HomeCropದ್ರಾಕ್ಷಿ ಬೆಳೆಯಲ್ಲಿ ರೋಗ ಹಾಗೂ ಕೀಟಗಳನ್ನು ನಿಯಂತ್ರಿಸಲು, ಉತ್ತಮ ಬೇಸಾಯ ಪದ್ಧತಿಗಳು

ದ್ರಾಕ್ಷಿ ಬೆಳೆಯಲ್ಲಿ ರೋಗ ಹಾಗೂ ಕೀಟಗಳನ್ನು ನಿಯಂತ್ರಿಸಲು, ಉತ್ತಮ ಬೇಸಾಯ ಪದ್ಧತಿಗಳು

ದ್ರಾಕ್ಷಿ- (ವಿಟಿಸ್ ವಿನಿಫೆರಾ), ವಿಟಿಯೇಸಿಯೇ ಕುಟುಂಬಕ್ಕೆ ಸೇರಿರುವ ಪ್ರಮುಖ ಹಣ್ಣಿನ ಬೆಳೆಯಾಗಿದೆ. ಇದು ಸಮಶೀತೋಷ್ಣ ಬೆಳೆಯಾಗಿದ್ದು, ಭಾರತದ ಉಷ್ಣವಲಯದ ಹವಾಮಾನಕ್ಕೆ ಹೊಂದಿಕೊಳ್ಳುತ್ತದೆ. ದ್ರಾಕ್ಷಿ ಉತ್ಪಾದನೆಯಲ್ಲಿ  80% ರಷ್ಟು ಮಹಾರಾಷ್ಟ್ರ, ಕರ್ನಾಟಕ ಮತ್ತು ತಮಿಳುನಾಡು  ರಾಜ್ಯಗಳು ಗಮನಾರ್ಹವಾಗಿ ಕೊಡುಗೆ ನೀಡುತ್ತವೆ . 

ಹಣ್ಣುಗಳು ಕ್ಯಾಲ್ಸಿಯಂ ಮತ್ತು ರಂಜಕದೊಂದಿಗೆ  ಸಮೃದ್ಧವಾಗಿರುವುದರ ಜೊತೆಗೆ ಸುಲಭವಾಗಿ ಜೀರ್ಣವಾಗುವ ರೂಪದಲ್ಲಿ ಸುಮಾರು 20% ಸಕ್ಕರೆಯನ್ನು ಹೊಂದಿರುತ್ತದೆ. ಪ್ರಪಂಚದಾದ್ಯಂತ ಇದನ್ನು ಮುಖ್ಯವಾಗಿ ವೈನ್ ತಯಾರಿಕೆ (82% ಉತ್ಪಾದನೆ), ಒಣದ್ರಾಕ್ಷಿ ತಯಾರಿಕೆ (10% ಉತ್ಪಾದನೆ) ಮತ್ತು ತಾಜಾ ಸೇವನೆಗಾಗಿ  (8%) ಬೆಳೆಯಲಾಗುತ್ತದೆ. ಭಾರತದಲ್ಲಿ, ಇದನ್ನು ಹೆಚ್ಚಾಗಿ ತಾಜಾ ಹಣ್ಣುಗಳಾಗಿ ಸೇವಿಸಲಾಗುತ್ತದೆ ಮತ್ತು ಸೀಮಿತ ಪ್ರಮಾಣದಲ್ಲಿ ಮಾತ್ರ ಮಧ್ಯ, ಒಣದ್ರಾಕ್ಷಿ ಮುಂತಾದ ಒಣ ಹಣ್ಣುಗಳ ಉತ್ಪಾದನೆಗೆ ದ್ರಾಕ್ಷಿಯನ್ನು ಬಳಸಲಾಗುತ್ತದೆ.

ಪ್ರಾಮುಖ್ಯತೆ:

ಪ್ರಸ್ತುತ, ದ್ರಾಕ್ಷಿಯು ವಾಣಿಜ್ಯ ಹಣ್ಣಿನ ಬೆಳೆಯಾಗಿದೆ. ಇದನ್ನು ವಿವಿಧ ಉದ್ದೇಶಕ್ಕಾಗಿ ಬಳಸಲಾಗುತ್ತದೆ. 

