HomeNewsNational Agri Newsರೈತರಿಗೆ ಅನುಮೋದನೆ ಪ್ರಕ್ರಿಯೆಯನ್ನು ಸರಳ ಮಾಡುವ ನಿಟ್ಟಿನಲ್ಲಿ NHB: ತ್ವರಿತ ಅನುಮೋದನೆ, ಡಿಜಿಟಲ್ ಹಾಗೂ...

ರೈತರಿಗೆ ಅನುಮೋದನೆ ಪ್ರಕ್ರಿಯೆಯನ್ನು ಸರಳ ಮಾಡುವ ನಿಟ್ಟಿನಲ್ಲಿ NHB: ತ್ವರಿತ ಅನುಮೋದನೆ, ಡಿಜಿಟಲ್ ಹಾಗೂ ಕನಿಷ್ಠ ದಾಖಲಾತಿಗಳೊಂದಿಗೆ ಸಾಧ್ಯ.

ಪರಿಚಯ

         ರಾಷ್ಟ್ರೀಯ ತೋಟಗಾರಿಕಾ ಮಂಡಳಿಯು (NHB), ತೋಟಗಾರಿಕಾ ಯೋಜನೆಗಳಿಗೆ ತ್ವರಿತ ಹಾಗೂ ಸರಳ ಅನುಮೋದನೆ ಪ್ರಕ್ರಿಯೆಯನ್ನು ರೈತರಿಗೆ ಅನುವು ಮಾಡುವಂತೆ ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಗಿತ್ತು. ಸಂಪೂರ್ಣವಾಗಿ ಡಿಜಿಟಲ್ ಮಾಡಿ ಕೇವಲ ಅಗತ್ಯವಿರುವ ಕನಿಷ್ಠ ದಾಖಲಾತಿಗಳೊಂದಿಗೆ ಈಗ ಒಂದೇ ಸರಳ ವಿಧಾನವನ್ನು ಪಾಲಿಸಿದರೆ  ಸದರಿ ಪ್ರಕ್ರಿಯೆಯು ಪೂರ್ಣವಾಗುತ್ತದೆ. ಈ ವಿನ್ಯಾಸವು ಜನವರಿ 1, 2023 ರಿಂದ ಜಾರಿಗೆ ಬರಲಿದ್ದು, ಸದರಿ ವ್ಯವಸ್ಥೆಯು ಪರಿಣಾಮಕಾರಿಯಾಗುವ ಗುರಿಯನ್ನು ಹೊಂದಿದೆ, ಜೊತೆಗೆ ರೈತರಿಗೆ ಸರಳ ವ್ಯಾಪಾರ ಮಾಡಲು ಪ್ರೇರೇಪಿಸಿದೆ.

ಅವಲೋಕನ

ನವದೆಹಲಿಯಲ್ಲಿ ಜರುಗಿದ ಸದರಿ ಸಭೆಯಲ್ಲಿ ತೋಟಗಾರಿಕಾ ಯೋಜನೆಗಳ  ಪ್ರಯೋಜನವನ್ನು ಪಡೆಯುವ ನಿಟ್ಟಿನಲ್ಲಿ, ರೈತರು ಈ ಮೊದಲು ಅನುಸರಿಸುತ್ತಿರುವ   ಪ್ರಕ್ರಿಯೆಯು  ದೀರ್ಘಕಾಲಿಕ ಹಾಗೂ ಕಠಿಣವಾಗಿರುವುದರಿಂದ, ರಾಷ್ಟ್ರೀಯ ತೋಟಗಾರಿಕಾ ಮಂಡಳಿಯು (NHB) ರೈತರಿಗೆ ಸರಳ ಅನುಮೋದನೆ ಪ್ರಕ್ರಿಯೆಗೆ ಸೂಕ್ತವಾದ ಮಾರ್ಗವನ್ನು ನೀಡುವಂತೆ ಚರ್ಚಿಸಲಾಯಿತು. ಈ ಸಂಬಂಧ ಅನುಮೋದನೆ ಪ್ರಕ್ರಿಯೆಯನ್ನು ಸರಳೀಕರಣಗೊಳಿಸುವುದು, ಸಂಪೂರ್ಣ ಡಿಜಿಟಲ್ ಮಾಡುವುದು, ಕನಿಷ್ಠ ದಾಖಲೆ ಪಡೆದುಕೊಳ್ಳುವುದರಿಂದ ರೈತರಿಗೆ  ಸುಲಭವಾಗಿ ವ್ಯಾಪಾರಮಾಡಲು ಹುರಿದುಂಬಿಸಿದೆ. ಅದಲ್ಲದೆ ಸ್ವಚ್ಚ ಸಸಿ ಕಾರ್ಯಕ್ರಮ ಎಂಬ ಹೊಸ ವಿನ್ಯಾಸದ ಕುರಿತು ಚರ್ಚಿಸಲಾಗಿದ್ದು, ಈ ಸಂಬಂಧ ಏಷ್ಯನ್ ಅಭಿವೃದ್ಧಿ ಬ್ಯಾಂಕ್ ನೆರವಿನಿಂದ 2100 ಕೋಟಿ ರೂಪಾಯಿಗಳ ಹೂಡಿಕೆಯಿಂದ ರೈತರಿಗೆ ನಾಟಿ ಸಸಿಗಳ ಲಭ್ಯತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಸಾವಯವ ಮತ್ತು ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಳ್ಳುವಂತೆ  ರಾಷ್ಟ್ರೀಯ ತೋಟಗಾರಿಕಾ ಮಂಡಳಿಯು ಪ್ರಯತ್ನಿಸಲಿದೆ.  ಈ ಹೊಸ ವಿನ್ಯಾಸವು ಜನವರಿ 1, 2023 ರಿಂದ ಜಾರಿಗೆ ಬರಲಿದೆ.

