಬೆಳೆಗಳಿಗೆ ತೀವ್ರ  ನಷ್ಟವನ್ನು ಉಂಟುಮಾಡುತ್ತದೆ. ಇದು…

July 11, 2024

ಮೆಕ್ಕೆಜೋಳ: ನಾಟಿ ಮತ್ತು ಸುಧಾರಿತ ಬೇಸಾಯ ಕ್ರಮಗಳು

ಮೆಕ್ಕೆ ಜೋಳ (ಜಿಯಾ ಮೇಸ್ ಎಲ್.) ಹೆಚ್ಚು ಹೊಂದಿಕೊಳ್ಳಬಲ್ಲ ಬೆಳೆಗಳಲ್ಲಿ ಒಂದಾಗಿದೆ, ಇದು ವ್ಯಾಪಕ ಶ್ರೇಣಿಯ ಕೃಷಿ-ಹವಾಮಾನ ಪರಿಸ್ಥಿತಿಗಳಲ್ಲಿ ಬೆಳೆಯಲು ಸಾಧ್ಯವಾಗುತ್ತದೆ. ಇದು ಎಲ್ಲಾ ಧಾನ್ಯಗಳಿಗಿಂತ ದೊಡ್ಡ…

June 28, 2024

ಸಮೃದ್ಧ ಕೊಯ್ಲಿಗೆ ಪಪ್ಪಾಯಿ ಕೃಷಿ ಪದ್ಧತಿಗಳು

ಪಪ್ಪಾಯಿ (ಕಾರಿಕಾ ಪಪ್ಪಾಯಿ) ಒಂದು ಉಷ್ಣವಲಯದ ಹಣ್ಣಾಗಿದ್ದು, ಅಡುಗೆಮನೆಯ ತೋಟಗಳಲ್ಲಿ ಬೆಳೆಯಲು ಸೂಕ್ತವಾಗಿದೆ. ಪಪ್ಪಾಯಿಯು ವಿಟಮಿನ್ ಸಿ, ವಿಟಮಿನ್ ಎ, ಖನಿಜಗಳು ಮತ್ತು ಪೊಟ್ಯಾಸಿಯಮ್ನಂತಹ ಪೋಷಕಾಂಶಗಳ ಸಮೃದ್ಧ…

June 24, 2024

ಸಾಫ್ಟ್ ರೊಟ್ ರೋಗ ಭೀತಿ: ಶುಂಠಿಯನ್ನು ವಿನಾಶದಿಂದ ರಕ್ಷಿಸುವುದು

ಶುಂಠಿಯು ಹೆಚ್ಚು ಬೇಡಿಕೆಯಿರುವ ಮಸಾಲೆ ಬೆಳೆಯಾಗಿದ್ದು, 2022 ರಲ್ಲಿ ಭಾರತವು ಸುಮಾರು 2.12 ಮಿಲಿಯನ್ ಮೆಟ್ರಿಕ್ ಟನ್‌ಗಳನ್ನು ಉತ್ಪಾದಿಸುತ್ತದೆ ಎಂದು ನಿಮಗೆ ತಿಳಿದಿದೆಯೇ?  ಆದಾಗ್ಯೂ, ಸಾಫ್ಟ್ ರೊಟ್…

June 19, 2024

ಸೋಯಾಬೀನ್: ನಾಟಿ ಮತ್ತು ಕೃಷಿ ಅಭ್ಯಾಸಗಳು

ಹೆಚ್ಚಿನ ಪ್ರೊಟೀನ್ ಮತ್ತು ಎಣ್ಣೆಯ ಅಂಶದಿಂದಾಗಿ ಸೋಯಾಬೀನ್ ಅನ್ನು ಗೋಲ್ಡನ್ ಬೀನ್ ಅಥವಾ ಮಿರಾಕಲ್ ಕ್ರಾಪ್ ಎಂದೂ ಕರೆಯಲಾಗುತ್ತದೆ. ಸೋಯಾಬೀನ್ ಚೀನಾದಲ್ಲಿ ಹುಟ್ಟಿಕೊಂಡ ದ್ವಿದಳ ಧಾನ್ಯದ ವಿಧ.…

June 17, 2024