  1. ಸೇವನೆಗಾಗಿ
  2. ರಫ್ತು ಉದ್ದೇಶಕ್ಕಾಗಿ
  3. ವೈನ್ ತಯಾರಿಸಲು ಮತ್ತು
  4. ಒಣದ್ರಾಕ್ಷಿ ತಯಾರಿಸಲು.

ತಾಜಾ ದ್ರಾಕ್ಷಿಗಳು ಕ್ಯಾಲ್ಸಿಯಂ, ಫಾಸ್ಫರಸ್, ಕಬ್ಬಿಣದಂತಹ ಖನಿಜಗಳ ಉತ್ತಮ ಮೂಲವಾಗಿದ್ದು ಇದನ್ನು ಪ್ರಸಿದ್ಧ ಶಾಂಪೇನ್ ಮತ್ತು ಇತರ ಮರುಭೂಮಿ  (ಡೆಸರ್ಟ್)  ವೈನ್‌ಗಳಂತಹ ವಿಟಮಿನ್‌ಗಳನ್ನು ದ್ರಾಕ್ಷಿಯಿಂದ ತಯಾರಿಸಲಾಗುತ್ತದೆ. 

ಹವಾಮಾನ ಅಗತ್ಯತೆಗಳು:

ದಕ್ಷಿಣ ಭಾರತದ ಪರಿಸ್ಥಿತಿಗಳಲ್ಲಿ – ಬಳ್ಳಿಗಳ ಬೆಳವಣಿಗೆಯು  ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗಿನ ಅವಧಿಯಲ್ಲಿ ನಂತರ ಅಕ್ಟೋಬರ್‌ನಿಂದ ಮಾರ್ಚ್‌ವರೆಗೆ ಇರುತ್ತವೆ.  100 ಡಿಗ್ರಿಸೆಂಟಿಗ್ರೇಡು ನಿಂದ 400 ಡಿಗ್ರಿ ಸೆಂಟಿಗ್ರೇಡಿನ ತಾಪಮಾನವು ಹಣ್ಣಿನ ಇಳುವರಿ ಮತ್ತು ಗುಣಮಟ್ಟದ ಮೇಲೆ ಪ್ರಭಾವ ಬೀರುತ್ತದೆ. 

ತಳಿಗಳು :

ಸೇವನೆಯ  ಉದ್ದೇಶಕ್ಕಾಗಿ  ತಳಿಗಳು –

  • ಬೀಜವುಳ್ಳ ದ್ರಾಕ್ಷಿ ತಳಿಗಳು – ಕಾರ್ಡಿನಲ್, ಕಾನ್ಕಾರ್ಡ್ ಚಕ್ರವರ್ತಿ, ಇಟಾಲಿಯಾ, ಅನಾಬ್-ಎ-ಶಾಹಿ, ಚೀಮಾ ಸಾಹೇಬಿ, ಕಾಳಿಸಾಹೇಬಿ, ರಾವ್ ಸಾಹೇಬಿ,
  • ಬೀಜರಹಿತ ದ್ರಾಕ್ಷಿ ತಳಿಗಳು – ಥಾಂಪ್ಸನ್ ಬೀಜರಹಿತ, ಜ್ವಾಲೆಯ ಬೀಜರಹಿತ, ಕಿಶ್ಮಿಶ್ ಚೋರ್ನಿ, ಪರ್ಲೆಟ್, ಅರ್ಕಾವತಿ.
  1. ಒಣದ್ರಾಕ್ಷಿ ಉದ್ದೇಶದ ತಳಿಗಳು – ಥಾಂಪ್ಸನ್ ಬೀಜ ರಹಿತ, ಫ್ಲೇಮ್ ಬೀಜ ರಹಿತ,  ಮಾಣಿಕ್ ಚಮನ್, ಸೋನಕಾ, ಬ್ಲ್ಯಾಕ್ ಕೊರಿಂತ್, ಬ್ಲ್ಯಾಕ್ ಮೋನುಕ್ಕಾ, ಅರ್ಕಾವತಿ, ಡಾಟಿಯರ್
  2. ವೈನ್ ತಳಿಗಳು – ಚಾರ್ಡೋನ್ನೆ, ಕ್ಯಾಬರ್ನೆಟ್ ಸೌರಿಗ್ನಾನ್, ಬೆಂಗಳೂರು ಬ್ಲೂ, ಮಸ್ಕಟ್, ಬ್ಲಾಂಕ್, ಪಿನೋಟ್ ನಾಯ್ರ್, ಪಿನೋಟ್ ಬ್ಲೇನ್, ವೈಟ್ ರೈಸ್ಲಿಂಗ್ ಮತ್ತು ಮೆರ್ಲಾಟ್.