ಸದರಿ ನಿರ್ಧಾರದಿಂದ ಕನಿಷ್ಠ ದಾಖಲಾತಿಯೊಂದಿಗೆ, ಸಂಪೂರ್ಣ ಡಿಜಿಟಲ್ ಆಗಿ, ಒಂದೇ ಹಂತದಲ್ಲಿ ಅನುಮೋದನೆ ಸಾಧ್ಯವಾಗಲಿದ್ದು, ರೈತರಿಗೆ ಅನುಕೂಲವಾಗಿದೆ. ಇದರಿಂದ ಇನ್ನು ಹೆಚ್ಚಿನ ಯೋಜನೆಗಳಿಗೆ ನಾಂದಿಯಾಗಿ ಹೊರಹೊಮ್ಮಲ್ಲಿದ್ದು, ಇದರ ಪ್ರಕ್ರಿಯೆಯು ಪಾರದರ್ಶಕವಾಗಿದ್ದು ಹೆಚ್ಚು ಪರಿಣಾಮಕಾರಿಯಾಗಿದೆ. ಇದರಿಂದ ರೈತ ಸಮುದಾಯಕ್ಕೆ ಹೆಚ್ಚಿನ ವ್ಯಾಪಾರವನ್ನು ಕೈಗೊಳ್ಲಲು ಉತ್ತೇಜನ ನೀಡಿದೆ. NHBಯ ಉಪ-ಯೋಜನೆಯಾಗಿರುವ ಸ್ವಚ್ಚ ಸಸಿ ಕಾರ್ಯಕ್ರಮವು ರೈತರಿಗೆ ಆರೋಗ್ಯಕರ ಕಸಿ ಲಭ್ಯತೆಯ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ದೇಶದಾದ್ಯಂತ ಗುಣಮಟ್ಟದ ಕಸಿಯನ್ನು ಒದಗಿಸುವ ಮೂಲಕ ರೈತರಿಗೆ ಅನುಕೂಲವಾಗಿದೆ. ಜೊತೆಗೆ ಸಾವಯವ ಮತ್ತು ನೈಸರ್ಗಿಕ ಕೃಷಿಯನ್ನು ಅಳವಡಿಸುವ ರೈತರಿಗೆ ಪ್ರೋತ್ಸಾಹವನ್ನು ನೀಡಿ, ಇದನ್ನು ಅಳವಡಿಸಿರುವ ರೈತರಿಗೆ ಪ್ರಯೋಜನಕಾರಿಯಾಗಿದೆ.

ಪ್ರಮುಖ ಮಾಹಿತಿ:

  •   ರಾಷ್ಟ್ರೀಯ ತೋಟಗಾರಿಕಾ ಮಂಡಳಿಯ (NHB) 32ನೇ ಸಭೆಯು ನವದೆಹಲಿಯಲ್ಲಿ ನಡೆದಿದೆ.
  • ತೋಟಗಾರಿಕೆ ಯೋಜನೆಗಳಿಗೆ ಅನುಮೋದನೆ ಪ್ರಕ್ರಿಯೆಯನ್ನು ರಾಷ್ಟ್ರೀಯ ತೋಟಗಾರಿಕಾ ಮಂಡಳಿಯು ಸಂಪೂರ್ಣವಾಗಿ ಡಿಜಿಟಲ್ ಆಗಿ ಪರಿರ್ವತಿಸಿದ್ದು, ಕನಿಷ್ಠ ದಾಖಲಾತಿಯೊಂದಿಗೆ  ರೈತರಿಗೆ ಸರಳಗೊಳಿಸಿದೆ.
  •   ಸದರಿ ನಿರ್ಧಾರದ ಪ್ರಮುಖ ಗುರಿ ರೈತರ ವ್ಯಾಪಾರವನ್ನು ಹೆಚ್ಚಿಸುವುದು ಹಾಗು ಸದರಿ ವ್ಯವಸ್ಥೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಪರಿರ್ವತಿಸುವುದಾಗಿದೆ.
  • ಆರೋಗ್ಯಕರವಾದ ಸಸಿಯನ್ನು ರೈತರಿಗೆ ಒದಗಿಸಬೇಕೆಂಬ ವಿಚಾರವನ್ನು ಸಭೆಯಲ್ಲಿ ಚರ್ಚಿಸಲಾಗಿದ್ದು, ನಿರ್ಧಾರದಂತೆ  ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ADB)ಮೂಲಕ 2100 ಕೋಟಿ ರೂಪಾಯಿ  ಮಾತ್ರವನ್ನು ಹೂಡಿಕೆ ಮಾಡಲಾಗಿತ್ತು
  •   ಸಾವಯವ ಮತ್ತು ನೈಸರ್ಗಿಕ ಕೃಷಿಯನ್ನು ಅಳವಡಿಸುವಂತೆ ರೈತರಿಗೆ ಪ್ರೋತ್ಸಾಹದಾಯಕವಾಗಿದೆ
  • ರಾಷ್ಟ್ರೀಯ ತೋಟಗಾರಿಕಾ ಮಂಡಳಿಯ ಅಡಿಯಲ್ಲಿರುವ ಕ್ಲಸ್ಟರ್ ಅಭಿವೃದ್ಧಿ ಕಾರ್ಯಕ್ರಮದ ಪ್ರಗತಿ ಪರಿಶೀಲಿಸಲಾಯಿತು ಹಾಗೂ ಅರ್ಜಿಗಳ ಅನುಮೋದನೆ ಪ್ರಕ್ರಿಯೆಯನ್ನು ಸರಳಗೊಳಿಸಲಾಯಿತು.
  •  ಹಿಂದಿನ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಸದರಿ ಸಭೆಯಲ್ಲಿ ಅನುಮೋದಿಸಲಾಯಿತು

ತೀರ್ಮಾನ

ಈ ಹಿಂದೆ ನಡೆದ ರಾಷ್ಟ್ರೀಯ ತೋಟಗಾರಿಕಾ ಮಂಡಳಿಯ ಸಭೆಯು, ರೈತರಿಗೆ ತೋಟಗಾರಿಕೆ ಯೋಜನೆಗಳನ್ನು ಅನುಷ್ಠಾನ ಮಾಡುವಲ್ಲಿ ಸುಧಾರಣೆಯ ಕುರಿತು ಚರ್ಚಿಸಲಾಯಿತು. ಜನವರಿ 1, 2023 ರಿಂದ ಜಾರಿಗೆ ಬರಲಿರುವ ಸದರಿ ವಿನ್ಯಾಸವು ಅನುಮೋದನೆಯಲ್ಲಿ ಸರಳ ಮಾರ್ಗ ಹೊಂದಲಿದ್ದು, ಹೆಚ್ಚು ಪರಿಣಾಮಕಾರಿಯಾಗಲಿದೆ. ಮುಂದುವರಿದು, ಆರೋಗ್ಯವಾದ ಕಸಿಯನ್ನು ಒದಗಿಸುವಲ್ಲಿ ಹಾಗೆಯೇ  ಸಾವಯವ ಮತ್ತು ನೈಸರ್ಗಿಕ ಕೃಷಿಯನ್ನು ಅಳವಡಿಸುವಂತೆ ರೈತರಿಗೆ ಉಪಾಯಕಾರಿಯಾಗಲಿದೆ.  ಮುಂದುವರಿದು, ದೇಶದ ತೋಟಗಾರಿಕಾ ವಲಯದಲ್ಲಿ  ಪ್ರಗತಿ ಸಾಧಸುವಲ್ಲಿ ಲಾಭದಾಯಕವಾಗಿದೆ.

spot_img

ಇನ್ನಷ್ಟು ಓದಿ

ಸಂಪರ್ಕದಲ್ಲಿರಿ

ನಮ್ಮಿಂದ ಇತ್ತೀಚಿನ ಮಾಹಿತಿಯನ್ನು ಸ್ವೀಕರಿಸಲು ನಮ್ಮೊಂದಿಗೆ ಚಂದಾದಾರರಾಗಿ.

ಸಂಬಂಧಿತ ಲೇಖನಗಳು