ಅಂತರಕೃಷಿ  ಬೇಸಾಯ :

ಅಂತರವನ್ನು ತುಂಬುವುದು: ನೆಟ್ಟ ನಂತರ ಒಂದು ತಿಂಗಳ ಅವಧಿಯಲ್ಲಿ ಇದನ್ನು ಮಾಡುವುದು ಉತ್ತಮ.

ಚಾಟನಿ ಮಾಡುವುದು: ಏಕರೂಪದ ಹೊಸ ಚಿಗುರುಗಳ ಬೆಳವಣಿಗೆಯನ್ನುಪಡೆಯಲು, ನೆಟ್ಟ ಒಂದು ತಿಂಗಳ ನಂತರ ಮೇಲಿನ 2/3 ಮೊಗ್ಗುಗಳನ್ನು ಬಿಟ್ಟು  ಕೆಳಗಿನ  ಮೊಗ್ಗುಗಳನ್ನು ತೆಗೆಯಲಾಗುತ್ತದೆ.

ಬಳ್ಳಿಗೆ ಬೆಂಬಲ  ನೀಡುವುದು : ಊರುಗೋಲು / ಬಿದಿರು ಕೋಲಿನ  ಬೆಂಬಲವನ್ನು ಬಳ್ಳಿಗೆ  ಕೊಡಲಾಗುತ್ತದೆ ಮತ್ತು ಎಳೆಯ ಬೆಳೆಯುವ ಚಿಗುರುಗಳಿಗೆ ಊರುಗೋಲಿನ  ಮೇಲೆ ತರಬೇತಿ ಮಾಡಲಾಗುತ್ತದೆ. 

ಕಳೆ : ಬಳ್ಳಿಯ ಸಾಲುಗಳನ್ನು ಕಳೆಗಳ ತೀವ್ರತೆಗೆ ಅನುಗುಣವಾಗಿ ಎರಡು ಬಾರಿ/ಮೂರು ಬಾರಿ ಕೈ ಕಳೆ ಮಾಡಲಾಗುತ್ತದೆ.

ನೀರಾವರಿ – ನಿಯಮಿತವಾಗಿ ಮಣ್ಣು ಮತ್ತು ಋತುವಿನ ಆಧಾರದ ಮೇಲೆ ನೀರು ಕೊಡಲಾಗುತ್ತದೆ. 

ಕೀಟಗಳು ಮತ್ತು ರೋಗಗಳ ಸಂಭವವನ್ನು ಅವಲಂಬಿಸಿ ಸೂಕ್ತವಾದ ಸಸ್ಯ ಸಂರಕ್ಷಣಾ ಕ್ರಮಗಳನ್ನು ಅನುಸರಿಸಲಾಗುತ್ತದೆ.

ತೋಟದ ಆರೈಕೆ :ದ್ರಾಕ್ಷಿ ಬಳ್ಳಿಗಳು ನೆಟ್ಟ ನಂತರ ಮೊದಲ ಫಸಲು ನೀಡಲು ಸುಮಾರು 1.5 ರಿಂದ 2 ವರ್ಷಗಳನ್ನು ತೆಗೆದುಕೊಳ್ಳುತ್ತವೆ.  ಈ ಅವಧಿಯಲ್ಲಿ ಎಳೆಯ ಬಳ್ಳಿಗಳ ಆರೈಕೆಯನ್ನು ಈ ಕೆಳಗಿನಂತೆ ಮಾಡಬೇಕಾಗುತ್ತದೆ. 

    1. ತರಬೇತಿ: ಬಳ್ಳಿಗಳನ್ನು ಮೊದಲು ಬಿದಿರಿನ ಬೆಂಬಲ ಕೊಟ್ಟು ಹಂದರದ ಮೇಲೆ ತರಬೇತಿ ನೀಡಲಾಗುತ್ತದೆ. 
    2. ಸವರುವಿಕೆ – ಸಮರುವಿಕೆಯನ್ನು ತರಬೇತಿಗಾಗಿ ಮಾತ್ರ ಮಾಡಲಾಗುತ್ತದೆ, ಅಂದರೆ ಕಾಂಡ, ಕೊಂಬೆಗಳು,  ಕಾಯಿ ಕಚ್ಚುವುದಕ್ಕೆ  ಮಾಡಲಾಗುತ್ತದೆ. 

    ರಸಗೊಬ್ಬರದ ಪ್ರಮಾಣ – ಸಾವಯವ, ರಾಸಾಯನಿಕ  ಮತ್ತು ಜೈವಿಕ ಗೊಬ್ಬರಗಳನ್ನು ಒಳಗೊಂಡಂತೆ ವರ್ಷದಲ್ಲಿ ಎರಡು  ಸಾರಿ ನೀಡಲಾಗುತ್ತದೆ.

ನೀರಾವರಿ:

ದ್ರಾಕ್ಷಿಯಲ್ಲಿ ಕಟ್ಟುನಿಟ್ಟಾಗಿ ಮತ್ತು ನಿಯಮಿತವಾಗಿ ನೀರು  ಕೊಡಬೇಕು. ನೀರನ್ನು ಹಾಯಿಸುವಾಗ ಬೇಸಿಗೆಯಲ್ಲಿ 5-7 ದಿನಗಳು,  ಚಳಿಗಾಲದಲ್ಲಿ 8-10 ದಿನಗಳು ಮತ್ತು ಮಳೆಗಾಲದಲ್ಲಿ 15-20 ದಿನಗಳ ಅಂತರದಲ್ಲಿ ನೀರನ್ನು ಹಾಯಿಸಬೇಕು. 

ಹನಿ ನೀರಾವರಿಗಾಗಿ ನಿರ್ಧಿಷ್ಟ ಮಧ್ಯಂತರವನ್ನು ನಿರ್ವಹಿಸಲಾಗುತ್ತದೆ; ಒಂದು ಬಳ್ಳಿಗೆ ದಿನಕ್ಕೆ 30-40, 20-30 ಲೀ  ಹಾಗೂ 40-50 ಲೀ ನೀರನ್ನು ಕೊಡಬೇಕು. 

ಪೋಷಕಾಂಶದ ನಿರ್ವಹಣೆ : 

ಪ್ರತಿ ವರ್ಷ ಉತ್ತಮ ಗುಣಮಟ್ಟದ ಬೆಳೆ ಪಡೆಯಲು ರಾಸಾಯನಿಕ, ಸಾವಯವ ಮತ್ತು ಜೈವಿಕ ಗೊಬ್ಬರಗಳ ಸಮತೋಲಿತ ಪೋಷಣೆ ಮತ್ತು ಬಳಕೆ ಅತ್ಯಗತ್ಯ. ಸುಮಾರು 700 ರಿಂದ 900 N, 400 ರಿಂದ 600 P ಮತ್ತು 750 ರಿಂದ 1000  ಕೆಜಿ / ಹೆಕ್ಟೇರ್/ವರ್ಷಕ್ಕೆ ಹಾಕಿದರೆ, ಸುಮಾರು 30 ರಿಂದ 35 ಟನ್ಗಳಷ್ಟು ವಾರ್ಷಿಕ ಇಳುವರಿ ಪಡೆಯಬಹುದು. 

ಸಮರುವಿಕೆಯ ಸಮಯದಲ್ಲಿ ರಸಗೊಬ್ಬರಗಳನ್ನು ವರ್ಷದಲ್ಲಿ ಎರಡು ಬಾರಿ ನೀಡಲಾಗುತ್ತದೆ.

ಸಸ್ಯ ರಕ್ಷಣೆ 

ಕೀಟಗಳು ಮತ್ತು ಅವುಗಳ ನಿಯಂತ್ರಣ: 

ಜಿಗಿ ಹುಳುಗಳು:

  • ಸೋಂಕಿತ ಸಸ್ಯಗಳ ಎಲೆಗಳು ಬಿಳಿ ಚುಕ್ಕೆಗಳೊಂದಿಗೆ ಹಳದಿ ಬಣ್ಣಕ್ಕೆ ತಿರುಗುತ್ತವೆ ಮತ್ತು ಸಸ್ಯಗಳ ಬೆಳವಣಿಗೆಯು ಕುಂಠಿತವಾಗುತ್ತವೆ. ಎಲೆಗಳು ಸುಟ್ಟಂತೆ ಕಾಣುತ್ತವೆ,  ಇದನ್ನು ಸಾಮಾನ್ಯವಾಗಿ “ಹಾಪರ್ ಬರ್ನ್”/”ಟಿಪ್ ಬರ್ನ್” ಎಂದು ಕರೆಯಲಾಗುತ್ತದೆ.
  • ಭಾರೀ ತೀವ್ರ ದಾಳಿಯಿಂದ ಎಲೆ ಉದುರುವಿಕೆ ಮತ್ತು ಹೂವುಗಳು/ಹಣ್ಣುಗಳ ನಷ್ಟವನ್ನು ಕಾಣಬಹುದು. 

ನಿಯಂತ್ರಣ ಕ್ರಮಗಳು:

ಸುಗ್ಗಿಯ ನಂತರ ಎಲ್ಲಾ ಸಸ್ಯದ ಅವಶೇಷಗಳನ್ನು (ಹಿಂದಿನ ಬೆಳೆಗಳ ಕಳೆಗಳು/ಇತರೆ ಸಸ್ಯಗಳು) ತಕ್ಷಣವೇ ತೆಗೆದುಹಾಕಿ, ಮತ್ತಷ್ಟು ಹರಡುವುದನ್ನು ತಪ್ಪಿಸಲು, ಸೋಂಕಿತ ಸಸ್ಯಗಳನ್ನು ತೆಗೆದುಹಾಕುವುದು ಮತ್ತು ವಿಲೇವಾರಿ ಮಾಡುವುದು ಬಹುಶಃ ಉತ್ತಮವಾಗಿದೆ.

ಹಿಟ್ಟು ತಿಗಣೆಗಳು:

ಹಿಟ್ಟು ತಿಗಣೆಗಳು ವಿಶೇಷವಾಗಿ ಹೆಚ್ಚು ರಸಭರಿತ ಸಸ್ಯ ಭಾಗಗಳ ಮೇಲೆ ದಾಳಿ ಮಾಡುತ್ತವೆ,  ಕೆಲವು ಹಿಟ್ಟು ತಿಗಣೆಗಳು  ನಂಜು  ರೋಗಗಳನ್ನೂ ಸಹ ಹರಡುತ್ತವೆ.

ನಿಯಂತ್ರಣ ಕ್ರಮಗಳು:

  • ಪೀಡಿತ ಸಸಿಗಳಿಂದ ಹಿಟ್ಟು ತಿಗಣೆಗಳನ್ನು  ಆರಿಸಿ ತೆಗೆದುಹಾಕಿ, ಕಡಿಮೆ ತೀವ್ರತೆಯಲ್ಲಿ  ಇದು ಪ್ರಯೋಜನಕಾರಿಯಾಗಿದೆ. ಹೆಚ್ಚು ಸೋಂಕಿತ ಸಮಯದಲ್ಲಿ  ಸಸ್ಯಗಳನ್ನು ತೆಗೆದುಹಾಕಿ ಮತ್ತು ನಾಶಮಾಡಿ.
  • ಸಸ್ಯಗಳ ಮೇಲೆ ಹೆಚ್ಚಿನ ಒತ್ತಡದೊಂದಿಗೆ ನೀರನ್ನು ಬಿಟ್ಟರೆ, ಇದು ಹಿಟ್ಟು ತಿಗಣೆಗಳನ್ನು  ತೊಳೆಯಲು ಅಥವಾ ಬೀಳಿಸಲು  ಕಾರಣವಾಗುತ್ತದೆ.
  • ಆರೋಗ್ಯಕರ ಸಸ್ಯಗಳು ಹಿಟ್ಟು ತಿಗಣೆ ದಾಳಿಯನ್ನು ತಡೆದುಕೊಳ್ಳಲು ಸಮರ್ಥವಾಗಿರುತ್ತವೆ.
  • ಹಿಟ್ಟು ತಿಗಣೆಗಳನ್ನು  ನಿಯಂತ್ರಿಸಲು  ಬೇವಿನ ಹಿಂಡಿ /ಬೇವಿನ ಎಣ್ಣೆ ಅಥವಾ ಬೇವಿನ ಉತ್ಪನ್ನಗಳನ್ನು ಬಳಸಬೇಕು. 

ರೋಗಗಳು

ಬೇರು ಕೊಳೆತ

ಸಸ್ಯದಲ್ಲಿ ಮೊದಲು ಈ ರೋಗವು ಕಂಡು ಬಂದಾಗ ಸಸಿ ಸಾಯುವುದು,  ಅಥವಾ ಹಳೆಯ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಉದುರುವುದು ಕಂಡುಬರುತ್ತದೆ. ಸೋಂಕಿತ ಸಸ್ಯಗಳ ಬೇರುಗಳು ಕಂದು ಅಥವಾ ಕಪ್ಪು ಬಣ್ಣಕ್ಕೆ ತಿರುಗುತ್ತವೆ. 

ನಿಯಂತ್ರಣ ಕ್ರಮಗಳು:

  • ಎಳೆಯ ಸಸಿಗಳಲ್ಲಿ ಬೇರು ಕೊಳೆ ರೋಗವನ್ನು ತಪ್ಪಿಸಲು ತೋಟದಲ್ಲಿ ಸರಿಯಾದ ಒಳಚರಂಡಿಯನ್ನು ಒದಗಿಸಿ.
  • ಉತ್ತಮ ಗುಣಮಟ್ಟದ,  ಸಂಸ್ಕರಿಸಿದ ಬೀಜಗಳನ್ನು ಬಳಸಿ ಅಥವಾ ಬೀಜಗಳನ್ನು ಬಿತ್ತನೆ ಮಾಡುವ ಮೊದಲು ಜೈವಿಕ ಮತ್ತು ರಾಸಾಯನಿಕ ಅಥವಾ ಅಗತ್ಯವಿರುವ ರೋಗ ನಿಯಂತ್ರಣ  ಶಿಲೀಂಧ್ರನಾಶಕಗಳಿಂದ ಸಂಸ್ಕರಿಸಬೇಕು. 
  • ಸರಿಯಾದ ನೀರಾವರಿ ನಿರ್ವಹಣೆಯ ಅಭ್ಯಾಸಗಳಿಂದ  ಮಾತ್ರ  ಸಸ್ಯಗಳು ಸಾಯುವುದನ್ನು ತಡೆಯಬಹುದು.

ಬಾಟ್ರೈಟಿಸ್ ಹಣ್ಣು ಕೊಳೆತ / ಬಾಟ್ರೈಟಿಸ್ ರೋಗ/ ಬೂದು ಅಚ್ಚು

ಲಕ್ಷಣಗಳು:

  • ಹಳೆಯ ಎಲೆಗಳ ಮೇಲೆ ತಿಳಿ ಕಂದುಬಣ್ಣದ ಮಚ್ಚೆಗಳನ್ನು ಕಾಣಬಹುದು, ಈ ರೋಗವು ಮುಂದುವರೆದಾಗ, ತೊಟ್ಟುಗಳ ಮೂಲಕ ಕಾಂಡಗಳ ಕಡೆಗೆ ಹರಡುತ್ತದೆ. ನಂತರ ಕಾಂಡದ ಮೇಲೆ ಕಂದು ಬಣ್ಣದ ವೃತ್ತಾಕಾರದ  ಮಚ್ಚೆಗಳು ಕಾಣುತ್ತವೆ ಮತ್ತು ಸಸ್ಯ ಸಾಯುತ್ತದೆ. ರೋಗಲಕ್ಷಣಗಳು ಹಸಿರು ಮತ್ತು ಕೆಂಪು ಎರಡೂ ಹಣ್ಣುಗಳಲ್ಲಿ ಕಾಣಿಸಿಕೊಳ್ಳುತ್ತವೆ.

ನಿಯಂತ್ರಣ ಕ್ರಮಗಳು:

  • ಸಂಪೂರ್ಣವಾಗಿ ಕಳೆಗಳನ್ನು ನಿಯಂತ್ರಿಸಬೇಕು ಮತ್ತು ಎಲ್ಲಾ ಸಸ್ಯದ ಬೇರು, ಎಲೆಗಳನ್ನು ತೆಗೆದುಹಾಕಬೇಕು ಮತ್ತು ಶಿಲೀಂಧ್ರಗಳ ಮೂಲವನ್ನು ತಪ್ಪಿಸಲು ಹೊಲದಲ್ಲಿ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು.
  • ಉತ್ತಮ ಅಂತರವನ್ನು ಖಚಿತಪಡಿಸಿಕೊಳ್ಳದಿದ್ದರೆ, ಮಣ್ಣಿನ ತೇವಾಂಶವನ್ನು ಕಡಿಮೆ ಮಾಡುತ್ತದೆ ಇದರಿಂದಾಗಿ ಮತ್ತಷ್ಟು ಸೋಂಕನ್ನು ಹೆಚ್ಚಿಸುತ್ತದೆ. 

ಕೊಯ್ಲು ಮತ್ತು ಇಳುವರಿ:

ಸಾಮಾನ್ಯ ದ್ರಾಕ್ಷಿ ಸುಗ್ಗಿಯ ಅವಧಿಯು ಫೆಬ್ರವರಿಯಲ್ಲಿ ಪ್ರಾರಂಭವಾಗುತ್ತದೆ ಮತ್ತು ಏಪ್ರಿಲ್ ಅಂತ್ಯದವರೆಗೆ ಇರುತ್ತದೆ. ಕನಿಷ್ಠ 180 ಬ್ರಿಕ್ಸ್ ಹೊಂದಿರುವ ಚೆನ್ನಾಗಿ ಬಲಿತ ಗೊಂಚಲುಗಳನ್ನು ಕೊಯ್ಲು ಮಾಡಲಾಗುತ್ತದೆ. 

ಇಳುವರಿ – 

ಬೀಜರಹಿತ ತಳಿಗಳು   –  20 ರಿಂದ 30  ಟನ್ ಪ್ರತೀ ಹೆಕ್ಟೇರ್ ಗೆ ಪಡೆಯಬಹುದು, 

ಬೀಜವುಳ್ಳ  ತಳಿಗಳು  –   40 ರಿಂದ 50 ಟನ್ ಪ್ರತೀಹೆಕ್ಟೇರ್ ಗೆ ಪಡೆಯಬಹುದು. 

spot_img

ಇನ್ನಷ್ಟು ಓದಿ

ಸಂಪರ್ಕದಲ್ಲಿರಿ

ನಮ್ಮಿಂದ ಇತ್ತೀಚಿನ ಮಾಹಿತಿಯನ್ನು ಸ್ವೀಕರಿಸಲು ನಮ್ಮೊಂದಿಗೆ ಚಂದಾದಾರರಾಗಿ.

ಸಂಬಂಧಿತ ಲೇಖನಗಳು